AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬಂತು ‘ಭ್ರಮಯುಗಂ’ ಸಿನಿಮಾ; ಎಲ್ಲರೂ ಮೆಚ್ಚಿಕೊಂಡ ಈ ಚಿತ್ರದಲ್ಲಿ ಅಂಥದ್ದೇನಿದೆ?

ಸಿನಿಮಾದಲ್ಲಿ ಹಾರರ್ ಅಂಶ ಇದೆ. ಆದರೆ, ದೆವ್ವ ಬಂದು ಪ್ರೇಕ್ಷಕರನ್ನು ಭಯ ಬೀಳಿಸುವುದಿಲ್ಲ. ಹಳೆ ಕಾಲದ ಮನೆ ಕಾಡುತ್ತದೆ. ಹೊಸ ರೀತಿಯ ನಿರೂಪಣೆ ಪ್ರೇಕ್ಷಕನಿಗೆ ಇಷ್ಟ ಆಗಬಹುದು. ಮಹಲಿಗೆ ಬಂದು ಸಿಕ್ಕಿಬಿದ್ದ ತೇವನ್​ನ ಪಾಡು ನೋಡಿದರೆ ವೀಕ್ಷಕನಿಗೂ ಒಮ್ಮೆ ಸಂಕಟ ಆಗೋದು ಪಕ್ಕಾ.

ಒಟಿಟಿಗೆ ಬಂತು ‘ಭ್ರಮಯುಗಂ’ ಸಿನಿಮಾ; ಎಲ್ಲರೂ ಮೆಚ್ಚಿಕೊಂಡ ಈ ಚಿತ್ರದಲ್ಲಿ ಅಂಥದ್ದೇನಿದೆ?
ಬ್ರಹ್ಮಯುಗಂ
ರಾಜೇಶ್ ದುಗ್ಗುಮನೆ
|

Updated on:Mar 16, 2024 | 12:36 PM

Share

ಮಮ್ಮೂಟಿ (Mammootty) ನಟನೆಯ ‘ಭ್ರಮಯುಗಂ’ ಸಿನಿಮಾ ಸೋನಿ ಲಿವ್ ಮೂಲಕ ವೀಕ್ಷಣೆಗೆ ಲಭ್ಯವಿದೆ. ಮಲಯಾಳಂ ಭಾಷೆಯ ಈ ಚಿತ್ರ ಕನ್ನಡ, ಹಿಂದಿ ಮೊದಲಾದ ಭಾಷೆಗೆ ಡಬ್ ಆಗಿ ಪ್ರಸಾರ ಕಂಡಿದೆ. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 8+ ರೇಟಿಂಗ್ ನೀಡಲಾಗಿದೆ. ಹಾಗಾದರೆ ಈ ಸಿನಿಮಾದಲ್ಲಿ ಅಂಥದ್ದೇನಿದೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ. ಕಲರ್​ಫುಲ್ ಸಿನಿಮಾಗಳ ಕಾಲದಲ್ಲೂ ಚಿತ್ರ ಸಂಪೂರ್ಣವಾಗಿ ಬ್ಲ್ಯಾಕ್ ಆ್ಯಂಡ್ ವೈಟ್​ನಲ್ಲಿ ಮೂಡಿ ಬಂದಿದೆ ಅನ್ನೋದು ವಿಶೇಷ.

ಈ ಚಿತ್ರದ ಕಥೆ ನಡೆಯೋದು 17ನೇ ಶತಮಾನದಲ್ಲಿ. ಮಲ್ಬಾರ್ ಭಾಗದಲ್ಲಿ ಈ ಕಥೆ ನಡೆಯುತ್ತದೆ. ತೇವನ್ ಹಾಗೂ ಕೋರನ್ ಒಂದು ಕಾಡಿಗೆ ಬಂದಿರುತ್ತಾರೆ. ರಾತ್ರಿ ವೇಳೆ ಒಂದು ನದಿ ತೀರದಲ್ಲಿ ಉಳಿದುಕೊಳ್ಳುತ್ತಾರೆ. ಕೋರನ್ ಯಕ್ಷಿಣಿಗೆ ಬಲಿಯಾದರೆ ತೇವನ್ ತಪ್ಪಿಸಿಕೊಂಡು ಒಂದು ಪಾಳುಬಿದ್ದ ಮಹಲಿಗೆ ಎಂಟ್ರಿಕೊಡುತ್ತಾನೆ. ಅಲ್ಲಿಂದ ಅಸಲಿ ಕಥೆ ಶುರು. ಅಷ್ಟಕ್ಕೂ ಆ ಮಹಲಿನಲ್ಲಿರುವ ಕೊಡುಮೋನ್ ಪೊಟ್ಟಿ (ಮಮ್ಮೂಟಿ) ಯಾರು, ತೇವನ್​ನ ಗತಿ ನಂತರ ಏನಾಗುತ್ತದೆ ಎಂಬುದು ಸಿನಿಮಾದಲ್ಲಿದೆ.

ಬಹುತೇಕ ಚಿತ್ರದ ಕಥೆ ಸಾಗೋದು ಒಂದು ಹಳೆಯ ಕಾಲದ ಮನೆಯಲ್ಲಿ. ಹೀಗಾಗಿ, ಪ್ರೇಕ್ಷಕನಿಗೆ ಏಕತಾನತೆ ಕಾಡಬಹುದು. ಅಲ್ಲದೆ, ಬ್ಲ್ಯಾಕ್ ಆ್ಯಂಡ್ ವೈಟ್​ನಲ್ಲಿ ಸಿನಿಮಾ ಇದಾಗಿರುವುದರಿಂದ ಕೆಲವರಿಗೆ ಅದು ಕಷ್ಟ ಎನಿಸಬಹುದು. ಮಮ್ಮೂಟಿ ಅವರ ನಟನೆ ಅದ್ಭುತವಾಗಿದೆ. ಈ ಚಿತ್ರದುದ್ದಕ್ಕೂ ಬರುವ ಸಂಭಾಷಣೆಗಳು ಗಮನ ಸೆಳೆಯುವಂತಿದೆ. ‘ಕಲಿಯುಗ ಆದಮೇಲೆ ಬರೋದು ಭ್ರಮಯುಗ. ಇಲ್ಲಿ ದೇವರು ಇರುವುದಿಲ್ಲ. ನೀನು ಎಷ್ಟೇ ಕೂಗಿದರೂ ಆ ದೇವರಿಗೆ ನಿನ್ನ ಕೂಗು ಕೇಳಿಸುವುದಿಲ್ಲ’ ಎಂದು ಹೇಳುವ ಡೈಲಾಗ್ ಸಿನಿಮಾ ಟೈಟಲ್​ನ ಸಮರ್ಥಿಸಿಕೊಳ್ಳುವಂತಿದೆ.

ಇದನ್ನೂ ಓದಿ: ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಎದುರಾಯ್ತು ಸಂಕಷ್ಟ

ಸಿನಿಮಾದಲ್ಲಿ ಹಾರರ್ ಅಂಶ ಇದೆ. ಆದರೆ, ದೆವ್ವ ಬಂದು ಪ್ರೇಕ್ಷಕರನ್ನು ಭಯ ಬೀಳಿಸುವುದಿಲ್ಲ. ಹಳೆ ಕಾಲದ ಮನೆ ಕಾಡುತ್ತದೆ. ಹೊಸ ರೀತಿಯ ನಿರೂಪಣೆ ಪ್ರೇಕ್ಷಕನಿಗೆ ಇಷ್ಟ ಆಗಬಹುದು. ಮಹಲಿಗೆ ಬಂದು ಸಿಕ್ಕಿಬಿದ್ದ ತೇವನ್​ನ ಪಾಡು ನೋಡಿದರೆ ವೀಕ್ಷಕನಿಗೂ ಒಮ್ಮೆ ಸಂಕಟ ಆಗೋದು ಪಕ್ಕಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Sat, 16 March 24

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ