AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?

Shruti Haasan: ಸಾಮಾನ್ಯವಾಗಿ ಅಪ್ಪ-ಅಮ್ಮ ಬೇರಾದರೆ ಮಕ್ಕಳಿಗೆ ನೋವಾಗುತ್ತದೆ. ಆದರೆ ಶ್ರುತಿ ಹಾಸನ್​ ವಿಚಾರದಲ್ಲಿ ಅದು ಉಲ್ಟಾ ಆಯಿತು. ಯಾಕೆಂದರೆ, ತಂದೆ-ತಾಯಿ ಡಿವೋರ್ಸ್​ ಆಗಬೇಕು ಎಂಬುದೇ ಅವರ ಬಯಕೆ ಆಗಿತ್ತು.

ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?
ಸಾರಿಕಾ, ಕಮಲ್​ ಹಾಸನ್​, ಶ್ರುತಿ ಹಾಸನ್​
ಮದನ್​ ಕುಮಾರ್​
|

Updated on: May 25, 2021 | 9:22 AM

Share

ಭಾರತೀಯ ಚಿತ್ರರಂಗದಲ್ಲಿ ನಟಿ ಶ್ರುತಿ ಹಾಸನ್​ ಯಶಸ್ವಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ನಟರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಈಗಲೂ ಅವರಿಗೆ ದೊಡ್ಡ ಮಟ್ಟದ ಡಿಮ್ಯಾಂಡ್​ ಇದೆ. ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸಲಾರ್​ ಚಿತ್ರಕ್ಕೆ ಅವರೇ ನಾಯಕಿ. ವೃತ್ತಿಜೀವನದಲ್ಲಿ ಇಷ್ಟೆಲ್ಲ ಯಶಸ್ಸು ಕಂಡಿರುವ ಅವರು ವೈಯಕ್ತಿಕ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಎದುರಿಸಿದ್ದಾರೆ. ಅವರ ತಂದೆ ಕಮಲ್​ ಹಾಸನ್​ ಕೂಡ ಸಂಸಾರದ ತಾಪತ್ರಯಕ್ಕೆ ಸಿಲುಕಿದ್ದರು. ತಂದೆ-ತಾಯಿ ಡಿವೋರ್ಸ್​ ಪಡೆದುಕೊಂಡಾಗ ಶ್ರುತಿ ಹಾಸನ್​ ಹೆಚ್ಚು ಸಂತಸಪಟ್ಟಿದ್ದರು!

ಅಪ್ಪ-ಅಮ್ಮನ ವಿಚ್ಛೇದನದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಶ್ರುತಿ ಹಾಸನ್​ ಈಗ ಬಾಯಿ ಬಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಸಲಾರ್​’ ನಟಿ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. 1988ರಲ್ಲಿ ನಟಿ ಸಾರಿಕಾ ಜೊತೆ ಕಮಲ್​ ಹಾಸನ್​ ಮದುವೆ ನಡೆಯಿತು. ಹಲವು ವರ್ಷಗಳ ಕಾಲ ಖುಷಿಯಿಂದ ಸಹಬಾಳ್ವೆ ನಡೆಸಿದ ಅವರಿಗೆ ಇಬ್ಬರು ಹೆಣ್ಣುಮಕ್ಕಳು (ಶ್ರುತಿ ಹಾಸನ್​ ಮತ್ತು ಅಕ್ಷರಾ ಹಾಸನ್) ಜನಿಸಿದರು. ​ಆದರೆ 2004ರಲ್ಲಿ ಕಮಲ್​ ಹಾಸನ್​ ಹಾಗೂ ಸಾರಿಕಾ ವಿಚ್ಛೇದನ ಪಡೆದುಕೊಂಡರು. ಈಗ ಶ್ರುತಿ ಹಾಸನ್​ ಸಂಭ್ರಮಿಸಿದ್ದರು ಎಂದರೆ ನಂಬಲೇಬೇಕು.

ಸಾಮಾನ್ಯವಾಗಿ ಅಪ್ಪ-ಅಮ್ಮ ಬೇರಾದರೆ ಮಕ್ಕಳಿಗೆ ನೋವಾಗುತ್ತದೆ. ಆದರೆ ಶ್ರುತಿ ಹಾಸನ್​ ವಿಚಾರದಲ್ಲಿ ಅದು ಉಲ್ಟಾ ಆಯಿತು. ಯಾಕೆಂದರೆ, ತಂದೆ-ತಾಯಿ ಡಿವೋರ್ಸ್​ ಆಗಬೇಕು ಎಂಬುದೇ ಅವರ ಬಯಕೆ ಆಗಿತ್ತು. ‘ಪರಸ್ಪರ ಹೊಂದಾಣಿಕೆ ಇಲ್ಲದ ಇಬ್ಬರು ದೂರಾಗುವುದೇ ಒಳಿತು. ಅಪ್ಪ-ಅಮ್ಮ ಅವರವರ ಬದುಕನ್ನು ಪ್ರತ್ಯೇಕವಾಗಿ ಕಟ್ಟಿಕೊಳ್ಳುತ್ತಾರೆ ಎಂದಾಗ ನನಗೆ ಖುಷಿ ಆಯಿತು. ವಿಚ್ಛೇದನದ ನಂತರವೂ ಅವರು ನಮಗೆ ಒಳ್ಳೆಯ ಪಾಲಕರಾಗಿದ್ದರು’ ಎಂದು ಶ್ರುತಿ ಹಾಸನ್​ ಹೇಳಿದ್ದಾರೆ.

‘ಅಪ್ಪನ ಜೊತೆಗೆ ನಾನು ಹೆಚ್ಚು ಆಪ್ತವಾಗಿದ್ದೆ. ಅಮ್ಮ ಕೂಡ ಚೆನ್ನಾಗಿದ್ದಾರೆ. ಇಂದಿಗೂ ಅವರು ನಮ್ಮ ಬದುಕಿನ ಭಾಗವಾಗಿದ್ದಾರೆ. ಅವರಿಬ್ಬರ ವಿಚ್ಛೇದನದಿಂದ ಒಳ್ಳೆಯದೇ ಆಯಿತು’ ಎಂಬುದು ಶ್ರುತಿ ಹಾಸನ್​ ಮಾತುಗಳು. ಈ ವರ್ಷ ತೆರೆಕಂಡ ‘ವಕೀಲ್​ ಸಾಬ್’​ ಸಿನಿಮಾದಲ್ಲಿ ಶ್ರುತಿ ಅವರು ಪವನ್​ ಕಲ್ಯಾಣ್​ ಜೊತೆಗೆ ನಟಿಸಿದ್ದರು. ಈಗ ಅವರು ಬಹುನಿರೀಕ್ಷಿತ ‘ಸಲಾರ್’​ ಸಿನಿಮಾದ ಭಾಗವಾಗಿದ್ದಾರೆ. ಲಾಕ್​ಡೌನ್​ ಕಾರಣದಿಂದ ಸಲಾರ್​ ಚಿತ್ರದ ಕೆಲಸಗಳು ನಿಂತಿವೆ.

ಇದನ್ನೂ ಓದಿ:

ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

Shruti Haasan: ಬಾಯ್​ಫ್ರೆಂಡ್​ ಜೊತೆ ಕಮಲ್​ ಹಾಸನ್​ ಪುತ್ರಿ ಶ್ರುತಿ ಮೋಜು ಮಸ್ತಿ; ಫೋಟೋ ವೈರಲ್​

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು