AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದಲ್ಲಿ 17 ವರ್ಷ ಕಳೆದ ಶುಭಾ ಪೂಂಜಾಗೆ ಈ ಗತಿಯೇ; ಮರುಗಿದ ಮಂಜು

ಬಿಗ್​ ಬಾಸ್​ ಮನೆಯಲ್ಲಿ ಏಪ್ರಿಲ್​ 20ರ ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಮನೆ ಖಾಲಿ ಖಾಲಿ ಆಗಿದೆ. ಮನೆಯಲ್ಲಿ ದಿನಸಿ ಸಾಮಾನುಗಳಿಲ್ಲ. ಇನ್ನು, ಹಾಯಾಗಿ ಮಲಗೋಣ ಎಂದರೆ ಬೆಡ್​ ಶೀಟ್​, ಬೆಡ್​ ಎರಡೂ ಇಲ್ಲ.

ಚಿತ್ರರಂಗದಲ್ಲಿ 17 ವರ್ಷ ಕಳೆದ ಶುಭಾ ಪೂಂಜಾಗೆ ಈ ಗತಿಯೇ; ಮರುಗಿದ ಮಂಜು
ಶುಭಾ ಪೂಂಜಾ
ರಾಜೇಶ್ ದುಗ್ಗುಮನೆ
|

Updated on: Apr 21, 2021 | 5:08 PM

Share

ಬಿಗ್​ ಬಾಸ್​ ಮನೆಯ ಸದಸ್ಯರು ನಿತ್ಯ ಒಂದೊಂದು ಟಾಸ್ಕ್​ ಎದುರಿಸುತ್ತಲೆ ಇರುತ್ತಾರೆ. ಸ್ಪರ್ಧೆ ನೀಡಿದಾಗ ಎದುರಿಸುವ ಟಾಸ್ಕ್​ನ ಜತೆಗೆ, ಮನೆ ಸದಸ್ಯರ ಜತೆ ಹೊಂದಿಕೊಂಡು ಹೋಗುವುದು ಕೂಡ ಒಂದು ಟಾಸ್ಕ್​. ಈಗ ಬಿಗ್ ಬಾಸ್​ ಸ್ಪರ್ಧಿಗಳಿಗೆ ಹೊಸ ಸವಾಲೊಂದು ಎದುರಾಗಿದೆ. ಮನೆಯ ಎಲ್ಲಾ ಸೌಲಭ್ಯವನ್ನು ಬಿಗ್​ ಬಾಸ್​ ಕಿತ್ತುಕೊಂಡಿದ್ದಾರೆ. ಹೀಗಾಗಿ ಟಾಸ್ಕ್​ ಮೂಲಕ ಎಲ್ಲವನ್ನೂ ವಾಪಸ್​ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಬಿಗ್​ ಬಾಸ್​ ಮನೆಯಲ್ಲಿ ಏಪ್ರಿಲ್​ 20ರ ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಮನೆ ಖಾಲಿ ಖಾಲಿ ಆಗಿದೆ. ಮನೆಯಲ್ಲಿ ದಿನಸಿ ಸಾಮಾನುಗಳಿಲ್ಲ. ಅಡುಗೆ ಮಾಡೋಕೆ ಪಾತ್ರೆಗಳಿಲ್ಲ. ಶೌಚಾಲಯದಲ್ಲಿ ಬಕೆಟ್​ಗಳಿಲ್ಲ. ಇನ್ನು, ಹಾಯಾಗಿ ಮಲಗೋಣ ಎಂದರೆ ಬೆಡ್​ ಶೀಟ್​, ಬೆಡ್​ ಎರಡೂ ಇಲ್ಲ. ಈ ಎಲ್ಲವನ್ನೂ ಬಿಗ್​ ಬಾಸ್​ ನೀಡುವ ಟಾಸ್ಕ್​ ಮೂಲಕ ಗೆಲ್ಲಬೇಕು. ಒಂದೊಮ್ಮೆ ಗೆದ್ದಿಲ್ಲ ಎಂದರೆ, ವಾರಪೂರ್ತಿ ಆ ಸೌಲಭ್ಯ ಮನೆಗೆ ಲಭ್ಯವಾಗುವುದಿಲ್ಲ. ಇದು ಮನೆಯವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರಾತ್ರಿ ಮಲಗುವ ವೇಳೆ ಯಾರಿಗೂ ಬೆಡ್​ಶೀಟ್​ ಇರಲಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಎಸಿ ಇರುವುದರಿಂದ ಚಳಿಯಲ್ಲಿ ಮಲಗೋಕೆ ಸಾಧ್ಯವೇ ಆಗುತ್ತಿರಲಿಲ್ಲ. ಹೀಗಾಗಿ, ಎಲ್ಲರೂ ಮನೆಯ ಗಾರ್ಡನ್​ ಏರಿಯಾಗೆ ಬಂದಿದ್ದರು. ಗಾರ್ಬೆಜ್​ ಕವರ್ ಅನ್ನೇ ಹೊದಿಕೆ ಮಾಡಿಕೊಂಡು ಮಲಗೋಕೆ ಮುಂದಾದರು.

ಗಾರ್ಡನ್​ ಎರಿಯಾದಲ್ಲಿ ಒಂದು ಸಣ್ಣ ರಸ್ತೆ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಶುಭಾ ಪೂಂಜಾ ಅಲ್ಲಿಯೇ ನಿದ್ರಿಸೋಕೆ ಮುಂದಾಗಿದ್ದರು. ಇದನ್ನು ನೋಡಿದ ಮಂಜು ತುಂಬಾನೇ ಮರುಕ ವ್ಯಕ್ತಪಡಿಸಿದರು. 17 ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿರುವ ದೊಡ್ಡ ಹೀರೋಯಿನ್​ಗೆ ಗಾರ್ಬೆಜ್​ ಕವರ್​ ಹಾಕಿಕೊಂಡು ರಸ್ತೆ ಮೇಲೆ ಮಲಗೋ ಪರಿಸ್ಥಿತಿ ಬಂತಲ್ಲಪ್ಪ. ನಿಮ್ಮನ್ನು ನೋಡಿದರೆ ಬೇಸರ ಎನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Kannada Bigg Boss Elimination: ಸುದೀಪ್​ ಭೇಟಿ ಮಾಡದೇ ಬಿಗ್​ ಬಾಸ್​ ಮನೆಯಿಂದ ಹೊರಹೋದ ವಿಶ್ವನಾಥ್​

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್