ಆ ಘಟನೆ ಬಳಿಕ ಚಿತ್ರರಂಗ ಬಿಡಬೇಕು ಎಂದುಕೊಂಡೆ; ಸಮಂತಾ

ಮಯೋಸೈಟಿಸ್ ಅನಾರೋಗ್ಯದ ಕಾರಣ ನಟಿ ಸಮಂತಾ ಸಿನಿಮಾ ರಂಗ ತೊರೆಯಲು ನಿರ್ಧರಿಸಿದ್ದರು. ಉದ್ಯಮ ರಂಗಕ್ಕೆ ಕಾಲಿಟ್ಟಿದ್ದ ಅವರು, ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಅವರ ಒತ್ತಾಯದ ಮೇರೆಗೆ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ನಟಿಸಿ, ನೂರು ಕೋಟಿ ಬಾಕ್ಸ್ ಆಫೀಸ್ ಗಳಿಕೆ ಕಾಣುವ ಮೂಲಕ ಯಶಸ್ವಿ ಕಮ್‌ಬ್ಯಾಕ್ ಮಾಡಿದ್ದಾರೆ.

ಆ ಘಟನೆ ಬಳಿಕ ಚಿತ್ರರಂಗ ಬಿಡಬೇಕು ಎಂದುಕೊಂಡೆ; ಸಮಂತಾ
ಸಮಂತಾ

Updated on: Sep 10, 2026 | 2:58 PM

ಮುಖ್ಯಾಂಶಗಳು

  • ನಟನೆಯಿಂದ ದೂರವಾಗಿ ಉದ್ಯಮಿಯಾದ ಸಮಂತಾ
  • ರಾಜ್ ನಿಡಿಮೋರು ನೀಡಿದ ಧೈರ್ಯ, ಬದಲಾಯ್ತು ನಿರ್ಧಾರ
  • 'ಮಾ ಇಂಟಿ ಬಂಗಾರಂ' ಸಿನಿಮಾ ಮೂಲಕ ಭರ್ಜರಿ ಕಮ್‌ಬ್ಯಾಕ್

ಮಯೋಸೈಟಿಸ್ ಕಾಯಿಲೆಯಿಂದ ಚೇತರಿಸಿಕೊಂಡ ನಟಿ ಸಮಂತಾ, ಸಿನಿಮಾ ರಂಗ ತೊರೆಯಲು ನಿರ್ಧರಿಸಿದ್ದರು. ಅನಾರೋಗ್ಯದ ಕಾರಣ ಚಿತ್ರರಂಗಕ್ಕೆ ವಿದಾಯ ಹೇಳಲು ನಿರ್ಧಾರ ಮಾಡಿದ್ದರು. ನಂತರ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರು. ಆದರೆ, ನಿರ್ದೇಶಕ ರಾಜ್ ನಿಡಿಮೋರು ಒತ್ತಾಯದ ಮೇರೆಗೆ ಮತ್ತೆ ಬಣ್ಣದ ಲೋಕಕ್ಕೆ ಮರಳಿದರು. ‘ಮಾ ಇಂಟಿ ಬಂಗಾರಂ’ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ಸಮಂತಾ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರು ನಾಗ ಚೈತನ್ಯ ಜೊತೆ ಮದುವೆ ಆಗಿದ್ದರು. ಆದರೆ, ನಾಲ್ಕೇ ವರ್ಷಗಳಲ್ಲಿ ಇವರ ಸಂಸಾರ ಮುರಿದುಬಿತ್ತು. ಈ ಸಮಯದಲ್ಲೇ  ಅವರಿಗೆ ಮತ್ತೊಂದು ಶಾಕ್ ಎದುರಾಗಿತ್ತು.  2022ರಲ್ಲಿ ಸಮಂತಾಗೆ ಮಯೋಸೈಟಿಸ್ ರೋಗ ಪತ್ತೆಯಾಗಿತ್ತು. ಚಿಕಿತ್ಸೆ ಪಡೆಯುವಾಗ ಅಭಿನಯಕ್ಕೆ ವಿರಾಮ ನೀಡಿದ್ದರು. ವೈದ್ಯರ ಸಲಹೆಯಂತೆ ಸರಳ ಜೀವನ ನಡೆಸಲು ಬಯಸಿದ್ದರು. ಇದರಿಂದಾಗಿ ನಟನೆಯಿಂದ ದೂರ ಉಳಿಯಲು ಗಂಭೀರವಾಗಿ ಯೋಚಿಸಿದ್ದರು.

ಸಿನಿಮಾದಿಂದ ದೂರವಾದ ಬಳಿಕ ಉದ್ಯಮ ಕ್ಷೇತ್ರಕ್ಕೆ ಹೆಜ್ಜೆ ಇಟ್ಟರು. ಅನೇಕ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿದರು. ಉದ್ಯಮಿಯಾಗಿ ಹೊಸ ಜೀವನ ಆರಂಭಿಸಿದ್ದರು. ತೆರೆಮರೆಯ ಕೆಲಸಗಳನ್ನು ಮಾಡಲು ಅವರು ಇಷ್ಟಪಟ್ಟಿದ್ದರು.

‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ನಿರ್ಮಾಣ ಮಾಡಲು ಸಮಂತಾ ನಿರ್ಧರಿಸಿದ್ದರು. ಆದರೆ ರಾಜ್ ನಿಡಿಮೋರು ಅವರನ್ನು ನಟಿಸುವಂತೆ ಮನವೊಲಿಸಿದರು. ನಟಿಸಲು ಸಮಂತಾ ಮೊದಲು ಹಿಂದೇಟು ಹಾಕಿದ್ದರು. ಕೊನೆಗೆ ಅವರ ಒತ್ತಾಯಕ್ಕೆ ಒಪ್ಪಿ ಬಣ್ಣ ಹಚ್ಚಿದರು.

ಇದನ್ನೂ ಓದಿ: ‘ಪ್ರೆಗ್ನೆನ್ಸಿ ಬಳಿಕ ದೇಹದ ತೂಕ 11 ಕೆಜಿ ಹೆಚ್ಚಿದೆ’; ಅಭಿಮಾನಿಗಳ ಎದುರು ಹೇಳಿಕೊಂಡ ಸಮಂತಾ

ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಸಿತು. ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ಪ್ರಧಾನ ಸಿನಿಮಾವಾಯಿತು. ಸಮಂತಾ ಅವರ ಕಮ್‌ಬ್ಯಾಕ್ ಸಿನಿಮಾಗೆ ಪ್ರೇಕ್ಷಕರಿಂದ ಜೈಕಾರ ಸಿಕ್ಕಿದೆ. ಈ ಸಿನಿಮಾ ನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us