AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ

ಕಾಬೂಲ್​ನಿಂದ ಭಾರತಕ್ಕೆ ವಿಶೇಷ ವಿಮಾನದ ಮೂಲಕ ಅನೇಕರನ್ನು ಕರೆತರಲಾಗಿದೆ. ಈ ಪೈಕಿ ನೂಪರ್​ ಸಹೋದರಿ ಜಿಗ್ಯಾಸ ಅವರ ಗಂಡ ಇಲ್ಲ. ಇದರಿಂದ ಕುಟುಂಬದವರು ಸಾಕಷ್ಟು ಆತಂಕಗೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ
ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ
TV9 Web
| Edited By: |

Updated on: Aug 29, 2021 | 6:06 PM

Share

ಅಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಾಲಿಬಾನಿಗಳು ಸಾಕಷ್ಟು ಜನರನ್ನು ಹತ್ಯೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಹಿಂದಿ ಕಿರುತೆರೆ ನಟಿ ನೂಪುರ್​ ಅಲಂಕಾರ್​ ಕಣ್ಣೀರು ಹಾಕಿದ್ದಾರೆ. ಆಫ್ಘನ್​ನಲ್ಲಿರುವ ಭಾವ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಕಾಬೂಲ್​ನಿಂದ ಭಾರತಕ್ಕೆ ವಿಶೇಷ ವಿಮಾನದ ಮೂಲಕ ಅನೇಕರನ್ನು ಕರೆತರಲಾಗಿದೆ. ಈ ಪೈಕಿ ನೂಪರ್​ ಸಹೋದರಿ ಜಿಗ್ಯಾಸ ಅವರ ಗಂಡ ಇಲ್ಲ. ಇದರಿಂದ ಕುಟುಂಬದವರು ಸಾಕಷ್ಟು ಆತಂಕಗೊಂಡಿದ್ದಾರೆ. ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿಗಳ ವಶವಾದಾಗ ಒಮ್ಮೆ ಅವರು ಕರೆ ಮಾಡಿದ್ದರು. ಇದಾದ ನಂತರದಲ್ಲಿ ಜಿಗ್ಯಾಸ ಗಂಡನ ಸುಳಿವು ಸಿಗುತ್ತಿಲ್ಲ.

‘ಜಿಗ್ಯಾಸಳ​ ಪತಿ ಜತೆ ಮಾತನಾಡುವಾಗ ಏಕಾಏಕಿ ಕಾಲ್​ ಕಟ್​ ಆಗಿತ್ತು. ಮೊಬೈಲ್​ ಚಾರ್ಜ್​ ಹಾಕೋಕೆ ಸಾಧ್ಯವಾಗುತ್ತಿಲ್ಲ ಎಂದು ಆತ ಹೇಳಿದ್ದ. ತನ್ನನ್ನು ಸಂಪರ್ಕಿಸೋಕೆ ಬೇರೊಬ್ಬರ ನಂಬರ್​ ಕೊಡುತ್ತೀನಿ ಎಂದು ಹೇಳಿದ್ದ. ಆದರೆ, ಈ ವರೆಗೆ ಆತನ ಸುಳಿವಿಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ನೂಪುರ್​.

ನೂಪುರ್​ ಅವರು ‘ಸ್ವರಗಿಣಿ’, ‘ಇಸ್​ ಪ್ಯಾರ್​ ಕೊ ಕ್ಯಾ ನಾಮ್​ ದೂ?’, ‘ಏಕ್​ ಬಾರ್ ಫಿರ್’​ ಮೊದಲಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷದ ಲಾಕ್​ಡೌನ್​ ವೇಳೆ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗ ಅವರು ಚಿನ್ನದ ಸರವನ್ನು ಮಾರಾಟ ಮಾಡಿ ಹಣ ಹೊಂದಿಸಿದ್ದರು. ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಅಲ್ಲದೆ, ಸಹಾಯ ಮಾಡುವಂತೆ ಅವರು ಜನರಲ್ಲಿ ಕೋರಿದ್ದರು. ಅಕ್ಷಯ್​ ಕುಮಾರ್​ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನೂಪುರ್​ಗೆ ಸಹಾಯ ಮಾಡಿದ್ದರು.

ಅಪ್ಘಾನಿಸ್ತಾನ​ ಸಂಪೂರ್ಣವಾಗಿ ತಾಲಿಬಾನಿಗಳ ಕಪಿಮುಷ್ಟಿ ಸೇರಿದೆ. ಈ ಕಾರಣಕ್ಕೆ ಅನೇಕರು ದೇಶಬಿಟ್ಟು ತೆರಳುತ್ತಿದ್ದಾರೆ. ಈ ಮಧ್ಯೆ ತಾಲಿಬಾನಿಗಳು ಸಿನಿಮಾ ನಿರ್ಮಾಣದ ಮೇಲೆ ತಾಲಿಬಾನಿಗಳು ನಿರ್ಬಂಧ ಹೇರಿದ್ದಾರೆ.  ಹೀಗಾಗಿ, ಅಲ್ಲಿನ ಸಿನಿಮಾ ನಿರ್ಮಾತೃರರು ದೇಶ ಬಿಟ್ಟು ತೊರೆಯುತ್ತಿದ್ದಾರೆ. ಇತ್ತೀಚೆಗೆ ಫಿಲ್ಮ್​ ಮೇಕರ್​ ಹಾಗೂ ಫೋಟೋ ಜರ್ನಲಿಸ್ಟ್​ ರೋಯಾ ಹೈದರಿ ಅಪ್ಘಾನಿಸ್ತಾನ ತೊರೆದು ಫ್ರಾನ್ಸ್ ಸೇರಿದ್ದರು. ಅವರು ಭಾವನಾತ್ಮಕ ಪತ್ರ ಒಂದನ್ನು ಬರೆದುಕೊಂಡಿದ್ದರು.

ಇದನ್ನೂ ಓದಿ: ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್​ನಲ್ಲಿ ಕೊಂಡೊಯ್ದ ಅಫ್ಘಾನಿಸ್ತಾನದ ಹಣವನ್ನು ಹಿಂತಿರುಗಿಸಿ: ಅಶ್ರಫ್ ಘನಿಗೆ ತಾಲಿಬಾನ್ ಎಚ್ಚರಿಕೆ

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್