ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು

Nyay The Justice trailer: ಇಲ್ಲಿ ಎಲ್ಲ ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಪಾತ್ರಕ್ಕೆ ಮಹೇಂದ್ರ ಸಿಂಗ್​ ಎಂದು ಹೆಸರಿಡಲಾಗಿದೆ. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಪಾತ್ರವನ್ನು ಊರ್ವಶಿ ಎಂದು ಕರೆಯಲಾಗಿದೆ!

ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು
ನ್ಯಾಯ್: ದಿ ಜಸ್ಟೀಸ್ ಸಿನಿಮಾದ ಟ್ರೇಲರ್​ ದೃಶ್ಯಗಳು
Follow us
|

Updated on: Jun 11, 2021 | 1:42 PM

ನಟ ಸುಶಾಂತ್ ಸಿಂಗ್​ ರಜಪೂತ್​​ ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅವರು ನಿಧನರಾಗಿ ಒಂದು ವರ್ಷ ಕಳೆಯುತ್ತಿದ್ದರೂ ಕೂಡ ತನಿಖೆ ಪ್ರಗತಿಯಲ್ಲಿದೆ. ಸುಶಾಂತ್​ ಅನುಮಾನಾಸ್ಪದವಾಗಿ ಸಾವಿಗೀಡಾದ ಕೆಲವೇ ದಿನಗಳಲ್ಲಿ ಕೆಲವರು ಅವರ ಕುರಿತು ಸಿನಿಮಾ ಮಾಡಲು ಮುಂದೆ ಬಂದರು. ಅದಕ್ಕೆ ಸುಶಾಂತ್​ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆ ವಿರೋಧಗಳನ್ನೆಲ್ಲ ದಾಟಿಕೊಂಡು ‘ನ್ಯಾಯ್​: ದಿ ಜಸ್ಟೀಸ್​’ ಸಿನಿಮಾ ಸಿದ್ಧವಾಗಿದೆ. ಅಲ್ಲದೇ ಅದರ ಟ್ರೇಲರ್​ ಕೂಡ ರಿಲೀಸ್​ ಆಗಿದೆ.

ಈ ಸಿನಿಮಾದಲ್ಲಿ ನೇರವಾಗಿ ಇದು ಸುಶಾಂತ್​ ಸಾವಿಗೆ ಸಂಬಂಧಿಸಿದ ಕಥೆ ಎಂದು ಹೇಳಿಲ್ಲ. ಎಲ್ಲ ಪಾತ್ರಗಳ ಹೆಸರನ್ನು ಬದಲಿಸಲಾಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಪಾತ್ರಕ್ಕೆ ಮಹೇಂದ್ರ ಸಿಂಗ್​ ಎಂದು ಹೆಸರಿಡಲಾಗಿದೆ. ಅವರ ಪ್ರೇಯಸಿ ರಿಯಾ ಚಕ್ರವರ್ತಿ ಪಾತ್ರವನ್ನು ಊರ್ವಶಿ ಎಂದು ಕರೆಯಲಾಗಿದೆ!

ರಿಯಾ ಚಕ್ರವರ್ತಿ ಜೊತೆ ಆಪ್ತವಾಗಿದ್ದ ಹಿರಿಯ ನಿರ್ದೇಶಕ/ನಿರ್ಮಾಪಕ ಮಹೇಶ್​ ಭಟ್​ ಸೇರಿದಂತೆ ಬಾಲಿವುಡ್​ನ ಅನೇಕರನ್ನು ಹೋಲುವಂತಹ ಪಾತ್ರಗಳನ್ನು ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಅವನು ಅನೇಕ ಕನಸು ಕಟ್ಟಿಕೊಟ್ಟಿದ್ದ. ಪಾಸಿಟಿವ್​ ಆಲೋಚನೆಗಳನ್ನು ಹೊಂದಿದ್ದ. ಅಂಥ ವ್ಯಕ್ತಿ ಡಿಪ್ರೆಷನ್​ಗೆ ಹೋಗಲು ಹೇಗೆ ಸಾಧ್ಯ? ಇದೆಲ್ಲ ಆ ಊರ್ವಶಿಯ ಕೈವಾಡ. ನನ್ನ ಮಗನ ಬ್ಯಾಂಕ್​ ಖಾತೆಯಿಂದ ತುಂಬಾ ಹಣ ಬೇರೆ ಕಡೆಗೆ ಹೋಗಿದೆ’ ಎಂದು ಕಥಾನಾಯಕನ ತಂದೆ ಆರೋಪಿಸುವ ದೃಶ್ಯಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

‘ಅವನು ಡ್ರಗ್ಸ್​ ಸೇವಿಸುತ್ತಿದ್ದ, ಡ್ರಗ್ಸ್​ ಖರೀದಿಸುತ್ತಿದ್ದ. ಪೆಡ್ಲರ್​ಗಳ ಜೊತೆ ಅವನಿಗೆ ಸಂಬಂಧ ಇತ್ತು. ದುಡ್ಡು ವಿನಿಮಯ ಮಾಡಿಕೊಳ್ಳುತ್ತಿದ್ದ. ಇಲ್ಲಿನ ಡ್ರಗ್ಸ್​ ಅನ್ನು ಬೇರೆ ಕಡೆಗೆ ಸಾಗಿಸುತ್ತಿದ್ದ’ ಎಂಬ ಡೈಲಾಗ್​ಗಳು ಕೂಡ ಟ್ರೇಲರ್​ನಲ್ಲಿವೆ. ಇದರಿಂದ ಸುಶಾಂತ್​ ಅಭಿಮಾನಿಗಳು ಸಿಟ್ಟಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಒಟ್ಟಾರೆ ಈ ಸಿನಿಮಾದಲ್ಲಿ ಸುಶಾಂತ್ ಅವರನ್ನು ಯಾವ ರೀತಿ ಬಿಂಬಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎನ್ನುವ ಕೌತುಕವನ್ನು ಜನರ ಮನದಲ್ಲಿ ಮೂಡಿಸಲು ಟ್ರೇಲರ್ ಯಶಸ್ವಿ ಆಗಿದೆ.

ಜುಬೇರ್​ ಕೆ. ಖಾನ್​, ಶ್ರೇಯಾ ಶುಕ್ಲಾ ‘ನ್ಯಾಯ್​: ದಿ ಜಸ್ಟೀಸ್​’ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಸುಶಾಂತ್​ ಸಿಂಗ್​ ರಜಪೂತ್​ ತಂದೆ ಕೆಕೆ ಸಿಂಗ್​ ಅವರು ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಸದ್ಯ ಈ ಟ್ರೇಲರ್ ಬಗ್ಗೆ ​ಬಿಟೌನ್​ ವಲಯದಲ್ಲಿ ಚರ್ಚೆ ಜೋರಾಗಿದೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

ಸುಶಾಂತ್​ ಸಾವಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ ನೀಚರು; 3 ಮುಖ್ಯ ವಿಷಯ ತೆರೆದಿಟ್ಟ ಸಹೋದರಿ

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್