AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​

ಟಾಸ್ಕ್​ ವೇಳೆ ದಿವ್ಯಾ ಸುರೇಶ್​ ಕಾಲಿಗೆ ಗಾಯವಾಗಿದೆ. ಅಲ್ಲದೆ, ಅವರು ಗಳಗಳನೆ ಅತ್ತಿದ್ದಾರೆ. ಅವರಿಗೆ ವೈದ್ಯರು ಬಂದು ಬ್ಯಾಂಡೇಜ್​ ಕೂಡ ಹಾಕಿದರು. ಇಷ್ಟಾದರೂ ಮಂಜು ಪಾವಗಡ ಎದ್ದೇಳಲಿಲ್ಲ.

ನಿಂಗೂ, ನಿನ್ನ ಫ್ರೆಂಡ್​ಶಿಪ್​ಗೂ ದೊಡ್ಡ ನಮಸ್ಕಾರ; ಮಂಜುಗೆ ಗುಡ್​ ಬೈ ಹೇಳಿದ ದಿವ್ಯಾ ಸುರೇಶ್​
ಮಂಜು ಪಾವಗಡ - ದಿವ್ಯಾ ಸುರೇಶ್​
TV9 Web
| Updated By: ಮದನ್​ ಕುಮಾರ್​

Updated on: Jun 26, 2021 | 7:31 AM

Share

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಮೊದಲ ಇನ್ನಿಂಗ್ಸ್​ಗಿಂತಲೂ ಈ ಬಾರಿ ಭಿನ್ನವಾಗಿ ಆಡುತ್ತಿದ್ದಾರೆ. ಮಂಜು ಕಳೆದ ಬಾರಿ ಒಂದು ಕಡೆ ಕಳೆದು ಹೋದಂತೆ ಭಾಸವಾಗುತ್ತಿತ್ತು. ಆದರೆ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಹಾಗೆ ಆಗುತ್ತಿಲ್ಲ. ದಿವ್ಯಾ ಬಳಿ ಮಂಜು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಮಂಜುಗೆ ದಿವ್ಯಾ ಗುಡ್​ಬೈ​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿದೆ. ಎರಡೂ ತಂಡಗಳಿಗೆ ಟಾಸ್ಕ್​ ನೀಡಲಾಗುತ್ತಿದೆ. ಈ ಟಾಸ್ಕ್​ ವೇಳೆ ದಿವ್ಯಾ ಸುರೇಶ್​ ಕಾಲಿಗೆ ಗಾಯವಾಗಿದೆ. ಅಲ್ಲದೆ, ಅವರು ಗಳಗಳನೆ ಅತ್ತಿದ್ದಾರೆ. ಅವರಿಗೆ ವೈದ್ಯರು ಬಂದು ಬ್ಯಾಂಡೇಜ್​ ಕೂಡ ಹಾಕಿದರು. ಇಷ್ಟಾದರೂ ಮಂಜು ಪಾವಗಡ ಎದ್ದೇಳಲಿಲ್ಲ. ಇದಕ್ಕೆ ಕಾರಣ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​.

ಹೌದು, ಬಿಗ್​ ಬಾಸ್​ ಮನೆಯಲ್ಲಿ 6 ಚೇರ್​ಗಳನ್ನು ಹಾಕಲಾಗಿದೆ. ಈ ಚೇರ್​ನಲ್ಲಿ ಎರಡು ತಂಡದ ತಲಾ ಮೂರು ಸದಸ್ಯರು ಕುಳಿತುಕೊಳ್ಳಬೇಕು. ಒಂದೊಮ್ಮೆ ಚೇರ್​​​ನಿಂದ ಎದ್ದರೆ ಔಟ್​. ಮಂಜು ಕೂಡ ಈ ಟಾಸ್ಕ್​ನಲ್ಲಿ ಕುಳಿತಿದ್ದಾರೆ. ಹೀಗಾಗಿ, ದಿವ್ಯಾಗೆ ಗಾಯವಾದಾಗಲೂ ಅವರು ಎದ್ದಿಲ್ಲ.

ಈ ವೇಳೆ ಅಳುತ್ತಲೇ ಮಂಜು ಬಳಿ ಬಂದರು ದಿವ್ಯಾ ಸುರೇಶ್​. ‘ಮಂಜು ಇಷ್ಟೇ ಅಲ್ವಾ? ಫ್ರೆಂಡ್​ಶಿಪ್​ ಬೆಲೆ ತೋರ್ಸಿದ್ಯಲ. ನಿಂಗೂ ನಿನ್ನ ಫ್ರೆಂಡ್​ಶಿಪ್​ಗೂ ಗುಡ್​ ಬೈ’ ಎಂದರು. ಇದನ್ನು ಮಂಜು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ನಗುತ್ತಲ್ಲೇ ಪರಿಸ್ಥಿತಿಯನ್ನು ನಿಭಾಯಿಸಿದರು.

‘ಬಹುಶಃ ಗಾಯ ಆದ ಕೂಡಲೇ ನಾನು ಕಾಲನ್ನು ಮುಟ್ಟಿದ್ದರೆ ನೋವು ಇಲ್ಲಿವರೆಗೆ ಮಾಯವಾಗುತ್ತಿತ್ತು’ ಎಂದು ಮಂಜು ಹೇಳಿದರು. ಆಗ ಸಿಟ್ಟಲ್ಲಿದ್ದ ದಿವ್ಯಾ, ‘ಸುಮ್ಮನಿರಪ್ಪಾ’ ಎಂದರು.

ಇದನ್ನೂ ಓದಿ: ‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್​ ಬಾಸ್​ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ

Bigg Boss Kannada: ದಿವ್ಯಾ ಸುರೇಶ್​ ಜತೆ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ ಮಂಜು ಪಾವಗಡ

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್