ಅಪಘಾತದಿಂದ ಚೇತರಿಸಿಕೊಂಡ ಬೆನ್ನಲ್ಲೇ ಸಾಯಿ ಧರಮ್​ ತೇಜ್​ ಕಡೆಯಿಂದ ಗುಡ್​ ನ್ಯೂಸ್​; ಮಾವನ ​ ಜತೆ ಸಿನಿಮಾ?

| Updated By: ರಾಜೇಶ್ ದುಗ್ಗುಮನೆ

Updated on: Feb 05, 2022 | 6:30 PM

‘ವಿನೋಧ್ಯ ಸೀತಂ​’ ಚಿತ್ರವನ್ನು ನೋಡಿ ಪವನ್​ ಕಲ್ಯಾಣ್​ ಇಷ್ಟಪಟ್ಟಿದ್ದಾರೆ. ಅವರು ಈ ಚಿತ್ರವನ್ನು ರಿಮೇಕ್​ ಮಾಡೋಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಲೀಡ್​ ರೋಲ್​ನಲ್ಲಿ ಪವನ್​ ಕಲ್ಯಾಣ್​ ಕಾಣಿಸಿಕೊಂಡರೆ, ಎರಡನೇ ಮುಖ್ಯ ಪಾತ್ರದಲ್ಲಿ ಅವರ ಸೋದರ ಅಳಿಯ ಸಾಯಿ ಧರಮ್​ ತೇಜ್​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅಪಘಾತದಿಂದ ಚೇತರಿಸಿಕೊಂಡ ಬೆನ್ನಲ್ಲೇ ಸಾಯಿ ಧರಮ್​ ತೇಜ್​ ಕಡೆಯಿಂದ ಗುಡ್​ ನ್ಯೂಸ್​; ಮಾವನ ​ ಜತೆ ಸಿನಿಮಾ?
Follow us on

ಕಳೆದ ವರ್ಷ ಸೆಪ್ಟೆಂಬರ್​ 10ರಂದು ನಡೆದ ಬೈಕ್​ ಅಪಘಾತದಲ್ಲಿ ನಟ ಸಾಯಿ ಧರಮ್​ ತೇಜ್​ (Sai Dharam Tej) ಅವರು ತೀವ್ರವಾಗಿ ಗಾಯಗೊಂಡಿದ್ದರು. ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮರಳಿದ್ದರು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹೊಸಹೊಸ ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರ ಕಡೆಯಿಂದ ಗುಡ್​ನ್ಯೂಸ್​ ಒಂದು ಸಿಕ್ಕಿದೆ. ಸೋದರ ಮಾವ ಪವನ್​ ಕಲ್ಯಾಣ್ (Pawan Kalyan)​ ಜತೆಗೆ ಸಾಯಿ ಧರಮ್​ ತೇಜ್​ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ವಿಚಾರ ಕೇಳಿ ಸಾಯಿ ಧರಮ್​ ತೇಜ್​ ಫ್ಯಾನ್ಸ್​ ಹಾಗೂ ಪವನ್​ ಕಲ್ಯಾಣ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ತಮಿಳು ಸಿನಿಮಾ ‘ವಿನೋಧ್ಯ ಸೀತಂ​’ ಚಿತ್ರ ಈಗ ತೆಲುಗಿಗೆ ರಿಮೇಕ್​ ಆಗುತ್ತಿದೆ. ಮೂಲ ಚಿತ್ರದಲ್ಲಿ ತಂಬಿ ರಾಮಯ್ಯ ಹಾಗೂ ಸಮುದ್ರಖಣಿ ನಟಿಸಿದ್ದರು. ಇದರ ರಿಮೇಕ್​ನಲ್ಲಿ ಪವನ್​ ಕಲ್ಯಾಣ್​ ಹಾಗೂ ಸಾಯಿ ಧರಮ್​ ತೇಜ್​ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ.

‘ವಿನೋಧ್ಯ ಸೀತಂ​’ ಚಿತ್ರವನ್ನು ನೋಡಿ ಪವನ್​ ಕಲ್ಯಾಣ್​ ಇಷ್ಟಪಟ್ಟಿದ್ದಾರೆ. ಅವರು ಈ ಚಿತ್ರವನ್ನು ರಿಮೇಕ್​ ಮಾಡೋಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಲೀಡ್​ ರೋಲ್​ನಲ್ಲಿ ಪವನ್​ ಕಲ್ಯಾಣ್​ ಕಾಣಿಸಿಕೊಂಡರೆ, ಎರಡನೇ ಮುಖ್ಯ ಪಾತ್ರದಲ್ಲಿ ಅವರ ಸೋದರ ಅಳಿಯ ಸಾಯಿ ಧರಮ್​ ತೇಜ್​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಿನಿಮಾ ಸೆಟ್ಟೇರಿದ್ದೇ ಹೌದಾದಲ್ಲಿ ಪವನ್​ ಕಲ್ಯಾಣ್​ ಮತ್ತು ಸಾಯಿ ಧರಮ್​ ತೇಜ್​ ಒಟ್ಟಾಗಿ ನಟಿಸಲಿದ್ದಾರೆ.

ಸಮುದ್ರ ಖಣಿ ಅವರು ‘ವಿನೋಧ್ಯ ಸೀತಂ​’ ಚಿತ್ರವನ್ನು ನಿರ್ದೇಶನ​ ಮಾಡುವುದರ ಜತೆಗೆ ನಟಿಸಿದ್ದರು. ತೆಲುಗು ವರ್ಷನ್​ಗೆ ಈಗ ಅವರೇ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ತ್ರಿವಿಕ್ರಮ್​ ಶ್ರೀನಿವಾಸ್​ ಅವರು ಈ ಚಿತ್ರಕ್ಕೆ ಸ್ಕ್ರೀನ್​ಪ್ಲೇ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಅವರೇ ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಬಗ್ಗೆ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ.

ಸಾಯಿ ಧರಮ್​ ತೇಜ್​ ಅವರು ಸದ್ಯ ತಮ್ಮ 15ನೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್​ ಆಗಿಲ್ಲ. ಪವನ್​ ಕಲ್ಯಾಣ್​ ಅವರು ಬಹುನಿರೀಕ್ಷಿತ ‘ಭೀಮ್ಲಾ ನಾಯಕ್​’ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭೀಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್ ಸುಕುಮಾರ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಫೆಬ್ರವರಿ 25 ಅಥವಾ ಏಪ್ರಿಲ್​ 1ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: ಪವನ್​ ಕಲ್ಯಾಣ್​ ಅಭಿಮಾನಿಗಳಿಗೆ ‘ಭೀಮ್ಲಾ ನಾಯಕ್​’ ನಿರ್ಮಾಪಕರ ಕ್ಷಮೆ; ಖುಷಿಪಟ್ಟಿದ್ದು ರಾಜಮೌಳಿ

ಬಿಡುಗಡೆ ಆಗ್ತಿದೆ ಸಾಲುಸಾಲು ಸ್ಟಾರ್ ಚಿತ್ರಗಳು; ಇಲ್ಲಿದೆ ಪ್ರಮುಖ 9 ಸಿನಿಮಾಗಳ ರಿಲೀಸ್ ದಿನಾಂಕ