AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​

ಇನ್ನು ತಮ್ಮ ಅಕೌಂಟ್​ಗೆ ಯುವರಾಜ್ ಅಕೌಂಟ್​ನಿಂದ ಹಣ ಸಂದಾಯವಾದ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಧಿಕಾ ಸ್ಪಷ್ಟನೆ ನೀಡಿದ್ದರು. ಆದರೆ ಅವರ ಸ್ಪಷ್ಟನೆಯಲ್ಲಿ ಗೊಂದಲಗಳೇ ಹೆಚ್ಚಿದ್ದವು ಎಂದೂ ಹೇಳಲಾಗುತ್ತಿದೆ.

ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​
ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​
Lakshmi Hegde
| Edited By: ಸಾಧು ಶ್ರೀನಾಥ್​|

Updated on: Jan 07, 2021 | 3:29 PM

Share

ಬೆಂಗಳೂರು: ಹಣ ವರ್ಗಾವಣೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ 75 ಲಕ್ಷ ರೂ. ವರ್ಗಾವಣೆ ಆಗಿರುವ ಬಗ್ಗೆ ಸಿಸಿಬಿ ಬಳಿ ಇಂಚಿಂಚೂ ಮಾಹಿತಿಯಿದ್ದು, ವಿಚಾರಣೆಗಾಗಿ ಶೀಘ್ರದಲ್ಲಿಯೇ ಸಿಸಿಬಿ ಬುಲಾವ್​ ನೀಡಬಹುದು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ರವಿರಾಜ್​ರನ್ನು ಸಿಸಿಬಿ ಅಧಿಕಾರಿಗಳು ಒಮ್ಮೆ ವಿಚಾರಣೆ ನಡೆಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ ವರ್ಗಾವಣೆಯಾದ ಬಗ್ಗೆ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇನ್ನೂ ಹಲವರನ್ನೂ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇನ್ನು ರಾಧಿಕಾ ಕುಮಾರಸ್ವಾಮಿ ಅಣ್ಣ ರವಿರಾಜ್​ ಬೇನಾಮಿ ಅವ್ಯವಹಾರ ಮಾಡುತ್ತಿದ್ದರು. ಬೇರೆಬೇರೆಯವರಿಗೆ ಸಂಬಂಧಿಸಿದ ಅಕೌಂಟ್​, ಪಾಸ್​ಬುಕ್​, ಎಟಿಎಂಗಳು ಅವರ ಬಳಿ ಇವೆ ಎಂಬುದನ್ನೂ ಸಿಸಿಬಿ ಮೂಲಗಳು ಹೇಳಿವೆ. ಅಲ್ಲದೆ, ರವಿರಾಜ್​ರನ್ನು ಒಂದು ಗಂಟೆಗೂ ಹೆಚ್ಚಿನ ಕಾಲ ಸಿಸಿಬಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಇನ್ನು ತಮ್ಮ ಅಕೌಂಟ್​ಗೆ ಯುವರಾಜ್ ಅಕೌಂಟ್​ನಿಂದ ಹಣ ಸಂದಾಯವಾದ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಧಿಕಾ ಸ್ಪಷ್ಟನೆ ನೀಡಿದ್ದರು. ಆದರೆ ಅವರ ಸ್ಪಷ್ಟನೆಯಲ್ಲಿ ಗೊಂದಲಗಳೇ ಹೆಚ್ಚಿದ್ದವು ಎಂದೂ ಹೇಳಲಾಗುತ್ತಿದೆ. ಈ ಎಲ್ಲ ಕಾರಣದಿಂದ ಸಿಸಿಬಿ ವಿಚಾರಣೆಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯುವರಾಜ್​ರಿಂದ 15 ಲಕ್ಷ, ಬೇರೆ ನಿರ್ಮಾಪಕರಿಂದ 65 ಲಕ್ಷ ನನ್ನ ಖಾತೆಗೆ ಬಂದಿದೆ.. ಅನ್ಯ ವ್ಯವಹಾರ ಇಲ್ಲ: ರಾಧಿಕಾ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್