AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

OTT Release this week: ಈ ವಾರ ಒಟಿಟಿಯಲ್ಲಿ ಕೆಲ ಭರ್ಜರಿ ಬ್ಲಾಕ್ ಬಸ್ಟರ್ ಸಿನಿಮಾಗಳು ಬಿಡುಗಡೆ ಆಗಿವೆ. ‘ಧರುಂಧರ್’ ಸೇರಿದಂತೆ ಇನ್ನೂ ಕೆಲವು ಸೂಪರ ಹಿಟ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿದ್ದು, ವಿವಿಧ ಒಟಿಟಿಗಳ ನಡುವೆಯೇ ಸ್ಪರ್ಧೆ-ಪ್ರತಿಸ್ಪರ್ಧೆ ಏರ್ಪಟ್ಟಂತಿದೆ. ಈ ವಾರ ಒಟಿಟಿಗೆ ಬಂದಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

ಮಂಜುನಾಥ ಸಿ.
|

Updated on: May 23, 2026 | 2:59 PM

Share
ರಣ್ವೀರ್ ಸಿಂಗ್ ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿರುವ 2025ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಈ ವಾರ ಮತ್ತೊಮ್ಮೆ ಒಟಿಟಿಗೆ ಬಂದಿದೆ. ಕಳೆದ ವರ್ಷ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಜಿಯೋ ಹಾಟ್​​ಸ್ಟಾರ್​​ಗನಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರದಲ್ಲಿ ಇರದಿದ್ದ ಕೆಲ ಸೀನ್​​ಗಳು ಸಿನಿಮಾನಲ್ಲಿ ಇರಲಿವೆಯಂತೆ.

ರಣ್ವೀರ್ ಸಿಂಗ್ ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿರುವ 2025ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಈ ವಾರ ಮತ್ತೊಮ್ಮೆ ಒಟಿಟಿಗೆ ಬಂದಿದೆ. ಕಳೆದ ವರ್ಷ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಈಗ ಜಿಯೋ ಹಾಟ್​​ಸ್ಟಾರ್​​ಗನಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರದಲ್ಲಿ ಇರದಿದ್ದ ಕೆಲ ಸೀನ್​​ಗಳು ಸಿನಿಮಾನಲ್ಲಿ ಇರಲಿವೆಯಂತೆ.

1 / 7
‘ಔಟ್ ಆಫ್ ಸಿಲೆಬಸ್’ ಒಂದು ಕನ್ನಡ ಸಿನಿಮಾ ಆಗಿದ್ದು, ಪ್ರದೀಪ್ ದೊಡ್ಡಯ್ಯ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾನಲ್ಲಿ ಹೃತಿಕಾ ಶ್ರೀನಿವಾಸ್ ನಾಯಕಿ. ಯೋಗರಾಜ್ ಭಟ್, ಅಚ್ಯುತ್ ಕುಮಾರ್ ಇನ್ನೂ ಕೆಲವರು ನಟಿಸಿದ್ದು, ಸಿನಿಮಾ ಸನ್ ನೆಕ್ಸ್ಟ್​​ನಲ್ಲಿ ಬಿಡುಗಡೆ ಆಗಿದೆ.

‘ಔಟ್ ಆಫ್ ಸಿಲೆಬಸ್’ ಒಂದು ಕನ್ನಡ ಸಿನಿಮಾ ಆಗಿದ್ದು, ಪ್ರದೀಪ್ ದೊಡ್ಡಯ್ಯ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾನಲ್ಲಿ ಹೃತಿಕಾ ಶ್ರೀನಿವಾಸ್ ನಾಯಕಿ. ಯೋಗರಾಜ್ ಭಟ್, ಅಚ್ಯುತ್ ಕುಮಾರ್ ಇನ್ನೂ ಕೆಲವರು ನಟಿಸಿದ್ದು, ಸಿನಿಮಾ ಸನ್ ನೆಕ್ಸ್ಟ್​​ನಲ್ಲಿ ಬಿಡುಗಡೆ ಆಗಿದೆ.

2 / 7
ತೆಲುಗಿನ ಈ ಹಾಸ್ಯ ಸಿನಿಮಾ ಚಿತ್ರಮಂದಿರಗಳಲ್ಲಿ ತುಸು ಸದ್ದು ಮಾಡಿತ್ತು. ತರುಣ್ ಭಾಸ್ಕರ್ ನಾಯಕ, ಫರಿಯಾ ಅದ್ಬುಲ್ಲಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾನಲ್ಲಿ ಶ್ರೀ ವಿಷ್ಣು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಖತ್ ಹಾಸ್ಯಮಯ ಸಿನಿಮಾ ಇದು. ಸಿನಿಮಾ ಪ್ರೈ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

ತೆಲುಗಿನ ಈ ಹಾಸ್ಯ ಸಿನಿಮಾ ಚಿತ್ರಮಂದಿರಗಳಲ್ಲಿ ತುಸು ಸದ್ದು ಮಾಡಿತ್ತು. ತರುಣ್ ಭಾಸ್ಕರ್ ನಾಯಕ, ಫರಿಯಾ ಅದ್ಬುಲ್ಲಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾನಲ್ಲಿ ಶ್ರೀ ವಿಷ್ಣು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಖತ್ ಹಾಸ್ಯಮಯ ಸಿನಿಮಾ ಇದು. ಸಿನಿಮಾ ಪ್ರೈ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

3 / 7
ಕೆಟ್ಟ ಪೊಲೀಸ್ ಮತ್ತು ಒಳ್ಳೆಯ ಪೊಲೀಸ್ ಕುರಿತ ಕತೆಯನ್ನು ಒಳಗೊಂಡಿರುವ ಸಿನಿಮಾ ‘ವಾರೆಂಟ್’. ಸಾಧಾರಣ ವ್ಯಕ್ತಿ ಪೊಲೀಸ್ ಆಗಿ ಅಲ್ಲಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರ, ಅಮಾನವೀಯತೆಯನ್ನು ಪ್ರತಿಭಟಿಸುವ ಆದರೆ ಆ ವಿಷವರ್ತುಲದಲ್ಲಿ ಖುದ್ದು ತಾನೇ ಸಿಕ್ಕಿ ಹಾಕಿಕೊಳ್ಳುವ ಕತೆಯನ್ನು ಒಳಗೊಂಡಿದೆ ‘ವಾರೆಂಟ್’ ಸಿನಿಮಾ. ಈ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕೆಟ್ಟ ಪೊಲೀಸ್ ಮತ್ತು ಒಳ್ಳೆಯ ಪೊಲೀಸ್ ಕುರಿತ ಕತೆಯನ್ನು ಒಳಗೊಂಡಿರುವ ಸಿನಿಮಾ ‘ವಾರೆಂಟ್’. ಸಾಧಾರಣ ವ್ಯಕ್ತಿ ಪೊಲೀಸ್ ಆಗಿ ಅಲ್ಲಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರ, ಅಮಾನವೀಯತೆಯನ್ನು ಪ್ರತಿಭಟಿಸುವ ಆದರೆ ಆ ವಿಷವರ್ತುಲದಲ್ಲಿ ಖುದ್ದು ತಾನೇ ಸಿಕ್ಕಿ ಹಾಕಿಕೊಳ್ಳುವ ಕತೆಯನ್ನು ಒಳಗೊಂಡಿದೆ ‘ವಾರೆಂಟ್’ ಸಿನಿಮಾ. ಈ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 7
ಸೋನಿ ಲಿವ್​​ನಲ್ಲಿ ಬಿಡುಗಡೆ ಆಗಿರುವ ‘ಮಧುವೀಡು’ ಮಲಯಾಳಂ ಸಿನಿಮಾ ಹಾಸ್ಯ ಮಿಶ್ರಿತ ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾ ಆಗಿದೆ. ಹಿಂದೂ ಕುಟುಂಬದವರು ಕ್ರಿಶ್ಚಿಯನ್ ಕುಟುಂಬದೊಂದಿಗೆ ಮದುವೆ ಸಂಬಂಧ ಬೆಳೆಸುವ ತಮಾಷೆಯ ಪ್ರಸಂಗ ಸಿನಿಮಾನಲ್ಲಿದೆ.

ಸೋನಿ ಲಿವ್​​ನಲ್ಲಿ ಬಿಡುಗಡೆ ಆಗಿರುವ ‘ಮಧುವೀಡು’ ಮಲಯಾಳಂ ಸಿನಿಮಾ ಹಾಸ್ಯ ಮಿಶ್ರಿತ ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾ ಆಗಿದೆ. ಹಿಂದೂ ಕುಟುಂಬದವರು ಕ್ರಿಶ್ಚಿಯನ್ ಕುಟುಂಬದೊಂದಿಗೆ ಮದುವೆ ಸಂಬಂಧ ಬೆಳೆಸುವ ತಮಾಷೆಯ ಪ್ರಸಂಗ ಸಿನಿಮಾನಲ್ಲಿದೆ.

5 / 7
ಈ ಹಿಂದೆ ವೆಬ್ ಸರಣಿಯಾಗಿ ಭಾರಿ ಯಶಸ್ಸು ಗಳಿಸಿದ್ದ ‘ಜಾಕ್ ರಿಯಾನ್’ ಅನ್ನು ಆಧರಿಸಿ ಇದೀಗ ಆಕ್ಷನ್ ಸಿನಿಮಾ ಬಂದಿದ್ದು, ಈ ಆಕ್ಷನ್ ಸಿನಿಮಾ ಇದೇ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜಾಕ್ ರಯಾನ್: ದಿ ಘೋಸ್ಟ್ ವಾರ್’ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಈ ವಾರ ವೀಕ್ಷಿಸಬಹುದು.

ಈ ಹಿಂದೆ ವೆಬ್ ಸರಣಿಯಾಗಿ ಭಾರಿ ಯಶಸ್ಸು ಗಳಿಸಿದ್ದ ‘ಜಾಕ್ ರಿಯಾನ್’ ಅನ್ನು ಆಧರಿಸಿ ಇದೀಗ ಆಕ್ಷನ್ ಸಿನಿಮಾ ಬಂದಿದ್ದು, ಈ ಆಕ್ಷನ್ ಸಿನಿಮಾ ಇದೇ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜಾಕ್ ರಯಾನ್: ದಿ ಘೋಸ್ಟ್ ವಾರ್’ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಈ ವಾರ ವೀಕ್ಷಿಸಬಹುದು.

6 / 7
ದಕ್ಷಿಣದ ಖ್ಯಾತ ನಟಿ ಜ್ಯೋತಿಕಾ ಮತ್ತು ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹ ಒಟ್ಟಿಗೆ ನಟಿಸಿರುವ ಈ ಸಿನಿಮಾ ಇದೀಗ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಇದೊಂದು ಕೋರ್ಟ್ ರೂಂ ಡ್ರಾಮಾ ಆಗಿದ್ದು, ಸಮಾಜದ ಅವ್ಯವಸ್ಥೆಗಳ ವಿರುದ್ಧ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ದಕ್ಷಿಣದ ಖ್ಯಾತ ನಟಿ ಜ್ಯೋತಿಕಾ ಮತ್ತು ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹ ಒಟ್ಟಿಗೆ ನಟಿಸಿರುವ ಈ ಸಿನಿಮಾ ಇದೀಗ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ. ಇದೊಂದು ಕೋರ್ಟ್ ರೂಂ ಡ್ರಾಮಾ ಆಗಿದ್ದು, ಸಮಾಜದ ಅವ್ಯವಸ್ಥೆಗಳ ವಿರುದ್ಧ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

7 / 7
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್