AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳಾಯ್ತು ಊಹೆ: ಬರಲ್ಲ ‘ಬಿಗ್ ಬಾಸ್ ಒಟಿಟಿ’ ಸೀಸನ್​; ಇಲ್ಲಿದೆ ಕಾರಣ

ನಾವು ಮಾತನಾಡುತ್ತಿರುವುದ ಕನ್ನಡದ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಿಗೆ ಹಿಂದಿ ಬಿಗ್ ಬಾಸ್ ಬಗ್ಗೆ. ಹಿಂದಿಯಲ್ಲಿ ಈಗಾಗಲೇ ಎರಡು ಒಟಿಟಿ ಸೀಸನ್​ಗಳು ಬಂದು ಹೋಗಿವೆ. ಕಳೆದ ವರ್ಷ ಒಟಿಟಿ ಸೀಸನ್ ಪ್ರಸಾರ ಕಂಡು ಜನಪ್ರಿಯತೆ ಪಡೆಯಿತು. ಕಳೆದ ವರ್ಷ ಎಲ್ವಿಶ್ ಯಾದವ್ ಗೆದ್ದು ಜನಪ್ರಿಯತೆ ಪಡೆದರು.

ಸುಳ್ಳಾಯ್ತು ಊಹೆ: ಬರಲ್ಲ ‘ಬಿಗ್ ಬಾಸ್ ಒಟಿಟಿ’ ಸೀಸನ್​; ಇಲ್ಲಿದೆ ಕಾರಣ
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Apr 13, 2024 | 3:46 PM

‘ಬಿಗ್ ಬಾಸ್’ (Bigg Boss) ಭಾರತದಲ್ಲಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಮರಾಠಿಯಲ್ಲಿ ಶೋ ಜನಪ್ರಿಯತೆ ಪಡೆದಿದೆ. ಇಷ್ಟು ವರ್ಷಗಳ ಕಾಲ ಈ ಶೋ ಟಿವಿಗೆ ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಒಟಿಟಿಯಲ್ಲೂ ಈ ಶೋ ಪ್ರಸಾರ ಕಾಣುತ್ತಿದೆ. ಕೇವಲ ಒಟಿಟಿಗಾಗಿಯೇ ಎಕ್ಸ್​ಕ್ಲೂಸಿವ್ ಆಗಿ ಶೋ ಮಾಡಿದ ಉದಾಹರಣೆಯೂ ಇದೆ. ಆದರೆ, ಈ ಬಾರಿ ಒಟಿಟಿ ಸೀಸನ್ ಬರುವುದಿಲ್ಲವಂತೆ.

ನಾವು ಮಾತನಾಡುತ್ತಿರುವುದ ಕನ್ನಡದ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಿಗೆ ಹಿಂದಿ ಬಿಗ್ ಬಾಸ್ ಬಗ್ಗೆ. ಹಿಂದಿಯಲ್ಲಿ ಈಗಾಗಲೇ ಎರಡು ಒಟಿಟಿ ಸೀಸನ್​ಗಳು ಬಂದು ಹೋಗಿವೆ. ಕಳೆದ ವರ್ಷ ಒಟಿಟಿ ಸೀಸನ್ ಪ್ರಸಾರ ಕಂಡು ಜನಪ್ರಿಯತೆ ಪಡೆಯಿತು. ಕಳೆದ ವರ್ಷ ಎಲ್ವಿಶ್ ಯಾದವ್ ಗೆದ್ದು ಜನಪ್ರಿಯತೆ ಪಡೆದರು. ಅವರು ಈಗ ತಪ್ಪು ಕಾರಣಕ್ಕೆ ಸುದ್ದಿ ಆದರು. ಈ ವರ್ಷ ಒಟಿಟಿ ಸೀಸನ್ ನಡೆಸದೇ ಇರಲು ನಿರ್ಧರಿಸಲಾಗಿದೆ.

ಹಿಂದಿಯಲ್ಲಿ 2006ರಿಂದ ಬಿಗ್ ಬಾಸ್ ಶೋ ಪ್ರಸಾರ ಆಗುತ್ತಿದೆ. ಸಲ್ಮಾನ್ ಖಾನ್ ಅವರು 2010ರಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ಮೊದಲ ಒಟಿಟಿ ಸೀಸನ್​ನ ಕರಣ್ ಜೋಹರ್ ಅವರು ನಡೆಸಿಕೊಟ್ಟಿದ್ದಾರೆ. ಎರಡನೇ ಒಟಿಟಿ ಸೀಸನ್​ನ ಸಲ್ಮಾನ್ ಖಾನ್ ಅವರೇ ನಡೆಸಿಕೊಟ್ಟರು. ಈ ವರ್ಷ ಮೂರನೇ ಸೀಸನ್ ಬರಬೇಕಿತ್ತು. ಆದರೆ, ಹಾಗೆ ಮಾಡುತ್ತಿಲ್ಲ ಎನ್ನಲಾಗಿದೆ.

ಟಿವಿ ಸೀಸನ್​ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಜನರು ಒಟಿಟಿಗೆ ನೀಡುತ್ತಿಲ್ಲ ಎನ್ನುವ ಮಾತಿದೆ. ಒಟಿಟಿ ಸೀಸನ್​ಗೆ ಜನಪ್ರಿಯ ಸ್ಪರ್ಧಿಗಳು ಬಂದರೆ ಮಾತ್ರ ಪ್ರೇಕ್ಷಕರು ನೋಡುತ್ತಾರೆ. ಆದರೆ, ಎಲ್ಲಾ ಸಂದರ್ಭಗಳಲ್ಲೂ ಹಾಗೆ ಮಾಡೋಕೆ ಆಗುವುದಿಲ್ಲ. ಹೀಗಾಗಿ, ಒಟಿಟಿ ಸೀಸನ್ ಈ ವರ್ಷ ನಡೆಸದಿರಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್​ ಒಟಿಟಿ ಹೊಸ ಸೀಸನ್​; ಖಾಸಗಿ ವಿಡಿಯೋ ವೈರಲ್​ ಆದ ನಟಿಯರಿಗೆ ಮತ್ತೆ ಅವಕಾಶ?

ಕಳೆದ ವರ್ಷಾಂತ್ಯಕ್ಕೆ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿತು. ಆ ಬಳಿಕ ಒಟಿಟಿ ಸೀಸನ್ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಹೊಸ ಮಾಹಿತಿ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ