
ಆ್ಯಂಕರ್ ಅನುಶ್ರೀ (Anushree) ಅವರು ವೇದಿಕೆ ಮೇಲಿದ್ದರೆ ಅಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಇದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಈಗ ಅವರು ‘ಆಲ್ಫಾ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ನ ನಡೆಸಿಕೊಟ್ಟಿದ್ದಾರೆ. ಈ ಈವೆಂಟ್ ಸಾಕಷ್ಟು ಗಮನ ಸೆಳೆದಿದೆ. ಅನುಶ್ರೀ ಅವರು ಈ ವೇದಿಕೆ ಮೇಲೆ ಗಿಲ್ಲಿ ಬಗ್ಗೆ ಮಾತನಾಡಿದರು. ತಮ್ಮ ಬಾಂಧವ್ಯ ಎಂಥದ್ದು, ಗಿಲ್ಲಿಗೆ ಬೆಂಬಲ ನೀಡಿದ್ದು ಏಕೆ ಎಂಬ ವಿಷಯ ಪ್ರಸ್ತಾಪ ಆಗಿದ್ದಕ್ಕೆ ಅವರು ಉತ್ತರ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿಗೂ ಅನುಶ್ರೀ ಅವರಿಗೂ ಮೊದಲೇ ಪರಿಚಯ ಇತ್ತು. ಇಬ್ಬರೂ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಆಗ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಗಿಲ್ಲಿ ಅವರು ಹಲವು ಕಾರ್ಯಕ್ರಮದಲ್ಲಿ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ‘ಆಲ್ಫಾ’ ಟ್ರೇಲರ್ ಲಾಂಚ್ ಈವೆಂಟ್ನಲ್ಲೂ ಗಿಲ್ಲಿ ಬಗ್ಗೆ ಅವರು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣ ಆಯಿತು.
ಇದನ್ನೂ ಓದಿ: ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
‘ಕಾಂತಾರ’ ಸಿನಿಮಾದಲ್ಲಿ ರಾಜನ ಪಾತ್ರ ಮಾಡಿದ್ದ ವಿನಯ್ ಬಿದ್ದಪ್ಪ ಅವರು ‘ಆಲ್ಫಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ವೇದಿಕೆ ಏರಿದರು. ವೇದಿಕೆ ಏರುತ್ತಿದ್ದಂತೆಯೇ ಅನುಶ್ರೀ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಅನುಶ್ರೀ ಜೊತೆ ವೇದಿಕೆ ಶೇರ್ ಮಾಡಿಕೊಂಡಿರೋದು ನನ್ನ ಅದೃಷ್ಟ ಅನಿಸುತ್ತದೆ. ಏಕೆಂದರೆ ಅವರ ಜೊತೆ ವೇದಿಕೆ ಹಂಚಿಕೊಂಡವರು ಎಲ್ಲೋ ಹೋಗಿ ಬಿಟ್ಟಿದ್ದಾರೆ. ಗಿಲ್ಲಿನೇ ಉತ್ತಮ ಉದಾಹರಣೆ. ಅಕ್ಕ ಮುಂದೆ ಹೋಗು, ಅಕ್ಕ ಮುಂದೆ ಹೋಗು ಅಂತ ಅವರು ಎಲ್ಲೋ ಹೋದರು’ ಎಂದು ವಿನಯ್ ಬಿದ್ದಪ್ಪ ಕಾಲೆಳೆದರು.
ಇದಕ್ಕೆ ಅನುಶ್ರೀ ಅವರು ಕೂಲ್ ಆಗಿ ಉತ್ತರಿಸಿದರು. ‘ಅವರ ಗೆಲ್ತಾ ಇದ್ರಲ್ಲ, ಅದಕ್ಕೆ ಸಪೋರ್ಟ್ ಆಗಿ ನಿಂತಿದ್ದೇ ಅಷ್ಟೇ’ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಇದು ಗಿಲ್ಲಿ ಮೇಲೆ ಅನುಶ್ರೀಗೆ ಎಷ್ಟು ಪ್ರೀತಿ ಹಾಗೂ ಗೌರವ ಇದೆ ಎಂಬುದನ್ನು ತೋರಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:07 am, Sat, 7 February 26