AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರ ದ್ವೀಪದಲ್ಲಿ ವಿಜಯ್-ರಶ್ಮಿಕಾ ಹನಿಮೂನ್: ಎಲ್ಲಿ ಗೊತ್ತೆ?

Rashmika Mandanna and Vijay Deverakonda: ರಶ್ಮಿಕಾ ಮತ್ತು ವಿಜಯ್ ಅವರ ಆರತಕ್ಷತೆ ಮಾರ್ಚ್ 04 ರಂದು ಹೈದರಾಬಾದ್​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ನಡೆಯಲಿದೆ. ಆರತಕ್ಷತೆಗೆ ಟಾಲಿವುಡ್, ಸ್ಯಾಂಡಲ್​​ವುಡ್ ಮತ್ತು ಬಾಲಿವುಡ್​​ನ ಸಿನಿಮಾ ಸೆಲೆಬ್ರಿಟಿಗಳು ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜಕಾರಣಿಗಳು ಭಾಗಿ ಆಗಲಿದ್ದಾರೆ. ಆರತಕ್ಷತೆ ಮುಗಿದ ಎರಡೇ ದಿನಕ್ಕೆ ಈ ಜೋಡಿ ಹನಿಮೂನ್​​ಗೆ ರವಾನೆ ಆಗಲಿದೆ. ಎಲ್ಲಿಗೆ ಗೊತ್ತೆ?

ಸುಂದರ ದ್ವೀಪದಲ್ಲಿ ವಿಜಯ್-ರಶ್ಮಿಕಾ ಹನಿಮೂನ್: ಎಲ್ಲಿ ಗೊತ್ತೆ?
Vijay Rashmika Honeymoon
ಮಂಜುನಾಥ ಸಿ.
|

Updated on:Feb 26, 2026 | 2:39 PM

Share

ವಿಜಯ್ ದೇವರಕೊಂಡ (Vijy Deverakonda) ಮತ್ತು ರಶ್ಮಿಕಾ ಮಂದಣ್ಣ ವಿವಾಹ ಉದಯಪುರದಲ್ಲಿ ನಡೆಯುತ್ತಿದೆ. ಇಂದು ಹಳದಿ, ಸಂಗೀತ್ ಇನ್ನಿತರೆ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದು, ನಾಳೆ (ಫೆಬ್ರವರಿ 26) ಮದುವೆ ಸಮಾರಂಭ ನಡೆಯಲಿದೆ. ಮೊದಲಿಗೆ ತೆಲುಗು ಸಂಪ್ರದಾಯದಂತೆ ವಿವಾಹ ನಡೆಯಲಿದೆ, ಅದಾದ ಬಳಿಕ ಸಂಜೆ ನಡೆವ ಮತ್ತೊಂದು ಕಾರ್ಯಕ್ರಮದಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಮಾರ್ಚ್ 04 ರಂದು ಹೈದರಾಬಾದ್​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆರತಕ್ಷತೆಗೆ ಟಾಲಿವುಡ್, ಸ್ಯಾಂಡಲ್​​ವುಡ್ ಮತ್ತು ಬಾಲಿವುಡ್​​ನ ಸಿನಿಮಾ ಸೆಲೆಬ್ರಿಟಿಗಳು ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜಕಾರಣಿಗಳು ಭಾಗಿ ಆಗಲಿದ್ದಾರೆ. ಆರತಕ್ಷತೆ ಮುಗಿದ ಎರಡೇ ದಿನಕ್ಕೆ ಈ ಜೋಡಿ ಹನಿಮೂನ್​​ಗೆ ರವಾನೆ ಆಗಲಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ತಮ್ಮ ಆರತಕ್ಷತೆ ಮುಗಿಸಿದ ಕೂಡಲೇ ಹನಿಮೂನ್​​ಗೆ ಹೊರಡಲಿದ್ದಾರಂತೆ. ಅದೂ ಅಂತಿಂಥ ಸಾಮಾನ್ಯ ಸ್ಥಳಕ್ಕೆ ಅಲ್ಲ ಬದಲಿಗೆ ಬಲು ಸುಂದರವಾದ ಮತ್ತು ಬಲು ಖಾಸಗಿಯಾದ ದ್ವೀಪದಲ್ಲಿ ಈ ನೂತನ ದಂಪತಿ ಹನಿಮೂನ್ ಆಚರಣೆ ಮಾಡಿಕೊಳ್ಳಲಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಸಹ ಪ್ರವಾಸದ ಬಗ್ಗೆ ವಿಪರೀತ ಆಸಕ್ತಿ ಉಳ್ಳವರಾಗಿದ್ದು, ಹಾಗಾಗಿಯೇ ಬಲು ಸುಂದರವಾದ ಸ್ಥಳವನ್ನು ಹನಿಮೂನ್​​ಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಮೂಲಗಳ ಪ್ರಕಾರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಖಾಸಗಿ ದ್ವೀಪವಾದ ಕ್ಯಾಲಿವಿನಿ (Calivigny) ದ್ವೀಪಕ್ಕೆ ಹೋರಡಲಿದ್ದಾರೆ. ಅತ್ಯಂತ ಸುಂದರವಾದ ಮತ್ತು ಐಶಾರಾಮಿ ರೆಸಾರ್ಟುಗಳನ್ನು ಮಾತ್ರವೇ ಹೊಂದಿರುವ ದ್ವೀಪ ಇದಾಗಿದೆ. 80 ಎಕರೆ ವಿಶಾಲವಾದ ದ್ವೀಪ ಇದಾಗಿದ್ದು, ಐತಿಹಾಸಿಕ ಕಾರಣಕ್ಕೂ ಸಹ ಮಹತ್ವವಾದ ದ್ವೀಪ ಇದಾಗಿದೆ. ಐಶಾರಾಮಿ ರೆಸಾರ್ಟ್​ ಹೊಂದಿರುವ ಈ ದ್ವೀಪ ಅತ್ಯಂತ ದುಬಾರಿ ದ್ವೀಪವೂ ಸಹ ಹೌದು.

ಇದನ್ನೂ ಓದಿ:

ವಿಜಯ್ ಮತ್ತು ರಶ್ಮಿಕಾ ಅವರು ಕೇವಲ ಕ್ಯಾಲಿವಿನಿ ದ್ವೀಪ ಮಾತ್ರವೇ ಅಲ್ಲದೆ ಇನ್ನೂ ಕೆಲವು ದೇಶಗಳ ಪ್ರವಾಸ ಮಾಡಲಿದ್ದಾರೆ. ರಶ್ಮಿಕಾ ಅವರ ಮೆಚ್ಚಿನ ತಾಣವಾದ ಜಪಾನ್ ಮತ್ತು ವಿಜಯ್ ದೇವರಕೊಂಡ ಅವರ ಮೆಚ್ಚಿನ ತಾಣವಾದ ಇಟಲಿಗೆ ಸಹ ಇವರು ಹನಿಮೂನ್​​ಗೆ ತೆರಳಲಿದ್ದಾರೆ. ಜಪಾನ್, ರಶ್ಮಿಕಾರ ಮೆಚ್ಚಿನ ಪ್ರವಾಸಿ ತಾಣ ಆಗಿದ್ದು, ಈ ಹಿಂದೆ ಅವರು ಜಪಾನಿಗೆ ಹೋದಾಗಲೂ ಈ ಬಗ್ಗೆ ಮಾತನಾಡಿದ್ದರು. ಇದೀಗ ಪತಿಯೊಟ್ಟಿಗೆ ಹನಿಮೂನ್​​ಗೆ ಹೋಗಲಿದ್ದಾರೆ. ಇನ್ನು ವಿಜಯ್ ದೇವರಕೊಂಡಗೆ ಇಟಲಿ ಬಹು ಇಷ್ಟ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Thu, 26 February 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು