AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​

ಇನ್ನು ತಮ್ಮ ಅಕೌಂಟ್​ಗೆ ಯುವರಾಜ್ ಅಕೌಂಟ್​ನಿಂದ ಹಣ ಸಂದಾಯವಾದ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಧಿಕಾ ಸ್ಪಷ್ಟನೆ ನೀಡಿದ್ದರು. ಆದರೆ ಅವರ ಸ್ಪಷ್ಟನೆಯಲ್ಲಿ ಗೊಂದಲಗಳೇ ಹೆಚ್ಚಿದ್ದವು ಎಂದೂ ಹೇಳಲಾಗುತ್ತಿದೆ.

ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​
ರಾಧಿಕಾ ಕುಮಾರಸ್ವಾಮಿಗೆ ಶೀಘ್ರವೇ ಸಿಸಿಬಿ ನೋಟಿಸ್​? ಅಣ್ಣನ ಬಳಿ ಸಿಕ್ಕಿವೆ ಬೇನಾಮಿ ಅಕೌಂಟ್ ಡೀಟೇಲ್ಸ್​
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Jan 07, 2021 | 3:29 PM

ಬೆಂಗಳೂರು: ಹಣ ವರ್ಗಾವಣೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ 75 ಲಕ್ಷ ರೂ. ವರ್ಗಾವಣೆ ಆಗಿರುವ ಬಗ್ಗೆ ಸಿಸಿಬಿ ಬಳಿ ಇಂಚಿಂಚೂ ಮಾಹಿತಿಯಿದ್ದು, ವಿಚಾರಣೆಗಾಗಿ ಶೀಘ್ರದಲ್ಲಿಯೇ ಸಿಸಿಬಿ ಬುಲಾವ್​ ನೀಡಬಹುದು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ರವಿರಾಜ್​ರನ್ನು ಸಿಸಿಬಿ ಅಧಿಕಾರಿಗಳು ಒಮ್ಮೆ ವಿಚಾರಣೆ ನಡೆಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ ವರ್ಗಾವಣೆಯಾದ ಬಗ್ಗೆ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇನ್ನೂ ಹಲವರನ್ನೂ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇನ್ನು ರಾಧಿಕಾ ಕುಮಾರಸ್ವಾಮಿ ಅಣ್ಣ ರವಿರಾಜ್​ ಬೇನಾಮಿ ಅವ್ಯವಹಾರ ಮಾಡುತ್ತಿದ್ದರು. ಬೇರೆಬೇರೆಯವರಿಗೆ ಸಂಬಂಧಿಸಿದ ಅಕೌಂಟ್​, ಪಾಸ್​ಬುಕ್​, ಎಟಿಎಂಗಳು ಅವರ ಬಳಿ ಇವೆ ಎಂಬುದನ್ನೂ ಸಿಸಿಬಿ ಮೂಲಗಳು ಹೇಳಿವೆ. ಅಲ್ಲದೆ, ರವಿರಾಜ್​ರನ್ನು ಒಂದು ಗಂಟೆಗೂ ಹೆಚ್ಚಿನ ಕಾಲ ಸಿಸಿಬಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಇನ್ನು ತಮ್ಮ ಅಕೌಂಟ್​ಗೆ ಯುವರಾಜ್ ಅಕೌಂಟ್​ನಿಂದ ಹಣ ಸಂದಾಯವಾದ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಧಿಕಾ ಸ್ಪಷ್ಟನೆ ನೀಡಿದ್ದರು. ಆದರೆ ಅವರ ಸ್ಪಷ್ಟನೆಯಲ್ಲಿ ಗೊಂದಲಗಳೇ ಹೆಚ್ಚಿದ್ದವು ಎಂದೂ ಹೇಳಲಾಗುತ್ತಿದೆ. ಈ ಎಲ್ಲ ಕಾರಣದಿಂದ ಸಿಸಿಬಿ ವಿಚಾರಣೆಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯುವರಾಜ್​ರಿಂದ 15 ಲಕ್ಷ, ಬೇರೆ ನಿರ್ಮಾಪಕರಿಂದ 65 ಲಕ್ಷ ನನ್ನ ಖಾತೆಗೆ ಬಂದಿದೆ.. ಅನ್ಯ ವ್ಯವಹಾರ ಇಲ್ಲ: ರಾಧಿಕಾ

Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ