ಜಿಯೋ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಟಿವಿಗೂ ಮೊದಲೇ ವೀಕ್ಷಿಸಬಹುದು; ಹೇಗೆ?

ಈ ಮೊದಲು ವೂಟ್ ಆ್ಯಪ್​ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳನ್ನು 24 ಗಂಟೆ ಮೊದಲೇ ನೋಡುವ ಅವಕಾಶವನ್ನು ಕಲ್ಪಿಸಿತ್ತು. ಇಷ್ಟು ದಿನಗಳ ಕಾಲ ಜಿಯೋ ಸಿನಿಮಾದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇಗ ಜಾರಿಗೊಳಿಸಿರೋ ಹೊಸ ಪ್ಲ್ಯಾನ್​ನಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ.

ಜಿಯೋ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಟಿವಿಗೂ ಮೊದಲೇ ವೀಕ್ಷಿಸಬಹುದು; ಹೇಗೆ?
ಜಿಯೋ ಸಿನಿಮಾ
Follow us
|

Updated on: May 08, 2024 | 2:25 PM

ಕಲರ್ಸ್​ ಕನ್ನಡ, ಕಲರ್ಸ್ ಟಿವಿ ಸೇರಿ ವಯಕಾಂ ನೆಟ್ವರ್ಕ್ ಅಡಿಯಲ್ಲಿ ಬರುವ ಎಲ್ಲಾ ಚಾನೆಲ್​ನ ಧಾರಾವಾಹಿಗಳನ್ನು ಜಿಯೋ ಸಿನಿಮಾದಲ್ಲಿ (Jio Cinema) ವೀಕ್ಷಿಸಬಹುದು. ಈ ಮೊದಲು ವೂಟ್​ನಲ್ಲಿ ಇವುಗಳು ಲಭ್ಯವಾಗುತ್ತಿದ್ದವು. ಈಗ ಅದನ್ನು ಜಿಯೋ ಸಿನಿಮಾ ಆ್ಯಪ್​ಗೆ ಸ್ಥಳಾಂತರಿಸಲಾಗಿದೆ. ಈಗ ನೀವು ಈ ಚಾನೆಲ್​​ಗಳಲ್ಲಿ ಬರೋ ಧಾರಾವಾಹಿಗಳನ್ನು ಟಿವಿಗೂ ಮೊದಲೇ ಈ ಆ್ಯಪ್​ನಲ್ಲಿ ನೋಡಬಹುದು. ಇದಕ್ಕೆ ನೀವು ಮಾಸಿಕ 29 ರೂಪಾಯಿ ಅಥವಾ 89 ರೂಪಾಯಿ ಪ್ಲ್ಯಾನ್ ತೆಗೆದುಕೊಳ್ಳಬೇಕು.

ಈ ಮೊದಲು ವೂಟ್ ಆ್ಯಪ್​ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳನ್ನು 24 ಗಂಟೆ ಮೊದಲೇ ನೋಡುವ ಅವಕಾಶವನ್ನು ಕಲ್ಪಿಸಿತ್ತು. ಇಷ್ಟು ದಿನಗಳ ಕಾಲ ಜಿಯೋ ಸಿನಿಮಾದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇಗ ಜಾರಿಗೊಳಿಸಿರೋ ಹೊಸ ಪ್ಲ್ಯಾನ್​ನಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಭಾಗ್ಯಲಕ್ಷ್ಮಿ‘, ‘ಲಕ್ಷ್ಮೀ ಬಾರಮ್ಮ‘, ‘ರಾಮಾಚಾರಿ’, ‘ಶ್ರೀಗೌರಿ’, ‘ಅಂತರ ಪಟ’ ಸೇರಿ ಎಲ್ಲಾ ಧಾರಾವಾಹಿಗಳನ್ನು 6 ಗಂಟೆ ಮೊದಲೇ ವೀಕ್ಷಿಸಲು ಅವಕಾಶ ಇದೆ.

ಜಿಯೋ ಸಿನಿಮಾದಲ್ಲಿ 20+ ಟಿವಿ ಚಾನೆಲ್​ಗಳು ಸ್ಟ್ರೀಮಿಂಗ್​ ಆಗುತ್ತಿವೆ. ಇವೆಲ್ಲವನ್ನೂ ಜಾಹೀರಾತು ಮುಕ್ತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಎಚ್​​ಡಿ, ಆಫ್​ಲೈನ್ ವೀಕ್ಷಣೆ ಮತ್ತಿತರ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದರ ಲಾಭವನ್ನು ವೀಕ್ಷಕರು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಜಿಯೋ ಸಿನಿಮಾದ ಪ್ಲ್ಯಾನ್​ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್​ಗಳಿವೆ?

ಇತ್ತೀಚೆಗೆ ತಿಂಗಳಿಗೆ 29 ರೂಪಾಯಿ ಹಾಗೂ 89 ರೂಪಾಯಿ ಮಾಸಿಕ ಶುಲ್ಕದ ಪ್ಲ್ಯಾನ್​ಗಳನ್ನು ಜಿಯೋ ಸಿನಿಮಾ ಘೋಷಣೆ ಮಾಡಿತ್ತು. 29 ರೂಪಾಯಿ ಅಡಿಯಲ್ಲಿ ಕ್ರಿಕೆಟ್ ಹಾಗೂ ಲೈವ್ ಟಿವಿ ಹೊರತುಪಡಿಸಿ ಉಳಿದೆಲ್ಲವನ್ನೂ ಜಾಹೀರಾತಿನ ಕಿರಿಕಿರಿ ಇಲ್ಲದೆ ವೀಕ್ಷಿಸಬಹುದು. 29 ರೂಪಾಯಿ ಪ್ಲ್ಯಾನ್​ ಅಡಿಯಲ್ಲಿ ಕೇವಲ ಒಂದು ಡಿವೈಸ್​ಗೆ ಮಾತ್ರ ಕನೆಕ್ಟ್ ಮಾಡಬಹುದು. 89 ರೂಪಾಯಿ ಪ್ಲ್ಯಾನ್​ನಲ್ಲಿ ನೀವು ನಾಲ್ಕು ಡಿವೈಸ್​ನಲ್ಲಿ ಏಕಕಾಲಕ್ಕೆ ಜಿಯೋ ಸಿನಿಮಾ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್