ವಿಷ್ಣುವರ್ಧನ್​ಗೆ ಆ ಒಂದು ವಿಚಾರದಲ್ಲಿ ಇತ್ತು ಕೊರಗು; ಕೊನೆಗೂ ಈಡೇರಲಿಲ್ಲ

ವಿಷ್ಣುವರ್ಧನ್ ಅವರಿಗೆ ಇಂದು (ಸೆಪ್ಟೆಂಬರ್ 18) ಜನ್ಮದಿನ. ಅವರಿಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ. ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ವಿಷ್ಣುವರ್ಧನ್​ಗೆ ಒಂದು ಕೊರಗು ಇತ್ತು. ಆ ಕೊರಗಲ್ಲೇ ಅವರು ನಿಧನ ಹೊಂದಿದ್ದರು.

ವಿಷ್ಣುವರ್ಧನ್​ಗೆ ಆ ಒಂದು ವಿಚಾರದಲ್ಲಿ ಇತ್ತು ಕೊರಗು; ಕೊನೆಗೂ ಈಡೇರಲಿಲ್ಲ
ವಿಷ್ಣುವರ್ಧನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 18, 2024 | 7:58 AM

ವಿಷ್ಣುವರ್ಧನ್ ಅವರಿಗೆ ಇಂದು ಜನ್ಮದಿನ. ಅವರು ನಮ್ಮ ಜೊತೆ ಇದ್ದಿದ್ದರೆ ಫ್ಯಾನ್ಸ್ ಖುಷಿಪಡುತ್ತಿದ್ದರು. ಖುಷಿಯಿಂದ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ, ಅವರು ನಮ್ಮ ಜೊತೆ ಇಲ್ಲ ಅನ್ನೋದು ಬೇಸರದ ವಿಚಾರ. ವಿಷ್ಣುವರ್ಧನ್ ಅವರ ನೆನಪು ಎಂದಿಗೂ ಮರೆ ಆಗುವಂಥದ್ದಲ್ಲ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಸಿನಿಮಾಗಳು ಈಗಲೂ ಪ್ರೇಕ್ಷಕರನ್ನು ಕಾಡುತ್ತವೆ. ವಿಷ್ಣುವರ್ಧನ್​ಗೆ ಒಂದು ಕೊರಗು ಇತ್ತು. ಆ ಕೊರಗಲ್ಲೇ ಅವರು ನಿಧನ ಹೊಂದಿದ್ದರು.

ಅವಾರ್ಡ್ ಹಾಗೂ ಕೇಂದ್ರ ಸರ್ಕಾರದ ಕೆಲ ಅವಾರ್ಡ್​ಗಳನ್ನು ಪಡೆದರೆ ಯಾವುದೇ ಕಲಾವಿದನಾದರೂ ಹೆಮ್ಮೆ ಆಗುತ್ತದೆ. ಅದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದು ಇರುವುದಿಲ್ಲ. ಆದರೆ, ವಿಷ್ಣುವರ್ಧನ್​ಗೆ ಯಾವುದೇ ರಾಷ್ಟ್ರ ಪ್ರಶಸ್ತಿ ಸಿಕ್ಕಿಲ್ಲ. ಪದ್ಮಶ್ರೀ, ಪದ್ಮವಿಭೂಷಣದಂಥ ಗೌರವ ಸಿಕ್ಕಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇತ್ತು. ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಹೇಳಿದ್ದರು.

‘ಆರ್ಟಿಸ್ಟ್​ಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಿಗುವ ಗೌರವ ಸಿಕ್ಕೇ ಇಲ್ಲ ಎಂದಾದರೆ ಅದಕ್ಕಿಂತ ದೌರ್ಭಾಗ್ಯ ಇನ್ನೇನಿದೆ? ನನ್ನತ್ರ ಹೇಳಿದ್ರೆ ನಾನೇನು ಮಾಡಲಿ? ಏನು ಸಿಕ್ಕಿದೆ ಅದಕ್ಕೆ ಖುಷಿ ಇದೆ. ಪದ್ಮಶ್ರೀ ಮತ್ತೊಂದು, ಮಗದೊಂದು ಇದೆಯಲ್ಲ, ಅದೆಲ್ಲ ಸಿಕ್ಕಿಲ್ಲ. ಶಿವಾಜಿ ಅವರು ನಿನಗೆ ಅವಾರ್ಡ್ ಏಕೆ ಎಂದು ಕೇಳಿದ್ದರು? ಅವರಿಗೂ ರಾಷ್ಟ್ರ ಪ್ರಶಸ್ತಿ ಸಿಕ್ಕಿರಲಿಲ್ಲ. ಜನರು ಗುರುತಿಸುವಾಗ ಅದೆಲ್ಲ ಗೌಣ ಆಗಿ ಬಿಡುತ್ತವೆ. ಜನರು ಸ್ಪಂದಿಸೋದು ಮುಖ್ಯ ಆಗುತ್ತದೆ’ ಎಂದಿದ್ದರು ವಿಷ್ಣವರ್ಧನ್.

ಇದನ್ನೂ ಓದಿ: ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ

ವಿಷ್ಣುವರ್ಧನ್ ಅವರಿಗೆ ಅನೇಕ ಬಾರಿ ರಾಜ್ಯ ಪ್ರಶಸ್ತಿಗಳು ಸಿಕ್ಕಿವೆ. ‘ನಾಗರಹಾವು’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಮೊದಲ ಚಿತ್ರದಲ್ಲೇ ರಾಜ್ಯ ಪ್ರಶಸ್ತಿ ಪಡೆದರು. ‘ಹೊಂಬಿಸಿಲು’, ‘ಬಂಧನ’, ‘ಲಯನ್ ಜಗಪತಿ ರಾವ್’, ‘ಲಾಲಿ’ ಮೊದಲಾದ ಸಿನಿಮಾಗಳ ನಟನೆಗೆ ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ. ವಿಷ್ಣುವರ್ಧನ್ ಅವರನ್ನು ಈಗಲೂ ಅನೇಕರು ನೆನಪು ಮಾಡಿಕೊಳ್ಳುತ್ತಾರೆ. ಸುದೀಪ್ ಸೇರಿ ಅನೇಕ ಹೀರೋಗಳಿಗೆ ವಿಷ್ಣುವರ್ಧನ್ ಅವರೇ ಸ್ಫೂರ್ತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.