AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು

ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪಾಂಡಿಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು ಎಂದು ದರ್ಶನ್​ ರಾಬರ್ಟ್​ ಶೂಟಿಂಗ್​ ದಿನವನ್ನು ನೆನೆದಿದ್ದಾರೆ.

ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು
ನಟ ದರ್ಶನ್​(ಸಾಂದರ್ಭಿಕ ಚಿತ್ರ)
Follow us
ರಾಜೇಶ್ ದುಗ್ಗುಮನೆ
|

Updated on:Feb 24, 2021 | 8:47 PM

ಇದೇ ಮಾರ್ಚ್​​ 11ರಂದು ನಟ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ನಟ ದರ್ಶನ್​ ಮಾತನಾಡಿದ್ದಾರೆ.  ಆ ಶೂಟಿಂಗ್​ ವೇಳೆ ನಡೆದ ಕಹಿ ಘಟನೆಯ ಬಗ್ಗೆ ದರ್ಶನ್​ ಮಾತನಾಡಿದ್ದಾರೆ. ಫೈಟ್​​ ಸೀನ್​ ಮಾಡೋ ವೇಳೆ ತಪ್ಪಿದ ಅವಘಡವನ್ನು ದರ್ಶನ್​ ನೆನಪಿಸಿಕೊಂಡಿದ್ದಾರೆ. ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪುದುಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು. ಶೂಟಿಂಗ್​ಗೆ ಬೇಕಾದ ಸೆಟ್​ ಹಾಗೂ ವಾಹನಗಳನ್ನು ನಾವು ಅಲ್ಲಿ ನಿಲ್ಲಿಸಿದ್ದೆವು. ನಾಲ್ಕೈದು ದಿನ ಶೂಟಿಂಗ್​ ಕೂಡ ಪೂರ್ಣಗೊಂಡಿತ್ತು.

ಈ ವೇಳೆ ನಾವು ರಾತ್ರಿ ತಿನ್ನೋಕೆಂದು ಹೊರಗೆ ಹೋಗಿದ್ದೆವು. ಆಗ ವಾತಾವರಣ ಚೇಂಜ್​ ಆಗೋಕೆ ಶುರುವಾಗಿತ್ತು. ನಿರ್ದೇಶಕರು, ಇದೇಕೋ ಸರಿ ಹೋಗುತ್ತಿಲ್ಲ. ಹೊರಟು ಬಿಡೋಣ. ಉಳಿದ ಭಾಗವನ್ನು ಬೇರೆ ಕಡೆ ಶೂಟಿಂಗ್​ ಮಾಡೋಣ. ನಾನು ಅದನ್ನು ಮ್ಯಾಚ್​ ಮಾಡಿಕೊಳ್ಳುತ್ತೇನೆ ಎಂದಿದ್ದರು.

ನಿರ್ದೇಶಕ ತರುಣ್​ ಸುಧೀರ್ ಅವರು ಹೇಳಿದಂತೆ ನಾವು ಶೂಟಿಂಗ್​ ಜಾಗವನ್ನು ಖಾಲಿ ಮಾಡಿದೆವು. ರಾತ್ರಿ ಮಳೆ ಬರೋಕೆ ಆರಂಭವಾಗಿದ್ದು ನಿಲ್ಲಲೇ ಇಲ್ಲ. ನಾವು ಶೂಟಿಂಗ್​ ಮಾಡುತ್ತಿದ್ದ ಜಾಗ ಮರಳು ಗಾಡಿನಂತೆ ಇತ್ತು. ಆದರೆ, ಮಳೆಯಿಂದಾಗಿ ಆ ಜಾಗ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಒಂದೊಮ್ಮೆ ನಾವು ಸೆಟ್​ ಖಾಲಿ ಮಾಡದೆ ಇದ್ದಿದ್ದರೆ ತುಂಬಾನೇ ತೊಂದರೆ ಉಂಟಾಗುತ್ತಿತ್ತು. ನಿಜಕ್ಕೂ ಸಿಕ್ಸ್ತ್​​​ ಸೆನ್ಸ್​ ನಮ್ಮನ್ನು ಅಲ್ಲಿಂದ ಹೊರಡುವಂತೆ ಮಾಡಿತ್ತು ಎಂದಿದ್ದಾರೆ.

ಜಗ್ಗೇಶ್​ ಬಳಿ  ಕ್ಷಮೆ ಕೇಳಿದ ದರ್ಶನ್​ ಈ ಬಗ್ಗೆ ಮಾತನಾಡಿರುವ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು. ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು.

ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ದರೆ ಅದು ನಮ್ಮ ಬಗ್ಗೆಯೇ ತಾನೆ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ? ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Published On - 6:28 pm, Wed, 24 February 21