AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ರೀ-ರಿಲೀಸ್ ಒಂದೇ ಎಲ್ಲದಕ್ಕೂ ಪರಿಹಾರವಲ್ಲ? ಈ ಪರಿಸ್ಥಿತಿಗೆ ಕಾರಣಗಳೇನು?

ಸದ್ಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೆತ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿದೆ. ಈ ಮೊದಲು ಕೊವಿಡ್ ಪೂರ್ಣಗೊಂಡ ಬಳಿಕ ದೊಡ್ಡ ಸಿನಿಮಾಗಳು ಬರೋಕೆ ಸಮಯ ಹಿಡಿದವು. ಆ ಸಂದರ್ಭದಲ್ಲೂ ಕೆಲವು ಸಿನಿಮಾಗಳು ರೀ-ರಿಲೀಸ್ ಆದವು. ಆದರೆ, ಹೆಚ್ಚಿನ ಪ್ರಯೋಜನ ಆಗಿಲ್ಲ.  

ಸಿನಿಮಾ ರೀ-ರಿಲೀಸ್ ಒಂದೇ ಎಲ್ಲದಕ್ಕೂ ಪರಿಹಾರವಲ್ಲ? ಈ ಪರಿಸ್ಥಿತಿಗೆ ಕಾರಣಗಳೇನು?
ಪಿವಿಆರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 03, 2024 | 8:07 AM

ಚುನಾವಣೆ, ಐಪಿಎಲ್ ಕಾರಣಕ್ಕೆ ಚಿತ್ರರಂಗ ಮಂಕಾಗಿದೆ. ರಾಜಕೀಯದ ಅಬ್ಬರದ ನಡುವೆ ಸಿನಿಮಾ ರಿಲೀಸ್ ಮಾಡೋ ಸಾಹಸಕ್ಕೆ ದೊಡ್ಡ ಬಜೆಟ್ ಚಿತ್ರಗಳು ಯಾವುದೇ ಕಾರಣಕ್ಕೂ ಮುಂದಾಗುವುದಿಲ್ಲ. 600 ಕೋಟಿ ರೂಪಾಯಿ ಬಜೆಟ್​ನಲ್ಲಿ ರೆಡಿ ಆದ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD Movie) ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಬಿಡುಗಡೆ ಆಗಿಲ್ಲ. ಹೀಗಾಗಿ, ಥಿಯೇಟರ್​ಗಳು ಸೊರಗಿವೆ. ಇದನ್ನು ದೂರವಾಗಿಸಲು ಹಳೆಯ ಚಿತ್ರಗಳನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಉಪೇಂದ್ರ ನಟನೆಯ ‘ಎ’, ಪುನೀತ್ ರಾಜ್​ಕುಮಾರ್ ನಟನೆಯ ಕೆಲವು ಸಿನಿಮಾಗಳು, ತೆಲುಗಿನಆರ್​ಆರ್​ಆರ್​’, ಇಮ್ತಿಯಾಜ್ ಅಲಿ ಅವರ ‘ರಾಕ್​ಸ್ಟಾರ್’ ಸೇರಿ ಅನೇಕ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ. ಆದರೆ, ಇದುವೇ ಎಲ್ಲದಕ್ಕೂ ಪರಿಹಾರ ಅಲ್ಲ ಅನ್ನೋದು ಕೆಲವರ ಅಭಿಪ್ರಾಯ. ಇದರ ಜೊತೆಗೆ ಇದು ಹೊಸ ಟ್ರೆಂಡ್ ಕೂಡ ಅಲ್ಲ.

ಸದ್ಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೆತ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿದೆ. ಈ ಮೊದಲು ಕೊವಿಡ್ ಪೂರ್ಣಗೊಂಡ ಬಳಿಕ ದೊಡ್ಡ ಸಿನಿಮಾಗಳು ಬರೋಕೆ ಸಮಯ ಹಿಡಿದವು. ಆ ಸಂದರ್ಭದಲ್ಲೂ ಕೆಲವು ಸಿನಿಮಾಗಳು ರೀ-ರಿಲೀಸ್ ಆದವು. ಆದರೆ, ಹೆಚ್ಚಿನ ಪ್ರಯೋಜನ ಆಗಿಲ್ಲ.

ಥಿಯೇಟರ್ ಸೊರಗಲು ಕಾರಣಗಳೇನು?

ಕಳೆದ ಕೆಲವು ತಿಂಗಳಿಂದ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಂದಿಲ್ಲ. ಬಂದರೂ ಅವು ಗೆದ್ದು ಬೀಗಿಲ್ಲ. ಕಳೆದ ಎರಡು ತಿಂಗಳು ಐಪಿಎಲ್ ಹಬ್ಬ ಇತ್ತು. ಈ ವೇಳೆ ಜನರು ಐಪಿಎಲ್ ವೀಕ್ಷಣೆಗೆ ಹೆಚ್ಚು ಒತ್ತು ಕೊಟ್ಟರು. ಸಂಜೆ ವೇಳೆ ಜನರು ಐಪಿಎಲ್ ನೋಡುತ್ತಾ ಸಮಯ ಕಳೆದರು. ಇನ್ನು, ಲೋಕಸಭೆ ಚುನಾವಣೆ ಅಬ್ಬರವೂ ಈ ಸಂದರ್ಭದಲ್ಲಿ ಜೋರಾಗಿಯೇ ಇತ್ತು.

ರೀ-ರಿಲೀಸ್ ಟ್ರೆಂಡ್

ಕನ್ನಡದ ‘ಓಂ’ ಚಿತ್ರ ನೂರಾರು ಬಾರಿ ಥಿಯೇಟರ್​ನಲ್ಲಿ ಮರು ಬಿಡುಗಡೆ ಆಗಿದೆ. ಪುನೀತ್ ಜನ್ಮದಿನದ ಸಂದರ್ಭದಲ್ಲಿ ಅವರ ನಟನೆಯ ಚಿತ್ರಗಳನ್ನು ಮರು ಬಿಡುಗಡೆ  ಮಾಡಲಾಗಿದೆ. ಈ ಮೊದಲು ರೀ-ರಿಲೀಸ್ ಟ್ರೆಂಡ್ ಇತ್ತು. ಆದರೆ, ಅದುವೇ ಎಲ್ಲದಕ್ಕೂ ಪರಿಹಾರ ಅಲ್ಲ ಅನ್ನೋದು ಅನೇಕರ ಅಭಿಪ್ರಾಯ.

ಕಾಟಾಚಾರಕ್ಕಲ್ಲ

ಸಿನಿಮಾ ರೀ-ರಿಲೀಸ್ ಮಾಡುವಾಗ ಅದಕ್ಕೆ ದೊಡ್ಡ ಪುಶ್ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಿರ್ಮಾಪಕರು ಹಾಗೂ ಹಂಚಿಕೆದಾರರು ಪ್ರಯತ್ನ ಮಾಡಬೇಕು. ಟಿಕೆಟ್ ದರವನ್ನು ಜನರಿಗೆ ಕೈಗೆಟಕುವ ರೀತಿಯಲ್ಲಿ ಇಡಬೇಕು. ಆಗ, ರೀ-ರಿಲೀಸ್ ಆಗಿದ್ದಕ್ಕೂ ಸಾರ್ಥಕತೆ ಇರುತ್ತದೆ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು.

ಇದನ್ನೂ ಓದಿ: ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

‘ಸಿನಿಮಾಗಳನ್ನು ರೀ-ರಿಲೀಸ್ ಮಾಡೋದು ಎಲ್ಲದಕ್ಕೂ ಪರಿಹಾರ ಅಲ್ಲ. ಆದರೆ, ಒಂದು ಮಟ್ಟಕ್ಕೆ ಜನರು ಥಿಯೇಟರ್​ಗೆ ಬರುತ್ತಾರೆ. ಜನರು ಥಿಯೇಟರ್​ಗೆ ಬರೋಕೆ ಇದು ಒಂದು ಕೂಡ ಕಾರಣ’ ಎಂದಿದ್ದಾರೆ ಸಿನಿಪೋಲೀಸ್ ಸಿಇಒ ದೇವಗನ್​ ಸಂಪತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್