AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುತ್ತಿದ್ದ ಆಲ್ಟ್ ಬಾಲಾಜಿಯಿಂದ ಏಕ್ತಾ ಕಪೂರ್​ಗೆ ಆಗುತ್ತಿದ್ದ ಲಾಭ ಎಷ್ಟು?

ಕೇಂದ್ರ ಸರ್ಕಾರ ಅಶ್ಲೀಲ ವಿಷಯದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಅನೇಕ ಅಪ್ಲಿಕೇಶನ್‌ಗಳ ಜೊತೆಗೆ ಏಕ್ತಾ ಕಪೂರ್ ಅವರ ಆಲ್ಟ್ ಬಾಲಾಜಿಯನ್ನು ನಿಷೇಧಿಸಿದೆ. ಇದರಿಂದ ಬಾಲಾಜಿ ಟೆಲಿಫಿಲ್ಮ್ಸ್‌ನ ಷೇರು ಬೆಲೆ ಕುಸಿದಿದೆ. ಆಲ್ಟ್ ಬಾಲಾಜಿಯ ಆದಾಯ, ಲಾಭ-ನಷ್ಟ, ಸ್ಥಾಪನೆ ಮತ್ತು ಮಾಲೀಕತ್ವದ ಬಗ್ಗೆ ಮಾಹಿತಿ ಇಲ್ಲಿದೆ.

ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುತ್ತಿದ್ದ ಆಲ್ಟ್ ಬಾಲಾಜಿಯಿಂದ ಏಕ್ತಾ ಕಪೂರ್​ಗೆ ಆಗುತ್ತಿದ್ದ ಲಾಭ ಎಷ್ಟು?
ಏಕ್ತಾ ಕಪೂರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 28, 2025 | 7:56 AM

Share

ಅಶ್ಲೀಲ ಕಂಟೆಂಟ್​ಗಳ ವಿರುದ್ಧ ಕೇಂದ್ರ ಸರ್ಕಾರ ಪ್ರಮುಖ ಕ್ರಮ ಕೈಗೊಂಡಿದೆ. ಅಶ್ಲೀಲ ವಿಷಯವನ್ನು ನಿರ್ಮಿಸುವ ಆರೋಪದ ಮೇಲೆ ಸರ್ಕಾರವು ಏಕ್ತಾ ಕಪೂರ್ ಅವರ OTT ಪ್ಲಾಟ್‌ಫಾರ್ಮ್ ALT ಬಾಲಾಜಿ ಜೊತೆಗೆ ಉಲ್ಲು ಸೇರಿದಂತೆ ಅನೇಕ ಅಪ್ಲಿಕೇಶನ್ ಸರ್ಕಾರ ನಿಷೇಧಿಸಿದೆ. ಈ ನಿಷೇಧದಿಂದ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್‌ಗೆ ಹೆಚ್ಚು ಹೊಡೆತ ಬಿದ್ದಿದೆ. ಈ ಕಂಪನಿಗಳ ಷೇರುಗಳು ಕುಸಿದಿವೆ. ಈ ನಿಷೇಧವು ಏಕ್ತಾ ಕಪೂರ್ ಅವರ ಆಲ್ಟ್ ಬಾಲಾಜಿ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಮತ್ತು ಈ ಕಂಪನಿ ಎಷ್ಟು ದೊಡ್ಡದಾಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಬಾಲಾಜಿ ಟೆಲಿಫಿಲ್ಮ್ಸ್ ಆಲ್ಟ್ ಬಾಲಾಜಿಯನ್ನು ವಿಲೀನಗೊಳಿಸುವ ಮೂಲಕ ತನ್ನ ಡಿಜಿಟಲ್ ವ್ಯವಹಾರಕ್ಕೆ ಹೊಸ ದಿಕ್ಕನ್ನು ನೀಡಿದೆ. ಈ ಹಿಂದೆ ಕೇವಲ ಚಂದಾದಾರಿಕೆ ಆಧಾರಿತ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಲ್ಟ್ ಬಾಲಾಜಿ, ಈಗ ಜಾಹೀರಾತು-ಬೆಂಬಲಿತ ಮತ್ತು ಚಂದಾದಾರಿಕೆ ಮೂಲಕ ಆದಾಯ ಪಡೆಯುತ್ತಿದೆ.

ಎಷ್ಟು ಆದಾಯ ಗಳಿಸಿದೆ?

ಬಾಲಾಜಿ ಟೆಲಿಫಿಲ್ಮ್ಸ್ ಕಿರುತೆರೆಯಿಂದ 367 ಕೋಟಿ ರೂ. ಗಳಿಸುತ್ತದೆ. ಸಿನಿಮಾಗಳಿಂದ 212 ಕೋಟಿ ರೂ. ಗಳಿಸುತ್ತದೆ. ಆಲ್ಟ್ ಬಾಲಾಜಿಯ ಡಿಜಿಟಲ್‌ನ ಆದಾಯ 45.7 ಕೋಟಿ ರೂ. enterpriseappstoday.com ಪ್ರಕಾರ, ಅದರ ಬಳಕೆದಾರರು 34.60 ಪ್ರತಿಶತ ಮಹಿಳೆಯರು ಮತ್ತು 65.40 ಪ್ರತಿಶತ ಪುರುಷರು. 2023ರಲ್ಲಿ ಈ ಕಂಪನಿಗೆ 593 ಕೋಟಿ ಆದಾಯ ಬಂದಿತ್ತು. ಆದರೆ, ಈ ಕಂಪನಿಗೆ 38 ಕೋಟಿ ರೂಪಾಯಿ ನಷ್ಟ ಆಗಿದೆ. ಆದಾಯಕ್ಕಿಂತ ಆಪರೇಷನಲ್ ಖರ್ಚು ಹೆಚ್ಚಿದೆ.

ಇದನ್ನೂ ಓದಿ
Image
ಕಡಿಮೆ ಶೋ ಕೊಟ್ಟರೂ ಸು ಫ್ರಮ್ ಸೋ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್
Image
ಹರಿ ಹರ ವೀರ ಮಲ್ಲು ಕಲೆಕ್ಷನ್; ಮೊದಲ ದಿನ ಭರ್ಜರಿ ಎರಡನೇ ದಿನ ಒಂದಂಕಿ ಗಳಿಕೆ
Image
Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ
Image
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ

ಕಂಪನಿಯನ್ನು ಯಾವಾಗ ಸ್ಥಾಪಿಸಲಾಯಿತು?

ಆಲ್ಟ್ ಬಾಲಾಜಿ ಮುಂಬೈ ಮೂಲದ ಆನ್‌ಲೈನ್ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದನ್ನು 2015ರಲ್ಲಿ ಸ್ಥಾಪಿಸಲಾಯಿತು.  ಇದು ವಿವಿಧ ಭಾಷೆಗಳಲ್ಲಿ (ಮಲಯಾಳಂ, ತಮಿಳು, ತೆಲುಗು, ಹಿಂದಿ, ಇತ್ಯಾದಿ) ಥ್ರಿಲ್ಲರ್‌ ಸೀರಿಸ್, ಶೋ ಹಾಗೂ ಮಕ್ಕಳ ಕಾರ್ಯಕ್ರಮ ನೀಡುತ್ತದೆ.

ಇದನ್ನೂ ಓದಿ: ಅಶ್ಲೀಲ ಶೋಗಳ ಪ್ರದರ್ಶನ: ಉಲ್ಲು, ಆಲ್ಟ್ ಬಾಲಾಜಿ ಸೇರಿ 25 ಒಟಿಟಿಗಳ ನಿಷೇಧ

 ಮಾಲೀಕರು ಯಾರು?

ಬಾಲಾಜಿ ಟೆಲಿಫಿಲ್ಮ್ಸ್ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಒಡೆತನದ ಭಾರತೀಯ ಕಂಪನಿಯಾಗಿದೆ. ಕಂಪನಿಯು ವಿವಿಧ ಭಾಷೆಗಳಲ್ಲಿ ರಿಯಾಲಿಟಿ ಶೋಗಳು, ಹಾಸ್ಯಗಳು ಮತ್ತು ಗೇಮ್ ಶೋಗಳನ್ನು ನಿರ್ಮಿಸುತ್ತದೆ. ಕಂಪನಿಯು ಆಲ್ಟ್ ಬಾಲಾಜಿ ಹೆಸರಿನ ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಸಹ ನಿರ್ವಹಿಸುತ್ತದೆ. ಇದು ಅಶ್ಲೀಲ ಕಂಟೆಂಟ್ ನಿರ್ಮಿಸಲು ಹೆಸರುವಾಸಿಯಾಗಿದೆ.

ಷೇರು ಬೆಲೆ ಕುಸಿತ

ಎಎಲ್‌ಟಿ ಬಾಲಾಜಿ ಮೇಲಿನ ನಿಷೇಧದಿಂದಾಗಿ ಶುಕ್ರವಾರ ಬಾಲಾಜಿ ಟೆಲಿಫಿಲ್ಮ್ಸ್ ಷೇರುಗಳು ಕುಸಿದವು. ಷೇರಿನ ಬೆಲೆ ಐದು ಪ್ರತಿಶತದಷ್ಟು ಕುಸಿದು 93.47 ರೂ.ಗೆ ತಲುಪಿತು. ಇದಲ್ಲದೆ, ಕಂಪನಿಯು ಕಳೆದ ಒಂದು ವಾರದಲ್ಲಿ 3.64 ರಷ್ಟು ಋಣಾತ್ಮಕ ಲಾಭವನ್ನು ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:17 am, Sat, 26 July 25

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು