ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!

ಪ್ರಮೋಷನ್​ ವೇಳೆ ಸಾಯಿ ಪಲ್ಲವಿ ತಿಳಿ ನೀಲಿ ಬಣ್ಣದ ಸೀರೆ ತೊಟ್ಟಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಈ ಸ್ಯಾರಿ ತೊಟ್ಟಿದ್ದ ಅವರು ಕ್ಯಾಮೆರಾಗಿ ಸಖತ್​ ಆಗಿ ಪೋಸ್​ ನೀಡಿದ್ದಾರೆ.

ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!
ಸಾಯಿ ಪಲ್ಲವಿ
Follow us
|

Updated on: Apr 05, 2021 | 5:28 PM

ಸ್ಟಾರ್​ ನಟ-ನಟಿಯರು ದುಬಾರಿ ಬೆಲೆಯ ಬಟ್ಟೆ, ಬ್ಯಾಗ್​, ವಾಚ್​ ಧರಿಸುತ್ತಾರೆ. ಕೆಲವೊಮ್ಮೆ ಇದು ಅಭಿಮಾನಿಗಳ ಕಣ್ಣಿಗೆ ಬೀಳುತ್ತದೆ. ಅಷ್ಟೇ ಅಲ್ಲ, ಆ ಬಟ್ಟೆಯ ಬೆಲೆ ಎಷ್ಟು, ಅದು ಯಾವ ಬ್ರ್ಯಾಂಡ್ ಎನ್ನುವ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಚ್ಚರಿವ್ಯಕ್ತಪಡಿಸುತ್ತಾರೆ. ಈಗ ದಕ್ಷಿಣ ಭಾರತದ ಸ್ಟಾರ್​ ನಟಿ ಸಾಯಿ ಪಲ್ಲವಿ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅವರು ತೊಟ್ಟಿರುವ ಬಟ್ಟೆಯ ಬೆಲೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಂಬರುವ ‘ಲವ್​ ಸ್ಟೋರಿ’ ಸಿನಿಮಾ ಪ್ರಮೋಷನ್​ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಶೇಖರ್​ ಕಮ್ಮುಲಾ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇತ್ತೀಚೆಗೆ ಈ ಮೂವರು ರಾನಾ ದಗ್ಗುಬಾಟಿ ಚ್ಯಾಟ್ ಶೋಗೆ ಆಗಮಿಸಿದ್ದರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದಾದ ಬೆನ್ನಲ್ಲೇ ಬೇರೆ ಬೇರೆ ಕಡೆ ತೆರಳಿ ತಂಡ ಪ್ರಚಾರ ಕಾರ್ಯ ನಡೆಸುತ್ತಿದೆ.

ಪ್ರಮೋಷನ್​ ವೇಳೆ ಸಾಯಿ ಪಲ್ಲವಿ ತಿಳಿ ನೀಲಿ ಬಣ್ಣದ ಸೀರೆ ತೊಟ್ಟಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಈ ಸ್ಯಾರಿ ತೊಟ್ಟಿದ್ದ ಅವರು ಕ್ಯಾಮೆರಾಗಿ ಸಖತ್​ ಆಗಿ ಪೋಸ್​ ನೀಡಿದ್ದಾರೆ. ಈ ವೇಳೆ ನಾಚಿ ನೀರಾಗಿದ್ದಾರೆ. ಅವರ ಸೀರೆ ಫೋಟೋ ಹೈಲೈಟ್​ ಆಗೋ ಬದಲು ಅವರು ನಾಚಿಕೊಂಡಿದ್ದರ ಬಗ್ಗೆಯೇ ಚರ್ಚೆ ಆಗುತ್ತಿದೆ.

ಸಾಯಿ ಪಲ್ಲವಿ ಎಲ್ಲಾ ವಿಚಾರವನ್ನೂ ಸಿಂಪಲ್​ ಆಗಿಟ್ಟುಕೊಳ್ಳುತ್ತಾರೆ. ಆನ್​ ಸ್ಕ್ರೀನ್​ನಲ್ಲೂ ಅವರು ಮೇಕಪ್​ ಮಾಡಿಕೊಂಡಿದ್ದು ಕೂಡ ತುಂಬಾನೇ ಅಪರೂಪ. ಸದ್ಯ ಅವರ ನಾಚಿ ನೀರಾಗಿ ನಗುತ್ತಿರುವ ಫೋಟೋ ತುಂಬಾನೇ ಹೈಲೈಟ್​ ಆಗಿದೆ.

‘ಲವ್​ ಸ್ಟೋರಿ’ ಸಿನಿಮಾ ಏಪ್ರಿಲ್​ 16ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್​ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಸಖತ್​​ ಎಗ್ಸೈಟ್​ ಆಗಿದ್ದಾರೆ. ಸದ್ಯ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಮಂಗ್ಲಿ ಹಾಡಿದ, ನಟಿ ಸಾಯಿ ಪಲ್ಲವಿ ನಟಿಸಿದ ’ಸರಂಗಾ ದರಿಯಾ’ ಹಾಡು ಮುರಿಯುತ್ತಿದೆ ದಾಖಲೆಗಳನ್ನು…!

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ