AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಜೊತೆಗಿನ ನಾಲ್ಕನೇ ಸಿನಿಮಾಕ್ಕೆ ಅಡ್ವಾನ್ಸ್ ಕೊಟ್ಟ ಹೊಂಬಾಳೆ, ನಿರ್ದೇಶಕ ಯಾರು?

Prabhas: ನಟ ಪ್ರಭಾಸ್ ಭಾರತದ ಬಲು ಬೇಡಿಕೆಯ ನಟ. ಹಲವು ನಿರ್ಮಾಣ ಸಂಸ್ಥೆಗಳು ಪ್ರಭಾಸ್ ಕಾಲ್​ಶೀಟ್​ಗಾಗಿ ಕಾದು ನಿಂತಿವೆ. ಆದರೆ ಪ್ರಭಾಸ್ ಈಗಾಗಲೇ ಹೊಂಬಾಳೆಗೆ ಮುಂಗಡವಾಗಿ ಮೂರು ಸಿನಿಮಾ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಸಿನಿಮಾ ‘ಸಲಾರ್ 2’. ಇನ್ನೆರಡು ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ...

ಪ್ರಭಾಸ್ ಜೊತೆಗಿನ ನಾಲ್ಕನೇ ಸಿನಿಮಾಕ್ಕೆ ಅಡ್ವಾನ್ಸ್ ಕೊಟ್ಟ ಹೊಂಬಾಳೆ, ನಿರ್ದೇಶಕ ಯಾರು?
Prabhas Hombale
ಮಂಜುನಾಥ ಸಿ.
|

Updated on: Mar 15, 2025 | 2:53 PM

Share

ಪ್ರಭಾಸ್ (Prabhas) ಜೊತೆಗೆ ಮೂರು ಸಿನಿಮಾ ಮಾಡುವುದಾಗಿ ಹೊಂಬಾಳೆ (Hombale) ನಿರ್ಮಾಣ ಸಂಸ್ಥೆ ಇದಾಗಲೆ ಘೋಷಣೆ ಮಾಡಿದೆ. ಈಗಾಗಲೇ ಒಂದು ಸಿನಿಮಾವನ್ನು ಪ್ರಭಾಸ್ ಜೊತೆ ಮಾಡಿದ್ದಾಗಿದೆ. ಪ್ರಭಾಸ್ ಸಹ, ಹೊಂಬಾಳೆ ಮೇಲಿನ ನಂಬಿಕೆಯಿಂದ ಕತೆ, ನಿರ್ದೇಶಕ ಏನನ್ನೂ ಪ್ರಶ್ನೆ ಮಾಡದೆ ಬರೋಬ್ಬರಿ ಮೂರು ಸಿನಿಮಾ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂರರಲ್ಲಿ ಒಂದು ಸಿನಿಮಾ ‘ಸಲಾರ್ 2’. ‘ಸಲಾರ್’ ಸಿನಿಮಾದ ಸೀಕ್ವೆಲ್ ಇನ್ನೊಂದು ವರ್ಷದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ. ಪ್ರಭಾಸ್​ರ ಇನ್ನೆರಡು ಸಿನಿಮಾಗಳ ಕತೆ ಮತ್ತು ನಿರ್ದೇಶಕರನ್ನು ಹೊಂಬಾಳೆ ಈಗಾಗಲೇ ಅಂತಿಮಗೊಳಿಸಿದೆ. ಇತ್ತೀಚೆಗಷ್ಟೆ ನಿರ್ದೇಶಕರೊಬ್ಬರಿಗೆ ಅಡ್ವಾನ್ಸ್ ಕೊಟ್ಟು ಒಪ್ಪಂದ ಮಾಡಿಕೊಂಡಿದೆ.

ಪ್ರಭಾಸ್​ ಪ್ರಸ್ತುತ ರಘು ಹನುಪುಡಿ ನಿರ್ದೇಶನದ ‘ಫೌಜಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರರಂಗದ ಇತ್ತೀಚೆಗಿನ ಕ್ಲಾಸಿಕ್ ಸಿನಿಮಾ ‘ಸೀತಾ ರಾಮಂ’ ನಿರ್ದೇಶಕ ಇದೇ ರಘು ಹನುಪುಡಿ. ಇವರೊಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಪ್ರಭಾಸ್​ಗೆ ರಘು ಹನುಪುಡಿಯ ಸಿನಿಮಾ ಮೇಕಿಂಗ್ ಬಹಳ ಇಷ್ಟವಾಗಿ ರಘು ಅವರೊಟ್ಟಿಗೆ ಇನ್ನೊಂದು ಸಿನಿಮಾದಲ್ಲಿ ಕೆಲಸ ಮಾಡಲು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದೇ ಕಾರಣಕ್ಕೆ ಹೊಂಬಾಳೆ, ರಘು ಹನುಪುಡಿ ಅವರಿಗೆ ಅಡ್ವಾನ್ಸ್ ನೀಡಿ ಅವರನ್ನು ಬುಕ್ ಮಾಡಿಕೊಂಡಿದ್ದು, ಪ್ರಭಾಸ್ ಅವರಿಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸುವಂತೆ ಮನವಿ ಮಾಡಿದೆ. ಪ್ರಭಾಸ್ ಸಹ ರಘು ಅವರೊಟ್ಟಿಗೆ ಕೆಲಸ ಮಾಡಲು ಅತೀವ ಉತ್ಸಾಹ ತೋರಿಸಿರುವುದು ಮಾತ್ರವೇ ಅಲ್ಲದೆ. ಸಿನಿಮಾದ ಕತೆಯೂ ಸಹ ಈಗಾಗಲೇ ರೆಡಿಯಾಗಿದೆಯಂತೆ. ‘ಫೌಜಿ’ ಸಿನಿಮಾ ಮುಗಿದ ಬಳಿಕ ಪ್ರಭಾಸ್ ಜೊತೆಗಿನ ಹೊಸ ಸಿನಿಮಾದ ಚಿತ್ರಕತೆಯನ್ನು ರಘು ಹನುಪುಡಿ ರೆಡಿ ಮಾಡಲಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಮುತ್ತು ಕೊಡುತ್ತಿರುವ ಈ ಯುವತಿ ಯಾರು ಗೊತ್ತೆ?

ಪ್ರಭಾಸ್, ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಸೂಪರ್ ಹೀರೋ ಕತೆಯಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೂ ಸಹ ಹೊಂಬಾಳೆಯೇ ಬಂಡವಾಳ ತೊಡಗಿಸಲಿದೆ. ಪ್ರಶಾಂತ್ ವರ್ಮಾ ಈ ಹಿಂದೆ ‘ಹನುಮ್ಯಾನ್’ ಸಿನಿಮಾ ನಿರ್ದೇಶಿಸಿದ್ದರು. ಅವರು ಪ್ರಭಾಸ್​ಗಾಗಿ ಪೌರಾಣಿಕ ಕತೆ ಆಧರಿಸಿ ಸೂಪರ್ ಹೀರೋ ಕತೆಯೊಂದನ್ನು ರೆಡಿ ಮಾಡಿದ್ದಾರೆ. ಪ್ರಭಾಸ್ ಅವರ ಬೇಡಿಕೆ ಮೇರೆಗೆ ಹೊಂಬಾಳೆಯವರೇ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯ ‘ಜೈ ಹನುಮಾನ್’ ಸಿನಿಮಾವನ್ನು ಇದೇ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು