ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್​ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದ ದಶಕದ ನಂತರವೂ ರಶ್ಮಿಕಾ ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ವಿಜಯ್ ದೇವರಕೊಂಡ ಅವರೊಂದಿಗಿನ ವಿವಾಹದ ನಂತರ ಟೀಕೆ ಹೆಚ್ಚಾಗಿದೆ. 'ರಶ್ಮಿಕಾನ ರಕ್ಷಿತ್ ಕ್ಷಮಿಸಿದ್ರೂ, ಕನ್ನಡದ ಜನತೆ ಕ್ಷಮಿಸಲ್ಲ' ಎಂಬ ಪೋಸ್ಟ್‌ಗೆ ಸಂಧ್ಯಾ ಎಂಬುವವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಳೆಯ ವಿಷಯಗಳನ್ನು ಕೆದಕಿ ರಶ್ಮಿಕಾ ಅವರನ್ನು ಪದೇ ಪದೇ ಕಟಕಟೆಗೆ ಎಳೆಯುವುದು ಅರ್ಥಹೀನ ಎಂದು ಅವರು ರಶ್ಮಿಕಾ ಪರ ಧ್ವನಿ ಎತ್ತಿದ್ದಾರೆ.

ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್​ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ
ರಶ್ಮಿಕಾ-ರಕ್ಷಿತ್

Updated on: Mar 02, 2026 | 7:02 AM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ರಕ್ಷಿತ್ ಶೆಟ್ಟಿ ಎಂಗೇಜ್​​ಮೆಂಟ್ ಮುರಿದುಬಿದ್ದು ದಶಕ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವರು ಆ ವಿಷಯವನ್ನು ಕೆದಕೋದನ್ನು ಬಿಟ್ಟಿಲ್ಲ. ಅದರಲ್ಲೂ ರಶ್ಮಿಕಾ ಈಗ ವಿಜಯ್ ದೇವರಕೊಂಡ ಅವರನ್ನು ಮದುವೆ ಆಗುತ್ತಿದ್ದಂತೆ ಅವರನ್ನು ಮತ್ತಷ್ಟು ಟೀಕೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಅನೇಕರು ಟ್ರೋಲರ್​​ಗಳ ಪರ ಧ್ವನಿ ಎತ್ತಿದ್ದಾರೆ. ಆದರೆ, ಕೆಲವರು ರಶ್ಮಿಕಾ ಪರ ಧ್ವನಿ ಎತ್ತಿದ್ದಾರೆ. ಯಾರನ್ನು ಮದುವೆ ಆಗಬೇಕು ಎಂಬುದು ಅವರವರ ಆಯ್ಕೆ ಎಂದು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ’ (2016) ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಕರ್ಣ ಹಾಗೂ ಸಾನ್ವಿ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟರು. ಇವರಿಬ್ಬರಿಗೂ ಪ್ರೀತಿ ಮೂಡಿತು. ಆ ಪ್ರೀತಿ ನಿಶ್ಚಿತಾರ್ಥದವರೆಗೆ ಹೋಯಿತು. ಕೊನೆಗೆ ಇವರ ಮಧ್ಯೆ ಏನಾಯಿತೋ ಏನೋ, ಏಕಾಏಕಿ ನಿಶ್ಚಿತಾರ್ಥ ರದ್ದು ಮಾಡಿಕೊಂಡರು. ಇದಕ್ಕೆ ಕಾರಣ ಈವರೆಗೆ ತಿಳಿದಿಲ್ಲ. ಆದರೆ, ವಿಜಯ್​ನ ವಿವಾಹ ಆದ ಬಳಿಕ ರಶ್ಮಿಕಾನ ಟ್ರೋಲ್ ಮಾಡಲಾಯಿತು. ಇದಕ್ಕೆ ಸಂಧ್ಯಾ ಎಂಬುವವರು ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ವಿವಾಹದ ಬೆನ್ನಲ್ಲೇ ಫ್ಯಾನ್ಸ್​​ಗೆ ಸರ್​​ಪ್ರೈಸ್ ಕೊಟ್ಟ ರಶ್ಮಿಕಾ-ವಿಜಯ್​​ ಜೋಡಿ

‘ರಶ್ಮಿಕಾನ ರಕ್ಷಿತ್ ಶೆಟ್ಟಿ ಕ್ಷಮಿಸಿದ್ರೂ, ಕನ್ನಡದ ಜನತೆ ಕ್ಷಮಿಸಲ್ಲ’ ಎಂಬ ಪೋಸ್ಟ್ ವೈರಲ್ ಆಗಿತ್ತು. ಈ ವಿಷಯದ ಬಗ್ಗೆ ಸಂಧ್ಯಾ ಅವರು ಮಾತನಾಡಿದ್ದಾರೆ. ‘ನೀವು ಹೇಳೋ ಕನ್ನಡದ ಜನತೆಯಲ್ಲಿ ನಾನಿನಲ್ಲ. ನಿನ್ನಂತಹ ಕೆಲವು ಅತೃಪ್ತ ಆತ್ಮಗಳು ಇರಬಹುದು. 10-12 ವರ್ಷಗಳ ಹಿಂದೆ ನಡೆದ ಘಟನೆಯನ್ನು ರಬ್ಬರ್ ಎಳೆದಂತೆ ಎಳೆಯುತ್ತಿದ್ದೀರಾ’ ಎಂದು ಅವರು ಹೇಳಿದ್ದಾರೆ.

‘ರಶ್ಮಿಕಾನ ಪದೇ ಪದೇ ಕಟಕಟೆಗೆ ಎಳೆದು ತಂದು ನಿಲ್ಲಿಸುತ್ತೀರಾ. ಅವರಿಗೆ ಪದೇ ಪದೇ ಶಾಪ ಹಾಕುತ್ತೀರಾ. ಆದರೆ, ನಾನು ನಿಮ್ಮಂತೆ ಅಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಮಧ್ಯಮವರ್ಗದಲ್ಲೇ ವಿಚ್ಛೇದನ ಜಾಸ್ತಿ ಆಗಿದೆ. ಹಾಗಿರುವಾಗ ಎಂಗೇಜ್​​ಮೆಂಟ್ ಮುರಿದುಬಿತ್ತು ಎಂಬುದನ್ನು ಇಟ್ಟುಕೊಂಡು ಎಳೆಯೋದ್ರಲ್ಲಿ ಅರ್ಥ ಇಲ್ಲ’ ಎಂದಿದ್ದಾರೆ ಅವರು. ಈ ಮೂಲಕ ರಶ್ಮಿಕಾಗೆ ಬೆಂಬಲ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Mon, 2 March 26

Follow Us