AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ

ಶ್ರೀಲೀಲಾ ಹಾಗೂ ಧನ್ವೀರ್​ ನಟನೆಯ ‘ಬೈ ಟೂ ಲವ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ.

ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ
ಶ್ರೀಲೀಲಾ
TV9 Web
| Edited By: |

Updated on:Feb 21, 2022 | 8:07 AM

Share

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೆಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಬಣ್ಣದ ಲೋಕದಲ್ಲಿ ಕೇವಲ ಅಂದ ಇದ್ದರೆ ಸಾಕಾಗುವುದಿಲ್ಲ. ನಟನೆ ಉತ್ತಮವಾಗಿರಬೇಕು. ನ್ಯಾಚುರಲ್​ ಆಗಿ ನಟಿಸುವ ಕಲೆ ಇರಬೇಕು. ಎಷ್ಟೇ ಪ್ರಯತ್ನ ಮಾಡಿದರೂ ಕೆಲವರಿಗೆ ಇದು ಸಿದ್ಧಿಸುವುದೇ ಇಲ್ಲ. ಆದರೆ, ನಟಿ ಶ್ರೀಲೀಲಾ (Sreeleela) ಆ ರೀತಿ ಅಲ್ಲ. ದಿನ ಕಳೆದಂತೆ ಅವರು ನಟನೆಯಲ್ಲಿ ಮಾಗುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಟಾಲಿವುಡ್​​ನಿಂದಲೂ ಹಲವು ಆಫರ್​ಗಳು ಬರುತ್ತಿವೆ. ಸ್ಟಾರ್​ ನಟರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ. ಈಗ ಅವರ ಬಳಿ ಇರುವ ವಿಶೇಷ ಕಲೆಯ ಗುಟ್ಟು ರಟ್ಟಾಗಿದೆ. ಅಳುವ ದೃಶ್ಯ ಮಾಡುವಾಗ ಶ್ರೀಲೀಲಾ ಸಹಜವಾಗಿಯೇ ಗಳಗಳನೆ ಅತ್ತು ಬಿಡುತ್ತಾರೆ!. ಈ ವಿಚಾರವನ್ನು ಅವರು ಸ್ಟಾರ್​ ಸುವರ್ಣ (Star Suvarna) ವಾಹಿನಿಯ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ.

ಶ್ರೀಲೀಲಾ ಹಾಗೂ ಧನ್ವೀರ್​ ನಟನೆಯ ‘ಬೈ ಟೂ ಲವ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ. ‘ನಾನು ಸಿನಿಮಾದಲ್ಲಿ ಸಾಕಷ್ಟು ಅತ್ತಿದ್ದೇನೆ. ಈ ಸಿನಿಮಾ ವೈಯಕ್ತಿಕವಾಗಿ ಚಾಲೆಂಜಿಂಗ್​ ಆಗಿತ್ತು’ ಎಂದಿದ್ದಾರೆ ಅವರು.

‘ಎಡಗಣ್ಣಲ್ಲಿ ಅಳಬೇಕು ಎಂದರೆ ಶ್ರೀಲೀಲಾ ಎಡಗಣ್ಣಿನಿಂದ ಮಾತ್ರ ನೀರು ಬರುತ್ತಿತ್ತು’ ಎಂದರು ‘ಬೈ ಟೂ ಲವ್​’ ತಂಡದ ನಿರ್ದೇಶಕ ಹರಿ ಸಂತೋಷ್. ಎಲ್ಲರೂ ಈ ಬಗ್ಗೆ ಅಚ್ಚರಿ ಹೊರ ಹಾಕಿದರು. ‘ಮಹಾನಟಿ’ ಎಂದು ಖ್ಯಾತಿ ಪಡೆದಿದ್ದ ಸಾವಿತ್ರಿ ಅವರು ಇದೇ ರೀತಿಯ ಕಲೆಯನ್ನು ಹೊಂದಿದ್ದರು. ಇದು ಶ್ರೀಲೀಲಾಗೂ ಒಲಿದಿದೆ ಎಂಬ ವಿಚಾರ ಕೇಳಿ ಅವರನ್ನು ‘ಮಹಾನಟಿ’ ಎಂದು ಹೊಗಳಲಾಯಿತು.

View this post on Instagram

A post shared by Star Suvarna (@starsuvarna)

ವೇದಿಕೆ ಮೇಲೆ ಸ್ಯಾಡ್​ ಮ್ಯೂಸಿಕ್​ ಹಾಕಲಾಯಿತು. ಮ್ಯೂಸಿಕ್​ ಕೇಳುತ್ತಿದ್ದಂತೆ ಬಲಗಣ್ಣಲ್ಲಿ ಶ್ರೀಲೀಲಾ ಅಳೋಕೆ ಆರಂಭಿಸಿದರು. ಈ ವಿಚಾರ ನಿಜಕ್ಕೂ ಅಚ್ಚರಿ ತರಿಸಿತ್ತು. ಎಲ್ಲರೂ ಅವರನ್ನು ಮತ್ತೊಮ್ಮೆ ‘ಮಹಾನಟಿ’ ಎಂದು ಹೊಗಳಿದರು.

ಇದನ್ನೂ ಓದಿ: ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್​

ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ

Published On - 6:00 am, Mon, 21 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್