Shankar Nag: ಸ್ಯಾಂಡಲ್​ವುಡ್​ ಸಾಧನೆಯನ್ನು ಹೆಮ್ಮೆಯಿಂದ ನೋಡ್ತಿರುವ ಶಂಕರ್​ ನಾಗ್; ಇದು ‘ಅಬ ಜಬ ದಬ’ ವಿಶೇಷ

| Updated By: ಮದನ್​ ಕುಮಾರ್​

Updated on: Nov 09, 2022 | 12:01 PM

Aba Jaba Daba | Shankar Nag Birthday: ‘ಅಬ ಜಬ ದಬ’ ಚಿತ್ರದಲ್ಲಿ ಹಲವು ವಿಶೇಷಗಳು ಇರಲಿವೆ. ಎಲ್ಲರ ನೆಚ್ಚಿನ ಶಂಕರ್ ನಾಗ್ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Shankar Nag: ಸ್ಯಾಂಡಲ್​ವುಡ್​ ಸಾಧನೆಯನ್ನು ಹೆಮ್ಮೆಯಿಂದ ನೋಡ್ತಿರುವ ಶಂಕರ್​ ನಾಗ್; ಇದು ‘ಅಬ ಜಬ ದಬ’ ವಿಶೇಷ
‘ಅಬ ಜಬ ದಬ’ ಚಿತ್ರದ ಪೋಸ್ಟರ್​
Follow us on

ನಟ ಶಂಕರ್​ ನಾಗ್ (Shankar Nag)​ ಅವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯುವಂತಿಲ್ಲ. ಕಡಿಮೆ ಸಮಯದಲ್ಲೇ ಅವರು ಮಾಡಿದ ಸಾಧನೆ ಅಪಾರ. ಕರುನಾಡು ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಅವರು ಕಂಡಿದ್ದು ಕನಸುಗಳಿಗೆ ಲೆಕ್ಕವಿಲ್ಲ. ಆ ಪೈಕಿ ಕೆಲವು ಕನಸುಗಳು ನನಸಾಗಿವೆ. ಸ್ಯಾಂಡಲ್​​ವುಡ್​ (Sandalwood) ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಒಂದು ವೇಳೆ ಇಂದು ಶಂಕರ್​ ನಾಗ್​ ಅವರು ಇದ್ದಿದ್ದರೆ ಅವರು ಹೆಮ್ಮೆಯಿಂದ ಸ್ಯಾಂಡಲ್​ವುಡ್​ ಅನ್ನು ನೋಡುತ್ತಿದ್ದರು. ಆ ರೀತಿಯ ಕಲ್ಪನೆಯಲ್ಲಿ ‘ಅಬ ಜಬ ದಬ’ (Aba Jaba Daba) ಚಿತ್ರದ ಪೋಸ್ಟರ್​ ಮೂಡಿಬಂದಿದೆ. ಇಂದು (ನ.9) ಶಂಕರ್​ ನಾಗ್​ ಜನ್ಮದಿನ. ಆ ಪ್ರಯುಕ್ತ ಈ ವಿಶೇಷ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ‘ಅಬ ಜಬ ದಬ’ ಚಿತ್ರದಲ್ಲಿ ಶಂಕರ್​ ನಾಗ್​ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಚಿತ್ರತಂಡ ಸಖತ್​ ನಿರೀಕ್ಷೆ ಹುಟ್ಟುಹಾಕಿದೆ.

ಶೀರ್ಷಿಕೆಯ ಕಾರಣದಿಂದಲೇ ‘ಅಬ ಜಬ ದಬ’ ಚಿತ್ರ ಗಮನ ಸೆಳೆಯುತ್ತಿದೆ. ಎಸ್. ರಾಮ್ ಪ್ರೊಡ್ಯೂಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೇಕಡ 80ರಷ್ಟು ಶೂಟಿಂಗ್​ ಮುಗಿದಿದೆ. ಇನ್ನು 2 ಹಾಡು ಹಾಗೂ ಒಂದು ಸಾಹಸ ದೃಶ್ಯವನ್ನು ಶೀಘ್ರದಲ್ಲೇ ಚಿತ್ರೀಕರಿಸಲಾಗುವುದು.

ಇದನ್ನೂ ಓದಿ
Shankar Nag Birthday: 23ನೇ ವಯಸ್ಸಿಗೆ ಬಣ್ಣದ ಲೋಕದ ನಂಟು; ಶಂಕರ್ ನಾಗ್ ಬದುಕಿದ ರೀತಿಯೇ ವಿಸ್ಮಯ
ಶಂಕರ್​ನಾಗ್ ನೆನೆದು ಕಣ್ಣೀರು ಹಾಕಿದ ‘ಕೆಜಿಎಫ್’ ಕಲಾವಿದ ಕೃಷ್ಣ ರಾವ್
‘ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಶಂಕರ್ ನಾಗ್ ಆಗಲೇ ಆಲೋಚಿಸಿದ್ದರು’; ಮಾಸ್ಟರ್ ಮಂಜುನಾಥ್  
Happy Birthday Shankar Nag: ಇಂದು ಶಂಕರ್ ನಾಗ್ ಜನ್ಮದಿನ; ಕನ್ನಡಿಗರ ಕಣ್ಮಣಿ ನೆನೆದ ಸೆಲೆಬ್ರಿಟಿಗಳು

‘ಅಬ ಜಬ ದಬ’ ಚಿತ್ರದಲ್ಲಿ ಹಲವು ವಿಶೇಷತೆಗಳು ಇರಲಿವೆ. ಎಲ್ಲರ ನೆಚ್ಚಿನ ಶಂಕರ್ ನಾಗ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅದು ಹೇಗೆ ಎಂಬುದು ಮಾತ್ರ ಇನ್ನೂ ಬಹಿರಂಗ ಆಗಿಲ್ಲ. ‘ಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸಗಳು ಪ್ರಾರಂಭ ಆಗಿದೆ. ಮುಂದಿನ ವರ್ಷ ನಮ್ಮ ಶಂಕರಣ್ಣನನ್ನು ತೆರೆ ಮೇಲೆ ನೋಡಿ ಆನಂಧಿಸಬಹುದು’ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈ ಸಿನಿಮಾದಲ್ಲಿ ಪೃಥ್ವಿ ಅಂಬರ್​, ಅಂಕಿತಾ ಅಮರ್, ಸಂಗೀತಾ ಭಟ್​, ಊರ್ವಶಿ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶಕ ಮಯೂರ ರಾಘವೇಂದ್ರ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅನಂತ ಕೃಷ್ಣ ಅವರು ಬಂಡವಾಳ ಹೂಡುತ್ತಿದ್ದಾರೆ. ಗಿರಿಧರ್ ದಿವಾನ್​ ಛಾಯಾಗ್ರಹಣ, ಸತೀಶ್​ ರಘುನಾಥನ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.