AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದಲ್ಲಿ 17 ವರ್ಷ ಕಳೆದ ಶುಭಾ ಪೂಂಜಾಗೆ ಈ ಗತಿಯೇ; ಮರುಗಿದ ಮಂಜು

ಬಿಗ್​ ಬಾಸ್​ ಮನೆಯಲ್ಲಿ ಏಪ್ರಿಲ್​ 20ರ ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಮನೆ ಖಾಲಿ ಖಾಲಿ ಆಗಿದೆ. ಮನೆಯಲ್ಲಿ ದಿನಸಿ ಸಾಮಾನುಗಳಿಲ್ಲ. ಇನ್ನು, ಹಾಯಾಗಿ ಮಲಗೋಣ ಎಂದರೆ ಬೆಡ್​ ಶೀಟ್​, ಬೆಡ್​ ಎರಡೂ ಇಲ್ಲ.

ಚಿತ್ರರಂಗದಲ್ಲಿ 17 ವರ್ಷ ಕಳೆದ ಶುಭಾ ಪೂಂಜಾಗೆ ಈ ಗತಿಯೇ; ಮರುಗಿದ ಮಂಜು
ಶುಭಾ ಪೂಂಜಾ
ರಾಜೇಶ್ ದುಗ್ಗುಮನೆ
|

Updated on: Apr 21, 2021 | 5:08 PM

Share

ಬಿಗ್​ ಬಾಸ್​ ಮನೆಯ ಸದಸ್ಯರು ನಿತ್ಯ ಒಂದೊಂದು ಟಾಸ್ಕ್​ ಎದುರಿಸುತ್ತಲೆ ಇರುತ್ತಾರೆ. ಸ್ಪರ್ಧೆ ನೀಡಿದಾಗ ಎದುರಿಸುವ ಟಾಸ್ಕ್​ನ ಜತೆಗೆ, ಮನೆ ಸದಸ್ಯರ ಜತೆ ಹೊಂದಿಕೊಂಡು ಹೋಗುವುದು ಕೂಡ ಒಂದು ಟಾಸ್ಕ್​. ಈಗ ಬಿಗ್ ಬಾಸ್​ ಸ್ಪರ್ಧಿಗಳಿಗೆ ಹೊಸ ಸವಾಲೊಂದು ಎದುರಾಗಿದೆ. ಮನೆಯ ಎಲ್ಲಾ ಸೌಲಭ್ಯವನ್ನು ಬಿಗ್​ ಬಾಸ್​ ಕಿತ್ತುಕೊಂಡಿದ್ದಾರೆ. ಹೀಗಾಗಿ ಟಾಸ್ಕ್​ ಮೂಲಕ ಎಲ್ಲವನ್ನೂ ವಾಪಸ್​ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಬಿಗ್​ ಬಾಸ್​ ಮನೆಯಲ್ಲಿ ಏಪ್ರಿಲ್​ 20ರ ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಮನೆ ಖಾಲಿ ಖಾಲಿ ಆಗಿದೆ. ಮನೆಯಲ್ಲಿ ದಿನಸಿ ಸಾಮಾನುಗಳಿಲ್ಲ. ಅಡುಗೆ ಮಾಡೋಕೆ ಪಾತ್ರೆಗಳಿಲ್ಲ. ಶೌಚಾಲಯದಲ್ಲಿ ಬಕೆಟ್​ಗಳಿಲ್ಲ. ಇನ್ನು, ಹಾಯಾಗಿ ಮಲಗೋಣ ಎಂದರೆ ಬೆಡ್​ ಶೀಟ್​, ಬೆಡ್​ ಎರಡೂ ಇಲ್ಲ. ಈ ಎಲ್ಲವನ್ನೂ ಬಿಗ್​ ಬಾಸ್​ ನೀಡುವ ಟಾಸ್ಕ್​ ಮೂಲಕ ಗೆಲ್ಲಬೇಕು. ಒಂದೊಮ್ಮೆ ಗೆದ್ದಿಲ್ಲ ಎಂದರೆ, ವಾರಪೂರ್ತಿ ಆ ಸೌಲಭ್ಯ ಮನೆಗೆ ಲಭ್ಯವಾಗುವುದಿಲ್ಲ. ಇದು ಮನೆಯವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರಾತ್ರಿ ಮಲಗುವ ವೇಳೆ ಯಾರಿಗೂ ಬೆಡ್​ಶೀಟ್​ ಇರಲಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಎಸಿ ಇರುವುದರಿಂದ ಚಳಿಯಲ್ಲಿ ಮಲಗೋಕೆ ಸಾಧ್ಯವೇ ಆಗುತ್ತಿರಲಿಲ್ಲ. ಹೀಗಾಗಿ, ಎಲ್ಲರೂ ಮನೆಯ ಗಾರ್ಡನ್​ ಏರಿಯಾಗೆ ಬಂದಿದ್ದರು. ಗಾರ್ಬೆಜ್​ ಕವರ್ ಅನ್ನೇ ಹೊದಿಕೆ ಮಾಡಿಕೊಂಡು ಮಲಗೋಕೆ ಮುಂದಾದರು.

ಗಾರ್ಡನ್​ ಎರಿಯಾದಲ್ಲಿ ಒಂದು ಸಣ್ಣ ರಸ್ತೆ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಶುಭಾ ಪೂಂಜಾ ಅಲ್ಲಿಯೇ ನಿದ್ರಿಸೋಕೆ ಮುಂದಾಗಿದ್ದರು. ಇದನ್ನು ನೋಡಿದ ಮಂಜು ತುಂಬಾನೇ ಮರುಕ ವ್ಯಕ್ತಪಡಿಸಿದರು. 17 ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿರುವ ದೊಡ್ಡ ಹೀರೋಯಿನ್​ಗೆ ಗಾರ್ಬೆಜ್​ ಕವರ್​ ಹಾಕಿಕೊಂಡು ರಸ್ತೆ ಮೇಲೆ ಮಲಗೋ ಪರಿಸ್ಥಿತಿ ಬಂತಲ್ಲಪ್ಪ. ನಿಮ್ಮನ್ನು ನೋಡಿದರೆ ಬೇಸರ ಎನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Kannada Bigg Boss Elimination: ಸುದೀಪ್​ ಭೇಟಿ ಮಾಡದೇ ಬಿಗ್​ ಬಾಸ್​ ಮನೆಯಿಂದ ಹೊರಹೋದ ವಿಶ್ವನಾಥ್​

Follow Us
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ