AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂತು 99 ರೂಪಾಯಿ ಟಿಕೆಟ್ ಬೆಲೆ; ಆದರೆ, ಸಿನಿಮಾಗಳೇ ಇಲ್ಲ

ಪಿವಿಆರ್ ಹಾಗೂ ಐನಾಕ್ಸ್ ‘ಸಿನಿಮಾ ಲವರ್ಸ್ ಡೇ’ ಆಚರಣೆ ಮಾಡುತ್ತಿದೆ. ಇದರ ಅಡಿಯಲ್ಲಿ ಸಿನಿಮಾ ಪ್ರಿಯರು 3 ದಿನ ಸಿನಿಮಾನ ಎಂಜಾಯ್ ಮಾಡಬಹುದಾಗಿದೆ. ಶುಕ್ರವಾರ ಹಾಗೂ ಶನಿವಾರ-ಭಾನುವಾರ ಒಂದೊಂದು ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ.

ಮತ್ತೆ ಬಂತು 99 ರೂಪಾಯಿ ಟಿಕೆಟ್ ಬೆಲೆ; ಆದರೆ, ಸಿನಿಮಾಗಳೇ ಇಲ್ಲ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Aug 09, 2024 | 7:07 AM

Share

ಭಾರತದ ಮಲ್ಟಿಪ್ಲೆಕ್ಸ್ ಚೈನ್​ಗಳು ಆಗಾಗ ಸಿನಿಮಾ ಟಿಕೆಟ್​ಗಳ ಮೇಲೆ ಆಫರ್​ಗಳನ್ನು ನೀಡುತ್ತಾರೆ. ಈಗ ‘ಸಿನಿಮಾ ಲವರ್ಸ್ ವೀಕೆಂಡ್’ ಆಫರ್ ಬಂದಿದೆ. ಆಗಸ್ಟ್ 9ರಿಂದ ಆಗಸ್ಟ್​ 11ರವರೆಗೆ ಈ ಆಫರ್ ಇರಲಿದೆ. 9ನೇ ತಾರೀಕು ಟಿಕೆಟ್ ಬೆಲೆ 99 ರೂಪಾಯಿ ಇದೆ. 10 ಹಾಗೂ 11ರಂದು 199 ರೂಪಾಯಿ ಇರಲಿದೆ. ಆದರೆ, ನೋಡಲು ಯಾವುದೇ ಸಿನಿಮಾಗಳು ಇಲ್ಲ ಎಂದು ಸಿನಿಪ್ರಿಯರು ಬೇಸರ ಮಾಡಿಕೊಳ್ಳುತ್ತಿದ್ದಾರೆ.

ಪಿವಿಆರ್ ಹಾಗೂ ಐನಾಕ್ಸ್ ‘ಸಿನಿಮಾ ಲವರ್ಸ್ ಡೇ’ ಆಚರಣೆ ಮಾಡುತ್ತಿದೆ. ಇದರ ಅಡಿಯಲ್ಲಿ ಸಿನಿಮಾ ಪ್ರಿಯರು ಮೂರು ದಿನ ಸಿನಿಮಾನ ಎಂಜಾಯ್ ಮಾಡಬಹುದಾಗಿದೆ. ಇನ್ನು, ಐಮ್ಯಾಕ್ಸ್, 4ಡಿಎಕ್ಸ್, ಎಂ​ಎಕ್ಸ್​4ಡಿ ಸ್ಕ್ರೀನ್​ಗಳಲ್ಲಿ ಆಗಸ್ಟ್ 9ರಂದು 199 ರೂಪಾಯಿ ಹಾಗೂ 10-11ರಂದು 299 ರೂಪಾಯಿ ಟಿಕೆಟ್ ಬೆಲೆ ಇರಲಿದೆ. ಇನ್ನು ಗೋಲ್ಡ್​, ಲಕ್ಸ್​, ಡೈರೆಕ್ಟರ್ಸ್ ಕಟ್, ಇನ್​ಸಿಗ್ನಿಯಾ ಥಿಯೇಟರ್​ಗಳಲ್ಲಿ 9ರಂದು 299 ರೂಪಾಯಿ ಹಾಗೂ 10-11ರಂದು 499 ರೂಪಾಯಿ ಟಿಕೆಟ್ ಬೆಲೆ ಇರಲಿದೆ.

ಕೆಲವರಿಗೆ ಗೋಲ್ಡ್, ಲಕ್ಸ್, ಡೈರೆಕ್ಟರ್ಸ್ ಕಟ್ ಥಿಯೇಟರ್​ಗಳನ್ನು ಎಕ್ಸ್​ಪೀರಿಯನ್ಸ್ ಮಾಡಬೇಕು ಎಂದಿರುತ್ತದೆ. ಆದರೆ, ದುಬಾರಿ ಟಿಕೆಟ್ ದರದಿಂದ ಅದು ಸಾಧ್ಯವಾಗಿರುವುದಿಲ್ಲ. ಆದರೆ, ಈಗ ಆಫರ್ ಇರುವುದರಿಂದ ಕಡಿಮೆ ಬೆಲೆಯಲ್ಲಿಯೇ ಇಲ್ಲಿ ಸಿನಿಮಾ ನೋಡಬಹುದು.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್​

‘ಉಲಜ್’, ‘ಕಲ್ಕಿ 2898 ಎಡಿ’, ‘ಬ್ಯಾಡ್ ನ್ಯೂಸ್’, ‘ಕಿಲ್’ ಮೊದಲಾದ ಹಿಂದಿ ಸಿನಿಮಾಗಳು ವೀಕ್ಷಣೆಗೆ ಲಭ್ಯವಿದೆ. ಇಂದು (ಆಗಸ್ಟ್ 9) ‘ಭೀಮ’ ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೆ ಟಿಕೆಟ್ ಆಫರ್ ಇರುತ್ತದೆಯೋ ಅಥವಾ ಇಲ್ಲವೋ ಅನ್ನೋದು ಸ್ಪಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:01 am, Fri, 9 August 24

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು