AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನಡೆದಿದ್ದ 90 ರ ದಶಕದ ಭಯಾನಕ ಹತ್ಯೆ ಪ್ರಕರಣ ಒಟಿಟಿಯಲ್ಲಿ

Amazon Prime Video: 90 ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಭಯಾನಕ ಹತ್ಯೆ ಪ್ರಕರಣದ ಕುರಿತಾದ ಸಾಕ್ಷ್ಯಚಿತ್ರ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಏನಿದು ಪ್ರಕರಣ?

ಬೆಂಗಳೂರಿನಲ್ಲಿ ನಡೆದಿದ್ದ 90 ರ ದಶಕದ ಭಯಾನಕ ಹತ್ಯೆ ಪ್ರಕರಣ ಒಟಿಟಿಯಲ್ಲಿ
ಡ್ಯಾನ್ಸಿಂಗ್ ಆನ್​ ದಿ ಗ್ರೇವ್
Follow us
ಮಂಜುನಾಥ ಸಿ.
|

Updated on:Apr 18, 2023 | 10:02 PM

ಒಟಿಟಿಗಳು (OTT) ಈಗ ಸಿನಿಮಾ, ವೆಬ್ ಸರಣಿಗಳಿಗೆ (Web Series) ಮಾತ್ರವೇ ಸೀಮಿತವಾಗಿಲ್ಲ. ನಿಜ ಘಟನೆ ಆಧರಿಸಿದ ಡಾಕ್ಯು ಸರಣಿಗಳನ್ನು (Docu Series) ಬಿಡುಗಡೆ ಮಾಡುತ್ತಿವೆ. ಈಗಾಗಲೇ ನೆಟ್​ಫ್ಲಿಕ್ಸ್​ ಈ ರೀತಿಯ ಪ್ರಯೋಗವೊಂದನ್ನು ಮಾಡಿ ಗೆಲುವು ಸಾಧಿಸಿದೆ. ಅದನ್ನು ಮುಂದುವರೆಸುತ್ತಲೂ ಇದೆ. ಇದೀಗ ನೆಟ್​ಫ್ಲಿಕ್ಸ್​ನ ಪ್ರತಿಸ್ಪರ್ಧಿಯಾಗಿರುವ ಅಮೆಜಾನ್ ಪ್ರೈಂ ಸಹ ಇಂಥಹುದೇ ಒಂದು ಡಾಕ್ಯು ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಮೊದಲಿಗೆ ಬೆಂಗಳೂರಿನಲ್ಲಿ 90 ರ ದಶಕದಲ್ಲಿ ನಡೆದಿದ್ದ ಭಯಾನಕ ಹತ್ಯಾ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಡ್ಯಾನ್ಸಿಂಗ್ ಆನ್ ದಿ ಗ್ರೇವ್ ಹೆಸರಿನ ಸಾಕ್ಷ್ಯಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ದೇಶವನ್ನೇ ತಲ್ಲಣಗೊಳಿಸಿದ್ದ ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ಕುರಿತಾದ ಮಾಹಿತಿಯನ್ನು ರೋಚಕವಾದ ಮಾದರಿಯಲ್ಲಿ ಈ ಡಾಕ್ಯು ಸರಣಿ ಪ್ರೆಸೆಂಟ್ ಮಾಡಲಿದೆ.

ಏನಿದು ಪ್ರಕರಣ?

ರಿಚ್​ಮಂಡ್ ಟೌನ್​ನ ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಶಕೇರಿ ಖಲೀಲಿ ಎಂಬ ಮಹಿಳೆ ತನ್ನ ಪತಿಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದಳು, ಆಕೆಯ ಶವವನ್ನು ಆಕೆಯದ್ದೇ ಮನೆಯಲ್ಲಿ ಹೂತು ಹಾಕಲಾಗಿತ್ತು. ಶಕೆರೆ ಖಲೀಲಿ, ಕಡಿಮೆ ವಯಸ್ಸಿನಲ್ಲಿಯೇ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದರು. ಬಳಿಕ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿ 1986 ರಲ್ಲಿ ಎರಡನೇ ಬಾರಿಗೆ ಸ್ವಾಮಿ ಶ್ರದ್ಧಾನಂದ ಎಂಬುವರನ್ನು ವಿವಾಹವಾದರು. ಆ ನಂತರ ನಿಧಾನಕ್ಕೆ ಶಕೆರೆ ತನ್ನ ಗೆಳೆಯರು, ಮಕ್ಕಳೊಟ್ಟಿಗೆ ಸಂಪರ್ಕ ಕಡಿದುಕೊಂಡರು ಬಳಿಕ 1991 ರಲ್ಲಿ ಶಕೆರೆ ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟರು!

ತಾಯಿಯನ್ನು ಭೇಟಿಯಾಗಲು ಮಕ್ಕಳು ಬಂದಾಗ ಆಕೆ ವಿದೇಶಕ್ಕೆ ಹೋಗಿದ್ದಾಳೆಂದು ಸ್ವಾಮಿ ಶ್ರದ್ಧಾನಂದ ಸುಳ್ಳು ಹೇಳಿರುತ್ತಾನೆ ಬಳಿಕ ಅನುಮಾನ ಬಂದು ದೂರು ನೀಡಿದಾಗ 1996 ರಲ್ಲಿ ಕೊಲೆ ಪ್ರಕರಣ ಬಹಿರಂಗಗೊಳ್ಳುತ್ತದೆ. ಪೊಲೀಸರ ತನಿಖೆಯಿಂದ ಶಕೆರೆಯನ್ನು ಸ್ವಾಮಿ ಶ್ರದ್ಧಾನಂದನೇ ಕೊಂದಿರುವುದು ಗೊತ್ತಾಗುತ್ತದೆ. ಆಕೆಯನ್ನು ಜೀವಂತವಾಗಿ ಮರದ ಪೆಟ್ಟಿಗೆಯೊಂದರಲ್ಲಿ ಬಂಧಿ ಮಾಡಿ ಪೆಟ್ಟಿಗೆಯನ್ನು ಆಕೆಯ ಮನೆಯ ಮಧ್ಯ ಭಾಗದಲ್ಲಿ ಹೂತು ಹಾಕಿರುತ್ತಾನೆ ಶ್ರದ್ಧಾನಂದ. ಆ ಬಳಿದ ಅದೇ ಮನೆಯಲ್ಲಿ ಪಾರ್ಟಿಗಳನ್ನು ಸಹ ಮಾಡಿರುತ್ತಾನೆ. ಇದೇ ಕಾರಣಕ್ಕೆ ಈ ಭೀಕರ ಹತ್ಯೆಯ ಮಾಹಿತಿಗಳನ್ನು ಒಳಗೊಂಡ ಡಾಕ್ಯುಸರಣಿಗೆ ಡಾನ್ಸಿಂಗ್ ಆನ್​ ದಿ ಗ್ರೇವ್ ಎಂದು ಹೆಸರಿಡಲಾಗಿದೆ.

ಇದೀಗ ಡಾಕ್ಯು ಸರಣಿಯ ಟ್ರೈಲರ್ ಬಿಡುಗಡೆ ಆಗಿದ್ದು, ಡಾಕ್ಯು ಸರಣಿಯು ಏಪ್ರಿಲ್ 21 ರಂದು ಅಮೆಜಾನ್​ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ನಾಲ್ಕು ಸಂಚಿಕೆಗಳಲ್ಲಿ ಈ ಡಾಕ್ಯು ಸರಣಿ ಪ್ರಸಾರವಾಗಲಿದ್ದು, ಟ್ರೈಲರ್ ಈಗಾಗಲೇ ಬಹುವಾಗ ಗಮನ ಸೆಳೆದಿದೆ. ಶಕೆರೆಯ ಮಕ್ಕಳು, ಅವರ ಗೆಳೆಯರು, ಪ್ರಕರಣದ ತನಿಖೆ ಮಾಡಿದ ಅಧಿಕಾರಿಗಳು, ಕೊಲೆಗಾರ ಶ್ರದ್ಧಾನಂದ ಇನ್ನೂ ಹಲವರನ್ನು ಮಾತನಾಡಿಸಿ, ಹಲವು ಚಿತ್ರಗಳು, ದಾಖಲೆಗಳನ್ನು ಕ್ರೂಢೀಕರಿಸಿ ಡಾಕ್ಯು ಸರಣಿ ರೆಡಿ ಮಾಡಲಾಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಈಗಾಗಲೇ ಈ ರೀತಿಯ ಪ್ರಯತ್ನ ಯಶಸ್ವಿಯಾಗಿದೆ. ಬೆಂಗಳೂರಿನ ಕೆಲವು ಕೊಲೆ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದರ ರಿಯಲ್ ಟೈಮ್ ಡಾಕ್ಯುಸರಣಿಯನ್ನು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಮಾಡಲಾಗಿದೆ. ಇಂಡಿಯನ್ ಪ್ರಿಡೆಟರ್ಸ್ ಹೆಸರಿನ ಹಂತಕರ ಕುರಿತಾದ ಡಾಕ್ಯುಸರಣಿಯೂ ಇತ್ತೀಚೆಗೆ ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 pm, Tue, 18 April 23

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ