AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಸಿನಿಮಾದ ಪ್ಲ್ಯಾನ್​ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್​ಗಳಿವೆ?

Jio Cinema Plans: 89 ರೂಪಾಯಿ ಪ್ಲ್ಯಾನ್ ಕೂಡ ತಿಂಗಳ ಪ್ಲ್ಯಾನ್ ಆಗಿದೆ. ಇದು ಕೂಡ 29 ರೂಪಾಯಿ ಪ್ಲ್ಯಾನ್​ನ ಬೆನಿಫಿಟ್​ಗಳನ್ನು ನೀಡಲಿದೆ. ಇದರ ಜೊತೆಗೆ ಏಕಕಾಲಕ್ಕೆ ನಾಲ್ಕು ಡಿವೈಸ್​ಗಳಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿಯೂ ಐಪಿಎಲ್​, ಲೈವ್ ಚಾನೆಲ್ ನೋಡುವಾಗ ಜಾಹೀರಾತು ಪ್ರಸಾರ ಆಗಲಿದೆ.

ಜಿಯೋ ಸಿನಿಮಾದ ಪ್ಲ್ಯಾನ್​ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್​ಗಳಿವೆ?
ಜಿಯೋ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: May 01, 2024 | 7:36 AM

Share

ಜಿಯೋ ಸಿನಿಮಾ (Jio Cinema) ಇತ್ತೀಚೆಗೆ ಪ್ರೀಮಿಯಂ ಸಬ್​ಸ್ಕ್ರಿಪ್ಶನ್ ಘೋಷಣೆ ಮಾಡಿದೆ. ಇದರ ಅನುಸಾರ ಪ್ರತಿ ತಿಂಗಳಿಗೆ 29 ರೂಪಾಯಿ ಹಾಗೂ 89 ರೂಪಾಯಿ ಪ್ಲ್ಯಾನ್ ಘೋಷಣೆ ಮಾಡಿದೆ. ಎರಡೂ ಪ್ಲ್ಯಾನ್​ಗಳು ಬೇರೆ ಬೇರೆ ಬೆನಿಫಿಟ್​ಗಳನ್ನು ಹೊಂದಿವೆ. ಜಾಹೀರಾತಿನಿಂದ ಮುಕ್ತಿ ಪಡೆಯಲು ಈ ಪ್ಲ್ಯಾನ್ ಸಹಕಾರಿ ಆಗಲಿದೆ. ಬೇಸರದ ವಿಚಾರ ಎಂದರೆ ಕ್ರೀಡೆ ಹಾಗೂ ಲೈವ್​ ಚಾನೆಲ್​ನಲ್ಲಿ ಜಾಹೀರಾತಿನಿಂದ ಮುಕ್ತಿ ಇಲ್ಲ.

29 ರೂಪಾಯಿ ಪ್ರೀಮಿಯಂ ಪ್ಲ್ಯಾನ್ ಹಲವು ವಿಧಧ ಬೆನಿಫಿಟ್​ಗಳನ್ನು ನೀಡುತ್ತದೆ. 4K ಕಂಟೆಂಟ್​, ಜಾಹೀರಾತು ರಹಿತ ವೀಕ್ಷಣೆ, ಆಫ್​ಲೈನ್ ವೀಕ್ಷಣೆ, ಎಕ್ಸ್​ಕ್ಲೂಸಿವ್ ಸೀರಿಸ್, ಸಿನಿಮಾ, ಹಾಲಿವುಡ್ ಸಿನಿಮಾಗಳು ಹಾಗೂ ಟಿವಿ ಎಂಟರ್​ಟೇನ್​ಮೆಂಟ್​ಗಳನ್ನು ವೀಕ್ಷಿಸಬಹುದು. ಲೈವ್ ಟಿವಿ ಹಾಗೂ ಕ್ರೀಡೆಗಳಲ್ಲಿ ಜಾಹೀರಾತು ಬರಲಿದೆ. 29 ರೂಪಾಯಿ ಪ್ಲ್ಯಾನ್​ನಲ್ಲಿ ಒಮ್ಮೆಗೆ ಒಂದು ಡಿವೈಸ್​ನಲ್ಲಿ ಮಾತ್ರ ನೋಡಬಹುದು.

89 ರೂಪಾಯಿ ಪ್ಲ್ಯಾನ್ ಕೂಡ ತಿಂಗಳ ಪ್ಲ್ಯಾನ್ ಆಗಿದೆ. ಇದು ಕೂಡ 29 ರೂಪಾಯಿ ಪ್ಲ್ಯಾನ್​ನ ಬೆನಿಫಿಟ್​ಗಳನ್ನು ನೀಡಲಿದೆ. ಇದರ ಜೊತೆಗೆ ಏಕಕಾಲಕ್ಕೆ ನಾಲ್ಕು ಡಿವೈಸ್​ಗಳಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿಯೂ ಐಪಿಎಲ್​, ಲೈವ್ ಚಾನೆಲ್ ನೋಡುವಾಗ ಜಾಹೀರಾತು ಪ್ರಸಾರ ಆಗಲಿದೆ.

ಇದನ್ನೂ ಓದಿ: Jio Cinema: ‘ಇನ್ಮುಂದೆ ಜಾಹೀರಾತು ಇರಲ್ಲ’; ಹೊಸ ಘೋಷಣೆ ಮಾಡಿದ ಜಿಯೋ ಸಿನಿಮಾ

ನೀವೊಬ್ಬರೇ ವೀಕ್ಷಿಸೋದು ಎಂದಾದೆ 29 ರೂಪಾಯಿ ಪ್ಲ್ಯಾನ್ ಸಹಕಾರಿ ಆಗಲಿದೆ. 89 ರೂಪಾಯಿ ಪ್ಲ್ಯಾನ್ ಪಡೆದರೆ ನಿಮ್ಮ ಜೊತೆ ನಿಮ್ಮ ಗೆಳೆಯರು, ಕುಟುಂಬದವರು ಕೂಡ ವೀಕ್ಷಿಸಬಹುದು. 29 ರೂಪಾಯಿ ಪ್ಲ್ಯಾನ್​ನ ನಾಲ್ಕು ಬಾರಿ ಪಡೆದರೆ 120 ರೂಪಾಯಿ ಆಗಲಿದೆ. ಇಡೀ ಕುಟುಂಬವೇ ವೀಕ್ಷಣೆ ಮಾಡುತ್ತದೆ ಎಂದರೆ 89 ರೂಪಾಯಿ ಪ್ಲ್ಯಾನ್ ಉತ್ತಮ. ಉಳಿದ ಒಟಿಟಿ ಪ್ಲ್ಯಾಟ್​ಫಾರ್ಮ್​ಗಳಿಗೆ ಹೋಲಿಸಿದರೆ ಜಿಯೋ ಸಿನಿಮಾ ಕಡಿಮೆ ಬೆಲೆಯಲ್ಲಿ ಪ್ಲ್ಯಾನ್​ಗಳನ್ನು ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ