AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love You Abhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು​ ವೆಬ್​ ಸಿರೀಸ್​ ‘ಲವ್​ ಯೂ ಅಭಿ’; ಈ ಶಿವ ಕೆಟ್ಟವನೋ? ಒಳ್ಳೆಯವನೋ?

Jio Cinema: ನಟ ವಿಕ್ರಮ್​ ರವಿಚಂದ್ರನ್​ ಅವರು ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅವರು ವೆಬ್​ ಸರಣಿ ಲೋಕಕ್ಕೂ ಎಂಟ್ರಿ ನೀಡಿದ್ದಾರೆ.

Love You Abhi Review: ಫ್ಯಾಮಿಲಿ ಪ್ರೇಕ್ಷಕರಿಗೊಂದು​ ವೆಬ್​ ಸಿರೀಸ್​ ‘ಲವ್​ ಯೂ ಅಭಿ’; ಈ ಶಿವ ಕೆಟ್ಟವನೋ? ಒಳ್ಳೆಯವನೋ?
ವಿಕ್ರಮ್ ರವಿಚಂದ್ರನ್, ಅದಿತಿ ಪ್ರಭುದೇವ
ಮದನ್​ ಕುಮಾರ್​
|

Updated on: May 21, 2023 | 3:05 PM

Share

ವೆಬ್​ ಸಿರೀಸ್​: ‘ಲವ್​ ಯೂ ಅಭಿ’

ನಿರ್ಮಾಣ: ಜಿಯೋ ಸಿನಿಮಾಸ್​

ನಿರ್ದೇಶನ: ಕಾಳಿ ವೇಲಾಯುಧಂ

ಪಾತ್ರವರ್ಗ: ವಿಕ್ರಮ್​ ರವಿಚಂದ್ರನ್​, ಅದಿತಿ ಪ್ರಭುದೇವ, ಪಿ. ರವಿಶಂಕರ್​, ವಿನಯಾ ಪ್ರಸಾದ್​, ಕೆಂಪೇಗೌಡ, ಸುಂದರ್​ ರಾಜ್​, ಅಂಬಿಕಾ, ಶ್ರೀನಾಥ್​ ಮುಂತಾದವರು.

ವೆಬ್​ ಸಿರೀಸ್​ಗಳ ಬಗ್ಗೆ ಪ್ರೇಕ್ಷಕರಿಗೆ ಒಂದು ಭಾವನೆ ಇದೆ. ಸಾಮಾನ್ಯವಾಗಿ ವೆಬ್​ ಸರಣಿಯಲ್ಲಿ ಲೈಂಗಿಕತೆ ಮತ್ತು ಕ್ರೈಮ್​ ಸಂಬಂಧಿತ ಕಥೆಗಳೇ ರಾರಾಜಿಸುತ್ತವೆ. ಹಾಗಾಗಿ ಕೌಟುಂಬಿಕ ಪ್ರೇಕ್ಷಕರು ವೆಬ್​ ಸಿರೀಸ್​ಗಳಿಂದ ಕೊಂಚ ದೂರವೇ ಉಳಿಯುವುದುಂಟು. ಕನ್ನಡದ ಮಟ್ಟಿಗೆ ವೆಬ್​ ಸಿರೀಸ್​ಗಳ (Kannada Web Series) ಸಂಖ್ಯೆ ಕಡಿಮೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಒಂದು ಹೊಸ ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಇದರ ಹೆಸರು ‘ಲವ್​ ಯೂ ಅಭಿ’. ಅದಿತಿ ಪ್ರಭುದೇವ (Aditi Prabhudeva) ಮತ್ತು ವಿಕ್ರಮ್​ ರವಿಚಂದ್ರನ್ ಅವರು ಇದರಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರು ಇದನ್ನು ಉಚಿತವಾಗಿ ವೀಕ್ಷಿಸಬಹುದು. ಪಕ್ಕಾ ಫ್ಯಾಮಿಲಿ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಈ ವೆಬ್​ ಸರಣಿ ಸಿದ್ಧವಾದಂತಿದೆ. ಒಟ್ಟಾರೆಯಾಗಿ ‘ಲವ್​ ಯೂ ಅಭಿ’ (Love You Abhi) ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ.

ಮಾಮೂಲಿ ವೆಬ್​ ಸಿರೀಸ್​ಗಳಲ್ಲಿ ಕಂಡುಬರುವ ಅಂಶಗಳು ‘ಲವ್​ ಯೂ ಅಭಿ’ ದೃಶ್ಯಗಳಲ್ಲಿ ಇಲ್ಲ. ಇದರಲ್ಲಿ ಯಾವ ಪಾತ್ರವೂ ಅಸಭ್ಯ ಮಾತುಗಳನ್ನು ಆಡುವುದಿಲ್ಲ. ಯಾರೂ ಕೂಡ ಅಶ್ಲೀಲವಾಗಿ ನಡೆದುಕೊಳ್ಳುವುದಿಲ್ಲ. ಸ್ವಲ್ಪ ಬೋಲ್ಡ್​ ಎನಿಸುವ ದೃಶ್ಯಗಳು ಇದ್ದರೂ ಕೂಡ ಫ್ಯಾಮಿಲಿ ಪ್ರೇಕ್ಷಕರಿಗೆ ಮುಜುಗರ ಆಗದ ರೀತಿಯಲ್ಲಿ ಅದನ್ನು ಕಟ್ಟಿಕೊಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ‘ಲವ್​ ಯೂ ಅಭಿ’ ಡಿಫರೆಂಟ್​ ಎನಿಸಿಕೊಳ್ಳುತ್ತದೆ.

ನಟ ವಿಕ್ರಮ್​ ರವಿಚಂದ್ರನ್​ ಅವರು ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅವರು ವೆಬ್​ ಸರಣಿ ಲೋಕಕ್ಕೂ ಎಂಟ್ರಿ ನೀಡಿದ್ದಾರೆ. ‘ಲವ್​ ಯೂ ಅಭಿ’ ವೆಬ್​ ಸಿರೀಸ್​ನಲ್ಲಿ ಅವರದ್ದೇ ಮುಖ್ಯ ಪಾತ್ರ. ಶಿವ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ನೆಗೆಟಿವ್​ ಶೇಡ್​ ಕೂಡ ಇದೆ. ಶಿವ ಕೆಟ್ಟವನೋ ಒಳ್ಳೆಯವನೋ ಎಂಬ ಗೊಂದಲ ಪ್ರೇಕ್ಷಕರ ಮನದಲ್ಲಿ ಮೂಡುತ್ತದೆ. ಆ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಪೂರ್ತಿ ಎಪಿಸೋಡ್​ ನೋಡಬೇಕು. ಸಿಕ್ಕ ಅವಕಾಶವನ್ನು ವಿಕ್ರಮ್​ ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಟನೆಯಲ್ಲಿ ಅವರಿನ್ನೂ ಮಾಗಬೇಕಿದೆ.

ಇದನ್ನೂ ಓದಿ: ರವಿಚಂದ್ರನ್​ ಪುತ್ರರ ಬಗ್ಗೆ ಕಾಕ್ರೋಚ್​ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್​

ಗಂಡನನ್ನು ಕಳೆದುಕೊಂಡ ಅಭಿ ಎಂಬ ಯುವತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಶಿವನ ಜೊತೆ ಅಭಿ ಮರು ಮದುವೆ ಆಗುತ್ತದೆ. ಆದರೆ ಅಭಿಯ ಮೊದಲ ಗಂಡ ಸತ್ತಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವ ಆಗುತ್ತದೆ. ಅಲ್ಲಿಂದಲೇ ಶುರುವಾಗುವುದು ಇದರ ಅಸಲಿ ಕಥೆ. ಆ ಸಾವು ಹೇಗೆ ನಡೆಯಿತು? ಅದರ ಹಿಂದಿನ ರೂವಾರಿ ಯಾರು ಎಂಬ ಕೌತುಕದ ಪ್ರಶ್ನೆಯೊಂದಿಗೆ ಸಾಗುತ್ತದೆ ‘ಲವ್​ ಯೂ ಅಭಿ’ ನಿರೂಪಣೆ. ಅದಿತಿ ಪ್ರಭುದೇವ ಅವರ ನಟನೆ ಗಮನ ಸೆಳೆಯುತ್ತದೆ.

ಈ ವೆಬ್​ ಸರಣಿಯಲ್ಲಿ ಅನೇಕ ಜನಪ್ರಿಯ ಕಲಾವಿದರು ಇದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಪಿ. ರವಿಶಂಕರ್​ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ವಿನಯಾ ಪ್ರಸಾದ್​, ಸುಂದರ್​ ರಾಜ್​, ಅಂಬಿಕಾ, ಶ್ರೀನಾಥ್​, ಕೆಂಪೇಗೌಡ, ರಚಿತಾ ಮಹಾಲಕ್ಷ್ಮಿ, ಶ್ರೀನಿವಾಸ ಮೂರ್ತಿ ಮುಂತಾದವರು ಅಭಿನಯಿಸಿದ್ದಾರೆ. ಇಂಥ ಪ್ರತಿಭಾವಂತ ಕಲಾವಿದರಿಂದಾಗಿ ‘ಲವ್​ ಯೂ ಅಭಿ’ ಮೆರುಗು ಹೆಚ್ಚಿದೆ.

ಇದನ್ನೂ ಓದಿ: ‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್​ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ

ಈ ಕಥಾಹಂದರದಲ್ಲಿ ಒಂದಷ್ಟು ಕೊರತೆ ಕೂಡ ಕಾಣುತ್ತದೆ. ಅನೇಕ ಕಡೆಗಳಲ್ಲಿ ಇದು ಟಿವಿ ಸೀರಿಯಲ್​ ರೀತಿ ಫೀಲ್​ ನೀಡುತ್ತದೆ. ಪಾತ್ರಗಳ ಸಂಭಾಷಣೆ, ಎದುರಾಗುವ ಸನ್ನಿವೇಶಗಳು, ಇಡೀ ಕಥೆಯನ್ನು ಕಟ್ಟಿಕೊಟ್ಟ ರೀತಿ ಗಮನಿಸಿದಾಗ ಕಿರಿತೆರೆ ಧಾರಾವಾಹಿಗಳ ಛಾಯೆ ಕಾಣಿಸುತ್ತದೆ. ಕಥೆಗೆ ಬೇರೆ ಫ್ಲೇವರ್​ ನೀಡುವಲ್ಲಿ ನಿರ್ದೇಶಕರು ಗಮನ ಹರಿಸಬಹುದಿತ್ತು. ಇನ್ನಷ್ಟು ವಿವರಗಳ ಅಗತ್ಯವಿತ್ತು ಎನಿಸುತ್ತದೆ.

ಇದೊಂದು ಶ್ರೀಮಂತ ಕುಟುಂಬದ ಕಥೆ. ಹಾಗಾಗಿ ಐಷಾರಾಮಿ ಬಂಗಲೆ, ಕಾರು ಮುಂತಾದನ್ನು ತೋರಿಸುವುದರತ್ತ ಹೆಚ್ಚು ಗಮನ ಹರಿಸಲಾಗಿದೆ. ಮೇಕಿಂಗ್​ ವಿಚಾರದಲ್ಲಿ ಎಲ್ಲಿಯೂ ರಾಜಿ ಆಗಿಲ್ಲ. ಆದರೆ ಸ್ಕ್ರಿಪ್ಟ್​ನಲ್ಲಿ ಒಂದಷ್ಟು ಹೊಸತನವನ್ನು ತುಂಬಿದ್ದರೆ ‘ಲವ್​ ಯೂ ಅಭಿ’ ಹೆಚ್ಚು ಆಪ್ತವಾಗುತ್ತಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ