AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು

Nyay The Justice trailer: ಇಲ್ಲಿ ಎಲ್ಲ ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಪಾತ್ರಕ್ಕೆ ಮಹೇಂದ್ರ ಸಿಂಗ್​ ಎಂದು ಹೆಸರಿಡಲಾಗಿದೆ. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಪಾತ್ರವನ್ನು ಊರ್ವಶಿ ಎಂದು ಕರೆಯಲಾಗಿದೆ!

ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು
ನ್ಯಾಯ್: ದಿ ಜಸ್ಟೀಸ್ ಸಿನಿಮಾದ ಟ್ರೇಲರ್​ ದೃಶ್ಯಗಳು
ಮದನ್​ ಕುಮಾರ್​
|

Updated on: Jun 11, 2021 | 1:42 PM

Share

ನಟ ಸುಶಾಂತ್ ಸಿಂಗ್​ ರಜಪೂತ್​​ ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅವರು ನಿಧನರಾಗಿ ಒಂದು ವರ್ಷ ಕಳೆಯುತ್ತಿದ್ದರೂ ಕೂಡ ತನಿಖೆ ಪ್ರಗತಿಯಲ್ಲಿದೆ. ಸುಶಾಂತ್​ ಅನುಮಾನಾಸ್ಪದವಾಗಿ ಸಾವಿಗೀಡಾದ ಕೆಲವೇ ದಿನಗಳಲ್ಲಿ ಕೆಲವರು ಅವರ ಕುರಿತು ಸಿನಿಮಾ ಮಾಡಲು ಮುಂದೆ ಬಂದರು. ಅದಕ್ಕೆ ಸುಶಾಂತ್​ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆ ವಿರೋಧಗಳನ್ನೆಲ್ಲ ದಾಟಿಕೊಂಡು ‘ನ್ಯಾಯ್​: ದಿ ಜಸ್ಟೀಸ್​’ ಸಿನಿಮಾ ಸಿದ್ಧವಾಗಿದೆ. ಅಲ್ಲದೇ ಅದರ ಟ್ರೇಲರ್​ ಕೂಡ ರಿಲೀಸ್​ ಆಗಿದೆ.

ಈ ಸಿನಿಮಾದಲ್ಲಿ ನೇರವಾಗಿ ಇದು ಸುಶಾಂತ್​ ಸಾವಿಗೆ ಸಂಬಂಧಿಸಿದ ಕಥೆ ಎಂದು ಹೇಳಿಲ್ಲ. ಎಲ್ಲ ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಪಾತ್ರಕ್ಕೆ ಮಹೇಂದ್ರ ಸಿಂಗ್​ ಎಂದು ಹೆಸರಿಡಲಾಗಿದೆ. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಪಾತ್ರವನ್ನು ಊರ್ವಶಿ ಎಂದು ಕರೆಯಲಾಗಿದೆ!

ರಿಯಾ ಚಕ್ರವರ್ತಿ ಜೊತೆ ಆಪ್ತವಾಗಿದ್ದ ಹಿರಿಯ ನಿರ್ದೇಶಕ/ನಿರ್ಮಾಪಕ ಮಹೇಶ್​ ಭಟ್​ ಸೇರಿದಂತೆ ಬಾಲಿವುಡ್​ನ ಅನೇಕರನ್ನು ಹೋಲುವಂತಹ ಪಾತ್ರಗಳನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಅವನು ಅನೇಕ ಕನಸು ಕಟ್ಟಿಕೊಟ್ಟಿದ್ದ. ಪಾಸಿಟಿವ್​ ಆಲೋಚನೆಗಳನ್ನು ಹೊಂದಿದ್ದ. ಅಂಥ ವ್ಯಕ್ತಿ ಡಿಪ್ರೆಷನ್​ಗೆ ಹೋಗಲು ಹೇಗೆ ಸಾಧ್ಯ? ಇದೆಲ್ಲ ಆ ಊರ್ವಶಿಯ ಕೈವಾಡ. ನನ್ನ ಮಗನ ಬ್ಯಾಂಕ್​ ಖಾತೆಯಿಂದ ತುಂಬಾ ಹಣ ಬೇರೆ ಕಡೆಗೆ ಹೋಗಿದೆ’ ಎಂದು ಕಥಾನಾಯಕನ ತಂದೆ ಆರೋಪಿಸುವ ದೃಶ್ಯಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

‘ಅವನು ಡ್ರಗ್ಸ್​ ಸೇವಿಸುತ್ತಿದ್ದ, ಡ್ರಗ್ಸ್​ ಖರೀದಿಸುತ್ತಿದ್ದ. ಪೆಡ್ಲರ್​ಗಳ ಜೊತೆ ಅವನಿಗೆ ಸಂಬಂಧ ಇತ್ತು. ದುಡ್ಡು ವಿನಿಮಯ ಮಾಡಿಕೊಳ್ಳುತ್ತಿದ್ದ. ಇಲ್ಲಿನ ಡ್ರಗ್ಸ್​ ಅನ್ನು ಬೇರೆ ಕಡೆಗೆ ಸಾಗಿಸುತ್ತಿದ್ದ’ ಎಂಬ ಡೈಲಾಗ್​ಗಳು ಕೂಡ ಟ್ರೇಲರ್​ನಲ್ಲಿವೆ. ಇದರಿಂದ ಸುಶಾಂತ್​ ಅಭಿಮಾನಿಗಳು ಸಿಟ್ಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಒಟ್ಟಾರೆ ಈ ಸಿನಿಮಾದಲ್ಲಿ ಸುಶಾಂತ್ ಅವರನ್ನು ಯಾವ ರೀತಿ ಬಿಂಬಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎನ್ನುವ ಕೌತುಕವನ್ನು ಜನರ ಮನದಲ್ಲಿ ಮೂಡಿಸಲು ಟ್ರೇಲರ್ ಯಶಸ್ವಿ ಆಗಿದೆ.

ಜುಬೇರ್​ ಕೆ. ಖಾನ್​, ಶ್ರೇಯಾ ಶುಕ್ಲಾ ‘ನ್ಯಾಯ್​: ದಿ ಜಸ್ಟೀಸ್​’ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಸುಶಾಂತ್​ ಸಿಂಗ್​ ರಜಪೂತ್​ ತಂದೆ ಕೆಕೆ ಸಿಂಗ್​ ಅವರು ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಸದ್ಯ ಈ ಟ್ರೇಲರ್ ಬಗ್ಗೆ ​ಬಿಟೌನ್​ ವಲಯದಲ್ಲಿ ಚರ್ಚೆ ಜೋರಾಗಿದೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

ಸುಶಾಂತ್​ ಸಾವಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ ನೀಚರು; 3 ಮುಖ್ಯ ವಿಷಯ ತೆರೆದಿಟ್ಟ ಸಹೋದರಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?