AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gatha Vaibhava Review: ನಾಲ್ಕು ಸಿಂಪಲ್ ಕಥೆಗಳಿಗೆ ವೈಭವ ತುಂಬಿದ ಸುನಿ

Gatha Vaibhava Review: ನಾಲ್ಕು ಸಿಂಪಲ್ ಕಥೆಗಳಿಗೆ ವೈಭವ ತುಂಬಿದ ಸುನಿ
Gatha Vaibhava Movie Review
ಗತವೈಭವ
UA
  • Time - 142 Minutes
  • Released - November 14, 2025
  • Language - Kannada
  • Genre - Drama, Fantasy, Period, Romantic
Cast - ದುಷ್ಯಂತ್, ಆಶಿಕಾ ರಂಗನಾಥ್, ಕೃಷ್ಣ ಹೆಬ್ಬಾಳೆ, ಕಿಶನ್ ಬಿಳಗಲಿ ಮುಂತಾದವರು.
Director - ಸಿಂಪಲ್ ಸುನಿ
3
Critic's Rating
ಮದನ್​ ಕುಮಾರ್​
|

Updated on: Nov 14, 2025 | 4:43 PM

Share

ಹೀರೋ ಹೊಸ ಹುಡುಗನೇ ಆಗಲಿ ಅಥವಾ ಸ್ಟಾರ್ ನಟನೇ ಆಗಲಿ, ಕಥೆಗೆ ಪ್ರಾಮುಖ್ಯತೆ ಕೊಟ್ಟು ಸಿನಿಮಾ ಮಾಡುವುದು ಸಿಂಪಲ್ ಸುನಿ (Simple Suni) ಶೈಲಿ. ‘ಚಮಕ್’, ‘ಆಪರೇಷನ್ ಅಲಮೇಲಮ್ಮ’, ‘ಒಂದು ಸರಳ ಪ್ರೇಮಕಥೆ’ ಮುಂತಾದ ಸಿನಿಮಾಗಳಲ್ಲಿ ಅವರು ಅದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ನಿರ್ದೇಶನ ಮಾಡಿರುವ ‘ಗತವೈಭವ’ ಸಿನಿಮಾ (Gatha Vaibhava Movie) ಬಿಡುಗಡೆ ಆಗಿದೆ. ದೀಪಕ್ ತಿಮ್ಮಪ್ಪ ಮತ್ತು ಸುನಿ ಅವರು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಹೊಸ ಹೀರೋ ದುಷ್ಯಂತ್ (Dushyanth) ಅವರು ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ನವೆಂಬರ್ 14ರಂದು ತೆರೆಕಂಡ ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು ತಿಳಿಯಲು ಈ ವಿಮರ್ಶೆ ಓದಿ..

ಎಂದಿನಂತೆ ಈ ಬಾರಿ ‘ಗತವೈಭವ’ ಸಿನಿಮಾದಲ್ಲಿ ಕೂಡ ನಿರ್ದೇಶಕ ಸಿಂಪಲ್ ಸುನಿ ಅವರು ಕಥೆಗೆ ಮಹತ್ವ ನೀಡಿದ್ದಾರೆ. ಡಿಫರೆಂಟ್ ಏನೆಂದರೆ, ಈ ಸಿನಿಮಾದಲ್ಲಿ ಒಂದಲ್ಲ.. 4 ಕಥೆಗಳು ಇವೆ. ಪ್ರತಿ ಕಥೆ ಕೂಡ ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ನಾಲ್ಕೂ ಕಥೆಗಳು ಬೇರೆ ಬೇರೆ ಫ್ಲೇವರ್​ನಲ್ಲಿ ಇವೆ. ಪುರಾಣದಿಂದ ಶುರುವಾಗುವ ಕಥೆ ಈಗಿನ ಮಾಡರ್ನ್ ಕಾಲಕ್ಕೆ ಬಂದು ನಿಲ್ಲುತ್ತದೆ. ಆ ಮೂಲಕ ಪ್ರೇಕ್ಷಕರಿಗೆ 4 ಡಿಫರೆಂಟ್ ಶೆಡ್​​ಗಳನ್ನು ಸಿಂಪಲ್ ಸುನಿ ಅವರು ಪರಿಚಯಿಸಿದ್ದಾರೆ.

ಪುರಾಣದಲ್ಲಿ ರಾಕ್ಷಸ ಕುಲದ ಯುವಕನಿಗೂ, ದೇವಕುಲದ ರಾಜಕುಮಾರಿಗೂ ಪ್ರೀತಿ ಮೂಡುತ್ತದೆ. ಆದರೆ ಶಾಪಕ್ಕೆ ಗುರಿಯಾಗಿ ಇಬ್ಬರೂ ಸಾಯುತ್ತಾರೆ. ಯಾವುದೇ ಜನ್ಮದಲ್ಲೂ ನೀವಿಬ್ಬರು ಒಂದಾಗಲೇ ಬಾರದು ಎಂಬುದೇ ಆ ಶಾಪ. ನಂತರದ ಜನ್ಮಗಳಲ್ಲೂ ಅವರಿಬ್ಬರು ಭೇಟಿ ಆಗುತ್ತಾರೆ. ಆದರೆ ಒಂದಾಗುತ್ತಾರಾ ಅಥವಾ ಇಲ್ಲವಾ? ಅವರ ಶಾಪ ವಿಮೋಚನೆ ಆಗುತ್ತಾ ಅಥವಾ ಇಲ್ಲವಾ ಎಂಬುದನ್ನು ಸಿನಿಮಾ ನೋಡಿಯೇ ತಿಳಿದರೆ ಚೆನ್ನ.

ಪುನರ್ಜನ್ಮದ ಕಾನ್ಸೆಪ್ಟ್ ಇರುವ ಸಿನಿಮಾಗಳ ಸಾಲಿಗೆ ‘ಗತವೈಭವ’ ಹೊಸ ಸೇರ್ಪಡೆ. ಸಿಂಪಲ್ ಸುನಿ ಅವರು ತಮ್ಮದೇ ಫ್ಲೇವರ್​​ನಲ್ಲಿ ಈ ಸಿನಿಮಾ ಮಾಡಿದ್ದಾರೆ. ಆರಂಭದಿಂದ ಕೊನೆವರೆಗೂ ತೆಳು ಹಾಸ್ಯದಿಂದಲೇ ಅವರು ಕಥೆಯನ್ನು ನಿರೂಪಿಸಿದ್ದಾರೆ. ಬೇಕಾದ ಕಡೆಯಲ್ಲಿ ಸಾಕಷ್ಟು ಎಮೋಷನ್ ಕೂಡ ಬೆರೆಸಿದ್ದಾರೆ. ಜೊತೆಗೆ ಆ್ಯಕ್ಷನ್, ಸಸ್ಪೆನ್ಸ್ ಕೂಡ ಇದೆ. ಒಟ್ಟಿನಲ್ಲಿ ಮನರಂಜನೆಗೆ ಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು ಸುನಿ ಅವರು ಈ ಸಿನಿಮಾ ಮಾಡಿದ್ದಾರೆ.

ಹೊಸ ನಟ ದುಷ್ಯಂತ್ ಅವರಿಗೆ ಇದೊಂದು ಚಾಲೆಂಜಿಂಗ್ ಸಿನಿಮಾ. ಯಾಕೆಂದರೆ, ಇಲ್ಲಿ ಅವರಿಗೆ 4 ಶೇಡ್ ಇರುವ ಪಾತ್ರ ಇದೆ. ರಾಕ್ಷಕನಾಗಿ, ಪೋರ್ಚುಗೀಸ್ ಪ್ರಜೆಯಾಗಿ, ಕಂಬಳದ ಪಟುವಾಗಿ ಹಾಗೂ ತುಂಟತನ ತುಂಬಿರುವ ಪಡ್ಡೆ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ನಾಲ್ಕೂ ಶೇಡ್​​ಗಳಿಗೆ ಅವರು ಜೀವ ತುಂಬಿದ್ದಾರೆ. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವರು ಈ ಸಿನಿಮಾದಲ್ಲಿ ಹೇರಳ ಅವಕಾಶ ಸಿಕ್ಕಿದೆ. ಅನುಭವಿ ನಟಿ ಆಶಿಕಾ ರಂಗನಾಥ್ ಜೊತೆ ದುಶ್ಯಂತ್ ಅವರ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ.

ತಾಂತ್ರಿಕವಾಗಿ ‘ಗತವೈಭವ’ ಸಿನಿಮಾ ಶ್ರೀಮಂತವಾಗಿದೆ. ಜೂಡಾ ಸ್ಯಾಂಡಿ ಅವರ ಸಂಗೀತ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣದಿಂದ ಸಿನಿಮಾಗೆ ವೈಭವ ಬಂದಿದೆ. ಸಿನಿಮಾದಲ್ಲಿ ನಾಲ್ಕು ಕಥೆಗಳ ಪೈಕಿ ಕಂಬಳದ ಕತೆ ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದೆ. ಅಲ್ಲದೇ, ಸಿನಿಮಾದಲ್ಲಿ ಈ ಕಥೆಯೇ ಪ್ರಮುಖವಾಗಿದೆ. ನಟ ದುಷ್ಯಂತ್ ಅವರು ಕಂಬಳದ ದೃಶ್ಯಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅನುಭವಿ ನಟನಂತೆ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಇದನ್ನೂ ಓದಿ: Love OTP Movie Review: ಪ್ರೇಮಿಗಳಿಗೂ, ಪೋಷಕರಿಗೂ ಇಷ್ಟವಾಗುವ ಸಿನಿಮಾ ಲವ್ ಒಟಿಪಿ

ಪುನರ್ಜನ್ಮ ಎಂಬುದು ನಿಜವೋ ಅಲ್ಲವೋ ಎಂಬ ಪ್ರಶ್ನೆ ಕೂಡ ಈ ಸಿನಿಮಾದಲ್ಲಿ ಇದೆ. ಪ್ರೇಕ್ಷಕರ ತಲೆಗೆ ಕೆಲಸ ಕೊಡುವ ರೀತಿಯಲ್ಲಿ ಕ್ಲೈಮ್ಯಾಕ್ಸ್ ಬರುತ್ತದೆ. ಇದೆಲ್ಲವೂ ಸಿನಿಮಾಗೆ ಪ್ಲಸ್ ಆಗಿದೆ. ಮೂರು ಕಥೆಗಳಲ್ಲಿ ಪೋರ್ಚುಗೀಸ್ ಕಥೆಗೆ ತೂಕ ಕಡಿಮೆ ಇದೆ. ಆ ಎಪಿಸೋಡ್​​ನಲ್ಲಿ ಪ್ರೇಕ್ಷಕರನ್ನು ನಗಿಸುವ ಪ್ರಯತ್ನಕ್ಕೆ ಹೆಚ್ಚು ಫಲ ಸಿಕ್ಕಿಲ್ಲ. ಅದರಿಂದ ಸಿನಿಮಾಗೆ ಕೊಂಚ ಮೈನಸ್ ಆಗಿದೆ. ಅಷ್ಟನ್ನು ಬದಿಗಿಟ್ಟರೆ ಸಿನಿಮಾ ರುಚಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಮನೆ ಬಾಗಿಲಲ್ಲೇ ಮಲಗಿತ್ತು 10 ಅಡಿ ಕಾಳಿಂಗ ಸರ್ಪ!
ಮನೆ ಬಾಗಿಲಲ್ಲೇ ಮಲಗಿತ್ತು 10 ಅಡಿ ಕಾಳಿಂಗ ಸರ್ಪ!
ದುಬಾರೆ ಆನೆ ಶಿಬಿರ 2 ದಿನ ಬಂದ್: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ದುಬಾರೆ ಆನೆ ಶಿಬಿರ 2 ದಿನ ಬಂದ್: ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ