AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ

Allu Aravind about OTT: ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ
Allu Aravind
ಮಂಜುನಾಥ ಸಿ.
|

Updated on:Jun 03, 2026 | 7:08 PM

Share

ಕೋವಿಡ್ (Covid) ಬಳಿಕ ಚಿತ್ರರಂಗದಲ್ಲಿ ಭಾರಿ ದೊಡ್ಡ ಬದಲಾವಣೆಗಳನ್ನು ಈ ಒಟಿಟಿಗಳು (OTT) ತಂದಿವೆ. ಸಿನಿಮಾ ನಿರ್ಮಾಪಕರಿಗೆ ಭಾರಿ ದೊಡ್ಡ ನಿರಾಳತೆಯನ್ನು ಒಟಿಟಿಗಳು ನೀಡಿದ್ದು, ಕೇವಲ ಬಾಕ್ಸ್ ಆಫೀಸ್, ಆಡಿಯೋ ರೈಟ್ಸ್ ಮತ್ತು ಟಿವಿ ರೈಟ್ಸ್ ಮೇಲೆ ನಿರ್ಭರವಾಗಿದ್ದ ನಿರ್ಮಾಪಕರಿಗೆ ಮತ್ತೊಂದು ದೊಡ್ಡ ಆದಾಯದ ದಾರಿಯನ್ನು ಈ ಒಟಿಟಿಗಳು ತೆರೆದು ಕೊಟ್ಟಿವೆ. ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ತೆಲುಗು ಚಿತ್ರರಂಗದ ವೃತ್ತಿಪರ ಸಿನಿಮಾ ನಿರ್ಮಾಪಕ ಎಂದು ಹೆಸರಾಗಿರುವವರು. ತೆಲುಗು ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಲ್ಲು ಅರವಿಂದ್ ನೀಡಿದ್ದಾರೆ. ಲೆಕ್ಕಾಚಾರದಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಅಲ್ಲು ಅರವಿಂದ್ ಇದೀಗ ಒಟಿಟಿಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುವುದು ಗಮನ ಸೆಳೆದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲ್ಲು ಅರವಿಂದ್, ‘ಒಟಿಟಿಗಳಿಂದ ಸಿನಿಮಾ ನಿರ್ಮಾಣ ವೆಚ್ಚದ ಅರ್ಧ ಹಣ ಬಂದುಬಿಡುತ್ತದೆ ಎಂಬ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಒಟಿಟಿಗಳ ಕಾಲ ಮುಗಿದಿದೆ. ಒಟಿಟಿಗಳು ಈಗ ಬಹಳ ಚ್ಯೂಸಿ ಆಗಿಬಿಟ್ಟಿವೆ. ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಅವರು ತಯಾರಿಲ್ಲ. ಅವರು ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಒಟಿಟಿಗಳ ಮೇಲೆ ಆಸೆಯನ್ನು ಬಿಟ್ಟುಬಿಡುವುದು ಒಳ್ಳೆಯದು’ ಎಂದಿದ್ದಾರೆ ಅಲ್ಲು ಅರವಿಂದ್.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

‘ಯಾರೋ ಕೆಲವು ನಿರ್ದೇಶಕರು ಮತ್ತು ಕೆಲವು ನಟರ ಸಿನಿಮಾಗಳನ್ನಷ್ಟೆ ಒಟಿಟಿಗಳು ಹಿಂದೆ-ಮುಂದೆ ನೋಡದೆ ಖರೀದಿ ಮಾಡುತ್ತಿದೆ. ಆದರೆ ಮುಂಚಿನಂತೆ ಎಲ್ಲ ಸಿನಿಮಾಗಳಿಗೂ ಉತ್ತಮ ಮೌಲ್ಯವನ್ನು ಅವು ನೀಡುತ್ತಿಲ್ಲ. ಈಗ ಒಟಿಟಿಗಳು ಸಾಕಷ್ಟು ಬದಲಾಗಿವೆ. ನಾನು ಸಹ ಈಗ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹಾಗೂ ಇತರೆ ಎಕ್ಸಿಕ್ಯೂಟಿವ್​​ಗಳಿಗೆ ಈ ಬಗ್ಗೆ ಎಚ್ಚರಿಸಿಬಿಟ್ಟಿದ್ದೇನೆ. ಚಿತ್ರಮಂದಿರದಲ್ಲಿ ಹಿಟ್ ಆಗುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರವೇ ಬಂಡವಾಳ ಹೂಡುವಂತೆ ಹೇಳಿದ್ದೇನೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಚಿತ್ರಮಂದಿರಗಳಲ್ಲಿ ವರ್ಕೌಟ್ ಆಗದ ಸಿನಿಮಾಗಳು ಇನ್ಯಾವುದೇ ಫ್ಲ್ಯಾಟ್​​ಫಾರ್ಮ್​​ನಲ್ಲಿ ಸಹ ವರ್ಕೌಟ್ ಆಗುವುದಿಲ್ಲ. ಅದು ಖಾತ್ರಿ. ಚಿತ್ರಮಂದಿರದಲ್ಲಿ ಹಿಟ್ ಆದರೆ ಬೇರೆಲ್ಲ ಫ್ಲ್ಯಾಟ್​​ಫಾರ್ಮ್​​ನಲ್ಲೂ ಸಿನಿಮಾ ವರ್ಕೌಟ್ ಆಗುತ್ತದೆ. ಒಟಿಟಿ, ಟಿವಿ ಏನೇ ಇದ್ದರು, ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ಹಿಟ್ ಆಗುವುದು ಕಡ್ಡಾಯ’ ಎಂದಿದ್ದಾರೆ ಅವರು.

ಅಂದಹಾಗೆ ಅಲ್ಲು ಅರವಿಂದ್ ಅವರು ಖುದ್ದು ಒಂದು ಒಟಿಟಿಯ ಮಾಲೀಕರಾಗಿದ್ದಾರೆ. ಅವರು ತೆಲುಗಿನ ‘ಆಹಾ’ ಒಟಿಟಿಯ ಮಾಲೀಕರಾಗಿದ್ದು, ಆಹಾ ಒಟಿಟಿಯಲ್ಲಿ ಕೆಲವು ಒಳ್ಳೆಯ ತೆಲುಗು ಮತ್ತು ತಮಿಳು ಶೋ ಹಾಗೂ ಸಿನಿಮಾಗಳನ್ನು ಸ್ಟ್ರೀಂ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Wed, 3 June 26

Follow Us
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ