AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ರೀ-ರಿಲೀಸ್ ಒಂದೇ ಎಲ್ಲದಕ್ಕೂ ಪರಿಹಾರವಲ್ಲ? ಈ ಪರಿಸ್ಥಿತಿಗೆ ಕಾರಣಗಳೇನು?

ಸದ್ಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೆತ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿದೆ. ಈ ಮೊದಲು ಕೊವಿಡ್ ಪೂರ್ಣಗೊಂಡ ಬಳಿಕ ದೊಡ್ಡ ಸಿನಿಮಾಗಳು ಬರೋಕೆ ಸಮಯ ಹಿಡಿದವು. ಆ ಸಂದರ್ಭದಲ್ಲೂ ಕೆಲವು ಸಿನಿಮಾಗಳು ರೀ-ರಿಲೀಸ್ ಆದವು. ಆದರೆ, ಹೆಚ್ಚಿನ ಪ್ರಯೋಜನ ಆಗಿಲ್ಲ.  

ಸಿನಿಮಾ ರೀ-ರಿಲೀಸ್ ಒಂದೇ ಎಲ್ಲದಕ್ಕೂ ಪರಿಹಾರವಲ್ಲ? ಈ ಪರಿಸ್ಥಿತಿಗೆ ಕಾರಣಗಳೇನು?
ಪಿವಿಆರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 03, 2024 | 8:07 AM

Share

ಚುನಾವಣೆ, ಐಪಿಎಲ್ ಕಾರಣಕ್ಕೆ ಚಿತ್ರರಂಗ ಮಂಕಾಗಿದೆ. ರಾಜಕೀಯದ ಅಬ್ಬರದ ನಡುವೆ ಸಿನಿಮಾ ರಿಲೀಸ್ ಮಾಡೋ ಸಾಹಸಕ್ಕೆ ದೊಡ್ಡ ಬಜೆಟ್ ಚಿತ್ರಗಳು ಯಾವುದೇ ಕಾರಣಕ್ಕೂ ಮುಂದಾಗುವುದಿಲ್ಲ. 600 ಕೋಟಿ ರೂಪಾಯಿ ಬಜೆಟ್​ನಲ್ಲಿ ರೆಡಿ ಆದ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD Movie) ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಬಿಡುಗಡೆ ಆಗಿಲ್ಲ. ಹೀಗಾಗಿ, ಥಿಯೇಟರ್​ಗಳು ಸೊರಗಿವೆ. ಇದನ್ನು ದೂರವಾಗಿಸಲು ಹಳೆಯ ಚಿತ್ರಗಳನ್ನು ರೀ-ರಿಲೀಸ್ ಮಾಡಲಾಗುತ್ತಿದೆ. ಉಪೇಂದ್ರ ನಟನೆಯ ‘ಎ’, ಪುನೀತ್ ರಾಜ್​ಕುಮಾರ್ ನಟನೆಯ ಕೆಲವು ಸಿನಿಮಾಗಳು, ತೆಲುಗಿನಆರ್​ಆರ್​ಆರ್​’, ಇಮ್ತಿಯಾಜ್ ಅಲಿ ಅವರ ‘ರಾಕ್​ಸ್ಟಾರ್’ ಸೇರಿ ಅನೇಕ ಸಿನಿಮಾಗಳು ರೀ-ರಿಲೀಸ್ ಆಗುತ್ತಿವೆ. ಆದರೆ, ಇದುವೇ ಎಲ್ಲದಕ್ಕೂ ಪರಿಹಾರ ಅಲ್ಲ ಅನ್ನೋದು ಕೆಲವರ ಅಭಿಪ್ರಾಯ. ಇದರ ಜೊತೆಗೆ ಇದು ಹೊಸ ಟ್ರೆಂಡ್ ಕೂಡ ಅಲ್ಲ.

ಸದ್ಯ ಯಾವುದೇ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಹಳೆತ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿದೆ. ಈ ಮೊದಲು ಕೊವಿಡ್ ಪೂರ್ಣಗೊಂಡ ಬಳಿಕ ದೊಡ್ಡ ಸಿನಿಮಾಗಳು ಬರೋಕೆ ಸಮಯ ಹಿಡಿದವು. ಆ ಸಂದರ್ಭದಲ್ಲೂ ಕೆಲವು ಸಿನಿಮಾಗಳು ರೀ-ರಿಲೀಸ್ ಆದವು. ಆದರೆ, ಹೆಚ್ಚಿನ ಪ್ರಯೋಜನ ಆಗಿಲ್ಲ.

ಥಿಯೇಟರ್ ಸೊರಗಲು ಕಾರಣಗಳೇನು?

ಕಳೆದ ಕೆಲವು ತಿಂಗಳಿಂದ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಂದಿಲ್ಲ. ಬಂದರೂ ಅವು ಗೆದ್ದು ಬೀಗಿಲ್ಲ. ಕಳೆದ ಎರಡು ತಿಂಗಳು ಐಪಿಎಲ್ ಹಬ್ಬ ಇತ್ತು. ಈ ವೇಳೆ ಜನರು ಐಪಿಎಲ್ ವೀಕ್ಷಣೆಗೆ ಹೆಚ್ಚು ಒತ್ತು ಕೊಟ್ಟರು. ಸಂಜೆ ವೇಳೆ ಜನರು ಐಪಿಎಲ್ ನೋಡುತ್ತಾ ಸಮಯ ಕಳೆದರು. ಇನ್ನು, ಲೋಕಸಭೆ ಚುನಾವಣೆ ಅಬ್ಬರವೂ ಈ ಸಂದರ್ಭದಲ್ಲಿ ಜೋರಾಗಿಯೇ ಇತ್ತು.

ರೀ-ರಿಲೀಸ್ ಟ್ರೆಂಡ್

ಕನ್ನಡದ ‘ಓಂ’ ಚಿತ್ರ ನೂರಾರು ಬಾರಿ ಥಿಯೇಟರ್​ನಲ್ಲಿ ಮರು ಬಿಡುಗಡೆ ಆಗಿದೆ. ಪುನೀತ್ ಜನ್ಮದಿನದ ಸಂದರ್ಭದಲ್ಲಿ ಅವರ ನಟನೆಯ ಚಿತ್ರಗಳನ್ನು ಮರು ಬಿಡುಗಡೆ  ಮಾಡಲಾಗಿದೆ. ಈ ಮೊದಲು ರೀ-ರಿಲೀಸ್ ಟ್ರೆಂಡ್ ಇತ್ತು. ಆದರೆ, ಅದುವೇ ಎಲ್ಲದಕ್ಕೂ ಪರಿಹಾರ ಅಲ್ಲ ಅನ್ನೋದು ಅನೇಕರ ಅಭಿಪ್ರಾಯ.

ಕಾಟಾಚಾರಕ್ಕಲ್ಲ

ಸಿನಿಮಾ ರೀ-ರಿಲೀಸ್ ಮಾಡುವಾಗ ಅದಕ್ಕೆ ದೊಡ್ಡ ಪುಶ್ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಿರ್ಮಾಪಕರು ಹಾಗೂ ಹಂಚಿಕೆದಾರರು ಪ್ರಯತ್ನ ಮಾಡಬೇಕು. ಟಿಕೆಟ್ ದರವನ್ನು ಜನರಿಗೆ ಕೈಗೆಟಕುವ ರೀತಿಯಲ್ಲಿ ಇಡಬೇಕು. ಆಗ, ರೀ-ರಿಲೀಸ್ ಆಗಿದ್ದಕ್ಕೂ ಸಾರ್ಥಕತೆ ಇರುತ್ತದೆ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು.

ಇದನ್ನೂ ಓದಿ: ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

‘ಸಿನಿಮಾಗಳನ್ನು ರೀ-ರಿಲೀಸ್ ಮಾಡೋದು ಎಲ್ಲದಕ್ಕೂ ಪರಿಹಾರ ಅಲ್ಲ. ಆದರೆ, ಒಂದು ಮಟ್ಟಕ್ಕೆ ಜನರು ಥಿಯೇಟರ್​ಗೆ ಬರುತ್ತಾರೆ. ಜನರು ಥಿಯೇಟರ್​ಗೆ ಬರೋಕೆ ಇದು ಒಂದು ಕೂಡ ಕಾರಣ’ ಎಂದಿದ್ದಾರೆ ಸಿನಿಪೋಲೀಸ್ ಸಿಇಒ ದೇವಗನ್​ ಸಂಪತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ