ಭಾರತಿರಾಜಾ ಮತ್ತು ರಜನಿಕಾಂತ್ ಮಧ್ಯೆ ಇದ್ದ ವಿವಾದವೇನು?

Bharathiraja-Rajinikanth: ಹಲವು ಗಣ್ಯರು, ಭಾರತಿರಾಜಾ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡುತ್ತಿದ್ದಾರೆ. ಭಾರತಿರಾಜ ಅದ್ಭುತ ನಿರ್ದೇಶಕ ಮತ್ತು ನಟ ಆಗಿದ್ದ ಜೊತೆಗೆ ಸಿನಿಮಾ, ರಾಜಕೀಯ ವಿಮರ್ಶಕರೂ ಆಗಿದ್ದರು. ನಿರ್ದೇಶಕ ಭಾರತಿರಾಜಾ ಅವರಿಗೆ ಚಿತ್ರರಂಗದ ಎಲ್ಲರೊಟ್ಟಿಗೆ ಆಪ್ತ ಬಂಧವಿತ್ತು, ಆದರೆ ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ಮುನಿಸು ಸಹ ಇತ್ತು.

ಭಾರತಿರಾಜಾ ಮತ್ತು ರಜನಿಕಾಂತ್ ಮಧ್ಯೆ ಇದ್ದ ವಿವಾದವೇನು?
Bharatiraja Rajinikanth

Updated on: Jun 10, 2026 | 1:21 PM

ಲೆಜೆಂಡರಿ ನಿರ್ದೇಶಕ ಭಾರತೀರಾಜಾ (Bharathiraja) ಅವರು ಇಂದು (ಜೂನ್ 10) ಮುಂಜಾನೆ ನಿಧನ ಹೊಂದಿದ್ದಾರೆ. ಚಿತ್ರರಂಗದ ಹಾಗೂ ರಾಜಕೀಯ ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಭಾರತಿರಾಜಾ ಅವರ ನಿಧನವು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಆವೇದನೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಗಣ್ಯರು, ಭಾರತಿರಾಜಾ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡುತ್ತಿದ್ದಾರೆ. ಭಾರತಿರಾಜ ಅದ್ಭುತ ನಿರ್ದೇಶಕ ಮತ್ತು ನಟ ಆಗಿದ್ದ ಜೊತೆಗೆ ಸಿನಿಮಾ, ರಾಜಕೀಯ ವಿಮರ್ಶಕರೂ ಆಗಿದ್ದರು. ನಿರ್ದೇಶಕ ಭಾರತಿರಾಜಾ ಅವರಿಗೆ ಚಿತ್ರರಂಗದ ಎಲ್ಲರೊಟ್ಟಿಗೆ ಆಪ್ತ ಬಂಧವಿತ್ತು, ಆದರೆ ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ಮುನಿಸು ಸಹ ಇತ್ತು.

ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ಹಲವು ವರ್ಷ ಮುನಿಸು ಇರಿಸಿಕೊಂಡಿದ್ದರು ನಿರ್ದೇಶಕ. ಭಾರತಿರಾಜಾ ನಿರ್ದೇಶಿಸಿದ ಮೊಟ್ಟ ಮೊದಲ ಸಿನಿಮಾ ‘16 ವಯದಿನಿಲೆ’ ನಲ್ಲಿ ರಜನೀಕಾಂತ್ ವಿಲನ್, ಕಮಲ್ ಹಾಸನ್ ನಾಯಕ. ಅದಾದ ಬಳಿಕ ‘ಕೋಡಿ ಪರಕುಟ್ಟು’ ಎಂಬ ಸಿನಿಮಾನಲ್ಲಿಯೂ ರಜನೀಕಾಂತ್ ನಟಿಸಿದ್ದರು. ಆದಾಗ್ಯೂ ಭಾರತೀರಾಜಾ ಬಹಿರಂಗವಾಗಿಯೇ ಹಲವಾರು ಬಾರಿ ರಜನಿ ವಿರುದ್ಧ ತೀವ್ರ ವಿಮರ್ಶೆ ಮಾಡಿದ್ದರು. ರಜನಿ ತಮಿಳಿಗರಲ್ಲ, ಅವರು ಕರ್ನಾಟಕದ ವ್ಯಕ್ತಿ ಎಂದು ಹಲವು ಸಂದರ್ಭಗಳಲ್ಲಿ ಈ ಲೆಜೆಂಡರಿ ನಿರ್ದೇಶಕರು ಕಾಂಟ್ರವರ್ಸಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ತಮಿಳುನಾಡು – ಕರ್ನಾಟಕ ಕಾವೇರಿ ಜಲವಿವಾದದ ಸಮಯದಲ್ಲಿ ತಮಿಳು ನಟರು ಪ್ರತಿಭಟನೆ ಮಾಡಿದ್ದರು. ಆದರೆ ಈ ಆಂದೋಲನಗಳು ತೀವ್ರ ರೂಪಕ್ಕೆ ತಿರುಗಿ ಪೊಲೀಸರ ಮೇಲೆಯೇ ದಾಳಿ ನಡೆಯುವ ಹಂತಕ್ಕೆ ತಲುಪಿದ್ದವು. ಆದರೆ ಪೊಲೀಸರ ಮೇಲಿನ ದಾಳಿಯನ್ನು ರಜನಿಕಾಂತ್ ಖಂಡಿಸಿದ್ದರು. ಇದರಿಂದ ಭಾರತೀರಾಜಾ ಅವರು ರಜನಿ ಅವರನ್ನು ತೀವ್ರವಾಗಿ ವಿಮರ್ಶಿಸಿದ್ದರು. ‘ರಜನಿ ಕರ್ನಾಟಕದವರು. ಅದಕ್ಕಾಗಿಯೇ ತಮಿಳುನಾಡಿನ ನೀರಿಗಾಗಿ ಹೋರಾಡುತ್ತಿಲ್ಲ. ತಮಿಳರ ಮೇಲೆ ದಾಳಿ ನಡೆದಾಗ ಏಕೆ ಮೌನವಾಗಿದ್ದಿರಿ?’ ಎಂದು ಬಹಿರಂಗವಾಗಿಯೇ ಸೂಪರ್‌ಸ್ಟಾರ್ ವಿರುದ್ಧ ಕಾಮೆಂಟ್ ಮಾಡಿದ್ದರು. ಇನ್ನು ಕೆಲವು ವರ್ಷಗಳ ಹಿಂದೆ ತಾವು ರಾಜಕೀಯಕ್ಕೆ ಬರುವುದಾಗಿ ರಜನಿಕಾಂತ್ ಘೋಷಿಸಿದ ತಕ್ಷಣ ಭಾರತೀರಾಜಾ ಮತ್ತೆ ಆಕ್ರೋಶ ಹೊರಹಾಕಿದ್ದರು. ‘ರಜನಿ ಪಕ್ಷ ಸ್ಥಾಪಿಸಬಹುದು, ಆದರೆ ಅವರು ಗೆದ್ದರೆ ಮುಖ್ಯಮಂತ್ರಿ ಆಗಬಾರದು. ತಮಿಳು ರಾಜ್ಯವನ್ನು ತಮಿಳರೇ ಆಳಬೇಕು’ ಎಂದು ಸೂಪರ್‌ಸ್ಟಾರ್ ಅವರನ್ನು ಈ ಲೆಜೆಂಡರಿ ನಿರ್ದೇಶಕರು ವಿರೋಧಿಸಿದ್ದರು.

ಇದನ್ನೂ ಓದಿ:ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?

ಭಾರತೀರಾಜಾ ಅವರಿಗೆ ತಮಿಳು ಸಂಸ್ಕೃತಿ ಮತ್ತು ತಮಿಳರ ಗುರುತಿನ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತಲೇ ಇದ್ದರು. ಇದೇ ಹಾದಿಯಲ್ಲಿ ತಮಿಳರ ಬೆಂಬಲವಾಗಿ ಅವರು ಮಾಡಿದ ಕೆಲವು ಕಾಮೆಂಟ್‌ಗಳು ತೀವ್ರ ವಿವಾದಗಳಿಗೆ ಕಾರಣವಾಗಿದ್ದವು. ಅದರ ಭಾಗವಾಗಿಯೇ ಅವರು ರಜನಿ ಅವರನ್ನು ವಿಮರ್ಶಿಸಿದ್ದರೇ ಹೊರತು, ವೈಯಕ್ತಿಕವಾಗಿ ಇವರ ಮಧ್ಯೆ ಯಾವುದೇ ದ್ವೇಷ ಅಥವಾ ಜಗಳಗಳಿರಲಿಲ್ಲ.

ಹಲವು ರೀತಿಯ ಕತೆಗಳನ್ನು ಸಿನಿಮಾ ಮಾಡಿದ್ದ ಭಾರತಿರಾಜಾ, ಪ್ರೇಮಕಥೆ, ಸಾಮಾಜಿಕ ಕತೆಗಳು, ಸಂದೇಶ ಹೊಂದಿದ ಸಿನಿಮಾಗಳು, ನವ್ಯ ಮಾದರಿಯ ಸಿನಿಮಾಗಳನ್ನು ಮಾಡುತ್ತಲೇ, ಮತ್ತೊಂದು ಕಡೆ ‘ಎರ್ರ ಗುಲಾಬೀಲು’, ‘ಟಿಕ್ ಟಿಕ್ ಟಿಕ್’ ನಂತಹ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ತೆರೆಗೆ ತಂದಿದ್ದರು. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಎಷ್ಟೋ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ಭಾರತೀರಾಜಾ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ರಜನೀಕಾಂತ್ ಅವರು ಮುನಿಸುಗಳನ್ನು ಬಿದಿಗಿಟ್ಟು, ಭಾರತಿರಾಜಾ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us