AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು

ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪಾಂಡಿಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು ಎಂದು ದರ್ಶನ್​ ರಾಬರ್ಟ್​ ಶೂಟಿಂಗ್​ ದಿನವನ್ನು ನೆನೆದಿದ್ದಾರೆ.

ಪುದುಚೇರಿಯಲ್ಲಿ ಆದಿನ ಸಿಕ್ಸ್ತ್​​ ಸೆನ್ಸ್​ ವರ್ಕ್​ ಆಗಿರಲಿಲ್ಲ ಅಂದ್ರೆ.. ತಪ್ಪಿದ​ ಅವಘಡದ ಬಗ್ಗೆ ದರ್ಶನ್​ ಮಾತು
ನಟ ದರ್ಶನ್​(ಸಾಂದರ್ಭಿಕ ಚಿತ್ರ)
ರಾಜೇಶ್ ದುಗ್ಗುಮನೆ
|

Updated on:Feb 24, 2021 | 8:47 PM

Share

ಇದೇ ಮಾರ್ಚ್​​ 11ರಂದು ನಟ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ನಟ ದರ್ಶನ್​ ಮಾತನಾಡಿದ್ದಾರೆ.  ಆ ಶೂಟಿಂಗ್​ ವೇಳೆ ನಡೆದ ಕಹಿ ಘಟನೆಯ ಬಗ್ಗೆ ದರ್ಶನ್​ ಮಾತನಾಡಿದ್ದಾರೆ. ಫೈಟ್​​ ಸೀನ್​ ಮಾಡೋ ವೇಳೆ ತಪ್ಪಿದ ಅವಘಡವನ್ನು ದರ್ಶನ್​ ನೆನಪಿಸಿಕೊಂಡಿದ್ದಾರೆ. ವಿಶೇಷ ಫೈಟ್​ ಸೀನ್​ ಶೂಟಿಂಗ್​ ಮಾಡೋಕೆ ನಾವು ಪುದುಚೇರಿಗೆ ತೆರಳಿದ್ದೆವು. ಈ ವೇಳೆ ಸಮುದ್ರದ ದಡವೊಂದರಲ್ಲಿ ಶೂಟ್​ ಮಾಡುತ್ತಿದ್ದೆವು. ಶೂಟಿಂಗ್​ಗೆ ಬೇಕಾದ ಸೆಟ್​ ಹಾಗೂ ವಾಹನಗಳನ್ನು ನಾವು ಅಲ್ಲಿ ನಿಲ್ಲಿಸಿದ್ದೆವು. ನಾಲ್ಕೈದು ದಿನ ಶೂಟಿಂಗ್​ ಕೂಡ ಪೂರ್ಣಗೊಂಡಿತ್ತು.

ಈ ವೇಳೆ ನಾವು ರಾತ್ರಿ ತಿನ್ನೋಕೆಂದು ಹೊರಗೆ ಹೋಗಿದ್ದೆವು. ಆಗ ವಾತಾವರಣ ಚೇಂಜ್​ ಆಗೋಕೆ ಶುರುವಾಗಿತ್ತು. ನಿರ್ದೇಶಕರು, ಇದೇಕೋ ಸರಿ ಹೋಗುತ್ತಿಲ್ಲ. ಹೊರಟು ಬಿಡೋಣ. ಉಳಿದ ಭಾಗವನ್ನು ಬೇರೆ ಕಡೆ ಶೂಟಿಂಗ್​ ಮಾಡೋಣ. ನಾನು ಅದನ್ನು ಮ್ಯಾಚ್​ ಮಾಡಿಕೊಳ್ಳುತ್ತೇನೆ ಎಂದಿದ್ದರು.

ನಿರ್ದೇಶಕ ತರುಣ್​ ಸುಧೀರ್ ಅವರು ಹೇಳಿದಂತೆ ನಾವು ಶೂಟಿಂಗ್​ ಜಾಗವನ್ನು ಖಾಲಿ ಮಾಡಿದೆವು. ರಾತ್ರಿ ಮಳೆ ಬರೋಕೆ ಆರಂಭವಾಗಿದ್ದು ನಿಲ್ಲಲೇ ಇಲ್ಲ. ನಾವು ಶೂಟಿಂಗ್​ ಮಾಡುತ್ತಿದ್ದ ಜಾಗ ಮರಳು ಗಾಡಿನಂತೆ ಇತ್ತು. ಆದರೆ, ಮಳೆಯಿಂದಾಗಿ ಆ ಜಾಗ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಒಂದೊಮ್ಮೆ ನಾವು ಸೆಟ್​ ಖಾಲಿ ಮಾಡದೆ ಇದ್ದಿದ್ದರೆ ತುಂಬಾನೇ ತೊಂದರೆ ಉಂಟಾಗುತ್ತಿತ್ತು. ನಿಜಕ್ಕೂ ಸಿಕ್ಸ್ತ್​​​ ಸೆನ್ಸ್​ ನಮ್ಮನ್ನು ಅಲ್ಲಿಂದ ಹೊರಡುವಂತೆ ಮಾಡಿತ್ತು ಎಂದಿದ್ದಾರೆ.

ಜಗ್ಗೇಶ್​ ಬಳಿ  ಕ್ಷಮೆ ಕೇಳಿದ ದರ್ಶನ್​ ಈ ಬಗ್ಗೆ ಮಾತನಾಡಿರುವ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು. ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು.

ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ದರೆ ಅದು ನಮ್ಮ ಬಗ್ಗೆಯೇ ತಾನೆ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ? ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Published On - 6:28 pm, Wed, 24 February 21

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ