AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರಿಗೂ ವಿಜಯ್ ಅಂತಹ ಹುಡುಗ ಸಿಗಲಿ’; ರಶ್ಮಿಕಾ ಮನದ ಬಯಕೆ

'ದಿ ಗರ್ಲ್‌ಫ್ರೆಂಡ್' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿದ್ದರು. ರಶ್ಮಿಕಾ ಮಂದಣ್ಣ ಅವರು ವಿಜಯ್ ಬೆಂಬಲಕ್ಕೆ ಧನ್ಯವಾದ ಹೇಳಿ, "ಎಲ್ಲರ ಜೀವನದಲ್ಲೂ ವಿಜಯ್ ದೇವರಕೊಂಡ ಅಂತಹ ಹುಡುಗ ಇರಲಿ" ಎಂದರು. ವಿಜಯ್ ಸಹ ರಶ್ಮಿಕಾ ಕಾರ್ಯಕ್ಷಮತೆ ಮತ್ತು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಎಲ್ಲರಿಗೂ ವಿಜಯ್ ಅಂತಹ ಹುಡುಗ ಸಿಗಲಿ’; ರಶ್ಮಿಕಾ ಮನದ ಬಯಕೆ
ವಿಜಯ್-ರಶ್ಮಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 13, 2025 | 10:01 AM

Share

ರಶ್ಮಿಕಾ ಮಂದಣ್ಣ ಅವರ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಸಕ್ಸಸ್​ ಮೀಟ್​ನ ಬುಧವಾರ ಅಂದರೆ ನವೆಂಬರ್ 12ರಂದು ಆಯೋಜಿಸಲಾಗಿತ್ತು. ಟಾಲಿವುಡ್ ನಟ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಶ್ಮಿಕಾ ಮಾತನಾಡಿದರು. ಈ ವೇಳೆ ಅವರು ಬೆನ್ನಿಗೆ ನಿಂತ ವಿಜಯ್​ಗೆ ಧನ್ಯವಾದ ಹೇಳಿದರು. ಇದರಿಂದ ವಿಜಯ್ ಕೂಡ ಖುಷಿಪಟ್ಟರು.

‘ವಿಜಯ್’ ಎಂದು ರಶ್ಮಿಕಾ ಮಾತನಾಡಿ ತಡವರಿಸಿದರು. ‘ಈ ಸಿನಿಮಾ ಆರಂಭ ಆದಾಗಿನಿಂದಲೂ ನೀನು ಈ ಸಿನಿಮಾದ ಭಾಗವಾಗಿದ್ದೀಯ. ಈಗ ನೀನು ಸಿನಿಮಾದ ಸಕ್ಸಸ್​ನ ಭಾಗವಾಗಿದ್ದೀಯಾ. ನನ್ನ ಈ ಜರ್ನಿಯಲ್ಲಿ ನೀನಿದ್ದೆ. ಎಲ್ಲರ ಜೀವನದಲ್ಲೂ ವಿಜಯ್​ದೇವರಕೊಂಡ ಅಂತಹ ಹುಡುಗ ಇರಲಿ. ಅದು ಆಶೀರ್ವಾದದಂತೆ ಭಾಸವಾಗುತ್ತದೆ’ ಎಂದು ರಶ್ಮಿಕಾ ಹೇಳಿದರು.

ನಂತರ ವಿಜಯ್ ದೇವರಕೊಂಡ ಸಿನಿಮಾ ಬಗ್ಗೆ ಹೇಳಿದರು. ‘ಇಂದು (ನವೆಂಬರ್ 12) ಮಧ್ಯಾಹ್ನ ಸಿನಿಮಾ ನೋಡಿದೆ. ಹಲವು ಕಡೆ ಕಣ್ಣೀರು ಬಿಗಿಹಿಡಿದೆ. ನನ್ನ ಹೃದಯ ಭಾರವಾಗಿತ್ತು. ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಇದು ಒಂದು. ಅನೇಕ ಜನರ ಕಥೆಗಳನ್ನು ಕೇಳಿ ನನಗೆ ಬೇಸರವಾಯಿತು’ ಎಂದು ಅವರು ಹೇಳಿದ್ದಾರೆ.

‘ಗರ್ಲ್‌ಫ್ರೆಂಡ್ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಉದ್ದೇಶವನ್ನು ಹೊಂದಿದ್ದಾರೆ. ರಾಹುಲ್ ರವೀಂದ್ರನ್ ಅವರನ್ನು ರಶ್ಮಿಕಾ ಎಷ್ಟು ಗೌರವಿಸುತ್ತಾರೆಂದು ನನಗೆ ತಿಳಿದಿದೆ. ಅವರ ಬಗ್ಗೆ ಹೇಳಿದ ಪ್ರತಿಯೊಬ್ಬರೂ ತುಂಬಾ ಚೆನ್ನಾಗಿ ಮಾತನಾಡಿದರು. ಎಲ್ಲರೂ ರಾಹುಲ್ ಅನ್ನು ಪ್ರೀತಿಸುತ್ತಾರೆ. ದೀಕ್ಷಿತ್ ತುಂಬಾ ಒಳ್ಳೆಯ ಅಭಿನಯ ನೀಡಿದ್ದಾರೆ. ಐ ಹೇಟ್ ಯು ಎಂದರೆ ನೀವು ಗೆದ್ದಿದ್ದೀರಿ ಎಂದರ್ಥ’ ಎಂದರು.

‘ಗೀತಾ ಗೋವಿಂದಂ ಸಿನಿಮಾದಿಂದ ರಶ್ಮಿಕಾಳನ್ನು ನೋಡುತ್ತಿದ್ದೇನೆ. ಅವಳು ನಿಜವಾಗಿಯೂ ದೇವತೆ. ಸೆಟ್‌ನಲ್ಲಿ ಎಲ್ಲರೂ ಸಂತೋಷವಾಗಿರಬೇಕೆಂದು ಅವಳು ಬಯಸುತ್ತಾಳೆ. ತನ್ನ ಸುತ್ತಲಿನವರ ಸಂತೋಷವನ್ನು ಅವಳು ನೋಡಿಕೊಳ್ಳುತ್ತಾಳೆ. ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅಂತಹ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡುವುದು ಅವಳು ಏನೆಂದು ತೋರಿಸುತ್ತದೆ. ರಶ್ಮಿಕಾ, ನಿನ್ನನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ’ ಎಂದರು ಅವರು.

ಇದನ್ನೂ ಓದಿ: ಎಲ್ಲರ ಎದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಟ್ಟ ವಿಜಯ್ ದೇವರಕೊಂಡ; ವಿಡಿಯೋ ನೋಡಿ

‘ರಶ್ಮಿಕಾ ದಯಾಳು. ಅವಳು ತನ್ನ ಕೆಲಸವನ್ನು ಮಾಡುತ್ತಾಳೆ. ಒಂದು ದಿನ ಜಗತ್ತು ನನ್ನನ್ನು ನಾನು ಇರುವ ರೀತಿಯಲ್ಲಿ ನೋಡುತ್ತದೆ ಎಂದು ಅವಳು ನಂಬುತ್ತಾಳೆ. ಅದು ಹಾಗೆ ಆಯಿತು ಎಂದು ನಾನು ನಂಬುತ್ತೇನೆ. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ನಾನು ಕೂಡ ತಪ್ಪುಗಳನ್ನು ಮಾಡುತ್ತೇವೆ. ನಾವು ನಮ್ಮ ಸಂಗಾತಿಯನ್ನು ರಕ್ಷಿಸಬೇಕು. ಅದು ನಿಯಂತ್ರಿಸಬಾರದು. ನಾವು ಅವರ ಕನಸುಗಳು ಮತ್ತು ಸಂತೋಷವನ್ನು ರಕ್ಷಿಸಬೇಕು. ಜನನ ಮತ್ತು ಮರಣವನ್ನು ಹೊರತುಪಡಿಸಿ, ನಮಗೆ ಎಲ್ಲದರಲ್ಲೂ ಆಯ್ಕೆ ಇದೆ. ಜೀವನವು ಚಿಕ್ಕದಾಗಿದೆ. ನಾವು ಸಂತೋಷವಾಗಿರಬೇಕು ಆದರೆ ಸಂಕೀರ್ಣವಾಗಿರಬಾರದು’ ಎಂದು ವಿಜಯ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ