Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೇತನ್ ಅಹಿಂಸಾ ವೀಸಾ ರದ್ದು, ಕೇಂದ್ರದ ವಿರುದ್ಧ ನಟ ಆಕ್ರೋಶ

Chetan Ahimsa: ಚೇತನ್ ಅಹಿಂಸಾ ಅವರ ವೀಸಾ ರದ್ದು ಮಾಡುವುದಾಗಿ ನೊಟೀಸ್ ನೀಡಲಾಗಿದ್ದು ಅವರ ಓವರ್​ಸೀಸ್ ಇಂಡಿಯನ್ ಸಿಟಿಜನ್​ಶಿಪ್ ಅನ್ನು ರದ್ದು ಮಾಡುವುದಾಗಿಯೂ ಹೇಳಲಾಗಿದೆ.

ಚೇತನ್ ಅಹಿಂಸಾ ವೀಸಾ ರದ್ದು, ಕೇಂದ್ರದ ವಿರುದ್ಧ ನಟ ಆಕ್ರೋಶ
ಚೇತನ್ ಅಹಿಂಸಾ
Follow us
ಮಂಜುನಾಥ ಸಿ.
|

Updated on:Apr 15, 2023 | 6:53 PM

ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಹೆಸರು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣ ನಟ, ಸಾಮಾಜಿಕ ಹೋರಾಟಗಾರ (Social Worker) ಚೇತನ್ ಅಹಿಂಸಾ (Chetan Ahimsa) ಅವರ ವೀಸಾ ಅನ್ನು ಕೇಂದ್ರ ಗೃಹ ಇಲಾಖೆ ರದ್ದು ಮಾಡಿದೆ. ಈ ಬಗ್ಗೆ ಚೇತನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಸಮಾಜಮುಖಿ ಕೆಲಸ ಹಾಗು ವೈಚಾರಿಕ ಕೆಲಸಗಳಿಂದ ಸೋಲಿಸಲಾಗದೇ, ನನ್ನ ವೀಸಾ ರದ್ದು ಮಾಡಲಾಗಿದೆ. ತಮ್ಮ ಓಸಿಐ ಅನ್ನು ಮರಳಿಸುವಂತೆ ನೊಟೀಸ್ ನೀಡಲಾಗಿದೆ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.

ನನ್ನ ವೀಸಾ ಅನ್ನು ರದ್ದು ಮಾಡಲಾಗಿದ್ದು, ಓಸಿಐ (ಓವರ್​ಸೀಸ್ ಸಿಟಿಜನ್​ಶಿಪ್ ಆಫ್ ಇಂಡಿಯಾ) ಅನ್ನು ಮರಳಿಸುವಂತೆ ನೊಟೀಸ್ ನೀಡಲಾಗಿದೆ. ನಾನು 2018 ರಲ್ಲಿ ಓಸಿಐ ಪಡೆದಿದ್ದೆ. ಈಗ ಓಸಿಐ ರದ್ದಾದರೆ ನಾನು ಇಲ್ಲಿ ಚುನಾವಣೆಗೆ ಸ್ಪರ್ಧಿಸಲಾಗುವುದಿಲ್ಲ, ಸರ್ಕಾರಿ ಉದ್ಯೋಗಗಳನ್ನು ಪಡೆಯಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಚೇತನ್.

ನಾನು ಮೊದಲು ಅಮೇರಿಕದಲ್ಲಿದ್ದೆ, ಬಳಿಕ ಭಾರತಕ್ಕೆ ಬಂದು ಮೈಸೂರಿನ ಆಚೆ ಹಳ್ಳಿಯೊಂದರಲ್ಲಿ ಇದ್ದೆ. ಆ ಬಳಿಕ ಇಲ್ಲಿ ಸಿನಿಮಾ ಮಾಡಿದೆ, 2011 ರಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಗಳನ್ನು ಶುರು ಮಾಡಿದೆ. ಸಮಾಜ ಒಪ್ಪಿಕೊಳ್ಳೋ ಹೋರಾಟಗಳಾಗಿ ಅವು ರೂಪುಗೊಂಡವು. ಅದಾದ ಬಳಿಕ ಇನ್ನೂ ಹಲವು ಹೋರಾಟಗಳನ್ನು ಮಾಡಿದೆ. ಅದಾದ ನಂತರ ನನ್ನ ಒಂದು ಟ್ವಿಟ್​ಗೆ ನನ್ನನ್ನು ಅರೆಸ್ಟ್ ಮಾಡಿದರು. ನಂತರ ಒಂದರ ಮೇಲೊಂದು ಕೇಸುಗಳನ್ನು ಹಾಕೋಕೆ ಶುರು ಮಾಡಿದರು. ಈಗ ನನ್ನ ವೀಸಾ ಹಾಗೂ ಓಸಿಐ ರದ್ದು ಮಾಡುವ ನೊಟೀಸು ಕಳಿಸಿದ್ದಾರೆ ಎಂದಿದ್ದಾರೆ ಚೇತನ್ ಅಹಿಂಸ.

ನಟ ಚೇತನ್ ತಮ್ಮ ಹೇಳಿಕೆಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ತಮ್ಮ ನಿಷ್ಠುರ ಟ್ವೀಟ್​ಗಳಿಂದಾಗಿ ಈಗಾಗಲೇ ಎರಡು ಬಾರಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಹಲವು ಕೇಸುಗಳು ಸಹ ಚೇತನ್ ವಿರುದ್ಧ ದಾಖಲಾಗಿವೆ. ಇತ್ತೀಚೆಗಷ್ಟೆ ನಟ ಚೇತನ್ ಅವರು, ಭಾರತದಲ್ಲಿ ಗಾಂಜಾ ಕೃಷಿಯನ್ನು ಅಧಿಕೃತಗೊಳಿಸಬೇಕು ಎಂದಿದ್ದರು. ಅದು ವಿವಾದ ಸೃಷ್ಟಿಸಿತ್ತು.

ನಿನ್ನೆಯಷ್ಟೆ ಮತ್ತೊಂದು ಟ್ವೀಟ್ ಮಾಡಿದ್ದ ನಟ ಚೇತನ್ ಅಹಿಂಸ, ಪ್ರಖ್ಯಾತ ತಿರುಪತಿ ದೇವಾಲಯವು ಬೌದ್ಧ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ನಟ ಚೇತನ್ ಅಹಿಂಸಾ, ಇತಿಹಾಸಕಾರರ ಪ್ರಕಾರ ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ. ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ. ಆಕ್ರಮಣ ಮಾಡಿ ಬೌದ್ಧ ದೇವಾಲಯಗಳನ್ನು ಕೆಡವಿ ಹಿಂದು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದಿದ್ದಾರೆ. ಕೆ ಜಮನದಾಸ್ ಅವರು ‘ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ’ (ಏಪ್ರಿಲ್ 14, 2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಉರಿಗೌಡ-ನಂಜೇಗೌಡ ಕುರಿತಾಗಿ ಚೇತನ್ ಮಾಡಿದ್ದ ಟ್ವೀಟ್​ನ ವಿರುದ್ಧ ದೂರು ದಾಖಲಾಗಿ ಅವರ ಬಂಧನವೂ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Sat, 15 April 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !