AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೌಡರ್ ಹಾಕ್ಕೊಳಿ, ತಲೆ ಬಾಚ್ಕೊಳಿ’: ದರ್ಶನ್ ಪರ ವಕೀಲರ ತರಾಟೆಗೆ ತೆಗೆದುಕೊಂಡ ಎಸ್​ಪಿಪಿ

Darshan Bail Application: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಹಾಗೂ ಇತರರ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು. ವಾದದ ವೇಳೆ ಎಸ್​ಪಿಪಿ ಪ್ರಸನ್ನ ಕುಮಾರ್ ಅವರು, ದರ್ಶನ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು.

‘ಪೌಡರ್ ಹಾಕ್ಕೊಳಿ, ತಲೆ ಬಾಚ್ಕೊಳಿ’: ದರ್ಶನ್ ಪರ ವಕೀಲರ ತರಾಟೆಗೆ ತೆಗೆದುಕೊಂಡ ಎಸ್​ಪಿಪಿ
ಮಂಜುನಾಥ ಸಿ.
|

Updated on:Dec 06, 2024 | 5:16 PM

Share

ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ಅರ್ಜಿ ವಿಚಾರಣೆ ಇಂದು (ಡಿಸೆಂಬರ್ 06) ರಾಜ್ಯ ಹೈಕೋರ್ಟ್​ನಲ್ಲಿ ನಡೆಯಿತು. ಕಳೆದ ಕೆಲ ದಿನಗಳಲ್ಲಿ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ದರ್ಶನ್ ಕಾರು ಚಾಲಕ ಲಕ್ಷ್ಮಣ್, ಗೆಳೆಯ ಪ್ರದೋಶ್ ಪರ ವಕೀಲರುಗಳು ತಮ್ಮ ತಮ್ಮ ಕಕ್ಷೀದಾರರ ಪರವಾಗಿ ವಾದ ಮಂಡನೆ ಮಾಡಿದ್ದರು. ಎಲ್ಲರ ವಾದಗಳಿಗೂ ಇಂದು ಸರ್ಕಾರಿ ನಿಯೋಜಿತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಪ್ರತಿ ವಾದ ಮಂಡಿಸಿದರು. ತಮ್ಮ ವಾದದಲ್ಲಿ ವಿಶೇಷವಾಗಿ ದರ್ಶನ್ ಪರ ವಕೀಲರ ವಾದದ ಬಗ್ಗೆ ಕಟುವಾಗಿ ಟೀಕೆ ಮಾಡಿದರು.

ಮೊದಲಿಗೆ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶ ಹಾಗೂ ಅದಾದ ಬಳಿಕ ನಿಯಮದಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ದರ್ಶನ್ ವೈದ್ಯಕೀಯ ವರದಿ ಬಗ್ಗೆ ವಾದಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್, ‘ಈ ಕೂಡಲೇ ಚಿಕಿತ್ಸೆ ಕೊಡಿಸದಿದ್ದರೆ ಲಕ್ವ ಹೊಡೆಯುತ್ತದೆ ಎಂದೆಲ್ಲ ದರ್ಶನ ಪರ ವಕೀಲರು ವಾದ ಮಂಡಿಸಿದರು. ಆದರೆ ಮಧ್ಯಂತರ ಜಾಮೀನು ಪಡೆದು ಇಷ್ಟು ವಾರವಾದರೂ ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ. ಈ ವರೆಗೆ ಎರಡು ವೈದ್ಯಕೀಯ ವರದಿಯನ್ನು ನೀಡಿದ್ದಾರೆ. ನವೆಂಬರ್ 6ಕ್ಕೆ ಒಂದು ಹಾಗೂ 21 ಕ್ಕೆ ಒಂದು. ಎರಡೂ ವರದಿಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದಿದ್ದಾರೆ’ ಎಂದು ಸಮಸ್ಯೆಯನ್ನು ಎತ್ತಿ ತೋರಿಸಿದರು ಎಸ್​ಪಿಪಿ.

ನವೆಂಬರ್ ತಿಂಗಳ ಒಂದನೇ ತಾರೀಖಿನಿಂದ ಬಿಪಿ ಮಾನಿಟರ್ ಮಾಡಲಾಗುತ್ತಿದೆ. ಆರನೇ ತಾರೀಖಿನ ವರೆಗೆ ಬಿಪಿ ನಾರ್ಮಲ್ ಇದೆ. 10ನೇ ತಾರೀಖಿನ ಬಳಿಕ ಬಿಪಿಯಲ್ಲಿ ವ್ಯತ್ಯಾಸ ಆಗಿದೆ. ನಾನು ಸಂಪರ್ಕ ಮಾಡಿರುವ ವೈದ್ಯರು ಹೇಳುವಂತೆ 2 ರೂಪಾಯಿ 25 ಪೈಸೆಯ ಮಾತ್ರೆಯೊಂದನ್ನು ನೀಡಿದರೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಆದರೆ ಇವರು ಐದು ವಾರವಾದರೂ ಇನ್ನೂ ದರ್ಶನ್ ಅನ್ನು ಶಸ್ತ್ರಚಿಕಿತ್ಸೆಗೆ ಸಿದ್ಧಪಡಿಸುತ್ತಿದ್ದಾರೆ. ‘ಸೋಪ್ ಹಾಕ್ಕೊಳ್ಳಿ, ಪೌಟರ್ ಹಾಕ್ಕೊಳ್ಳಿ, ತಲೆ ಬಾಚ್ಕೊಳ್ಳಿ’ ಎಂಬ ಸಿನಿಮಾ ಗೀತೆಯಂತೆ ಇವರು ವರದಿ ಸಲ್ಲಿಸಿದ್ದಾರೆ’ ಎಂದು ವ್ಯಂಗ್ಯ ಮಾಡಿದರು ಎಸ್​ಪಿಪಿ.

ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ, ವಿಚಾರಣೆ ಮತ್ತೆ ಮುಂದೂಡಿಕೆ

ಪವಿತ್ರಾ ಗೌಡ ವಿಚಾರಕ್ಕೆ ಬಂದ ಎಸ್​ಪಿಪಿ ಪ್ರಸನ್ನ ಕುಮಾರ್, ಅಪಹರಣದಲ್ಲಿ ಪವಿತ್ರಾ ಪಾತ್ರವಿದೆ ಎಂದು ವಾದಿಸುತ್ತಾ ‘ರೇಣುಕಾ ಸ್ವಾಮಿ ಇನ್​ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದಾಗ ಆತನನ್ನು ಅಲ್ಲಿಯೇ ಬ್ಲಾಕ್ ಮಾಡಲು ಅವಕಾಶ ಇತ್ತು, ಅದನ್ನು ಮಾಡದೆ, ನಿನ್ನ ನಂಬರ್ ಕಳಿಸು (ಡ್ರಾಪ್ ಮಿ ಯುವರ್ ನಂಬರ್) ಎಂದು ಪವಿತ್ರಾ ಮೆಸೇಜ್ ಮಾಡಿದ್ದಾರೆ. ಫೆಬ್ರವರಿಯಲ್ಲಿಯೇ ರೇಣುಕಾ ಸ್ವಾಮಿ ಮೆಸೇಜ್ ಕಳಿಸಿದ್ದರೂ ಸಹ ಬ್ಲಾಕ್ ಮಾಡಿಲ್ಲ. ಆತನಿಂದ ನಂಬರ್ ಪಡೆದು ಅದನ್ನು ಮೂರನೇ ಆರೋಪಿ ಪವನ್​ಗೆ ನೀಡಿದ್ದಾರೆ. ಇದರ ಉದ್ದೇಶವೇನು?’ ಎಂದು ಎಸ್​ಪಿಪಿ ಪ್ರಶ್ನೆ ಮಾಡಿದ್ದಾರೆ.

ಪವಿತ್ರಾ ಇಂದ ನಂಬರ್ ಪಡೆದ ಪವನ್ ಪವನ್, ರೇಣುಕಾ ಸ್ವಾಮಿ ಬಳಿ ಮಾತನಾಡಿ, ಮನೆ ವಿಳಾಸ ಕೇಳುತ್ತಾನೆ, ಜೂನ್‌ 6ರಂದು ಮೊಬೈಲ್‌ನಲ್ಲಿ ವಾಟ್ಸಾಪ್‌ ಚಾಟ್‌ ಮಾಡುತ್ತಾರೆ, ಜೂನ್‌ 7ರಂದು ಚಿತ್ರದುರ್ಗ ಕೋರ್ಟ್ ಬಳಿ ಇದ್ದೇನೆಂದು ಹೇಳ್ತಾನೆ, 4,5,6ನೇ ಆರೋಪಿಗಳನ್ನು ಎ3 ಪವನ್ ಕಳಿಸುತ್ತಾನೆ, ರೇಣುಕಾಸ್ವಾಮಿ ಕೋರ್ಟ್​ಗೆ ಬಂದಿದ್ದೀನಿ ಎಂದಾಗ ಆತನನ್ನು ಹುಡುಕಲು ಕಳುಹಿಸುತ್ತಾನೆ. ಆರೋಪಿಗಳು ಕೋರ್ಟ್​ ಬಳಿ ಹೋಗಿ ರೇಣುಕಾ ಸ್ವಾಮಿಗಾಗಿ ಹುಡುಕಾಟ ಮಾಡುತ್ತಾರೆ. ಆ ನಂತರ ಆಟೋದಲ್ಲಿ ಫಾಲೋ ಮಾಡಿ ಫೋಟೊ ತೆಗೆದು ಕಳಿಸಿದ್ದಾರೆ. ಪೆಟ್ರೋಲ್ ಬಂಕ್ ಬಳಿ ಇಟಿಯೋಸ್ ಕಾರಿಗೆ ರೇಣುಕಾ ಸ್ವಾಮಿಯನ್ನು ಶಿಫ್ಟ್ ಮಾಡುತ್ತಾರೆ, ಇದಕ್ಕೆ ಪೂರಕವಾಗಿ ಸಿಸಿಟಿವಿ ದೃಶ್ಯವಿದೆ, ಕಾರಿನಲ್ಲಿ ರೇಣುಕಾ ಸ್ವಾಮಿಯ ಅಕ್ಕಪಕ್ಕ ಇಬ್ಬರು ಆರೋಪಿಗಳು ಕೂರುತ್ತಾರೆ, ’ದರ್ಶನ್ ಫ್ರೆಂಡ್‌ಗೆ ಮೆಸೇಜ್ ಕಳುಹಿಸಿದ್ದೀಯಾ, ಬಾಸ್ ನಿನ್ನನ್ನು ಕರೆಯುತ್ತಿದ್ದಾರೆ ಬಾ, ಸಾರಿ ಹೇಳು ವಾಪಸ್ ಕರೆತರುತ್ತೇವೆಂದು ಎಂದು ಹೇಳಿ ಆರೋಪಿಗಳು ವಂಚಿಸಿ ರೇಣುಕಾ ಸ್ವಾಮಿಯನ್ನು ಅಪಹರಿಸಿದ್ದಾರೆ’ ಎಂದು ಎಸ್​ಪಿಪಿ ವಿವರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Fri, 6 December 24

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು