ಅಖಿಲ್​ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ

Ram Charan: ನಟ ರಾಮ್ ಚರಣ್ ತಮ್ಮ ವಿ ಮೆಗಾ ಪಿಕ್ಚರ್ಸ್ ವತಿಯಿಂದ ದಿ ಇಂಡಿಯಾ ಹೌಸ್ ಸಿನಿಮಾ ಘೋಷಿಸಿದ್ದಾರೆ. ಸಿನಿಮಾದ ನಾಯಕ ನಿಖಿಲ್, ಆದರೆ ಅಖಿಲ್ ಅಕ್ಕಿನೇನಿ ಅಭಿಮಾನಿಗಳು ರಾಮ್ ಚರಣ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಅಖಿಲ್​ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ
ದಿ ಇಂಡಿಯಾ ಹೌಸ್
Follow us
|

Updated on: Jun 01, 2023 | 10:30 PM

ಆರ್​ಆರ್​ಆರ್ (RRR) ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ನಟ ರಾಮ್ ಚರಣ್ ತೇಜ (Ram Charan), ಇತ್ತೀಚೆಗೆ ವಿ ಮೆಗಾ ಪಿಕ್ಚರ್ಸ್ (V Mega Pictures) ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ತಮ್ಮ ಮೊದಲ ಸಿನಿಮಾ ಆಗಿ ಸಾರ್ವಕರ್ ಜೀವನ ಕತೆಯನ್ನು ತೆರೆಗೆ ತರಲು ಸಜ್ಜಾಗಿದೆ. ಸಾರ್ವಕರ್ ಜೀವನ ಆಧರಿತ ದಿ ಇಂಡಿಯಾ ಹೌಸ್ (The India House) ಹೆಸರಿನ ಸಿನಿಮಾವನ್ನು ರಾಮ್ ಚರಣ್ ಘೋಷಿಸಿದ್ದು ಸಿನಿಮಾದಲ್ಲಿ ಸಾರ್ವಕರ್ ಪಾತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ ನಟಿಸಲಿದ್ದಾರೆ. ಆದರೆ ಸಿನಿಮಾ ಘೋಷಣೆಯಾದ ಬಳಿಕ ಅಕ್ಕಿನೇನಿ ಕುಟುಂಬ ಅಭಿಮಾನಿಗಳು ರಾಮ್ ಚರಣ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ದಿ ಇಂಡಿಯಾ ಹೌಸ್ ಸಿನಿಮಾಕ್ಕೆ ನಾಯಕನಾಗಿ ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಆಯ್ಕೆ ಆಗಿದ್ದರಂತೆ. ಆದರೆ ಆ ಬಳಿಕ ಅವರ ಬದಲಿಗೆ ನಿಖಿಲ್ ಸಿದ್ಧಾರ್ಥ್​ಗೆ ಅವಕಾಶ ನೀಡಲಾಗಿದೆ. ಇದು ಅಕ್ಕಿನೇನಿ ಅಭಿಮಾನಿಗಳಿಗೆ ಬೇಸರ ತಂದಿದೆ. ಅಖಿಲ್ ಅವರೇ ದಿ ಇಂಡಿಯಾ ಹೌಸ್ ಸಿನಿಮಾದ ಹೀರೋ ಎಂಬ ಪುಕಾರು ಕಳೆದ ತಿಂಗಳೇ ಹರಿದಾಡಿತ್ತು. ಅದಾದ ಕೆಲ ದಿನಗಳ ಹಿಂದೆ ಅಖಿಲ್ ಹುಟ್ಟುಹಬ್ಬಕ್ಕೆ ರಾಮ್ ಚರಣ್, ತಮ್ಮ ಹಾಗೂ ಅಖಿಲ್​ ಜೊತೆಗಿನ ಚಿತ್ರ ಹಂಚಿಕೊಂಡು ವಿಶ್ ಮಾಡಿದಾಗಲಂತೂ ಅಖಿಲ್ ಅವರೇ ರಾಮ್ ನಿರ್ಮಾಣದ ಸಿನಿಮಾ ಹಿರೋ ಎಂದು ಅಕ್ಕಿನೇನಿ ಅಭಿಮಾನಿ ಖುಷಿ ವ್ಯಕ್ತಪಡಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಾಯಕ ನಟ ಬದಲಾಗಿದ್ದು ಅಖಿಲ್ ಬದಲಿಗೆ ನಿಖಿಲ್ ನಾಯಕರಾಗಿದ್ದಾರೆ.

ರಾಮ್ ಚರಣ್ ತಮ್ಮ ಲಾಭಕ್ಕಾಗಿ ಅಖಿಲ್ ಬದಲಿಗೆ ನಿಖಿಲ್​ಗೆ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ. ನಿಖಿಲ್​ ನಟನೆಯ ಕಾರ್ತಿಕೇಯ 2 ಸಿನಿಮಾ ಉತ್ತರ ಭಾರತದ ಭಾಗಗಳಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. ಅದಾದ ಬಳಿಕ ನಿಖಿಲ್ ಇತ್ತೀಚೆಗೆ ನಟಿಸಿರುವ ಸ್ಪೈ ಸಿನಿಮಾ ಸಹ ಸುಭಾಷ್ ಚಂದ್ರ ಭೋಸ್ ಸಾವಿನ ಕುರಿತ ಸಾಕ್ಷ್ಯಗಳ ಕುರಿತ ಕತೆಯನ್ನು ಒಳಗೊಂಡಿದೆ. ನಿಖಿಲ್, ಬಿಜೆಪಿ ಬೆಂಬಲಿಗರು ಮೆಚ್ಚುವ ರೀತಿಯ ಕತೆಗಳನ್ನೇ ಆಯ್ದುಕೊಳ್ಳುತ್ತಾ ಬಂದಿದ್ದಾರೆ. ಅದೇ ಕಾರಣದಿಂದ ರಾಮ್ ಚರಣ್ ಬಿಜೆಪಿಗರು ದೇಶಪ್ರೇಮಿಯಾಗಿ ಮೆರೆಸುತ್ತಿರುವ ಸಾರ್ವಕರ್ ಕುರಿತ ಸಿನಿಮಾಕ್ಕೆ ನಿಖಿಲ್ ಅವರನ್ನೇ ನಾಯಕನನ್ನಾಗಿ ಆರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು, ದಿ ಇಂಡಿಯಾ ಹೌಸ್ ಸಿನಿಮಾ ಘೋಷಣೆ ಆದಾಗಿನಿಂದಲೂ ವಿವಾದಗಳು ಸುತ್ತುವರೆದಿವೆ. ಸಾರ್ವಕರ್ ಹೊರತಾಗಿ ಬೇರೆ ಹಲವು ಸ್ವಾತಂತ್ರ್ಯ ಹೋರಾಟಗಾರಿರುವಾಗ ವಿವಾದಿತ ಸಾವರ್ಕರ್ ಅವರ ಜೀವನವನ್ನೇ ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದೇಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ದಿ ಇಂಡಿಯಾ ಹೌಸ್ ಸಿನಿಮಾವನ್ನು ರಾಮ್ ಚರಣ್ ಅವರು ‘ದಿ ಕಶ್ಮೀರ್ ಫೈಲ್ಸ್’ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಜೊತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ರಾಮ್ ವಂಶಿ ಕೃಷ್ಣ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ