Lucky Man Review: ದೇವರಾಗಿ ಬಂದು ನಗಿಸುವ ಅಪ್ಪು; ಭಾವುಕವಾಗಿ ಕಣ್ಣೀರು ಹಾಕುವ ಅಭಿಮಾನಿ

Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಹಲವು ಭಾವನೆಗಳ ಕಹಾನಿ ಇದೆ. ಪುನೀತ್​ ರಾಜ್​ಕುಮಾರ್​ ನಟಿಸಿದ ಕೊನೇ ಸಿನಿಮಾ ಇದು. ಆ ಕಾರಣದಿಂದ ಭಾವುಕತೆ ಇಮ್ಮಡಿ ಆಗುತ್ತದೆ.

Lucky Man Review: ದೇವರಾಗಿ ಬಂದು ನಗಿಸುವ ಅಪ್ಪು; ಭಾವುಕವಾಗಿ ಕಣ್ಣೀರು ಹಾಕುವ ಅಭಿಮಾನಿ
‘ಲಕ್ಕಿ ಮ್ಯಾನ್’ ಸಿನಿಮಾ ಪೋಸ್ಟರ್​
Follow us
| Updated By: Vinay Bhat

Updated on:Sep 09, 2022 | 10:07 AM

ಚಿತ್ರ: ಲಕ್ಕಿ ಮ್ಯಾನ್​

ನಿರ್ದೇಶನ: ಎಸ್​. ನಾಗೇಂದ್ರ ಪ್ರಸಾದ್​

ನಿರ್ಮಾಣ: ಪಿ.ಆರ್​. ಮೀನಾಕ್ಷಿ ಸುಂದರಂ, ಆರ್​. ಸುಂದರ ಕಾಮರಾಜ್​

ಇದನ್ನೂ ಓದಿ
Image
Puneeth Rajkumar: ‘ಲಕ್ಕಿ ಮ್ಯಾನ್’ ರಿಲೀಸ್​; ಪುನೀತ್​ ನಟನೆಯ ಈ ಚಿತ್ರ ನೋಡಲು ಇಲ್ಲಿವೆ 5 ಮುಖ್ಯ ಕಾರಣಗಳು
Image
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?
Image
Lucky Man: ಒಂದು ದಿನ ಮೊದಲೇ ‘ಲಕ್ಕಿ ಮ್ಯಾನ್​’ ನೋಡುವ ಚಾನ್ಸ್; ಪುನೀತ್ ಚಿತ್ರದ ಟಿಕೆಟ್​ ಸೋಲ್ಡ್​ ಔಟ್​
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​

ಪಾತ್ರವರ್ಗ: ಪುನೀತ್​ ರಾಜ್​ಕುಮಾರ್​, ಡಾರ್ಲಿಂಗ್​ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್​, ಸಾಧು ಕೋಕಿಲ, ನಾಗಭೂಷಣ್, ರಂಗಾಯಣ ರಘು​ ಮುಂತಾದವರು.

ಸ್ಟಾರ್​: 4/5

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಭೌತಿಕವಾಗಿ ನಮ್ಮೊಂದಿಗಿಲ್ಲ ಎಂಬ ನೋವು ಯಾವಾಗಲೂ ಅಭಿಮಾನಿಗಳನ್ನು ಕಾಡುತ್ತಲೇ ಇರುತ್ತದೆ. ಆದರೆ ಸಿನಿಮಾಗಳ ಮೂಲಕ ಅಪ್ಪು ಶಾಶ್ವತವಾಗಿ ನೆಲೆಸಿರುತ್ತಾರೆ. ಅಪ್ಪು ನಟಿಸಿದ ‘ಲಕ್ಕಿ ಮ್ಯಾನ್​’ ಸಿನಿಮಾ (Lucky Man) ಈಗ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಡಾರ್ಲಿಂಗ್​ ಕೃಷ್ಣ (Darling Krishna) ಮಿಂಚಿದ್ದಾರೆ. ಮೊದಲ ನಿರ್ದೇಶನದ ಪ್ರಯತ್ನದಲ್ಲಿ ಎಸ್​. ನಾಗೇಂದ್ರ ಪ್ರಸಾದ್​ ಗಮನ ಸೆಳೆದಿದ್ದಾರೆ. ನಗು-ಅಳು ತುಂಬಿದ ಭಾವುಕ ಪಯಣದಂತೆ ಪ್ರೇಕ್ಷಕರನ್ನು ‘ಲಕ್ಕಿ ಮ್ಯಾನ್​’ ಸಿನಿಮಾ ಆವರಿಸಿಕೊಳ್ಳುತ್ತದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ ಓದಿ.

ಪುನೀತ್​ ರಾಜ್​ಕುಮಾ​ರ್​ ಅವರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಾರೆ. ಅವರು ಮಾಡಿದ ಸಾಮಾಜಿಕ ಕಳಕಳಿಯ ಕಾರ್ಯಗಳೇ ಅದಕ್ಕೆ ಕಾರಣ. ನಿಧನರಾಗುವುದಕ್ಕೂ ಮುನ್ನ ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದರು. ಅವರು ಇಹಲೋಕ ತ್ಯಜಿಸಿದ ನಂತರ ಈ ಚಿತ್ರ ಬಿಡುಗಡೆ ಆಗಿದ್ದರಿಂದ ಆ ದೇವರ ಪಾತ್ರ ಅವರಿಗೆ ತುಂಬ ಚೆನ್ನಾಗಿ ಹೊಂದಿಕೆ ಆಗುತ್ತಿರುವುದು ಕಾಕತಾಳೀಯ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚು ಆಪ್ತ ಎನಿಸುತ್ತದೆ.

ಬಾಲ್ಯದ ಸ್ನೇಹಿತೆಯನ್ನೇ ಮದುವೆ ಆಗುವ ಕಥಾನಾಯಕನಿಗೆ (ಡಾರ್ಲಿಂಗ್​ ಕೃಷ್ಣ) ದಾಂಪತ್ಯ ಜೀವನ ಕಷ್ಟ ಎನಿಸುತ್ತದೆ. ಕೆಲವೇ ದಿನಗಳಲ್ಲಿ ಡಿವೋರ್ಸ್​ಗಾಗಿ ಆತ ಕೋರ್ಟ್​ ಮೆಟ್ಟಿಲು ಏರುತ್ತಾನೆ. ಇನ್ನೇನು ವಿಚ್ಛೇದನ ಸಿಗಬೇಕು ಎಂಬಷ್ಟರಲ್ಲಿ ಆತನಿಗೆ ದೇವರು (ಪುನೀತ್​) ಸಿಕ್ಕಿಬಿಡುತ್ತಾರೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ಬೇರೆ ಹುಡುಗಿಯನ್ನು ಮದುವೆಯಾಗಲು ದೇವರು ಎರಡನೇ ಅವಕಾಶ ನೀಡುತ್ತಾರೆ. ಟೈಮ್​ ಟ್ರಾವೆಲಿಂಗ್​ ರೀತಿಯ ಈ ಕಥೆಯಲ್ಲಿ ದೇವರು ಕೊಟ್ಟ ಎರಡನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಲೈಫ್​ನಲ್ಲಿ ಆತ ಯಾರನ್ನು ಮದುವೆ ಆಗ್ತಾನೆ? ಅಂತಿಮವಾಗಿ ಅವನಿಗೆ ಡಿವೋರ್ಸ್​ ಸಿಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಉತ್ತರವಿದೆ.

ಸ್ನೇಹ, ಪ್ರೀತಿ, ಹೊಂದಾಣಿಕೆ, ನಂಬಿಕೆ ಮುಂತಾದ ವಿಚಾರಗಳ ಬಗ್ಗೆ ಈ ಸಿನಿಮಾ ಪಾಠ ಮಾಡುತ್ತದೆ. ಆದರೆ ಆ ಪಾಠಗಳು ಬೋರು ಹೊಡೆಸುವುದಿಲ್ಲ. ನಗುವಿನ ಮೂಲಕವೇ ಎಲ್ಲವನ್ನೂ ನಿರೂಪಿಸುವ ಗುಣ ಈ ಚಿತ್ರದ ಪ್ಲಸ್​ ಪಾಯಿಂಟ್​. ಒಬ್ಬನೇ ವ್ಯಕ್ತಿಯ ಎರಡು ಡಿಫರೆಂಟ್​ ಲವ್​ ಸ್ಟೋರಿಗಳು ಪ್ರೇಕ್ಷಕರಿಗೆ ಮಜಾ ನೀಡುತ್ತವೆ. ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಈ ಎಲ್ಲ ಅಂಶಗಳು ಚಿತ್ರದ ಅಂದವನ್ನು ಹೆಚ್ಚಿಸಿವೆ.

ದೇವರಾಗಿ ಕಾಣಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಧುಕೋಕಿಲ ಸಾಥ್​ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ಕಾಮಿಡಿ ದೃಶ್ಯಗಳು ಚೆನ್ನಾಗಿವೆ. ಪುನೀತ್​ ಭರಪೂರ ನಗಿಸುತ್ತಾರೆ ನಿಜ. ಆದರೆ ಅವರನ್ನು ಪರದೆ ಮೇಲೆ ನೋಡಿದ ಪ್ರೇಕ್ಷಕ ಖಂಡಿತವಾಗಿಯೂ ಭಾವುಕನಾಗುತ್ತಾನೆ. ಕಥಾನಾಯಕನಿಗೆ ಸೆಕೆಂಡ್​ ಚಾನ್ಸ್​ ಸಿಕ್ಕ ರೀತಿಯಲ್ಲೇ ರಿಯಲ್​ ಲೈಫ್​ನಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೂ ಇನ್ನೊಂದು ಚಾನ್ಸ್​ ಸಿಗಲೇಬೇಕು ಎಂದು ಅಭಿಮಾನಿಗಳು ಮರುಗುತ್ತಾರೆ. ಅಪ್ಪು ನಟಿಸಿದ ಕೊನೇ ಸಿನಿಮಾ ಇದು. ಆ ಕಾರಣದಿಂದಲೂ ಭಾವುಕತೆ ಇಮ್ಮಡಿ ಆಗುತ್ತದೆ.

ಪುನೀತ್​ ರಾಜ್​ಕುಮಾರ್ ಸಿನಿಮಾ ಎಂದಮೇಲೆ ಫೈಟಿಂಗ್​ ದೃಶ್ಯಗಳು ಇಲ್ಲದಿದ್ದರೆ ಹೇಗೆ? ಈ ಸಿನಿಮಾದಲ್ಲಿಯೂ ಅಪ್ಪು ಫೈಟ್​ ಮಾಡಿದ್ದಾರೆ. ಆದರೆ ಅದು ದೇವರ ರೂಪದಲ್ಲಿ! ಈ ಸಾಹಸ ಸನ್ನಿವೇಶ ತುಂಬ ಡಿಫರೆಂಟ್​ ಆಗಿದೆ. ಅದನ್ನು ತೆರೆಮೇಲೆ ನೋಡಿಯೇ ಎಂಜಾಯ್​ ಮಾಡಬೇಕು.

ಡಾರ್ಲಿಂಗ್​ ಕೃಷ್ಣ ತುಂಬ ಲವಲವಿಕೆಯಿಂದ ನಟಿಸಿದ್ದಾರೆ. ಹುಡುಗಾಟದ ಯುವಕನಾಗಿ, ನಂತರ ನಿಜವಾದ ಪ್ರೀತಿ ಅರಸುವ ಪ್ರೇಮಿಯಾಗಿ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಸಂಗೀತಾ ಶೃಂಗೇರಿ ಕೂಡ ಹೆಚ್ಚು ಅಂಕ ಗಿಟ್ಟಿಸುತ್ತಾರೆ. ರೋಷಿನಿ ಪ್ರಕಾಶ್​ ಸಹಜಾಭಿನಯ ತೋರಿದ್ದಾರೆ. ಭರಪೂರ ನಗು ತರಿಸುವಲ್ಲಿ ರಂಗಾಯಣ ರಘು ಯಶಸ್ವಿ ಆಗಿದ್ದಾರೆ. ನಾಗಭೂಷಣ್​ ಕೂಡ ಸಿಕ್ಕಾಪಟ್ಟೆ ಕಾಮಿಡಿ ಕಚಗುಳಿ ಇಡುತ್ತಾರೆ.

ಚಿತ್ರದ ಪ್ರಮೋಷನಲ್​ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್ ಅವರು ಜೊತೆಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಚಿತ್ರದ ಮ್ಯೂಸಿಕ್​ ಹೇಗಿದೆ? ಛಾಯಾಗ್ರಹಣ ಹೇಗಿದೆ, ಅಪ್ಪು ಪಾತ್ರದ ಧ್ವನಿ ಯಾಕೆ ಕಡಿಮೆ ಕೇಳಿಸುತ್ತೆ ಎಂದೆಲ್ಲ ಆಲೋಚಿಸಲು ಅವಕಾಶವೇ ನೀಡದ ರೀತಿಯಲ್ಲಿ ಪ್ರೇಕ್ಷಕರನ್ನು ಈ ಚಿತ್ರದ ಕಥೆ ಆವರಿಸಿಕೊಳ್ಳುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:45 am, Fri, 9 September 22

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್