AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀನ್ಯಾ ವಿದೇಶ ವ್ಯವಹಾರ ಸಚಿವರ ಭೇಟಿಯಾದ ರಾಜಮೌಳಿ

Mahesh Babu-SS Rajamouli: ಮಹೇಶ್ ಬಾಬು ನಟಿಸಿ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಭಾರಿ ಬಜೆಟ್ ಸಿನಿಮಾದ ಚಿತ್ರೀಕರಣ ಕೀನ್ಯಾ ದೇಶದಲ್ಲಿ ನಡೆಯುತ್ತಿದ್ದು. ಇದೀಗ ಶೂಟಿಂಗ್ ಮುಗಿಸಿ ಚಿತ್ರತಂಡ ಭಾರತಕ್ಕೆ ವಾಪಸ್ಸಾಗಿದೆ. ಭಾರತಕ್ಕೆ ಮರಳುವ ಮುಂಚೆ ರಾಜಮೌಳಿ ಹಾಗೂ ಅವರ ಪುತ್ರ ಕಾರ್ತಿಕೇಯ ಅವರುಗಳು ಕೀನ್ಯಾ ದೇಶದ ವಿದೇಶ ವ್ಯವಹಾರ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ್ದಾರೆ. ಕೀನ್ಯಾ ವಿದೇಶ ವ್ಯವಹಾರ ಕಾರ್ಯದರ್ಶಿ ಅವರು ಸುದೀರ್ಘ ಪೋಸ್ಟ್ ಒಂದನ್ನು ಈ ಬಗ್ಗೆ ಹಂಚಿಕೊಂಡಿದ್ದಾರೆ.

ಕೀನ್ಯಾ ವಿದೇಶ ವ್ಯವಹಾರ ಸಚಿವರ ಭೇಟಿಯಾದ ರಾಜಮೌಳಿ
Kenya
ಮಂಜುನಾಥ ಸಿ.
|

Updated on:Sep 03, 2025 | 12:26 PM

Share

ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಸಾಹಸಮಯ ಆಕ್ಷನ್ ಥ್ರಿಲ್ಲರ್ ಆಗಿದ್ದು ವಿಶ್ವದ ನಾನಾ ಪ್ರದೇಶದಲ್ಲಿ ಚಿತ್ರೀಕರಣ ಆಗಲಿದೆ. ಈಗಾಗಲೇ ರಾಜಮೌಳಿ ಹಾಗೂ ತಂಡ ಕೀನ್ಯಾ ದೇಶದಲ್ಲಿ ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಮಾಡಿದೆ. ಕೀನ್ಯಾದ ಶೂಟಿಂಗ್ ಶೆಡ್ಯೂಲ್ ಅಂತ್ಯವಾಗಲಿದ್ದು ಈ ಸಂದರ್ಭದಲ್ಲಿ ಕೀನ್ಯಾದ ವಿದೇಶ ವ್ಯವಹಾರ ಖಾತೆಯ ಕಾರ್ಯದರ್ಶಿ ಮುಸಾಲಿಯಾ ಮುದಾವಾಡಿ ಅವರನ್ನು ರಾಜಮೌಳಿ ಹಾಗೂ ಚಿತ್ರತಂಡದ ಇನ್ನೂ ಕೆಲವರು ಭೇಟಿ ಆಗಿದ್ದಾರೆ.

ಕೀನ್ಯಾದ ವಿದೇಶ ವ್ಯವಹಾರ ಖಾತೆ ಕಚೇರಿಗೆ ಭೇಟಿ ನೀಡಿದ್ದ ರಾಜಮೌಳಿ, ಕಾರ್ತಿಕೇಯ ಹಾಗೂ ಇನ್ನೂ ಕೆಲವರು ಕಾರ್ಯದರ್ಶಿ ಹಾಗೂ ಕಚೇರಿಯ ಇನ್ನೂ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಹಲವು ಸಮಯ ಮಾತುಕತೆ ನಡೆಸಿದ್ದಾರೆ. ಕೀನ್ಯಾದಲ್ಲಿ ಚಿತ್ರೀಕರಣ ಮಾಡಿದ ಅನುಭವದ ಬಗ್ಗೆ ರಾಜಮೌಳಿ ಈ ಸಮಯದಲ್ಲಿ ಮಾತನಾಡಿದ್ದಾಗಿ ಮುಸಾಲಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಾಜಮೌಳಿಯವರ ಭೇಟಿ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕೀನ್ಯಾದ ಕಾರ್ಯದರ್ಶಿ, ‘ಚಿತ್ರರಂಗದಲ್ಲಿ ಎರಡು ದಶಕದ ಅನುಭವ ಹೊಂದಿರುವ ರಾಜಮೌಳಿ ತಮ್ಮ ಅತ್ಯುತ್ತಮ ಕತೆ ಹೇಳುವ ವಿಧಾನದಿಂದ ಜನಪ್ರಿಯರು. ಇದೀಗ ಅವರು ತಮ್ಮ 120 ಮಂದಿಯ ಸಿನಿಮಾ ತಂಡದ ಜೊತೆಗೆ ಪೂರ್ವ ಆಫ್ರಿಕಾದ ಹಲವು ಭಾಗಗಳಲ್ಲಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ನಡೆಸಿದ್ದಾರೆ’ ಎಂದಿದ್ದಾರೆ.

ಮುಂದುವರೆದು ‘ಏಷ್ಯಾನಲ್ಲಿಯೇ ಅತಿ ದೊಡ್ಡ ಸಿನಿಮಾ ಇದಾಗಿದ್ದು, ಕೀನ್ಯಾದ ಅತ್ಯುತ್ತಮ ಪ್ರದೇಶಗಳಾದ ಮಸಾಯಿ ಮಾರಾ, ನಯವಾಶಾ, ಸಂಬಾರು, ಅಂಬೋಸೇಲಿ ಇನ್ನೂ ಕೆಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ಈ ಸಿನಿಮಾ 120ಕ್ಕೂ ಹೆಚ್ಚು ದೇಶಗಳ 100 ಕೋಟಿಗೂ ಹೆಚ್ಚು ಜನರನ್ನು ತಲುಪಲಿದೆ’ ಎಂದು ಬರೆದುಕೊಂಡಿದ್ದಾರೆ.

‘ರಾಜಮೌಳಿ ಅಂಥಹಾ ನಿರ್ದೇಶಕರು ತಮ್ಮ ಸಿನಿಮಾ ಅನ್ನು ಕೀನ್ಯಾನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು ಒಂದು ಐತಿಹಾಸಿಕ ನಿರ್ಣಯವಾಗಿದ್ದು, ಕೀನ್ಯಾ ದೇಶದ ಸುಂದರತೆಗೆ, ಸೌಹಾರ್ದತೆಗೆ, ಆತಿಥ್ಯಕ್ಕೆ ಇದು ಸಾಕ್ಷಿಯಾಗಿದೆ. ಹಾಗೂ ವಿಶ್ವ ಮಟ್ಟದಲ್ಲಿ ಕೀನ್ಯಾದ ಪ್ರಾಮುಖ್ಯತೆಯನ್ನು ಇದು ತೋರಿಸುತ್ತಿದೆ. ಕೀನ್ಯಾದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಭಾರತಕ್ಕೆ ಹಿಂದಿರುಗುತ್ತಿದ್ದು, ‘ಎಸ್​​ಎಸ್​​ಎಂಬಿ29’ ಸಿನಿಮಾ ಮೂಲಕ ಕೀನ್ಯಾದ ಕತೆ ವಿಶ್ವಕ್ಕೆ ತಲುಪಲಿದೆ ಎಂಬ ವಿಷಯವಾಗಿ ಕೀನ್ಯಾ ಹೆಮ್ಮೆ ಪಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 3 September 25

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ