AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹರಿ ಹರ ವೀರ ಮಲ್ಲು’ ಫಸ್ಟ್​ ಹಾಫ್ ವಿಮರ್ಶೆ

Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು (ಜುಲೈ 24) ಬಿಡುಗಡೆ ಆಗಿದೆ. ಹಲವು ರಾಜ್ಯಗಳಲ್ಲಿ ಏಕಕಾಲಕ್ಕೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ನಿರೀಕ್ಷೆಯಿಂದ ಚಿತ್ರಮಂದಿರಗಳಿಗೆ ಬಂದಿದ್ದಾರೆ. ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ಫಸ್ಟ್ ಹಾಫ್ ರಿವ್ಯೂ...

‘ಹರಿ ಹರ ವೀರ ಮಲ್ಲು’ ಫಸ್ಟ್​ ಹಾಫ್ ವಿಮರ್ಶೆ
ಪವನ್ ಕಲ್ಯಾಣ್
ಮಂಜುನಾಥ ಸಿ.
| Updated By: Digi Tech Desk|

Updated on:Jul 24, 2025 | 12:35 PM

Share

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಇಂದು (ಜುಲೈ 24) ಬಿಡುಗಡೆ ಆಗಿದೆ. ಕೆಲ ವರ್ಷಗಳ ಬಳಿಕ ಪವನ್ ಕಲ್ಯಾಣ್ ಸೋಲೊ ಹೀರೋ ಆಗಿ ನಟಿಸಿರುವ ಸಿನಿಮಾ ತೆರೆಗೆ ಬಂದಿದೆ. ಅದೂ ರೀಮೇಕ್ ಅಲ್ಲದ, ಒರಿಜಿನಲ್ ಕತೆಯುಳ್ಳ ಸಿನಿಮಾ. ಸಹಜವಾಗಿಯೇ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇದೆ. ಪವನ್ ಕಲ್ಯಾಣ್, ನಿಧಿ ಅಗರ್ವಾಲ್,  ಬಾಬಿ ಡಿಯೋಲ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಿನಿಮಾದ ಮೊದಲಾರ್ಧದ ವಿಮರ್ಶೆ ಇಲ್ಲಿದೆ…

  1. ಹರಿ ಹರ ವೀರ ಮಲ್ಲು ಸಿನಿಮಾ ಪವರ್ ಫುಲ್ ಮೊದಲಾರ್ಧ. ಆ್ಯಕ್ಷನ್, ಹಾಡುಗಳ ಜೊತೆಗೆ ಸಖತ್ ಟ್ವಿಸ್ಟ್.
  2. ಪವನ್ ಕಲ್ಯಾಣ್ ಪವರ್ ಫುಲ್ ಎಂಟ್ರಿ. ವಜ್ರಗಳ ಕಳ್ಳನ ಪಾತ್ರದಲ್ಲಿ ಪವನ್ ಕಾಣಿಸಿಕೊಂಡಿದ್ದಾರೆ. ಉಳ್ಳವರಿಂದ ದೋಚಿ ಬಡವರಿಗೆ ಹಂಚುವ ವೀರ ಮಲ್ಲು.
  3. ಪವನ್ ಕಲ್ಯಾಣ್ ಪಾತ್ರದಷ್ಟೇ ಬಾಬಿ ಡಿಯೋಲ್ ಪಾತ್ರಕ್ಕೂ ತೂಕ ಇದೆ. ಮೊದಲಾರ್ಧದಲ್ಲಿ ಪವರ್ ಫುಲ್ ಎಂಟ್ರಿ, ಆ್ಯಕ್ಷನ್ ಮತ್ತು ಸಂಭಾಷಣೆಗಳು ಇವೆ.
  4. ನಾಯಕಿ ನಿಧಿ ಅಗರ್ವಾಲ್ ಅಂದವಾಗಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲೇ ನಾಯಕಿ ನಡುವೆ ರೊಮ್ಯಾನ್ಸ್ ಸ್ಟಾರ್ಟ್ ಆದರೆ ಯಾರೂ ಊಹಿಸದ ಟ್ವಿಸ್ಟ್ ಕೊಡುತ್ತೆ ನಿಧಿ ಅಗರ್ವಾಲ್ ಪಾತ್ರ.
  5. ಸಾಮಾನ್ಯ ವಜ್ರಗಳ ಕಳ್ಳನಿಗೆ ಬಹು ದೊಡ್ಡ ಟಾಸ್ಕ್ ಒಂದು ಸಿಗುತ್ತದೆ. ಅದುವೇ ಇಂಟರ್ವೆಲ್ ಟ್ವಿಸ್ಟ್, ನಾಯಕನ ಮುಂದಿನ ಹಾದಿ ಸವಾಲಿನದ್ದಾಗಿರಲಿದೆ.
  6. ಮೊದಲಾರ್ಧದಲ್ಲಿ ಮೂರು ಆ್ಯಕ್ಷನ್ ಸೀನ್ ಎರಡು ಹಾಡುಗಳಿವೆ. ಹಾಸ್ಯ ದೃಶ್ಯಗಳು ತುಸು ಕಡಿಮೆಯೇ.
  7. ಇತ್ತೀಚೆಗೆ ನಿಧನರಾದ ಕೋಟಾ ಶ್ರೀನಿವಾಸ ರಾವ್ ಅವರ ಕೊನೆಯ ಸಿನಿಮಾ ಇದಾಗಿದ್ದು ಭೂಮಾಲಿಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  8. ಸಿನಿಮಾದ ಆರಂಭದಲ್ಲಿ ಬರುವ ಜಟ್ಟಿಗಳೊಂದಿಗೆ ಮಲ್ಲಯುದ್ಧ ಚೆನ್ನಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:07 pm, Thu, 24 July 25

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ