AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ಯೂಪ್​ ಇಲ್ಲದೇ ನಾನು ಗಾಜು ಒಡೆದಿದ್ದೆ’: ‘ಲೆಜೆಂಡ್​’ ಬಗ್ಗೆ ಬಾಲಯ್ಯ ಮಾತು

ಮಾರ್ಚ್​ 30ರಂದು ‘ಲೆಜೆಂಡ್’ ಸಿನಿಮಾ ಮರು ಬಿಡುಗಡೆ ಆಗಲಿದೆ. 2014ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ 10 ವರ್ಷಗಳನ್ನು ಪೂರೈಸಿದೆ. ಈಗಲೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿದೆ ಎಂಬ ಭರವಸೆ ಇಡೀ ತಂಡದಲ್ಲಿದೆ. ಮರು ಬಿಡುಗಡೆ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಬಾಲಕೃಷ್ಣ ಅವರು ಮಾತನಾಡಿದರು. ಆ ದಿನಗಳ ನೆನಪನ್ನು ಅವರು ಮೆಲುಕು ಹಾಕಿದರು.

‘ಡ್ಯೂಪ್​ ಇಲ್ಲದೇ ನಾನು ಗಾಜು ಒಡೆದಿದ್ದೆ’: ‘ಲೆಜೆಂಡ್​’ ಬಗ್ಗೆ ಬಾಲಯ್ಯ ಮಾತು
ನಂದಮೂರಿ ಬಾಲಕೃಷ್ಣ
ಮದನ್​ ಕುಮಾರ್​
|

Updated on:Mar 29, 2024 | 10:14 PM

Share

ಟಾಲಿವುಡ್​ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಹಾಗೂ ನಿರ್ದೇಶಕ ಬೋಯಪತಿ ಶ್ರೀನು ಕಾಂಬಿನೇಷನ್​ನ ಬ್ಲಾಕ್‌ಬಸ್ಟರ್ ಸಿನಿಮಾ ‘ಲೆಜೆಂಡ್’ ಬಿಡುಗಡೆಯಾಗಿ ಈಗ 10 ವರ್ಷಗಳನ್ನು ಪೂರೈಸಿದೆ. ಮಾರ್ಚ್​ 30ರಂದು ಈ ಸಿನಿಮಾ ರೀ-ರಿಲೀಸ್​ ಆಗಲಿದೆ ಎಂಬುದು ವಿಶೇಷ. ಈ ಪ್ರಯುಕ್ತ ‘ಲೆಜೆಂಡ್​’ (Legend Movie) ಚಿತ್ರತಂಡದವರು ಹೈದರಾಬಾದ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಲ್ಲದೇ, ಸಿನಿಮಾದ 10 ವರ್ಷಗಳ ಸಂಭ್ರಮವನ್ನು ಆಚರಿಸಲಾಯಿತು. ಸ್ವಿಟ್ಜರ್ಲೆಂಡ್‌ನಲ್ಲಿ ಬೇರೊಂದು ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿರುವ ನಟಿ ಸೋನಾಲ್ ಚೌಹಾನ್ ಅವರು ‘ಲೆಜೆಂಡ್’ ಈವೆಂಟ್‌ನಲ್ಲಿ ಭಾಗವಹಿಸಲು ಅಲ್ಲಿಂದ ಬಂದಿದ್ದಾರೆ ಎಂಬುದನ್ನು ನಿರ್ದೇಶಕ ಬೋಯಪತಿ ಶ್ರೀನು ತಿಳಿಸಿದರು.

‘ನಮ್ಮ ಲೆಜೆಂಡ್ ಸಿನಿಮಾ 3 ವರ್ಷಗಳ ಕಾಲ ಓಡಿತು. ನಮ್ಮ ಕಾಂಬಿನೇಷನ್‌ನ ಸಿಂಹ, ಲೆಜೆಂಡ್ ಮತ್ತು ಅಖಂಡ ಮೂರು ಚಿತ್ರಗಳು ಹಲವು ದಾಖಲೆಗಳನ್ನು ಮುರಿದಿವೆ. ಒಂದು ಸಿನಿಮಾ ಹಿಟ್ ಆದಲ್ಲಿ ಮುಂದಿನ ಸಿನಿಮಾದ ಜವಾಬ್ದಾರಿ ಹೆಚ್ಚುತ್ತದೆ. ನಮ್ಮ ಮುಂದಿನ ಸಿನಿಮಾಗೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತೇವೆ. ಸಿಂಹ ಶೀಘ್ರದಲ್ಲೇ 15 ವರ್ಷಗಳನ್ನು ಪೂರೈಸಲಿದ್ದಾರೆ’ ಎಂದು ಬೋಯಪತಿ ಅವರು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವಂತೆ ಅವರು ಜಾಗೃತಿ ಮೂಡಿಸಿದರು.

ಇದನ್ನೂ ಓದಿ: ಬಾಲಯ್ಯ ಶೋನಲ್ಲಿ ರಶ್ಮಿಕಾ ಮಂದಣ್ಣ ಲವ್ ವಿಚಾರ ಲೀಕ್; ಇದೆಲ್ಲ ರಣಬೀರ್ ಕೆಲಸ

ನಟ ಬಾಲಯ್ಯ ಅವರು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ‘ಲೆಜೆಂಡ್ ಅನೇಕ ದಾಖಲೆಗಳನ್ನು ಸೃಷ್ಟಿಸಿತು. ಚಿತ್ರವು 2 ಕೇಂದ್ರಗಳಲ್ಲಿ 4 ಶೋಗಳೊಂದಿಗೆ 400 ದಿನಗಳ ಪ್ರದರ್ಶನ ಕಂಡಿತು. 1116 ದಿನಗಳ ಕಾಲ 4 ಶೋಗಳೊಂದಿಗೆ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡ ದಕ್ಷಿಣ ಭಾರತದ ಏಕೈಕ ಸಿನಿಮಾ ಇದು. ನನ್ನ ಸಿನಿಮಾಗಳಲ್ಲಿ ಒಳ್ಳೆಯ ಸಂದೇಶವೂ ಇರುತ್ತದೆ’ ಎಂದು ಬಾಲಕೃಷ್ಣ ಹೇಳಿದರು.

ಇದನ್ನೂ ಓದಿ: ‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ

‘ನಾನು ವಿಶೇಷವಾಗಿ ಜಗಪತಿ ಬಾಬು ಅವರಿಗೆ ಧನ್ಯವಾದ ಹೇಳಬೇಕು. ಅವರು ನಾಯಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಲೆಜೆಂಡ್ ನಂತರ ವಿಭಿನ್ನ ಪಾತ್ರಗಳನ್ನು ಮಾಡಲು ಪ್ರಾರಂಭಿಸಿದರು. ಚಿತ್ರದಲ್ಲಿ ಕುದುರೆಯೊಂದಿಗೆ ಗಾಜು ಒಡೆಯುವ ದೃಶ್ಯವನ್ನು ಡ್ಯೂಪ್ ಇಲ್ಲದೇ ನಾನು ಮಾಡಿದ್ದೆ. ಬೋಯಪತಿ ಶ್ರೀನು ಅವರು ಡ್ಯೂಪ್ ಬಳಸಲು ಬಯಸಿದ್ದರೂ ನಾನು ಬೇಡ ಎಂದು ಹೇಳಿದ್ದೆ. ಅದನ್ನು ನನ್ನದೇ ರೀತಿಯಲ್ಲಿ ಮಾಡಿದೆ. ನಾನು ಯಾವಾಗಲೂ ನನ್ನ ಪ್ರತಿ ಸಿನಿಮಾವನ್ನು ಮೊದಲನೆಯದು ಎಂದು ಪರಿಗಣಿಸುತ್ತೇನೆ’ ಎಂದು ನಂದಮೂರಿ ಬಾಲಕೃಷ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:11 pm, Fri, 29 March 24

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?