AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honey Singh: ಬಯಲಾಗತ್ತೆ ಹನಿ ಸಿಂಗ್ ಬದುಕಿನ ಕಹಿ ಸತ್ಯ; ಎಲ್ಲವನ್ನೂ ಬಹಿರಂಗಪಡಿಸಲು ಒಪ್ಪಿಗೆ ನೀಡಿದ ವಿವಾದಿತ ಗಾಯಕ

Yo Yo Honey Singh | Netflix: ‘ಈ ಮೊದಲೇ ನಾನು ನನ್ನ ಖಾಸಗಿ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದೆ. ಆದರೆ ಎಲ್ಲವನ್ನೂ ತೆರೆದಿಡಲು ಸಾಧ್ಯವಾಗಿರಲಿಲ್ಲ’ ಎಂದು ಯೋ ಯೋ ಹನಿ ಸಿಂಗ್​ ಹೇಳಿದ್ದಾರೆ.

Honey Singh: ಬಯಲಾಗತ್ತೆ ಹನಿ ಸಿಂಗ್ ಬದುಕಿನ ಕಹಿ ಸತ್ಯ; ಎಲ್ಲವನ್ನೂ ಬಹಿರಂಗಪಡಿಸಲು ಒಪ್ಪಿಗೆ ನೀಡಿದ ವಿವಾದಿತ ಗಾಯಕ
ಯೋ ಯೋ ಹನಿ ಸಿಂಗ್
ಮದನ್​ ಕುಮಾರ್​
|

Updated on: Mar 16, 2023 | 5:47 PM

Share

ಜನಪ್ರಿಯ ರ‍್ಯಾಪ್​ ಸಿಂಗರ್​ ಹನಿ ಸಿಂಗ್​ (Yo Yo Honey Singh) ಅವರ ಬದುಕಿನಲ್ಲಿ ಅನೇಕ ಏಳು-ಬೀಳುಗಳು ಸಂಭವಿಸಿವೆ. ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ವಿವಾದಗಳು ಆಗಿವೆ. ವೈಯಕ್ತಿಕ ಬದುಕಿನಲ್ಲೂ ರಂಪಾಟ ಆಗಿದೆ. ದಾಂಪತ್ಯ ಜೀವನದಲ್ಲಿ ಶುರುವಾದ ಗಲಾಟೆಗಳು ವಿಚ್ಛೇದನದಲ್ಲಿ ಕೊನೆಯಾದವು. ಒಂದಷ್ಟು ವರ್ಷಗಳ ಕಾಲ ಅವರು ತೆರೆಮರೆಗೆ ಸರಿದರು. ಹೀಗೆ ಹನಿ ಸಿಂಗ್​ ಎದುರಿಸಿದ ತಾಪತ್ರಯಗಳು ಒಂದೆರಡಲ್ಲ. ಅದರಲ್ಲಿ ಸ್ವತಃ ಅವರ ತಪ್ಪುಗಳು ಕೂಡ ಸಾಕಷ್ಟು ಇವೆ. ಈ ಎಲ್ಲ ಕಹಿ ಸತ್ಯಗಳು ಈಗ ಪ್ರೇಕ್ಷಕರ ಎದುರು ಬಯಲಾಗಲಿವೆ. ಹೌದು, ಹನಿ ಸಿಂಗ್ ಅವರ ಜೀವನವನ್ನು ಆಧರಿಸಿ ಡಾಕ್ಯುಮೆಂಟರಿ (Honey Singh Documentary) ತಯಾರಾಗಲಿದೆ. ಯಾವ ವಿಚಾರವನ್ನೂ ಮುಚ್ಚಿಡದೇ ಎಲ್ಲ ವಿಷಯಗಳನ್ನು ತೋರಿಸಲು ಹನಿ ಸಿಂಗ್​ ಒಪ್ಪಿಗೆ ನೀಡಿದ್ದಾರೆ. ನೆಟ್​ಫ್ಲಿಕ್ಸ್​ (Netflix) ಮೂಲಕ ಇದು ಪ್ರಸಾರ ಆಗಲಿದೆ.

ದೆಹಲಿಯ ಹುಡುಗ ಹನಿ ಸಿಂಗ್​ ಅವರು 2003ರಲ್ಲಿ ಪಂಜಾಬಿ ರ‍್ಯಾಪ್​ ಸಾಂಗ್​ಗಳ ಮೂಲಕ ಬೆಳಕಿಗೆ ಬಂದರು. 2011ರ ಹೊತ್ತಿಗೆ ಅವರು ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದರು. ದೇಶ-ವಿದೇಶದಲ್ಲಿ ಹನಿ ಸಿಂಗ್​ ಹೆಸರು ಫೇಮಸ್​ ಆಯಿತು. ಬಾಲಿವುಡ್​ನಲ್ಲಿ ಬಹುಬೇಡಿಕೆಯ ರ‍್ಯಾಪ್​ ಸಿಂಗರ್​ ಆಗಿ ಅವರು ಬೆಳೆದು ನಿಂತರು. ಆದರ ಜೊತೆಗೆ ಸಾಕಷ್ಟು ವಿವಾದಗಳನ್ನು ಮಾಡಿಕೊಂಡು ವಿವಾದಿತ ಸಿಂಗರ್​ ಎಂಬ ಹಣೆಪಟ್ಟಿ ಕಟ್ಟಿಕೊಂಡರು.

ಇದನ್ನೂ ಓದಿ
Image
Honey Singh: ‘ದೇಶದ ಹೆಣ್ಮಕ್ಕಳು ಉರ್ಫಿ ಜಾವೇದ್​ ರೀತಿ ಇರಬೇಕು’: ಅಚ್ಚರಿಯ ಹೇಳಿಕೆ ನೀಡಿದ ಹನಿ ಸಿಂಗ್​
Image
Honey Singh: ಕೌಟುಂಬಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾದ ಯೋ ಯೋ ಹನಿ ಸಿಂಗ್
Image
ವಿಚಾರಣೆ ವೇಳೆ ಕೋರ್ಟ್​ನಲ್ಲೇ ಅತ್ತ ಶಾಲಿನಿ ತಲ್ವಾರ್​; ಹನಿ ಸಿಂಗ್​ ಬಗ್ಗೆ ಅಸಮಾಧಾನ ಹೊರ ಹಾಕಿದ ಕೋರ್ಟ್​
Image
ಯೋ ಯೋ ಹನಿ ಸಿಂಗ್​ಗೆ ಶಾರುಖ್ ಖಾನ್ ಕಪಾಳಕ್ಕೆ ಬಾರಿಸಿದ್ದು ಯಾಕೆ ಅಂತ ಇದುವರೆಗೆ ಗೊತ್ತಾಗಿಲ್ಲ!

ಇದನ್ನೂ ಓದಿ: ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​

ಹನಿ ಸಿಂಗ್​ ಜೀವನದ ಕುರಿತ ಡಾಕ್ಯುಮೆಂಟರಿ ಸಿದ್ಧವಾಗುತ್ತಿದೆ ಎಂಬುದನ್ನು ತಿಳಿಸಲು ನೆಟ್​ಫ್ಲಿಕ್ಸ್​ ಒಂದು ಟೀಸರ್​ ರಿಲೀಸ್​ ಮಾಡಿದೆ. ಅದರಲ್ಲಿ ಸ್ವತಃ ಹನಿ ಸಿಂಗ್​ ಅವರು ಕಾಣಿಸಿಕೊಂಡಿದ್ದಾರೆ. ತಮ್ಮದೇ ರ‍್ಯಾಪ್​ ಶೈಲಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಇದರ ಪ್ರಸಾರ ಆರಂಭ ಆಗಲಿದೆ.

ಇದನ್ನೂ ಓದಿ: ವಿಚಾರಣೆ ವೇಳೆ ಕೋರ್ಟ್​ನಲ್ಲೇ ಅತ್ತ ಶಾಲಿನಿ ತಲ್ವಾರ್​; ಹನಿ ಸಿಂಗ್​ ಬಗ್ಗೆ ಅಸಮಾಧಾನ ಹೊರ ಹಾಕಿದ ಕೋರ್ಟ್​

‘ಈ ಮೊದಲೇ ನಾನು ನನ್ನ ಖಾಸಗಿ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದೆ. ಆದರೆ ಎಲ್ಲವನ್ನೂ ತೆರೆದಿಡಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳಿಂದ ನಾನು ಸಾಕಷ್ಟು ಪ್ರೀತಿ ಸ್ವೀಕರಿಸಿದ್ದೇನೆ. ನನ್ನ ಬದುಕಿನ ಪೂರ್ತಿ ಕಥೆಯನ್ನು ತಿಳಿಯುವ ಹಕ್ಕು ಅಭಿಮಾನಿಗಳಿಗೆ ಇದೆ. ಈ ನೆಟ್​ಫ್ಲಿಕ್ಸ್​ ಡಾಕ್ಯುಮೆಂಟರಿಯಲ್ಲಿ ನನ್ನ ಜೀವನದ ವಿವರಗಳನ್ನು ಪ್ರಾಮಾಣಿಕವಾಗಿ ತೆರೆದಿಡಲಾಗುವುದು’ ಎಂದು ಹನಿ ಸಿಂಗ್​ ಹೇಳಿದ್ದಾರೆ.

View this post on Instagram

A post shared by Netflix India (@netflix_in)

ಆಸ್ಕರ್​ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರವನ್ನು ಗುನೀತ್​ ಮೊಂಗಾ ನಿರ್ಮಿಸಿದ್ದಾರೆ. ಅವರೇ ಈಗ ಹನಿ ಸಿಂಗ್​ ಜೀವನಾಧಾರಿತ ಡಾಕ್ಯುಮೆಂಟರಿಗೆ ಬಂಡವಾಳ ಹೂಡುತ್ತಿದ್ದಾರೆ. ಮೊಜೇಜ್​ ಸಿಂಗ್​ ಅವರು ಇದಕ್ಕೆ ನಿರ್ದೇಶನ ಮಾಡಲಿದ್ದಾರೆ. ಆದಷ್ಟು ಬೇಗ ಈ ಡಾಕ್ಯುಮೆಂಟರಿ ರಿಲೀಸ್​ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?