ಚಂದನ್​ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಟ್ರೇಲರ್​ ಹೇಗಿದೆ ನೋಡಿ..

|

Updated on: May 14, 2024 | 9:14 PM

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಈ ಟ್ರೇಲರ್​ ರಿಲೀಸ್ ಆಗಿದೆ. ಚಂದನ್​ ಶೆಟ್ಟಿ ಅವರಿಗೆ ಈ ಸಿನಿಮಾದಲ್ಲಿ ಡಿಫರೆಂಟ್​ ಪಾತ್ರ ಇದೆ. ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಇದು ಟೀನೇಜ್​ ಹುಡುಗ-ಹುಡುಗಿಯರ ಕಥೆ ಇರುವ ಚಿತ್ರ. ಇದಕ್ಕೆ ಅರುಣ್ ಅಮುಕ್ತ ಅವರ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಟ್ರೇಲರ್​ ಮೂಲಕ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಲಾಗಿದೆ.

ಚಂದನ್​ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಟ್ರೇಲರ್​ ಹೇಗಿದೆ ನೋಡಿ..
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಪೋಸ್ಟರ್​
Follow us on

ಬಿಗ್​ ಬಾಸ್​ ವಿನ್ನರ್​, ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ (Chandan Shetty) ಅವರು ಪ್ರಮುಖ ಪಾತ್ರ ಮಾಡಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಟೈಟಲ್​ಗೆ ತಕ್ಕಂತೆ ಈ ಸಿನಿಮಾದಲ್ಲಿ ಹದಿಹರೆಯದ ಮನಸ್ಸುಗಳ ಕಹಾನಿ ಇರಲಿದೆ. ಈಗಾಗಲೇ ಪ್ರೇಕ್ಷಕರಲ್ಲಿ ಕೌತುಕ ಮೂಡಿಸಿರುವ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಸಿನಿಮಾದ ಝಲಕ್​ ತೋರಿಸುವಂತೆ ಈ ಟ್ರೇಲರ್​ (Vidyarthi Vidyarthiniyare Trailer) ಮೂಡಿಬಂದಿದೆ. ಹದಿಹರೆಯದ ಯುವಕರ ಕಥೆಯನ್ನು ಪರಿಚಯಿಸುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಈ ಟ್ರೇಲರ್​ಗೆ ‘ಸೈಡ್​ ಎ’ ಎಂದು ಹೆಸರು ಇಡಲಾಗಿದೆ. ಸೈಡ್​ ಬಿ ನೋಡಲು ಕಾತರ ಹೆಚ್ಚಾಗಿದೆ.

ಈ ಸಿನಿಮಾದಲ್ಲಿ ಶಾಲಾ-ಕಾಲೇಜು ಕಹಾನಿ ಇದೆ ಎಂದಮಾತ್ರಕ್ಕೆ ಇದು ಸಿದ್ಧಸೂತ್ರಗಳ ಸಿನಿಮಾ ಅಲ್ಲ ಎನ್ನುತ್ತಿದೆ ಚಿತ್ರತಂಡ. ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಹೊಡೆದಾಟ, ರ‍್ಯಾಗಿಂಗ್​, ಬಿಸಿ ರಕ್ತದ ಯುವಕರ ಪುಂಡಾಟ ಸೇರಿದಂತೆ ಹಲವು ಅಂಶಗಳು ಇವೆ. ಅಷ್ಟೇ ಅಲ್ಲ, ಶೈಕ್ಷಣಿಕ ಪರಿಸರದಲ್ಲಿ ಇರುವ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನ ಕೂಡ ಇದರಲ್ಲಿ ಆಗಿದೆ. ಮೋಜು-ಮಸ್ತಿ ಮಾಡುತ್ತ ಮೈಮರೆತವರ ಕಥೆ ಕೂಡ ಈ ಸಿನಿಮಾದಲ್ಲಿ ಇರಲಿದೆ. ದಾರಿ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಪ್ರಯತ್ನವೂ ಈ ಚಿತ್ರದಿಂದ ಆಗಲಿದೆ ಎಂಬುದಕ್ಕೆ ಟ್ರೇಲರ್​ ಸುಳಿವು ನೀಡಿದೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಚಂದನ್ ಶೆಟ್ಟಿ , ಭಾವನಾ, ಅಮರ್, ಮಾನಸಿ, ಭವ್ಯ, ವಿವಾನ್, ಸುನೀಲ್ ಪುರಾಣಿಕ್, ಸಿಂಚನಾ, ಅರವಿಂದ್​ ರಾವ್, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಚಂದನ್ ಶೆಟ್ಟಿ ಅವರ ಪಾತ್ರ ಈ ಸಿನಿಮಾದಲ್ಲಿ ಡಿಫರೆಂಟ್​ ಆಗಿದೆ. ಅರುಣ್ ಅಮುಕ್ತ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಸಾವಿರ ಗುಂಗಲ್ಲಿ’ ಆಲ್ಬಂ ಹಾಡಿನಲ್ಲಿ ಮಿಂಚಿದ ನಟಿ ಬೃಂದಾ ಆಚಾರ್ಯ

ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಅವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಕಾಂತ್ ಜಿ. ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನ, ಟೈಗರ್ ಶಿವು ಹಾಗೂ ನರಸಿಂಹ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ಭರ್ಜರಿ ಚೇತನ್ ಕುಮಾರ್​ ಮತ್ತು ವಾಸುಕಿ ವೈಭವ್ ಅವರು ಸಾಹಿತ್ಯ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.