AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​

Manju Pavagada Divya Suresh: ಮಂಜು-ದಿವ್ಯಾ ಸುರೇಶ್​ ಮದುವೆ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಹಾಗೂ ಮಂಜು ನಡುವೆ ಮಾತಿನ ಯುದ್ಧವೇ ನಡೆದಿದೆ. ‘ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ’ ಎಂದು ಚಂದ್ರಚೂಡ್​ ತಿರುಗೇಟು ನೀಡಿದ್ದಾರೆ. ದಿವ್ಯಾ​ ಕಣ್ಣೀರು ಹಾಕಿದ್ದಾರೆ!

Bigg Boss Kannada: ಮಂಜು-ದಿವ್ಯಾ ಮದುವೆ ವಿಚಾರ ಸ್ಫೋಟ; ಸುದೀಪ್​ ಎದುರಲ್ಲೇ ಸಿಡಿದೆದ್ದ ಚಂದ್ರಚೂಡ್​
ಚಕ್ರವರ್ತಿ ಚಂದ್ರಚೂಡ್ - ಮಂಜು ಪಾವಗಡ
TV9 Web
| Edited By: |

Updated on: Jun 27, 2021 | 9:42 AM

Share

ಕೆಲವೇ ದಿನಗಳ ಹಿಂದೆ ಶುರು ಆಗಿರುವ ಬಿಗ್​ ಬಾಸ್​ ಕನ್ನಡದ ಎರಡನೇ ಇನ್ನಿಂಗ್ಸ್​ನಲ್ಲಿ ಈಗ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಕೊರೊನಾ ಕಾರಣದಿಂದ ಈ ಶೋ 42 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆ ವೇಳೆ ಬಹುತೇಕ ಸ್ಪರ್ಧಿಗಳು ತಮ್ಮ ಹಳೇ ಎಪಿಸೋಡ್​ಗಳನ್ನು ನೋಡಿಕೊಂಡು ಬಂದಿದ್ದಾರೆ. ಬೆನ್ನ ಹಿಂದೆ ಯಾರು ಏನೆಲ್ಲ ಮಾತನಾಡಿದ್ದಾರೆ ಎಂಬುದು ತಿಳಿದುಕೊಂಡಿರುವ ಎಲ್ಲರೂ ಹೊಸ ತಂತ್ರದ ಮೂಲಕ ಆಟ ಮುಂದುವರಿಸಿದ್ದಾರೆ. ಎರಡನೇ ಇನ್ನಿಂಗ್ಸ್​ನ ಮೊದಲ ವೀಕೆಂಡ್​ನಲ್ಲೇ ಮಂಜು ಪಾವಗಡ ಮತ್ತು ಚಕ್ರವರ್ತಿ ಚಂದ್ರಚೂಡ್​ ನಡುವೆ ದೊಡ್ಡ ಜಟಾಪಟಿ ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿರುವ ಜೋಡಿಗಳ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅವರು ಮಾಧ್ಯಮಗಳ ಸಂದರ್ಶನದಲ್ಲಿ ಮನಬಂದಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎರಡನೇ ಇನ್ನಿಂಗ್ಸ್​ ಶುರುವಾಗುತ್ತಿದ್ದಂತೆಯೇ ದೊಡ್ಮನೆಯೊಳಗೆ ಈ ವಿಚಾರ ಚರ್ಚೆಗೆ ಬಂದಿತ್ತು. ಈಗ ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಮಂಜು ಮತ್ತು ದಿವ್ಯಾ ಸುರೇಶ್​ ಅವರ ಮದುವೆ ವಿಚಾರಕ್ಕೆ ದೊಡ್ಡ ವಾಗ್ವಾದ ನಡೆದು ಹೋಗಿದೆ.

ಮೊದಲ ಇನ್ನಿಂಗ್ಸ್​ ಶುರುವಾದಾಗ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಅವರು ತಮಾಷೆಗೆ ಗಂಡ-ಹೆಂಡತಿ ರೀತಿ ನಾಟಕ ಆಡಿದ್ದರು. ಅದೇ ವಿಚಾರ ಇಟ್ಟುಕೊಂಡು ಚಕ್ರವರ್ತಿ ಚಂದ್ರಚೂಡ್​ ಈಗ ಆಕ್ಷೇಪ ಎತ್ತಿದ್ದಾರೆ. ‘ಶ್ರೀಮಾನ್​ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ’ ಎಂದು ಚಂದ್ರಚೂಡ್​ ತೀವ್ರವಾಗಿ ಕಿಡಿಕಾರಿದ್ದಾರೆ.

ಚಂದ್ರಚೂಡ್​ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಂಜು, ‘ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು’ ಎಂದಿದ್ದಾರೆ. ‘ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್​’ ಎಂದು ಇನ್ನಷ್ಟು ಗರಂ ಆಗಿ ಚಂದ್ರಚೂಡ್​ ತಿರುಗೇಟು ನೀಡಿದ್ದಾರೆ. ‘ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ’ ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ. ಒಟ್ಟಾರೆ ಕಿಚ್ಚ ಸುದೀಪ್​ ಎದುರಿನಲ್ಲೇ ನಡೆದ ಈ ಮಾತಿನ ಯುದ್ಧದಲ್ಲಿ ದಿವ್ಯಾ ಸುರೇಶ್​ ಕಣ್ಣೀರು ಹಾಕಿದ್ದಾರೆ!

ಜೂ.27ರ ‘ಸೂಪರ್​ ಸಂಡೇ ವಿತ್​ ಸುದೀಪ’ ಎಪಿಸೋಡ್​ನಲ್ಲಿ ಈ ಘಟನೆಗಳು ಪ್ರಸಾರ ಆಗಲಿವೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ತೀವ್ರ ಕೌತುಕ ಕೆರಳಿಸಿದೆ.

ಇದನ್ನೂ ಓದಿ:

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​

Bigg Boss Kannada: ಸುದೀಪ್​ ಎದುರಲ್ಲಿ ಆಡಿದ ಮಾತು ಉಳಿಸಿಕೊಂಡ ಮಂಜು; ದೊಡ್ಮನೆಯಲ್ಲಿ ದೊಡ್ಡ ಬದಲಾವಣೆ

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ