AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿರೋ ಚಂದನ್ ಶೆಟ್ಟಿ ಮನೆ ಹೇಗಿದೆ? ಇಲ್ಲಿದೆ ಹೋಮ್​ ಟೂರ್

ಬೆಂಗಳೂರಿನ ಹೊರವಲಯದಲ್ಲಿ ಈ ಮನೆ ಇದ್ದು ಬಿಗ್ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಲಾಗಿದೆ. ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲೇ ಸಣ್ಣದಾದ ಡೋರ್ ಮಾಡಿಸಿದ್ದಾರೆ. ಮನೆ ಸಾಕಷ್ಟು ಭವ್ಯವಾಗಿದೆ.

ಮೈಸೂರಿನಲ್ಲಿರೋ ಚಂದನ್ ಶೆಟ್ಟಿ ಮನೆ ಹೇಗಿದೆ? ಇಲ್ಲಿದೆ ಹೋಮ್​ ಟೂರ್
ಚಂದನ್
ರಾಜೇಶ್ ದುಗ್ಗುಮನೆ
|

Updated on: Oct 08, 2024 | 7:01 AM

Share

ಚಂದನ್ ಶೆಟ್ಟಿ ಅವರು ಇತ್ತೀಚೆಗೆ ಸಾಕಷ್ಟು ಬೇಸರಗೊಳ್ಳುವಂತ ಘಟನೆ ಒಂದು ನಡೆದಿತ್ತು. ಅವರು ಪತ್ನಿ ನಿವೇದಿತಾಗೆ ವಿಚ್ಛೇದನ ನೀಡಿದರು. ಈ ಬೆಳವಣಿಗೆ ಶಾಕಿಂಗ್ ಎನಿಸಿತ್ತು. ಇದಾದ ಬಳಿಕ ಅವರು ಸೈಲೆಂಟ್ ಆಗಿಲ್ಲ. ಸಿನಿಮಾ ಪ್ರಮೋಷನ್​ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಕನಸಿನ ಮನೆಯ ಅನಾವರಣ ಆಗಿದೆ. ನಿರಂಜನ್ ದೇಶ್​ಪಾಂಡೆ ಹಾಗೂ ಕಿರಿಕ್ ಕೀರ್ತಿ ಅವರು ಈ ಮನೆಯ ಹೋಂ ಟೂರ್ ಮಾಡಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ‘ಮಿಸ್ಟರ್​ ನಿರಿಕ್’ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿ ಈ ಮನೆ ಇದ್ದು ಬಿಗ್ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಲಾಗಿದೆ. ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲೇ ಸಣ್ಣದಾದ ಡೋರ್ ಮಾಡಿಸಿದ್ದಾರೆ. ಮನೆ ಸಾಕಷ್ಟು ಭವ್ಯವಾಗಿದೆ. ಆರಂಭದಲ್ಲಿ ಕಾರ್ ಪಾರ್ಕಿಂಗ್​ಗೆ ದೊಡ್ಡದಾದ ಜಾಗ ಇದೆ. ವಿಶೇಷ ಎಂದರೆ ಮ್ಯಾಟ್ ಮೇಲೆ ಕನ್ನಡದಲ್ಲೇ ಸುಸ್ವಾಗತ ಎಂದು ಬರೆಯಲಾಗಿದೆ.

ಸಣ್ಣದಾದ ಹಾಲ್ ಇದೆ. ಅಡುಗೆ ಮನೆ ಕಾಣಬಾರದು ಎಂಬ ಕಾರಣಕ್ಕೆ ಸಣ್ಣದಾದ ಪಾರ್ಟೀಷಿಯನ್ ಮಾಡಲಾಗಿದೆ. ಅಡುಗೆ ಮನೆ ಕೂಡ ಸಖತ್ ಆಗಿದೆ. ಬೆಡ್​ರೂಂ ಸಾಕಷ್ಟು ವಿಶಾಲವಾಗಿದೆ. ಬೆಡ್​ರೂಂ ಹೊರಗೆ ಬಾಲ್ಕನಿ ಇದೆ. ಸಣ್ಣದಾದ ಪೂಲ್ ಕೂಡ ಇದೆ. ಪೂಲ್ ಪಾರ್ಟಿಗೆ ಇದನ್ನು ಮಾಡಲಾಗಿದೆ ಎಂದು ಚಂದನ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಈ ಕಟ್ಟಡ ಇದ್ದು ಕಮರ್ಷಿಯಲೈಸ್ ಮಾಡುವ ಆಲೋಚನೆಯೂ ಅವರಿಗೆ ಇದೆ. ಇಡೀ ಮನೆಗೆ ಅವರೇ ಕಲ್ಪನೆ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಸಂದೇಶ ಕಳಿಸುವವರಿಗೆ ದರ್ಶನ್ ಪ್ರಕರಣ ಎಚ್ಚರಿಕೆ ಘಂಟೆ: ಚಂದನ್ ಶೆಟ್ಟಿ 

ಚಂದನ್ ಶೆಟ್ಟಿ ಅವರು ಸಂಗೀತ ಸಂಯೋಜನೆಯ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಕೆಲವು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್​ಗೆ ಕಾಲಿಟ್ಟಿದ್ದರು. ಅಲ್ಲಿ ಗೆದ್ದು ಜನಪ್ರಿಯತೆ ಪಡೆದರು. ನಿವೇದಿತಾ ಗೌಡ ಸಿಕ್ಕಿದ್ದು ಕೂಡ ಅಲ್ಲಿಯೇ. ಕೆಲವು ವರ್ಷ ಸಂಸಾರ ನಡೆಸಿದ್ದ ಇವರು ಆ ಬಳಿಕ ದೂರ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್