AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ

ರಜನೀಕಾಂತ್ ಪುತ್ರಿ ಐಶ್ವರ್ಯಾ ಮನೆಯಲ್ಲಿ ಕಳ್ಳತನ ಪ್ರಕರಣ ಸಂಬಂಧ ಅವರ ಮನೆಗೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದು, ಮನೆಗೆಲಸದಾಕೆಯ ವಿಚಾರಣೆ ವೇಳೆ ಪೊಲೀಸರೇ ಬೆಚ್ಚಿ ಬೀಳುವ ಮಾಹಿತಿ ಬಹಿರಂಗವಾಗಿವೆ.

ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ
ರಜನೀಕಾಂತ್ ಪುತ್ರಿ ಐಶ್ವರ್ಯಾ
Follow us
ಮಂಜುನಾಥ ಸಿ.
|

Updated on: Mar 30, 2023 | 6:59 PM

ರಜನೀಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya Dhanush), ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆದಿರುವುದಾಗಿ ಕೆಲವು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆಲಸದಾಕೆ ಈಶ್ವರಿ ಹಾಗೂ ಕಾರು ಚಾಲಕ ವೆಂಕಟ್ ಎಂಬುವರನ್ನು ಬಂಧಿಸಿದ್ದಾರೆ. ಅದರಲ್ಲಿಯೂ ಮನೆಗೆಲಸದಾಕೆ ಈಶ್ವರಿ ಕದ್ದಿರುವ ಆಭರಣಗಳ ಒಟ್ಟು ಮೊತ್ತ ಪೊಲೀಸರನ್ನು ಹಾಗೂ ಸ್ವತಃ ರಜನೀಕಾಂತ್ ಪುತ್ರಿ ಐಶ್ವರ್ಯಾರನ್ನು ಚಕಿತಗೊಳಿಸಿದೆ.

ಇದೇ ತಿಂಗಳ 10 ರಂದು ಐಶ್ವರ್ಯಾ ರಜನೀಕಾಂತ್, ತಮ್ಮ ಮನೆಯಿಂದ ಚಿನ್ನಾಭರಣ ಕಳುವಾಗಿದ್ದು, ತಮ್ಮ ಮನೆಗೆಲಸದವರಾದ ಈಶ್ವರಿ, ಲಕ್ಷ್ಮಿ ಹಾಗೂ ಈಶ್ವರಿಯ ಪತಿ ಉಮಾಪತಿ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರಂತೆ ಈಶ್ವರಿ ಹಾಗೂ ಇತರೆ ಅನುಮಾನಿತರ ಹಿನ್ನೆಲೆ, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಕಳ್ಳಿ ಈಶ್ವರಿಯೇ ಎಂಬುದು ಖಚಿತವಾಗಿ ಅವರ ಮನೆಯ ಮೇಲೆ ದಾಳಿ ಮಾಡಿ ಈಶ್ವರಿಯನ್ನು ಬಂಧಿಸಿದ್ದಾರೆ, ಈಶ್ವರಿಗೆ ಸಹಾಯ ಮಾಡುತ್ತಿದ್ದ ಕಾರು ಚಾಲಕ ವೆಂಕಟ್ ಅನ್ನು ಸಹ ಬಂಧಿಸಿದ್ದಾರೆ.

ಈಶ್ವರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಸಂಗತಿಗಳು ಹೊರಗೆ ಬಂದಿವೆ. ಸತತ ನಾಲ್ಕು ವರ್ಷಗಳಿಂದಲೂ ಐಶ್ವರ್ಯಾರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರಂತೆ ಈಶ್ವರಿ. ಹಲವು ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಮಾಡಿದ್ದ ಕಾರಣ ಈಶ್ವರಿಗೆ ಹಣ ಎಲ್ಲಿದೆ, ಆಭರಣ ಎಲ್ಲಿದೆ, ಲಾಕರ್​ ಕೀ ಎಲ್ಲಿವೆ, ಮನೆಯಲ್ಲಿ ಕ್ಯಾಮೆರಾಗಳು ಎಲ್ಲೆಲ್ಲಿ ಇವೆ ಎಂಬೆಲ್ಲ ಮಾಹಿತಿ ತಿಳಿದಿತ್ತು. ಹಾಗಾಗಿ ಆಭರಣಗಳಿದ್ದ ಲಾಕರ್ ಅನ್ನು ತೆಗೆದು ಆಗಾಗ್ಗೆ ಚಿನ್ನಾಭರಣ ಕಳ್ಳತನ ಮಾಡಿ, ಮತ್ತೆ ಲಾಕರ್ ಮುಚ್ಚಿ ಕೀ ಅನ್ನು ಅದರ ಜಾಗಕ್ಕೆ ಇಟ್ಟುಬಿಡುತ್ತಿದ್ದರು. ಹಾಗಾಗಿ ಯಾರಿಗೂ ಅನುಮಾನವೇ ಬಂದಿರಲಿಲ್ಲ.

ಹೀಗೆ ಆಗೊಮ್ಮೆ-ಈಗೊಮ್ಮೆ ಕಳ್ಳತನ ಮಾಡುತ್ತ ಆಭರಣಗಳನ್ನು ಮಾರಿ ಬಂದ ಹಣದಿಂದ ಈಶ್ವರಿ ಸುಮಾರು ಒಂದು ಕೋಟಿ ಮೌಲ್ಯದ ಮನೆಯನ್ನು ಚೆನ್ನೈನ ಕೋಳಿಗನಲ್ಲೂರಿನಲ್ಲಿ ಖರೀದಿಸಿದ್ದರು. ಪೊಲೀಸರು ಈಶ್ವರಿಯ ಮನೆಯ ಮೇಲೆ ದಾಳಿ ಮಾಡಿದಾಗಲೂ ಅವರಿಗೆ ಸುಮಾರು 800 ಗ್ರಾಂ ಚಿನ್ನ, 30 ಗ್ರಾಂ ವಜ್ರ, ನಾಲ್ಕು ಕೆಜಿ ಬೆಳ್ಳಿ ಆಭರಣಗಳು ದೊರೆತಿವೆ. ಇವುಗಳ ಒಟ್ಟು ಮೌಲ್ಯ ಸುಮಾರು 4 ಕೋಟಿಗೂ ಹೆಚ್ಚೆಂದು ಪೊಲೀಸರು ಅಂದಾಜಿಸಿದ್ದಾರೆ. ಚಿನ್ನಾಭರಣಗಳ ಹೊರತಾಗಿ ಇನ್ನೂ ಕೆಲವು ವಸ್ತುಗಳನ್ನು, ನಗದು ಹಣವನ್ನು ಸಹ ಈಶ್ವರಿ ಹಾಗೂ ವೆಂಕಟ್ ಒಟ್ಟು ಸೇರಿ ಕದ್ದಿದ್ದಾರೆ ಎಂದಿದ್ದಾರೆ ಪೊಲೀಸರು.

ಈಶ್ವರಿ ಎಷ್ಟು ಚಿನ್ನ ಹಾಗೂ ಇತರೆ ಆಭರಣಗಳನ್ನು ಐಶ್ವರ್ಯಾ ಮನೆಯಿಂದ ಕದ್ದಿದ್ದರು ಎಂಬುದನ್ನು ಪತ್ತೆ ಹಚ್ಚಲು ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಪೊಲೀಸರು ಹೇಳಿದ್ದು, ಐಶ್ವರ್ಯಾ ಅವರು ಯಾವ ಯಾವ ಸಮಯದಲ್ಲಿ ಯಾವ ಯಾವ ಚಿನ್ನಾಭರಣ ಖರೀದಿ ಮಾಡಿದ್ದಾರೆಂಬುದು ಅವರಿಗೂ ನೆನಪಿಲ್ಲದಿರುವುದು ಸಮಸ್ಯೆ ಆಗಿದೆ. ಇದೀಗ ಐಶ್ವರ್ಯಾ ಹಾಗೂ ಧನುಶ್ ಅವರ ನಾಲ್ಕು ವರ್ಷಗಳ ಐಟಿ ದಾಖಲೆ, ಅವರ ಹೆಸರಿನಲ್ಲಿರುವ ಲಾಕರ್​ಗಳು, ಅವರ ಹಾಗೂ ಅವರ ಸಹೋದರಿಯ ಮದುವೆಯಲ್ಲಿ ತೆಗೆದ ಚಿತ್ರಗಳು, ಅದರಲ್ಲಿ ಐಶ್ವರ್ಯಾ ಧರಿಸಿದ್ದ ಆಭರಣಗಳು ಇನ್ನಿತರೆ ಚಿತ್ರಗಳನ್ನು ಗಮನಿಸಿ ಅವುಗಳ ಆಧಾರದಲ್ಲಿ ಎಷ್ಟು ಚಿನ್ನಾಭರಣ ಕಳುವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಶಿವಣ್ಣನಂತೆ ನಟಿಸಲು ಆಗುವುದೇ ಇಲ್ಲ, ಅವರು ಕನ್ನಡದ ರಜನೀಕಾಂತ್: ತಮಿಳು ನಟನಿಂದ ಹೊಗಳಿಕೆಯ ಸುರಿಮಳೆ

ತನಿಖೆ ವೇಳೆ, ತಾನು ಕಳ್ಳತನ ಮಾಡಿದ್ದಕ್ಕೆ ಕಾರಣ ನೀಡಿರುವ ಈಶ್ವರಿ, ಐಶ್ವರ್ಯಾ ಸರಿಯಾಗಿ ನನಗೆ ಸಂಬಳ ಕೊಡುತ್ತಿರಲಿಲ್ಲ ಅದಕ್ಕೆ ಕಳ್ಳತನ ಮಾಡಿದೆ ಎಂದಿದ್ದಾಳೆ. ಹಲವು ವರ್ಷಗಳಿಂದ ಮನೆಯಲ್ಲಿ ದುಡಿಯುತ್ತಿದ್ದರು ನನಗೆ ಕೇವಲ 30,000 ಸಂಬಳವನ್ನಷ್ಟೆ ಕೊಡುತ್ತಿದ್ದರು ಅದಕ್ಕಾಗಿಯೇ ನಾನು ವೆಂಕಟ್ ಸಹಾಯ ಪಡೆದು ಕಳ್ಳತನ ಮಾಡಿದೆ ಆರಂಭದಲ್ಲಿ ಸಣ್ಣ ವಸ್ತುಗಳನ್ನು ಕದ್ದೆ, ಅದು ಅವರ ಗಮನಕ್ಕೆ ಬರಲಿಲ್ಲ, ಹಾಗೆಯೇ ಕದಿಯುತ್ತಾ ಹೋದೆ, ದೊಡ್ಡ ದೊಡ್ಡ ಆಭರಣಗಳನ್ನು ಕದಿಯಲು ಆರಂಭಿಸಿದೆ ಎಂದಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಅಮೆರಿಕದ ಎಚ್ಚರಿಕೆಗಳಿಗೆ ಇರಾನ್ ಸೊಪ್ಪು ಹಾಕುತ್ತಿಲ್ಲ!
ಅಮೆರಿಕದ ಎಚ್ಚರಿಕೆಗಳಿಗೆ ಇರಾನ್ ಸೊಪ್ಪು ಹಾಕುತ್ತಿಲ್ಲ!
ಅವಧಿಗೂ ಮುನ್ನವೇ ತುಂಬುತ್ತಿದೆ ಕೆಆರ್​​ಎಸ್ ಡ್ಯಾಂ: 9 ಅಡಿ ಅಷ್ಟೇ ಬಾಕಿ
ಅವಧಿಗೂ ಮುನ್ನವೇ ತುಂಬುತ್ತಿದೆ ಕೆಆರ್​​ಎಸ್ ಡ್ಯಾಂ: 9 ಅಡಿ ಅಷ್ಟೇ ಬಾಕಿ
ಸ್ಕೂಲ್ ವ್ಯಾನ್ ಡಿಕ್ಕಿ: ಬೈಕ್ ಸವಾರ ಜಸ್ಟ್ ಬಚಾವಾಗಿದ್ಹೇಗೆ ನೋಡಿ
ಸ್ಕೂಲ್ ವ್ಯಾನ್ ಡಿಕ್ಕಿ: ಬೈಕ್ ಸವಾರ ಜಸ್ಟ್ ಬಚಾವಾಗಿದ್ಹೇಗೆ ನೋಡಿ
ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ
ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ
Daily horoscope: ಈ ರಾಶಿಯವರು ಸಾಲಗಾರರ ಕಾಟದಿಂದ ಮುಕ್ತರಾಗುವರು
Daily horoscope: ಈ ರಾಶಿಯವರು ಸಾಲಗಾರರ ಕಾಟದಿಂದ ಮುಕ್ತರಾಗುವರು
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ