Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ

Ravichandran | Drishya 2 Movie: ರಾಜೇಂದ್ರ ಪೊನ್ನಪ್ಪನ ಕುಟುಂಬದ ಮೇಲೆ ಇರುವ ಕೊಲೆ ಕೇಸ್​ 7 ವರ್ಷಗಳ ಬಳಿಕ ‘ದೃಶ್ಯ 2’ ಚಿತ್ರದಲ್ಲಿ ರೀ-ಓಪನ್​ ಆಗುತ್ತದೆ. ಮೊದಲಿಗಿಂತಲೂ ಹೆಚ್ಚು ಚಾಲೆಂಜ್​ಗಳನ್ನು ಕಥಾನಾಯಕ ಎದುರಿಸಬೇಕಾಗುತ್ತದೆ.

Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ
‘ದೃಶ್ಯ 2’ ಕನ್ನಡ ಸಿನಿಮಾ
Follow us
|

Updated on:Dec 10, 2021 | 4:18 PM

ಚಿತ್ರ: ದೃಶ್ಯ 2 ನಿರ್ಮಾಣ: ಮುಕೇಶ್​ ಮೆಹ್ತಾ, ಜೀ ಸ್ಡುಡಿಯೋಸ್​ ನಿರ್ದೇಶನ: ಪಿ. ವಾಸು ಪಾತ್ರವರ್ಗ: ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​, ಉನ್ನತಿ, ಪ್ರಮೋದ್​ ಶೆಟ್ಟಿ, ಅನಂತ್​ ನಾಗ್​, ಸಾಧುಕೋಕಿಲ ಮುಂತಾದವರು. ಸ್ಟಾರ್​: 3.5/5

ರವಿಚಂದ್ರನ್​ ನಟನೆಯ ‘ದೃಶ್ಯ’ ಸಿನಿಮಾ 2014ರಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ಆ ಸಿನಿಮಾದ ಕ್ಲೈಮ್ಯಾಕ್ಸ್​ ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದರು. ಈಗ ಆ ಚಿತ್ರದ 2ನೇ ಪಾರ್ಟ್​ ರಿಲೀಸ್​ ಆಗಿದೆ. ‘ದೃಶ್ಯ 2’ ಸಿನಿಮಾದಲ್ಲೂ ಅದೇ ಪಾತ್ರಧಾರಿಗಳು ಮುಂದುವರಿದಿದ್ದಾರೆ. ‘ದೃಶ್ಯ’ ಚಿತ್ರದ ಕ್ಲೈಮ್ಯಾಕ್ಸ್​ ನೋಡಿ ಹುಬ್ಬೇರಿಸಿದ್ದವರಿಗೆ ‘ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್​ ಇನ್ನಷ್ಟು ಥ್ರಿಲ್​ ನೀಡಲಿದೆ. ಹಾಗಾದರೆ ಈ ಸಿನಿಮಾ ಒಟ್ಟಾರೆಯಾಗಿ ಹೇಗಿದೆ? ಈ ವಿಮರ್ಶೆ ಓದಿ..

ಗಟ್ಟಿಯಾದ ಕಥಾಹಂದರ:

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಇದು ಮಲಯಾಳಂ ಸಿನಿಮಾದ ರಿಮೇಕ್​. ಮಾಲಿವುಡ್​ನಲ್ಲಿ ನಿರ್ದೇಶಕ ಜೀತೂ ಜೋಸೆಫ್​ ಮಾಡಿದ ‘ದೃಶ್ಯಂ’ ಚಿತ್ರವನ್ನು ಕನ್ನಡಕ್ಕೆ ‘ದೃಶ್ಯ’ ಎಂದು ರಿಮೇಕ್​ ಮಾಡಲಾಗಿತ್ತು. ಈಗ ಮತ್ತದೇ ಜೀತೂ ಜೋಸೆಫ್​ ಅವರು ನಿರ್ದೇಶಿಸಿದ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದಲ್ಲಿ ‘ದೃಶ್ಯ 2’ ಎಂದು ರಿಮೇಕ್​ ಮಾಡಲಾಗಿದೆ. ಈ ಚಿತ್ರದಲ್ಲಿನ ದೊಡ್ಡ ಶಕ್ತಿಯೇ ಜೀತೂ ಜೋಸೆಫ್​ ಬರೆದಿರುವ ಅದ್ಭುತವಾದ ಕಥೆ.

‘ದೃಶ್ಯ’ ಸಿನಿಮಾದಲ್ಲಿ ಪೊಲೀಸ್​ ರಾಣೆಯ ಒಳಗೆ ಹೆಣ ಹೂತಿಡುವ ಮೂಲಕ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿದ್ದ. ಆದರೆ ‘ದೃಶ್ಯ 2’ ಸಿನಿಮಾದಲ್ಲಿ ಆ ಕೇಸ್​ ರೀ-ಓಪನ್​ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್​ ಮಾಡುತ್ತಾನೆ. ಹಾಗಾದರೆ ಆತ ಈ ಬಾರಿ ಸಿಕ್ಕಿಬೀಳುತ್ತಾನಾ ಅಥವಾ ತಪ್ಪಿಸಿಕೊಳ್ಳುತ್ತಾನಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು.

‘ದೃಶ್ಯ’ಕ್ಕಿದೆ ತನ್ನತನದ ಫ್ಲೇವರ್​:

‘ದೃಶ್ಯ’ ಚಿತ್ರದಲ್ಲೊಂದು ಫ್ಲೇವರ್​ ಇತ್ತು. ಅದರ ಕಥಾನಾಯಕನ ಸ್ವಭಾವ ಎಲ್ಲರಿಗೂ ಇಷ್ಟವಾಗುವಂತಿತ್ತು. ಬಾಕಿ ಕಮರ್ಷಿಯಲ್​ ಹೀರೋಗಳಂತೆ ಆತ ವರ್ತಿಸುವುದಿಲ್ಲ. ಈಗ ‘ದೃಶ್ಯ 2’ ಸಿನಿಮಾದಲ್ಲೂ ಆ ಗುಣವನ್ನು ಕಾಯ್ದುಕೊಳ್ಳಲಾಗಿದೆ. ಪಾರ್ಟ್​ ಒಂದರಲ್ಲಿ ಇದ್ದ ನಿರೂಪಣಾ ಶೈಲಿಯನ್ನೇ ಎರಡನೇ ಪಾರ್ಟ್​ನಲ್ಲೂ ಮುಂದುವರಿಸಿರುವುದಕ್ಕೆ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಆಪ್ತವಾಗುತ್ತದೆ.

ಕಲಾವಿದರ ಅಭಿನಯಕ್ಕೆ ಮೆಚ್ಚುಗೆ:

ರವಿಚಂದ್ರನ್​ ಅವರು 7 ವರ್ಷಗಳ ಬಳಿಕ ರಾಜೇಂದ್ರ ಪೊನ್ನಪ್ಪನಾಗಿ ಆ ಪಾತ್ರವನ್ನು ಮತ್ತೊಮ್ಮೆ ಜೀವಿಸಿದ್ದಾರೆ. ಆರೋಹಿ ನಾರಾಯಣ್​, ನವ್ಯಾ ನಾಯರ್​, ಉನ್ನತಿ, ಆಶಾ ಶರತ್​, ಶಿವಾಜಿ ಪ್ರಭು ಮುಂತಾದವರ ಅಭಿನಯ ಕೂಡ ಮೆಚ್ಚುವಂತಿದೆ. ಈ ಬಾರಿ ಸಾಧುಕೋಕಿಲ ಅವರ ಕಾಮಿಡಿ ಸನ್ನಿವೇಶಗಳು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಗಂಭೀರ ಕಥೆಯ ನಡುವೆಯೂ ಅವರು ನಗು ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಚಿತ್ರತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಪ್ರಮೋದ್​ ಶೆಟ್ಟಿ ಅವರು ಖಡಕ್​ ಪೊಲೀಸ್​ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್​ ನಾಗ್​ ಅವರ ಪಾತ್ರ ಕೂಡ ಕಥೆಗೆ ಬಹುಮುಖ್ಯ ತಿರುವು ನೀಡುತ್ತದೆ. ಚಿಕ್ಕ ಪಾತ್ರದಲ್ಲೂ ಸಂಪತ್​ ಕುಮಾರ್​ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ ‘ದೃಶ್ಯ 2’ ಅಚ್ಚುಕಟ್ಟು:

ಸುರೇಶ್​ ಅರಸ್​ ಸಂಕಲನ, ಜಿಎಸ್​ವಿ ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತದಿಂದಾಗಿ ‘ದೃಶ್ಯ 2’ ಸಿನಿಮಾದ ತಾಂತ್ರಿಕ ಗುಣಮಟ್ಟ ಹೆಚ್ಚಿದೆ. ಪಿ. ವಾಸು ತುಂಬ ಅಚ್ಚುಕಟ್ಟಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಮಲಯಾಳಂ ಸಿನಿಮಾವನ್ನು ಅವರು ಯಥಾವತ್ತಾಗಿ ಕನ್ನಡಕ್ಕೆ ರಿಮೇಕ್​ ಮಾಡಿದ್ದಾರೆ. ಕನ್ನಡದ ಸೊಗಡಿಗೆ ಈ ಕಥೆ ತುಂಬ ಚೆನ್ನಾಗಿ ಹೊಂದಿಕೊಂಡಿದೆ. ಮಲಯಾಳಂ ಅಥವಾ ತೆಲುಗಿನಲ್ಲಿ ಈಗಾಗಲೇ ಬಂದಿರುವ ‘ದೃಶ್ಯಂ​ 2’ ಚಿತ್ರವನ್ನು ನೋಡದೇ ಇರುವವರಿಗೆ ಕನ್ನಡ ‘ದೃಶ್ಯ 2’ ಸಖತ್​ ರೋಚಕ ಅನುಭವ ನೀಡಲಿದೆ. ಏನಾದರೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದರೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತಿತ್ತು.

ಇದನ್ನೂ ಓದಿ:

‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್​ ಮಾತು

ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..

Published On - 4:06 pm, Fri, 10 December 21

ತಾಜಾ ಸುದ್ದಿ
ಶಿರೂರು ಗುಡ್ಡ ಕುಸಿತ ಕಾರ್ಯಚರಣೆ ಯಶಸ್ವಿಯಾಗದಿದ್ದಕ್ಕೆ ಮುಳುಗು ತಜ್ಞ ಭಾವುಕ
ಶಿರೂರು ಗುಡ್ಡ ಕುಸಿತ ಕಾರ್ಯಚರಣೆ ಯಶಸ್ವಿಯಾಗದಿದ್ದಕ್ಕೆ ಮುಳುಗು ತಜ್ಞ ಭಾವುಕ
ರಣಬೀರ್ ಜೊತೆ ಪ್ರಧಾನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿಖಿಲ್
ರಣಬೀರ್ ಜೊತೆ ಪ್ರಧಾನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿಖಿಲ್
ಮೇಘಾಲಯ ರಾಜ್ಯಪಾಲರಾಗಿ ನೇಮಕವಾಗಿದ್ದಕ್ಕೆ ವಿಜಯಶಂಕರ್ ಹೇಳಿದ್ದೇನು? ಇಲ್ಲಿದೆ
ಮೇಘಾಲಯ ರಾಜ್ಯಪಾಲರಾಗಿ ನೇಮಕವಾಗಿದ್ದಕ್ಕೆ ವಿಜಯಶಂಕರ್ ಹೇಳಿದ್ದೇನು? ಇಲ್ಲಿದೆ
ರೇಣುಕಾ ಸ್ವಾಮಿ ಕೊಲೆ ತನಿಖೆ, ಪೊಲೀಸರಿಗೆ ನಾಗರೀಕರ ಮೆಚ್ಚುಗೆ
ರೇಣುಕಾ ಸ್ವಾಮಿ ಕೊಲೆ ತನಿಖೆ, ಪೊಲೀಸರಿಗೆ ನಾಗರೀಕರ ಮೆಚ್ಚುಗೆ
Riyan Parag: 8 ಎಸೆತಗಳಲ್ಲಿ ಟೀಕಾಗಾರರ ಬಾಯಿ ಮುಚ್ಚಿಸಿದ ರಿಯಾನ್ ಪರಾಗ್
Riyan Parag: 8 ಎಸೆತಗಳಲ್ಲಿ ಟೀಕಾಗಾರರ ಬಾಯಿ ಮುಚ್ಚಿಸಿದ ರಿಯಾನ್ ಪರಾಗ್
ಬೆಂಗಳೂರಿನಲ್ಲಿ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನೇರಪ್ರಸಾರ
ಬೆಂಗಳೂರಿನಲ್ಲಿ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನೇರಪ್ರಸಾರ
ಕೇಂದ್ರ ಸಚಿವ ಕುಮಾರಸ್ವಾಮಿ ಬಂದರೂ ಪ್ರವಾಸಿ ಮಂದಿರದ ಬೀಗ ತೆಗೆಯದ ಸಿಬ್ಬಂದಿ
ಕೇಂದ್ರ ಸಚಿವ ಕುಮಾರಸ್ವಾಮಿ ಬಂದರೂ ಪ್ರವಾಸಿ ಮಂದಿರದ ಬೀಗ ತೆಗೆಯದ ಸಿಬ್ಬಂದಿ
Tax Tricks: ಸಂಬಳಕ್ಕೆ ಸ್ವಲ್ಪವೂ ತೆರಿಗೆ ಇಲ್ಲವಾಗಿಸುವ ಐಡಿಯಾ..!
Tax Tricks: ಸಂಬಳಕ್ಕೆ ಸ್ವಲ್ಪವೂ ತೆರಿಗೆ ಇಲ್ಲವಾಗಿಸುವ ಐಡಿಯಾ..!
ಉಕ್ಕಿಹರಿದ ತುಂಗಭದ್ರಾ ನದಿ, ರಾಯರಯ ತಪಸ್ಸು ಮಾಡಿದ್ದ ಕಟ್ಟೆ ಜಲಾವೃತ
ಉಕ್ಕಿಹರಿದ ತುಂಗಭದ್ರಾ ನದಿ, ರಾಯರಯ ತಪಸ್ಸು ಮಾಡಿದ್ದ ಕಟ್ಟೆ ಜಲಾವೃತ
ತರಗತಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕಿ, ಬೀಸಣಿಗೆಯಿಂದ ಗಾಳಿ ಹಾಕಿದ ಮಕ್ಕಳು
ತರಗತಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕಿ, ಬೀಸಣಿಗೆಯಿಂದ ಗಾಳಿ ಹಾಕಿದ ಮಕ್ಕಳು