ಕರೆಸಿ ಪಾತ್ರ ಮಾಡಿಸಿಕೊಂಡು ಪ್ರಭಾಸ್ ಬಗ್ಗೆ ಲಘುವಾಗಿ ಮಾತನಾಡಿದ ನಟ
Prabhas and Manchu Vishnu: ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾನಲ್ಲಿ ಪ್ರಭಾಸ್ ಒಂದು ರೂಪಾಯಿ ಸಹ ಹಣ ಪಡೆಯದೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅದರಿಂದಾಗಿ ಸಿನಿಮಾಕ್ಕೆ ಹೆಚ್ಚಿನ ಮೌಲ್ಯ ಬಂದಿದೆ. ಆದರೆ ಈಗ ತಮಗೆ ಸಹಾಯ ಮಾಡಿದ ಪ್ರಭಾಸ್ ನಟನೆ ಬಗ್ಗೆ ಮಂಚು ವಿಷ್ಣು ಲಘುವಾಗಿ ಮಾತನಾಡಿದ್ದಾರೆ.

ನಟ ಪ್ರಭಾಸ್ (Prabhas) ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ವಿರಳ. ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುವಂತೆ ಆಹ್ವಾನ ಬಂದಾಗಲೂ ಅವರು ಸರಳವಾಗಿ ನಿರಾಕರಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ನಾಯಕ ಮಂಚು ವಿಷ್ಣು, ಸ್ಟಾರ್ ನಟನೇನೂ ಅಲ್ಲ. ಅವರ ತಂದೆ ಮೋಹನ್ ಬಾಬು ಮೇಲಿನ ಪ್ರೀತಿಗೆ, ಗೆಳೆಯ ಮಂಚು ವಿಷ್ಣುಗೆ ಸಹಾಯ ಆಗಲೆಂದು ಒಂದು ರೂಪಾಯಿ ಸಹ ಹಣ ಪಡೆಯದೆ ಅತಿಥಿ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು. ಆದರೆ ಈಗ ಮಂಚು ವಿಷ್ಣು, ತಮಗೆ ಸಹಾಯ ಮಾಡಿದ ಪ್ರಭಾಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
‘ಕಣ್ಣಪ್ಪ’ ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಿರುವ ಮಂಚು ವಿಷ್ಣು, ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಪ್ರಭಾಸ್ ಒಬ್ಬ ಸಾಮಾನ್ಯ ನಟ. ಆತನ ನಟನೆ ನನಗೆ ಸಾಮಾನ್ಯ ಎನಿಸಿತು. ಆತ ಲೆಂಜೆಂಡರಿ ನಟ ಅಲ್ಲ. ಆತ ಲೆಂಜಡರಿ ನಟ ಎನಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಇದೆ. ಆತ ಈಗಿನ್ನೂ ಸಾಮಾನ್ಯ ನಟ. ಆದರೆ ಮೋಹನ್ಲಾಲ್ ಒಬ್ಬ ಲೆಜೆಂಡರಿ ನಟ’ ಎಂದಿದ್ದಾರೆ. ಪ್ರಭಾಸ್ ಅನ್ನು ಸಾಮಾನ್ಯ ನಟ ಎನ್ನುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಆದರೆ ಅದೇ ಸಂದರ್ಶನದಲ್ಲಿ ಮಾತನಾಡಿರುವ ಮಂಚು ವಿಷ್ಣು, ‘ಸಮಯ ಕಳೆದಂತೆ ಪ್ರಭಾಸ್ ಸಹ ಖಂಡಿತವಾಗಿ ಲೆಜೆಂಡರಿ ನಟ ಆಗುತ್ತಾರೆ. ಮೋಹನ್ಲಾಲ್ ಅವರನ್ನು ಸಮಯವೇ ಲೆಜೆಂಡರಿ ನಟನನ್ನಾಗಿ ಮಾಡಿದೆ. ಪ್ರಭಾಸ್ ಸಹ ಲೆಜೆಂಡರಿ ನಟ ಆಗುತ್ತಾರೆಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ ಮಂಚು ವಿಷ್ಣು.
ಇದನ್ನೂ ಓದಿ:ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ
‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪನ ಕತೆಯನ್ನು ಒಳಗೊಂಡಿದೆ. ಆದರೆ ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಭಕ್ತಿ ಪ್ರಧಾನ ಸಿನಿಮಾ ಇದ್ದಂತಿಲ್ಲ ಬದಲಿಗೆ ಆಕ್ಷನ್ ಸಿನಿಮಾ ಇದ್ದಂತಿದೆ. ಸತತ ಸೋಲು ಕಂಡು ತೆಲುಗು ಚಿತ್ರರಂಗದಲ್ಲಿ ಸ್ಥಾನವೇ ಇಲ್ಲದಂತಾಗಿರುವ ಮಂಚು ವಿಷ್ಣು ಅನ್ನು ಮತ್ತೆ ತೆಲುಗು ಚಿತ್ರರಂಗದಲ್ಲಿ ನೆಲೆಗೊಳಿಸಲು ಅವರ ತಂದೆ ಮೋಹನ್ ಬಾಬು ‘ಕಣ್ಣಪ್ಪ’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡುತ್ತಿದ್ದು, ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಅವರನ್ನು ಸಹ ಅತಿಥಿ ಪಾತ್ರಗಳಲ್ಲಿ ಹಾಕಿಕೊಂಡಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ