AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namratha Gowda: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?

‘ನಾಗಿಣಿ 2’ ಧಾರಾವಾಹಿಯ ನಮೃತಾ ಗೌಡ ಮತ್ತು ನಿನಾದ್​ಗೆ ಅನೇಕರು ಸೋಶಿಯಲ್​ ಮೀಡಿಯಾ ಮೂಲಕ ಮದುವೆಯ ಶುಭಾಶಯ ತಿಳಿಸುತ್ತಿದ್ದಾರೆ. ಇದರಿಂದ ಇವರಿಬ್ಬರು ಪೇಚಿಗೆ ಸಿಲುಕುವಂತಾಗಿದೆ.

Namratha Gowda: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?
ನಾಗಿಣಿ 2 ಧಾರಾವಾಹಿಯ ನಿನಾದ್​ - ನಮ್ರತಾ ಗೌಡ
ಮದನ್​ ಕುಮಾರ್​
| Edited By: |

Updated on:Oct 12, 2021 | 12:34 PM

Share

ಕಿರುತೆರೆ ನಟ-ನಟಿಯರ ಬಗ್ಗೆ ವೀಕ್ಷಕರು ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾರೆ. ಸೀರಿಯಲ್​ ಕಲಾವಿದರ ಖಾಸಗಿ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ಆಸಕ್ತಿ. ಸೆಲೆಬ್ರಿಟಿಗಳ ಮದುವೆ ಬಗ್ಗೆ ಜನರಿಗೆ ಎಲ್ಲಿಲ್ಲದ ಕೌತುಕ ಇದ್ದೇ ಇರುತ್ತದೆ. ಹಾಗಾಗಿ ನಟ-ನಟಿಯರ ನಡುವಿನ ಲವ್​ ಸ್ಟೋರಿ ಮತ್ತು ಮದುವೆ ಸುದ್ದಿಗಳು ಬಹುಬೇಗ ವೈರಲ್​ ಆಗುತ್ತವೆ. ಅದೇ ಕಾರಣಕ್ಕಾಗಿ ‘ನಾಗಿಣಿ 2’ ಧಾರಾವಾಹಿ ಕಲಾವಿದರಾದ ನಿನಾದ್​ ಮತ್ತು ನಮ್ರತಾ ಗೌಡ (Namratha Gowda) ಮದುವೆ ವಿಷಯ ಎಲ್ಲೆಲ್ಲೂ ಹರಡಿದೆ. ಆದರೆ ಈ ಬಗ್ಗೆ ಇವರಿಬ್ಬರು ಬೇಸರ ಮಾಡಿಕೊಂಡಿದ್ದಾರೆ.

ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರಕ್ಕೆ ನಮ್ರತಾ ಗೌಡ (Namratha Gowda) ಬಣ್ಣ ಹಚ್ಚಿದ್ದಾರೆ. ತ್ರಿಶೂಲ್​ ಪಾತ್ರದಲ್ಲಿ ನಿನಾದ್​ ಅಭಿನಯಿಸುತ್ತಿದ್ದಾರೆ. ಸೀರಿಯಲ್​ ಕಥೆಯಲ್ಲಿ ಇವರಿಬ್ಬರಿಗೂ ಮದುವೆ ನಡೆದಿದೆ. ಹಾಗಂತ ಈ ಮದುವೆ ದೃಶ್ಯಗಳನ್ನು ಯಾವುದೋ ಸ್ಟುಡಿಯೋನಲ್ಲಿ ಚಿತ್ರೀಕರಿಸಿಲ್ಲ. ನಿಜವಾದ ಮದುವೆ ಮತ್ತು ಆರತಕ್ಷತೆ ರೀತಿಯಲ್ಲಿ ಮಂಡ್ಯದ ಒಂದು ಛತ್ರದಲ್ಲಿ ಮಾಡಲಾಗಿದೆ. ಅದಕ್ಕೆ ಅಭಿಮಾನಿಗಳನ್ನೂ ಆಹ್ವಾನಿಸಿ, ಊಟ ಹಾಕಿಸಲಾಗಿದೆ. ಆದರೆ ಈ ಸೀರಿಯಲ್​ ಮದುವೆಯನ್ನೇ ನಿಜವಾದ ಮದುವೆ ಎಂದು ಅನೇಕರು ಭಾವಿಸಿದ್ದಾರೆ!

ಹೌದು, ಶಿವಾನಿ ಮತ್ತು ತ್ರಿಶೂಲ್​ ಮದುವೆಗೆ ಆಗಮಿಸಿದ ಜನರು ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ಮಾಡಿಕೊಳ್ಳುತ್ತಿದ್ದಾರೆ. ಅದನ್ನು ನೋಡಿದ ಎಲ್ಲರೂ ನಮೃತಾ (Namratha Gowda) ಮತ್ತು ನಿನಾದ್​ ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದುಕೊಂಡಿದ್ದಾರೆ. ಹಾಗಾಗಿ, ಈ ನಟ-ನಟಿಗೆ ಅನೇಕರು ಸೋಶಿಯಲ್​ ಮೀಡಿಯಾ ಮೂಲಕ ಮದುವೆಯ ಶುಭಾಶಯ ಕೋರುತ್ತಿದ್ದಾರೆ. ಇದರಿಂದ ನಮೃತಾ ಮತ್ತು ನಿನಾದ್​ ಪೇಚಿಗೆ ಸಿಲುಕುವಂತಾಗಿದೆ.

ಹರಡಿರುವ ತಪ್ಪು ಮಾಹಿತಿಯನ್ನು ತೊಡೆದುಹಾಕುವ ಸಲುವಾಗಿ ಈ ಕಲಾವಿದರಿಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ‘ಇದು ಜೀ ಕನ್ನಡ ವಾಹಿನಿಯಿಂದ ನಡೆದ ಒಂದು ಪ್ರಮೋಷನಲ್​ ಇವೆಂಟ್​. ಅದರಲ್ಲಿ ನಮ್ಮ ಇಡೀ ನಾಗಿಣಿ ಸೀರಿಯಲ್​ ತಂಡ ಪಾಲ್ಗೊಂಡಿತ್ತು. ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಮತ್ತು ತ್ರಿಶೂಲ್ ಮದುವೆ ಆಯಿತು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಒಂದು ವದಂತಿ ಹರಡಿದೆ. ನಮ್ಮಿಬ್ಬರದ್ದು ನಿಜವಾಗಿ ಮದುವೆ ಆಗಿದೆ ಎಂಬ ಗಾಸಿಪ್​ ಹಬ್ಬಿದೆ. ದೇವರಾಣೆ ನಾವು ಮದುವೆ ಆಗಿಲ್ಲ’ ಎಂದು ಈ ಜೋಡಿ ಹೇಳಿದೆ.

‘ಇದು ಪಾತ್ರಗಳ ಒಂದು ರಿಸೆಪ್ಷನ್​ ಅಷ್ಟೇ. ತ್ರಿಶೂಲ್​ ಮತ್ತು ಶಿವಾನಿ ರಿಸೆಪ್ಷನ್​ ಹೊರತು, ನಿನಾದ್​-ನಮ್ರತಾ ರಿಸೆಪ್ಷನ್ ಅಲ್ಲ. ದಯವಿಟ್ಟು ವದಂತಿ ಹಬ್ಬಿಸಬೇಡಿ. ಎಲ್ಲರೂ ನಮಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಶುಭಹಾರೈಕೆಗಳನ್ನು ಸ್ವೀಕರಿಸಲು ನಮಗೆ ಸಾಧ್ಯವಾಗುತ್ತಿದೆ’ ಎಂದು ನಿನಾದ್​ ಮತ್ತು ನಮ್ರತಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

Published On - 10:25 am, Wed, 7 April 21

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ