AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಾಡೆಲ್ ಪ್ರೀಮಿಯರ್​ಗೆ ಕೋಟ್ಯಂತರ ಬೆಲೆಯ ವಜ್ರದ ಆಭರಣದ ಧರಿಸಿದ ಸಮಂತಾ

Citadel: ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ವೆಬ್ ಸರಣಿಯ ಪ್ರೀಮಿಯರ್ ಶೋ ಲಂಡನ್​ನಲ್ಲಿ ನಡೆದಿದ್ದು, ಪ್ರೀಮಿಯರ್ ಶೋಗೆ ಸಮಂತಾ, ಕೋಟಿಗಟ್ಟಲೆ ಮೌಲ್ಯದ ಆಭರಣ ಧರಿಸಿ ಹೋಗಿದ್ದರು.

ಸಿಟಾಡೆಲ್ ಪ್ರೀಮಿಯರ್​ಗೆ ಕೋಟ್ಯಂತರ ಬೆಲೆಯ ವಜ್ರದ ಆಭರಣದ ಧರಿಸಿದ ಸಮಂತಾ
ಸಮಂತಾ
ಮಂಜುನಾಥ ಸಿ.
|

Updated on:Apr 19, 2023 | 10:07 PM

Share

ನಟಿ ಸಮಂತಾ (Samantha) ನಟನೆಯ ಶಾಕುಂತಲಂ (Shakunthalam) ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಆದರೆ ಸಮಂತಾ ಅದಕ್ಕಾಗಿ ಕೊರಗುತ್ತಾ ಕೂರುವ ಬದಲಿಗೆ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಗಮನವಹಿಸುವುದರಲ್ಲಿ ನಿರತರಾಗಿದ್ದಾರೆ. ಸಮಂತಾ ಇದೀಗ ಸಿಟಾಡೆಲ್ ಹೆಸರಿನ ಇಂಗ್ಲೀಷ್ ವೆಬ್ ಸರಣಿಯ ಹಿಂದಿ ರೀಮೇಕ್​ನಲ್ಲಿ ನಟಿಸುತ್ತಿದ್ದು, ಸಿಟಾಡೆಲ್ (Citadel) ಇಂಗ್ಲೀಷ್​ ವರ್ಷನ್​ನ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು. ಅದ್ಧೂರಿ ಪ್ರೀಮಿಯರ್ ಶೋಗೆ ಅಷ್ಟೆ ಅದ್ಧೂರಿಯಾಗಿ ತಯಾರಾಗಿ ಹೋಗಿದ್ದ ಸಮಂತಾ, ಧರಿಸಿದ್ದ ವಜ್ರದ ಆಭರಣ ಎಲ್ಲರ ಕಣ್ಣು ಕುಕ್ಕಿದವು.

ಪ್ರಿಯಾಂಕಾ ಚೋಪ್ರಾ ನಟಿಸಿರುವ ಇಂಗ್ಲೀಷ್​ನ ಸಿಟಾಡೆಲ್ ವೆಬ್ ಸರಣಿಯ ಪ್ರೀಮಿಯರ್ ಶೋ ಲಂಡನ್​ನಲ್ಲಿ ಆಯೋಜಿತವಾಗಿತ್ತು. ಹಲವು ಹಾಲಿವುಡ್ ಸ್ಟಾರ್ ನಟ-ನಟಿಯರು ನಿರ್ದೇಶಕರು ಭಾಗವಹಿಸಿದ್ದ ಈ ಪ್ರೀಮಿಯರ್ ಶೋನಲ್ಲಿ ಸಮಂತಾ ಸಹ ಭಾಗಿಯಾಗಿದ್ದರು. ಕಪ್ಪು ಬಣ್ಣದ ಮಾಡರ್ನ್ ಉಡುಗೆ ತೊಟ್ಟಿದ್ದ ಸಮಂತಾ ಕೊರಳಿಗೆ ವಜ್ರದ ನೆಕ್​ಲೆಸ್ ಹಾಗೂ ಕೈಗೆ ವಜ್ರದ ಬಳೆಯೊಂದನ್ನು ಹಾಕಿಕೊಂಡಿದ್ದರು. ಸಮಂತಾ ಧರಿಸಿದ್ದ ಕಪ್ಪು ಉಡುಗೆಗೆ ಸರಿಯಾಗಿ ಮ್ಯಾಚ್ ಆಗಿದ್ದ ಈ ಆಭರಣಗಳ ಬೆಲೆ ಕೆಲವು ಕೋಟಿಗಳು!

ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಂತಾ ಧರಿಸಿದ್ದ ನೆಕ್​ಲೆಸ್ ಹೆಸರು ಡೈಮೆಂಡ್ ಸೆರ್ಪೆಂಟಿ ನೆಕ್​ಲೇಸ್ ಇದರ ಬೆಲೆ 2.97 ಕೋಟಿ ರುಪಾಯಿಗಳು. ಇನ್ನು ಸಮಂತಾ ಧರಿಸಿದ್ದ ಹಾವಿನ ಮಾದರಿಯ ವಜ್ರದ ಬಳೆಯ ಬೆಲೆ ಮೂರು ಕೋಟಿಗೂ ಹೆಚ್ಚು. ಈ ಎರಡೇ ಆಭರಣಗಳನ್ನು ಸಮಂತಾ ಧರಿಸಿದ್ದರು, ಇವುಗಳ ಒಟ್ಟು ಬೆಲೆ ಐದು ಕೋಟಿ ರುಪಾಯಿಗಳು. ಇನ್ನು ಸಮಂತಾ ಧರಿಸಿದ್ದ ಉಡುಗೆಯನ್ನು ಡಿಸೈನ್ ಮಾಡಿರುವುದು ವಿಕ್ಟೋರಿಯಾ ಬೆಕಮ್ ಈ ಉಡುಗೆಯ ಬೆಲೆ ಒಂದು ಲಕ್ಷಕ್ಕೂ ಹೆಚ್ಚು.

ಸಿಟಾಡೆಲ್ ಪ್ರೀಮಿಯರ್​ನಲ್ಲಿ ಭಾಗಿಯಾಗಿದ್ದ ನಟಿ ಸಮಂತಾ ಅಲ್ಲಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವಾರು ಹಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿಯಾಗಿದ್ದಾರೆ. ಸಮಂತಾ ಮಾತ್ರವೇ ಅಲ್ಲದೆ ಬಾಲಿವುಡ್ ನಟ ವರುಣ್ ಧವನ್ ಹಾಗೂ ಹಿಂದಿ ಸಿಟಾಡೆಲ್​ನ ತಂಡದ ಮುಖ್ಯ ಸದಸ್ಯರು ಸಹ ಲಂಡನ್​ನಲ್ಲಿ ನಡೆದ ಸಿಟಾಡೆಲ್ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದಾರೆ.

ಸಿಟಾಡೆಲ್ ವೆಬ್ ಸರಣಿಯನ್ನು ಅವೆಂಜರ್ಸ್ ಖ್ಯಾತಿಯ ರೋಸ್ಸೊ ಬ್ರದರ್ಸ್ ನಿರ್ಮಾಣ ಮಾಡಿದ್ದು, ಪ್ರಿಯಾಂಕಾ ಚೋಪ್ರಾ ಹಾಗೂ ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ರಿಚರ್ಡ್ ಮ್ಯಾಡ್ನನ್ ಇನ್ನೂ ಹಲವರು ನಟಿಸಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಕತೆಯುಳ್ಳ ವೆಬ್ ಸರಣಿಯಾಗಿದ್ದು, ಪ್ರಿಯಾಂಕಾ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡ್ನನ್ ಇಬ್ಬರೂ ಸಹ ಗೂಢಚಾರಿಗಳ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿಟಾಡೆಲ್​ನ ಟೀಸರ್, ಟ್ರೈಲರ್​ಗಳು ಈಗಾಗಲೇ ಬಿಡುಗಡೆ ಆಗಿದ್ದು, ವೆಬ್ ಸರಣಿ ಪ್ರಿಯರ ಕುತೂಹಲ ಹೆಚ್ಚಿಸಿವೆ. ಪ್ರಿಯಾಂಕಾ ಚೋಪ್ರಾ ಅಂತೂ ಹಿಂದೆಂದೂ ಕಾಣಿಸದ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವೆಬ್ ಸರಣಿಯಲ್ಲಿನ ಹಲವು ಸ್ಟಂಟ್​ಗಳನ್ನು ಡ್ಯೂಪ್ ಇಲ್ಲದೇ ತಾವೇ ಮಾಡಿರುವುದಾಗಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ. ಸಿಟಾಡೆಲ್ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Wed, 19 April 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು