ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ

ಶ್ರೀಲೀಲಾ ಹಾಗೂ ಧನ್ವೀರ್​ ನಟನೆಯ ‘ಬೈ ಟೂ ಲವ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ.

ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ
ಶ್ರೀಲೀಲಾ
Follow us
| Updated By: ರಾಜೇಶ್ ದುಗ್ಗುಮನೆ

Updated on:Feb 21, 2022 | 8:07 AM

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೆಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಬಣ್ಣದ ಲೋಕದಲ್ಲಿ ಕೇವಲ ಅಂದ ಇದ್ದರೆ ಸಾಕಾಗುವುದಿಲ್ಲ. ನಟನೆ ಉತ್ತಮವಾಗಿರಬೇಕು. ನ್ಯಾಚುರಲ್​ ಆಗಿ ನಟಿಸುವ ಕಲೆ ಇರಬೇಕು. ಎಷ್ಟೇ ಪ್ರಯತ್ನ ಮಾಡಿದರೂ ಕೆಲವರಿಗೆ ಇದು ಸಿದ್ಧಿಸುವುದೇ ಇಲ್ಲ. ಆದರೆ, ನಟಿ ಶ್ರೀಲೀಲಾ (Sreeleela) ಆ ರೀತಿ ಅಲ್ಲ. ದಿನ ಕಳೆದಂತೆ ಅವರು ನಟನೆಯಲ್ಲಿ ಮಾಗುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಟಾಲಿವುಡ್​​ನಿಂದಲೂ ಹಲವು ಆಫರ್​ಗಳು ಬರುತ್ತಿವೆ. ಸ್ಟಾರ್​ ನಟರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ. ಈಗ ಅವರ ಬಳಿ ಇರುವ ವಿಶೇಷ ಕಲೆಯ ಗುಟ್ಟು ರಟ್ಟಾಗಿದೆ. ಅಳುವ ದೃಶ್ಯ ಮಾಡುವಾಗ ಶ್ರೀಲೀಲಾ ಸಹಜವಾಗಿಯೇ ಗಳಗಳನೆ ಅತ್ತು ಬಿಡುತ್ತಾರೆ!. ಈ ವಿಚಾರವನ್ನು ಅವರು ಸ್ಟಾರ್​ ಸುವರ್ಣ (Star Suvarna) ವಾಹಿನಿಯ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ.

ಶ್ರೀಲೀಲಾ ಹಾಗೂ ಧನ್ವೀರ್​ ನಟನೆಯ ‘ಬೈ ಟೂ ಲವ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ. ‘ನಾನು ಸಿನಿಮಾದಲ್ಲಿ ಸಾಕಷ್ಟು ಅತ್ತಿದ್ದೇನೆ. ಈ ಸಿನಿಮಾ ವೈಯಕ್ತಿಕವಾಗಿ ಚಾಲೆಂಜಿಂಗ್​ ಆಗಿತ್ತು’ ಎಂದಿದ್ದಾರೆ ಅವರು.

‘ಎಡಗಣ್ಣಲ್ಲಿ ಅಳಬೇಕು ಎಂದರೆ ಶ್ರೀಲೀಲಾ ಎಡಗಣ್ಣಿನಿಂದ ಮಾತ್ರ ನೀರು ಬರುತ್ತಿತ್ತು’ ಎಂದರು ‘ಬೈ ಟೂ ಲವ್​’ ತಂಡದ ನಿರ್ದೇಶಕ ಹರಿ ಸಂತೋಷ್. ಎಲ್ಲರೂ ಈ ಬಗ್ಗೆ ಅಚ್ಚರಿ ಹೊರ ಹಾಕಿದರು. ‘ಮಹಾನಟಿ’ ಎಂದು ಖ್ಯಾತಿ ಪಡೆದಿದ್ದ ಸಾವಿತ್ರಿ ಅವರು ಇದೇ ರೀತಿಯ ಕಲೆಯನ್ನು ಹೊಂದಿದ್ದರು. ಇದು ಶ್ರೀಲೀಲಾಗೂ ಒಲಿದಿದೆ ಎಂಬ ವಿಚಾರ ಕೇಳಿ ಅವರನ್ನು ‘ಮಹಾನಟಿ’ ಎಂದು ಹೊಗಳಲಾಯಿತು.

View this post on Instagram

A post shared by Star Suvarna (@starsuvarna)

ವೇದಿಕೆ ಮೇಲೆ ಸ್ಯಾಡ್​ ಮ್ಯೂಸಿಕ್​ ಹಾಕಲಾಯಿತು. ಮ್ಯೂಸಿಕ್​ ಕೇಳುತ್ತಿದ್ದಂತೆ ಬಲಗಣ್ಣಲ್ಲಿ ಶ್ರೀಲೀಲಾ ಅಳೋಕೆ ಆರಂಭಿಸಿದರು. ಈ ವಿಚಾರ ನಿಜಕ್ಕೂ ಅಚ್ಚರಿ ತರಿಸಿತ್ತು. ಎಲ್ಲರೂ ಅವರನ್ನು ಮತ್ತೊಮ್ಮೆ ‘ಮಹಾನಟಿ’ ಎಂದು ಹೊಗಳಿದರು.

ಇದನ್ನೂ ಓದಿ: ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್​

ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ

Published On - 6:00 am, Mon, 21 February 22

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ