AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ek Love Ya Movie Review: ಅದ್ದೂರಿ ‘ಪ್ರೇಮ್​’ ಕಹಾನಿಯ ಪ್ಲಸ್​ ಏನು? ಮೈನಸ್​ ಏನು?

ಏಕ್​ ಲವ್​ ಯಾ ಸಿನಿಮಾ ವಿಮರ್ಶೆ: ‘ಜೋಗಿ’ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರ ತೆರೆಗೆ ಬಂದಿದೆ. ರಕ್ಷಿತಾ ಪ್ರೇಮ್​ ನಿರ್ಮಾಣದ ಈ ಸಿನಿಮಾದ ಮೂಲಕ ಅವರ ಸಹೋದರ ರಾಣ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಸಾಕಷ್ಟು ಹೈಪ್​ ಪಡೆದುಕೊಂಡಿದ್ದ ಈ ಸಿನಿಮಾದ ವಿಮರ್ಶೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

Ek Love Ya Movie Review: ಅದ್ದೂರಿ ‘ಪ್ರೇಮ್​’ ಕಹಾನಿಯ ಪ್ಲಸ್​ ಏನು? ಮೈನಸ್​ ಏನು?
ಏಕ್​ ಲವ್​ ಯಾ ವಿಮರ್ಶೆ
ರಾಜೇಶ್ ದುಗ್ಗುಮನೆ
|

Updated on:Feb 24, 2022 | 2:01 PM

Share

ಸಿನಿಮಾ: ಏಕ್​ ಲವ್​ ಯಾ

ಪಾತ್ರವರ್ಗ: ರಾಣ, ರಚಿತಾ ರಾಮ್​, ರೀಷ್ಮಾ ನಾಣಯ್ಯ, ಸುಚೇಂದ್ರ ಪ್ರಸಾದ್​, ಶಶಿಕುಮಾರ್, ಚರಣ್​ ರಾಜ್​ ಮೊದಲಾದವರು.

ನಿರ್ದೇಶನ: ‘ಜೋಗಿ’ ಪ್ರೇಮ್​

ನಿರ್ಮಾಣ: ರಕ್ಷಿತಾ ಪ್ರೇಮ್​

ಸಂಗೀತ: ಅರ್ಜುನ್​ ಜನ್ಯ

ಸ್ಟಾರ್​: 3/5

ಅಮರ್​ (ರಾಣ) ಬ್ರಿಲಿಯಂಟ್​ ಸ್ಟುಡೆಂಟ್​. ಆತ ಕಾನೂನು ಅಧ್ಯಯನ ಮಾಡುತ್ತಿರುತ್ತಾನೆ. ಆದರೆ, ಕುಡಿಯೋದು ಆತನ ಮೈನಸ್​ ಪಾಯಿಂಟ್​. ಎಣ್ಣೆ ಹೊಡೆದೇ ಕಾಲೇಜಿಗೆ ಬರುತ್ತಾನೆ. ಕಾಲೇಜ್​ ಫಂಕ್ಷನ್​ನಲ್ಲಿ ಖ್ಯಾತ ಕ್ರಿಮಿನಲ್​ ಲಾಯರ್ ವಿಶ್ವನಾಥ್​​ (ಚರಣ್​ ರಾಜ್​) ನೀಡುವ ಸಮಸ್ಯೆಯನ್ನು ಬಗೆಹರಿಸಿ, ಆ ಲಾಯರ್​ನ ಜ್ಯೂನಿಯರ್​ ಆಗಿ ಸೇರಿಕೊಳ್ಳುತ್ತಾನೆ. ಇಷ್ಟು ಬ್ರಿಲಿಯಂಟ್​ ಇರೋ ಅಮರ್​ ಈ ರೀತಿ ಕುಡಿಯೋದೇಕೆ? ಪ್ರೇಯಸಿ ಅನಿತಾಳನ್ನು (ರೀಷ್ಮಾ ನಾಣಯ್ಯ) ಕೊಲೆ ಮಾಡ್ತೀನಿ ಅಂತ ಓಡಾಡೋದು ಏಕೆ? ರಚಿತಾ ಆ ರೀತಿ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಕಾರಣವೇನು? ರಚಿತಾ-ರಾಣ ಮಧ್ಯೆ ಪ್ರೇಮ್​ ಕಹಾನಿ ನಡೆಯುತ್ತದೆಯೇ? ಎನ್ನುವ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಕಂಡುಕೊಳ್ಳಬೇಕು.

ಮೊದಲಾರ್ಧಕ್ಕೆ ಬೇಕಿತ್ತು ವೇಗ: 

‘ಏಕ್​ ಲವ್​​ ಯಾ’ ಚಿತ್ರಕ್ಕೆ ಎರಡು ಟ್ರ್ಯಾಕ್​ ಇದೆ. ಎಲ್ಲಾ ಸಿನಿಮಾದಲ್ಲಿ ಇರುವಂತೆ ‘ಏಕ್​ ಲವ್​ ಯಾ’ ಸಿನಿಮಾದಲ್ಲೂ ಹೀರೋಗೆ ಒಂದು ಫ್ಲ್ಯಾಶ್​ಬ್ಯಾಕ್​ ಇದೆ. ಇದನ್ನು ತೋರಿಸುವುದರಲ್ಲೇ ಬಹುತೇಕ ಮೊದಲಾರ್ಧ ಕಳೆದಿದೆ. ಪ್ರೌಢಶಾಲೆಗೆ ತೆರಳುವಾಗಲೇ ಲವ್​​ನಲ್ಲಿ ಬೀಳೋ ಹೀರೋನ ಕಥೆ ಹೇಳೋಕೆ ನಿರ್ದೇಶಕ ‘ಜೋಗಿ’ ಪ್ರೇಮ್​ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಗುಡ್ಡಗಾಡಿನ ಲೊಕೇಷನ್​ಗಳಲ್ಲಿ ಸುತ್ತಿ ಬಳಸಿ ತೆರಳಿದ್ದಾರೆ. ಇಲ್ಲಿ ಸ್ವಲ್ಪ ಕಾಳಜಿ ವಹಿಸಿ ವೇಗ ಹೆಚ್ಚಿಸುವತ್ತ ನಿರ್ದೇಶಕರು ಗಮನ ಹರಿಸಬೇಕಿತ್ತು.

ದೃಶ್ಯ ವೈಭವ: 

‘ಏಕ್​ ಲವ್​ ಯಾ’ ಚಿತ್ರದ ಮೊದಲಾರ್ಧದ ಕಥೆ ಹಿಲ್​ ಸ್ಟೇಷನ್​​ನಲ್ಲಿ ಸಾಗಿದೆ. ಹೀಗಾಗಿ, ಈ ದೃಶ್ಯ ವೈಭವ ಕಣ್ಣಿಗೆ ತಂಪೆನಿಸುತ್ತದೆ. ಈ ಸಿನಿಮಾಗಾಗಿ ತುಂಬಾನೇ ಅದ್ಭುತ ಲೊಕೇಶನ್​ಗಳನ್ನು ಆಯ್ಕೆ ಮಾಡಿದ್ದಾರೆ ಪ್ರೇಮ್​. ಈ ಸ್ಥಳಗ​ನ್ನು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಹೇಂದ್ರ ಸಿಂಹ ಅವರ ಛಾಯಾಗ್ರಹಣದಿಂದ ಆಗಿದೆ. ಸದಾ ಮಂಜು ಮುಸುಕಿರುವ ಊರುಗಳು ಪ್ರೇಕ್ಷಕರಿಗೆ ಮುದ ನೀಡುತ್ತವೆ. ಇಡೀ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ.

ಪ್ಲಸ್​ ಆದ ಮ್ಯೂಸಿಕ್​: 

ಪ್ರೇಮ್​ ನಿರ್ದೇಶನದ ಸಿನಿಮಾದಲ್ಲಿ ಮ್ಯೂಸಿಕ್​ಗೆ ಬಹಳ ಮಹತ್ವ ಇರುತ್ತದೆ. ಈ ಮೊದಲೇ ಈ ಸಿನಿಮಾದ ಹಾಡುಗಳು ರಿಲೀಸ್​ ಆಗಿ ಹಿಟ್​ ಆಗಿದ್ದವು. ಅರ್ಜುನ್​ ಜನ್ಯ ಸಂಗೀತ, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಪಾತ್ರಗಳಿಗೆ ನ್ಯಾಯ ಒದಗಿಸಿದ ಕಲಾವಿದರು: 

ರಾಣ ಅವರು ಮೊದಲ ಸಿನಿಮಾದಲ್ಲೇ ಮಾಸ್​ ಮತ್ತು ಕ್ಲಾಸ್ ಲುಕ್​ನಲ್ಲಿ ಮಿಂಚಿದ್ದಾರೆ. ಈ ಚಿತ್ರದಿಂದ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಬಹುದು. ಕೆಲ ರಿಸ್ಕಿ ಫೈಟ್​ಗಳನ್ನು ಮಾಡಿ ಗಮನ ಸೆಳೆದಿದ್ದಾರೆ.​  ಬೋಲ್ಡ್​ ಲುಕ್​ನಲ್ಲಿ ಮಿಂಚಿರೋ ರಚಿತಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೀಷ್ಮಾ ನಾಣಯ್ಯ, ಸುಚೇಂದ್ರ ಪ್ರಸಾದ್​, ಕಾಕ್ರೋಚ್​ ಸುಧಿ, ಯಶ್​ ಶೆಟ್ಟಿ, ಹೀರೋನ ಗೆಳೆಯರ ಪಾತ್ರ ಮಾಡಿದವರ ನಟನೆ ಉತ್ತಮವಾಗಿದೆ. ಹೀರೋನ ತಂದೆಯಾಗಿ ಶಶಿಕುಮಾರ್​ ಗಮನ ಸೆಳೆಯುತ್ತಾರೆ. ಖಡಕ್​ ಲಾಯರ್​ ಆಗಿರೋ ಚರಣ್​ ರಾಜ್​ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಈ ಚಿತ್ರಕ್ಕೆ ವಿಲನ್​ ಯಾರು ಅನ್ನೋದು ಸಸ್ಪೆನ್ಸ್. ಕ್ಲೈಮ್ಯಾಕ್ಸ್​ನಲ್ಲಿ ಈ ರಹಸ್ಯ ಬಯಲಾಗುತ್ತದೆ.

ನಿರ್ದೇಶನ ಹೇಗಿದೆ?: 

ಜೋಗಿ ಪ್ರೇಮ್​ ಅವರು ತಾಯಿ ಸೆಂಟಿಮೆಂಟ್​ ಸಿನಿಮಾ ಮಾಡೋಕೆ ಹೆಸರುವಾಸಿ. ಈ ಬಾರಿ ಅವರು ತಾಯಿ ಸೆಂಟಿಮೆಂಟ್​ ಹಿಂದೆ ಹೋಗಿಲ್ಲ. ಬದಲಿಗೆ, ತಂದೆ-ಮಗನ ಬಾಂಧವ್ಯ ತೋರಿಸಿದ್ದಾರೆ. ಕಥೆಯಲ್ಲಿ ಮತ್ತಷ್ಟು ಗಟ್ಟಿತನ, ಹೊಸತನ ಬೇಕಿತ್ತು. ಸಿನಿಮಾದಲ್ಲಿ ಸಾಕಷ್ಟು ದೃಶ್ಯಗಳು ಎಕ್ಸ್​ಟ್ರಾ ಅನಿಸುತ್ತದೆ. ಡಬಲ್​ ಮೀನಿಂಗ್​ ಡೈಲಾಗ್​ಗಳು, ಕೆಲ ದೃಶ್ಯಗಳು ಫ್ಯಾಮಿಲಿ ಆಡಿಯನ್ಸ್​ಗೆ ಸ್ವಲ್ಪ ಮುಜುಗರ ತರಬಹುದು.

ಇದನ್ನೂ ಓದಿ:  ‘ಆಫೀಸ್​ಗೆ ಬಂದು ಒಂದು ಚಾನ್ಸ್​ ಕೊಡಿ ಎಂದಿದ್ರು’; ‘ಏಕ್​ ಲವ್​ ಯಾ’ ನಾಯಕಿ ರೀಷ್ಮಾ ಬಗ್ಗೆ ಪ್ರೇಮ್​ ಮಾತು

Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

Published On - 1:58 pm, Thu, 24 February 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ