AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?

Sofia Hayat: ‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸಾಯಲಿ ಅಂತ ನಾನು ಪ್ರತಿ ದಿನ ಪ್ರಾರ್ಥಿಸುತ್ತೇನೆ. ನಿನ್ನನ್ನು ನಾನು ಜೈಲಿನಲ್ಲಿ ನೋಡುತ್ತೇನೆ’ ಎಂದು ಸೋಫಿಯಾ ಹಯಾತ್​ಗೆ ಅಪರಿಚಿತ ಹುಡುಗಿಯೊಬ್ಬಳು ಮೆಸೇಜ್​ ಮಾಡಿದ್ದಾಳೆ.

‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’; ಬಿಗ್​ ಬಾಸ್​ ಸ್ಪರ್ಧಿಗೆ ಈ ರೀತಿ ಶಾಪ ಹಾಕಿದ್ದು ಯಾರು?
‘ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸತ್ತುಹೋಗಲಿ’ ಎಂದು ಬಿಗ್​ ಬಾಸ್​ ಸ್ಪರ್ಧಿಗೆ ಶಾಪ
Follow us
TV9 Web
| Updated By: ಮದನ್​ ಕುಮಾರ್​

Updated on: Jun 27, 2021 | 12:43 PM

ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ ಎಂಬುದು ನಿಜ. ಆದರೆ ಅದನ್ನೇ ದುರುಪಯೋಗ ಮಾಡಿಕೊಳ್ಳುವ ಕೆಲವು ಜನರು ಸೆಲೆಬ್ರಿಟಿಗಳ ಬಗ್ಗೆ ಮನಬಂದಂತೆ ಮಾತನಾಡುತ್ತಾರೆ. ಮಾಜಿ ಬಿಗ್​ ಬಾಸ್​ ಸ್ಪರ್ಧಿ, ನಟಿ ಸೋಫಿಯಾ ಹಯಾತ್​ ಬಗ್ಗೆ ಈಗ ಹುಡುಗಿಯೊಬ್ಬಳು ಇಲ್ಲಸಲ್ಲದ ಗಾಸಿಪ್​ ಹಬ್ಬಿಸಿದ್ದಾಳೆ. ಅಲ್ಲದೆ, ತೀರಾ ಕೆಟ್ಟದಾಗಿ ಶಾಪ ಹಾಕಿದ್ದಾಳೆ. ಅದರ ಸ್ಕ್ರೀನ್​ಶಾಟ್​ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೋಫಿಯಾ ಅವರು, ಮತ್ತೊಂದು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್​ ಬಾಸ್​ ಹಿಂದಿ ಸೀಸನ್​ 7ರಲ್ಲಿ ಸೋಫಿಯಾ ಹಯಾತ್​ ಸ್ಪರ್ಧಿಸಿದ್ದರು. ಅವರಿಗೆ ಸೀಸನ್​ 14ರ ಸ್ಪರ್ಧಿ ಅಭಿನವ್​ ಶುಕ್ಲಾ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಲಾಗಿದೆ. ಅದೇ ವಿಚಾರ ಇಟ್ಟುಕೊಂಡು ಹುಡುಗಿಯೊಬ್ಬಳು ಮೆಸೇಜ್​ ಮಾಡಿದ್ದಾಳೆ. ‘ನಿನ್ನ ಮತ್ತು ಅಭಿನವ್​ ಶುಕ್ಲಾ ನಡುವೆ ಏನೇನು ನಡೆದಿದೆ ಎಂಬುದೆಲ್ಲ ನನಗೆ ಗೊತ್ತಿದೆ’ ಎಂದು ಆಕೆ ಬ್ಲಾಕ್​ಮೇಲ್​ ಮಾಡಲು ಪ್ರಯತ್ನಿಸಿದ್ದಾಳೆ.

‘ಅಭಿನವ್​ ಶುಕ್ಲಾ ನಿನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಜೊತೆಯಾಗಿ ಒಂದು ರಾತ್ರಿ ಕಳೆದ ಅವನ ಮತ್ತು ನಿನ್ನ ವಿರುದ್ಧ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ನೀನು ಮತ್ತು ನಿನ್ನ ತಂದೆ-ತಾಯಿ ಬೇಗ ಸಾಯಲಿ ಅಂತ ನಾನು ಪ್ರತಿ ದಿನ ಪ್ರಾರ್ಥಿಸುತ್ತೇನೆ. ನಿನ್ನನ್ನು ನಾನು ಜೈಲಿನಲ್ಲಿ ನೋಡುತ್ತೇನೆ. ನಿನ್ನಂತ ನೀಚ ನೀಲಿಚಿತ್ರಗಳ ನಟಿಯನ್ನು ಬೆಳೆಸಿದ್ದಕ್ಕಾಗಿ ನಿನ್ನ ತಂದೆ-ತಾಯಿಗೆ ನಾಚಿಕೆ ಆಗಬೇಕು’ ಎಂದು ಸೋಫಿಯಾ ಹಯಾತ್​ಗೆ ಅಪರಿಚಿತ ಹುಡುಗಿ ಮೆಸೇಜ್​ ಮಾಡಿದ್ದಾಳೆ.

ಇಂಥ ಬೆದರಿಕೆಗಳಿಗೆಲ್ಲ ತಾವು ಬಗ್ಗುವುದಿಲ್ಲ ಎಂದು ಸೋಫಿಯಾ ಹಯಾತ್​ ತಿಳಿಸಿದ್ದಾರೆ. ‘ನನ್ನ ಬಳಿ ಸಹಾಯ ಕೇಳಿಕೊಂಡು ಮೆಸೇಜ್​ ಮಾಡಲು ಆರಂಭಿಸಿದ ಈಕೆ, ನಂತರ ಈ ರೀತಿ ಮೆಸೇಜ್​ ಕಳಿಸಿದ್ದಾಳೆ. ಈಗ ನಾನು ಅವಳನ್ನು ಬ್ಲಾಕ್​ ಮಾಡಿದ್ದೇನೆ. ನಂತರ ಬೇರೆ ಅಕೌಂಟ್​ ಕ್ರಿಯೇಟ್​ ಮಾಡಿ ಮೆಸೇಜ್​ ಮಾಡಿದಳು. ಜನರು ಇಂಥವರಿಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಸೋಫಿಯಾ ಹೇಳಿದ್ದಾರೆ.

View this post on Instagram

A post shared by Sofia Hayat (@sofiahayat)

‘ನನಗೂ ಮತ್ತು ಅಭಿನವ್​ ಶುಕ್ಲಾಗೂ ಪರಿಚಯವೇ ಇಲ್ಲ. ಆತ ಯಾರು ಎಂಬುದೇ ನನಗೆ ಗೊತ್ತಿಲ್ಲ. ಒಮ್ಮೆಯೂ ನಾನು ಅವರ ಜೊತೆ ಕೆಲಸ ಮಾಡಿಲ್ಲ. ಗೂಗಲ್​ನಲ್ಲಿ ಹುಡುಕಿದ ಬಳಿಕವೇ ಅವರ ಬಗ್ಗೆ ನನಗೆ ಗೊತ್ತಾಗಿದ್ದು’ ಎಂದು ವಿಡಿಯೋ ಮೂಲಕ ಸೋಫಿಯಾ ಹಯಾತ್​ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ