ನಾಗಭೂಷಣ್, ಅಮೃತಾ​ ನಟನೆಯ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ ರಿಲೀಸ್​ ಆಗಲಿದೆ. ಈಗ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಕೌತುಕ ಹೆಚ್ಚಿಸಲಾಗಿದೆ. ನಟ ದರ್ಶನ್​ ಅವರು ಟ್ರೇಲರ್​ ರಿಲೀಸ್​ ಮಾಡಿ ಶುಭ ಕೋರಿದ್ದಾರೆ. ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ ರಿಲೀಸ್​ ಆಗಲಿದೆ. ಉಮೇಶ್ ಕೆ. ಕೃಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ನಾಗಭೂಷಣ್, ಅಮೃತಾ​ ನಟನೆಯ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​
‘ಟಗರು ಪಲ್ಯ’ ಸಿನಿಮಾ ತಂಡ
Follow us
|

Updated on: Oct 19, 2023 | 6:08 PM

ನಟಿ ಅಮೃತಾ ಪ್ರೇಮ್​ (Amrutha Prem) ಹಾಗೂ ನಟ ನಾಗಭೂಷಣ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಟಗರು ಪಲ್ಯ’ ಸಿನಿಮಾ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ಅವರು ನಿರ್ಮಾಣ ಮಾಡಿರುವ 3ನೇ ಸಿನಿಮಾ ಇದು. ಈ ಸಿನಿಮಾದ ಟ್ರೇಲರ್ ರಿಲೀಸ್​ ಆಗಿದೆ. ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ನಟ ದರ್ಶನ್​. ‘ಟಗರು ಪಲ್ಯ’ ಟ್ರೇಲರ್ ನೋಡಿ ಖುಷಿಪಟ್ಟ ದರ್ಶನ್​ (Darshan) ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರದಲ್ಲಿ ಅಮೃತಾ ಪ್ರೇಮ್​, ನಾಗಭೂಷಣ್ ಜೊತೆ ತಾರಾ ಅನುರಾಧಾ, ರಂಗಾಯಣ ರಘು, ವಾಸುಕಿ ವೈಭವ್​, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್ ಮುಂತಾದವರು ನಟಿಸಿದ್ದಾರೆ. ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ (Tagaru Palya Movie) ರಿಲೀಸ್​ ಆಗಲಿದೆ. ಉಮೇಶ್ ಕೆ. ಕೃಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಸತೀಶ್ ನೀನಾಸಂ, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ದರ್ಶನ್ ಅವರು ಟ್ರೇಲರ್​ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ‘ಟ್ರೇಲರ್ ನೋಡಿದಾಗ ಖುಷಿಯಾಯಿತು. ಸೆವೆನ್​ ಸ್ಟಾರ್ ಸುಲ್ತಾನ್ ಟಗರು ಚೆನ್ನಾಗಿ ಆ್ಯಕ್ಟ್ ಮಾಡಿದೆ. ಅಮೃತಾ ಪ್ರೇಮ್​​ ಅವರಿಗೆ ಚಿತ್ರರಂಗಕ್ಕೆ ವೆಲ್​ಕಮ್​. ನಮ್ಮದು ಸಣ್ಣ ಫಿಲ್ಮ್​ ಇಂಡಸ್ಟ್ರಿ. ನೀಟ್ ಆಗಿರುವ ಇಂಡಸ್ಟ್ರಿ. ನಮ್ಮ‌ಮಣ್ಣಿನ ಸೊಗಡು ಇರುವ ಸಿನಿಮಾ ಇದು. ಸಿನಿಮಾಗೆ ಒಳ್ಳೆಯದಾಗಲಿ. ಧನಂಜಯ್ ಅವರು ಕಷ್ಟಪಟ್ಟು ಮೇಲೆ ಬಂದವರು. ಬಡವರ ಮಕ್ಕಳು ದೊಡ್ಡವರು ಆಗಬೇಕು. ನಾಗಭೂಷಣ್ ಅಭಿಮಾನಿ ನಾನು’ ಎಂದರು ದರ್ಶನ್​.

ಟಗರು ಪಲ್ಯ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ

‘ಇದು ಸಂಬಂಧಗಳನ್ನು ನೆನಪಿಸುವ ಸಿನಿಮಾ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ‘ಉಮೇಶ್ ಅವರು ಕಥೆ ಹೇಳಿದಾಗ ನನಗೆ ಬಹಳ ಇಷ್ವವಾಯ್ತು. ಒಳ್ಳೆಯ ಪ್ರತಿಭೆಗಳಿಗೆ ಬಂಡವಾಳ ಹೂಡುವುದರಲ್ಲಿ ನನಗೆ ಖುಷಿಯಿದೆ. ಈ ತಂಡ ನನಗೆ ಚೆನ್ನಾಗಿ ಸಹಕಾರ ನೀಡಿದೆ. ನಾಗಭೂಷಣ್ ಯಾವುದೇ ಪಾತ್ರ ಸಿಕ್ಕರೂ ತೂಗಿಸಿಕೊಂಡು ಹೋಗುತ್ತಾರೆ. ಈ ಸಿನಿಮಾದಲ್ಲಿ ಪ್ರೇಕ್ಷಕರು ಬೇರೆಯದೇ ನಾಗಭೂಷಣ್​ನ​ ನೋಡಬಹುದು. ಅಮೃತಾ ಪ್ರೇಮ್​ ಅವರು ಕನ್ನಡ ಚಿತ್ರರಂಗದ ಮಹಾಲಕ್ಷ್ಮೀ ರೀತಿ ಕಾಣುತ್ತಾರೆ’ ಎಂದು ಡಾಲಿ ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳು ಜನಿಸಿದಾಗ ಜೇಬಿನಲ್ಲಿ ಎಷ್ಟು ಹಣವಿತ್ತು: ನಡೆದು ಬಂದ ಹಾದಿ ನೆನೆದ ನಟ ಪ್ರೇಮ್

‘ನನಗೆ ಈ ಸಿನಿಮಾದ ಪಾತ್ರ ತೃಪ್ತಿ ಕೊಟ್ಟಿದೆ. ನಾನು ಹಳ್ಳಿಯ ಹುಡುಗ. ಹಾಗಾಗಿ ಈ ಸಿನಿಮಾದ ಕಥೆ ನನಗೆ ಮತ್ತಷ್ಟು ಕನೆಕ್ಟ್ ಆಗಿದೆ’ ಎಂದು ನಾಗಭೂಷಣ್ ಹೇಳಿದ್ದಾರೆ. ದರ್ಶನ್ ಅವರಿಂದ ಟ್ರೇಲರ್ ರಿಲೀಸ್​ ಆಗಿದ್ದಕ್ಕೆ ನಟಿ ಅಮೃತಾ ಪ್ರೇಮ್​ ಸಖತ್​ ಹ್ಯಾಪಿ ಆಗಿದ್ದಾರೆ. ‘ಜೀವನ ಪೂರ್ತಿ ನನ್ನ ಪಾಲಿಗೆ ಈ ಕ್ಷಣ ನೆನಪಿನಲ್ಲಿ ಇರುತ್ತೆ. ಡಾಲಿ ಪಿಕ್ಚರ್ಸ್ ಬ್ಯಾನರ್​ ಮೂಲಕ ನನಗೆ ಚಾನ್ಸ್​ ಸಿಕ್ಕಿದ್ದಕ್ಕೆ ಎಷ್ಟು ಸಂತೋಷ ಇದೆಯೋ ದರ್ಶನ್ ಅವರಿಂದ ಟ್ರೇಲರ್ ಲಾಂಚ್ ಆಗಿದ್ದಕ್ಕೂ ಅಷ್ಟೇ ಖುಷಿ ಇದೆ. ನಮ್ಮ ಕುಟುಂಬಕ್ಕೆ ಅವರು ಹತ್ತಿರದವರು’ ಎಂದಿದ್ದಾರೆ ಅಮೃತಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ